ಹಿಂದಿನ ತಪ್ಪುಗಳು ಬಗರ್‌ಹುಕುಂನಲ್ಲಿ  ಆಗಬಾರದು


Team Udayavani, May 28, 2022, 4:12 PM IST

Untitled-1

ಮಧುಗಿರಿ: ಕಳೆದ ಅವಧಿಯಲ್ಲಿ ಬಗರ್‌ಹುಕುಂ ಸಮಿತಿಯಿಂದ ಪಕ್ಷಪಾತ-ಜಾತಿವಾದದ ಸೋಂಕುತಗುಲಿ ಕೆಲ ಅರ್ಹ ಫ‌ಲಾನುಭವಿಗಳಿಗೆಅನ್ಯಾಯವಾಗಿದ್ದು, ಅದನ್ನು ಸರಿಪಡಿಸುವಕೆಲಸವನ್ನು ನಾವೆಲ್ಲ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಮರಿತಿಮ್ಮನಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಕಳೆದ ಬಗರ್‌ಹುಕುಂ ಸಮಿತಿಯಿಂದತುಂಬಾ ಲೋಪವಾಗಿದ್ದು, ಅರ್ಹರನ್ನು ಕಡೆಗಣಿಸಿಜಾತಿ ಆಧಾರದ ಮೇಲೆ ಸಾಗುವಳಿ ಚೀಟಿನೀಡಲಾಗಿದೆ. ಇದರಲ್ಲಿ ಮತ್ತಷ್ಟೂ ಕಾನೂನು ಉಲ್ಲಂಘನೆ ಕಡತಗಳಿದ್ದು, ಫ‌ಲಾನುಭವಿಗಳ ಬಳಿ ರಶೀದಿ ಇದ್ದರೂ ಕಚೇರಿಯಲ್ಲಿ ಅರ್ಜಿಯಿಲ್ಲದಾಗಿದೆ.

ಈ ಬಾರಿ ತಹಶೀಲ್ದಾರ್‌ ಹೊಸ ಆಯಾಮದಲ್ಲಿ ಕಡತ ಪರಿಶೀಲನೆ ಮಾಡುತ್ತಿದ್ದು ಸರಿಪಡಿಸ ಲಾಗುವುದು. ಆದರೆ ಕಳೆದ ಬಾರಿಯ ಪಟ್ಟಿಯಲ್ಲಿಹೆಸರಿದ್ದು ಸಾಗುವಳಿ ಚೀಟಿಯಿಲ್ಲ. ಚೀಟಿ ನೀಡಿದರೆ ಪಹಣಿಯಿಲ್ಲ. ಪಹಣಿ ನೀಡಿದರೆ ಹದ್ದುಬಸ್ತಿಲ್ಲ. ಒಂದೇ ಸ.ನಂ ನಲ್ಲಿ 10 ಜನರ ಹೆಸರಿದ್ದರೂಇಬ್ಬರಿಗೆ ಕೊಟ್ಟು 8 ಜನರಿಗೆ ನೀಡಿಲ್ಲ. ಇಂತಹ ಹಲವಾರು ದೋಷಗಳು ನಡೆದಿವೆ. ಈ ಬಗ್ಗೆ ಯಾರನ್ನೂ ದೂಷಿಸಲ್ಲ. ಆದರೆ, ಕಾನೂನು ಪ್ರಕಾರ ಅರ್ಹರಿರುವ ಎಲ್ಲ ಬಡವರಿಗೆ ಜಮೀನಿನ ಹಕ್ಕು ನೀಡುತ್ತೇನೆ. ಇದರಲ್ಲಿನನಗೆ ಜಾತಿ-ಪಕ್ಷ ಹಾಗೂ ಯಾವುದೂ ಮುಖ್ಯವಲ್ಲ.ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ತಹಶೀಲ್ದಾರ್‌ಗೆ ಕೆಳ ಹಂತದ ಸಿಬ್ಬಂದಿಗಳು ಪ್ರಾಮಾಣಿಕ ಸಹಕಾರನೀಡಬೇಕು. ಆದರೆ ಕೆಳಹಂತದ ಸಿಬ್ಬಂದಿಗಳ ಸಹಕಾರ ಸಿಗುತ್ತಿಲ್ಲ ಎಂಬ ದೂರು ಬಂದಿದ್ದು ತಪ್ಪು ತಿದ್ದುಕೊಳ್ಳಿ ಎಂದರು.

ಕಚೇರಿಗೆ ಬಂದ ಜನರನ್ನು ಕೂರಿಸಿ ಸಮಾಧಾನದಿಂದ ಮಾತನಾಡಿಸಿ ಕೆಲಸ ಮಾಡಿಕೊಡಿ. 100 ಅರ್ಜಿಗಳು ಬಂದರೆ ಅದರಲ್ಲಿ 50 ಅರ್ಜಿಗಳುಸ್ಥಳದಲ್ಲೇ ಬಗೆಹರಿದರೆ ಮಾತ್ರ ಈ ಕಾರ್ಯಕ್ರಮ ಸಾರ್ಥಕತೆ ಪಡೆಯಲಿದೆ ಎಂದರು.

ಬಗರ್‌ಹುಕುಂ ಸಮಿತಿ ಹಿಂದಿನ ಅವಧಿಯಲ್ಲಿ ಜಾತಿ, ಪಕ್ಷದ ಆಧಾರದ ಮೇಲೆ ಕೆಲಸ ಮಾಡಿದ್ದು,ನನಗೆ ಕಾನೂನು ಮುಖ್ಯವೇ ಹೊರತು ಜಾತಿಮುಖ್ಯವಲ್ಲ. ಎಲ್ಲ ಜಾತಿಯಲ್ಲಿ ಬಡವರಿದ್ದುಅರ್ಹರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಸುರೇಶಾಚಾರ್‌, ಗ್ರೇಡ್‌ 2 ತಹಶೀಲ್ದಾರ್‌ ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಕಂದಾಯಾಧಿಕಾರಿ ಜಯರಾಮಯ್ಯ, ವಿಐಗಳಾದ ಪರಮೇಶ್‌, ಶರಣಪ್ಪ, ಶಿವಕುಮಾರ್‌, ಗ್ರಾಮಸಹಾಯಕರಾದ ಗಂಗಾಧರ್‌, ರಾಮಕೃಷ್ಣ,ಕೆಂಚಪ್ಪ, ಓಬಳೇಶ್‌, ಗೋವಿಂದರಾಜು, ಗ್ರಾಪಂಸದಸ್ಯೆ ಗೌರಮ್ಮ, ಗಣೇಶ್‌, ನರಸಿಂಹಮೂರ್ತಿ,ಪಿಡಿಒ ಗೌಡಪ್ಪ, ಮುಖ್ಯಶಿಕ್ಷಕ ವೀರಕ್ಯಾತಪ್ಪ,ಶಿಕ್ಷಕರಾದ ನರಸಿಂಹಮೂರ್ತಿ, ಸಂಪತ್‌ಕುಮಾರ್‌, ಮುಖಂಡ ರಾದ ಶಿವಣ್ಣ, ನಾಗರಾಜು,ಶಿವಕುಮಾರ್‌, ತಾಲೂಕು ಮಟ್ಟದ ಇತರೆಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರು ಇದ್ದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.