Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಡಾ.ಜಿ.ಪರಮೇಶ್ವರ್ ಫೋಟೋ ದುರ್ಬಳಕೆ... 15ಪ್ರಕರಣ ದಾಖಲು.. ತೀವ್ರಗೊಂಡ ತನಿಖೆ

Team Udayavani, May 17, 2024, 6:15 PM IST

1-qwewqewqe

ಕೊರಟಗೆರೆ: ಸ್ಮಾರ್ಟ್ ಸಿಟಿಯಲ್ಲಿ ಡಬಲ್‍ಸೈಟ್.. ಖಾಸಗಿ ಕಾಲೇಜಿನಲ್ಲಿ ಮೆಡಿಕಲ್ ಸೀಟ್.. ಸ್ಮಾಲ್ ಇಂಡಸ್ಟ್ರೀಯಲ್ಲಿ ಉನ್ನತ ಕೆಲಸ.. ತುಮಕೂರು-ಶಿರಾದಲ್ಲಿ ಮನೆ/ ಸೈಟ್ ಮಾರಾಟ ಮಾಡಿಕೊಡುವ ಆಮಿಷವೊಡ್ಡಿ ಅಮಾಯಕ ಜನರನ್ನು ವಂಚಿಸಿ ಕೋಟ್ಯಂತರ ರೂ. ವಂಚನೆ ಮಾಡಿರುವ ಕೊರಟಗೆರೆಯ ಮೊಹಮ್ಮದ್ ಜುಬೇರ್ ಎಂಬಾತನನ್ನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ 15ನೇ ವಾರ್ಡ್ ನಿವಾಸಿ ಮೊಹಮ್ಮದ್ ಜುಬೇರ್ ಮತ್ತು ಆತನ ಪತ್ನಿ ರುಹಿ ಜುವಾರಿಯೂ ಪೊಲೀಸರ ಅತಿಥಿಯಾಗಿದ್ದಾರೆ. ಕೋಟ್ಯಂತರ ರೂ. ವಂಚನೆಯ ಜತೆ ರಾಜ್ಯಪಾಲ ಮತ್ತು ರಿಸರ್ವ ಬ್ಯಾಂಕಿನ ಮುದ್ರೆ, ಸಹಿಯ ಜೊತೆ ಪತ್ರವು ನಕಲಿಯ ದೂರು ಸೇರಿ ಈಗ ಈತನ ಮೇಲೆ 15ಪ್ರಕರಣಗಳು ದಾಖಲಾಗಿವೆ.

ಕೊರಟಗೆರೆ ಪಟ್ಟಣದಲ್ಲಿ ಕಾರ್ಯಚರಣೆ
ಬೆಂಗಳೂರು ನಗರದ ಕೆಂಗೇರಿ ಪಿಎಸೈ ಮುರುಳಿ ಅವರೊಂದಿಗೆ ಕೊರಟಗೆರೆ ಪೊಲೀಸರ ತಂಡವು ಆರೋಪಿ ಜುಬೇರ್ ಮನೆ ಮತ್ತು ಇಟ್ಟಿಗೆ ಫ್ಯಾಕ್ಟರಿ ಕಚೇರಿಯ ತಪಾಸಣೆ ನಡೆಸಿದ್ದಾರೆ. ಮನೆ ಮತ್ತು ಕಚೇರಿಯಲ್ಲಿ ರಾಜ್ಯಪಾಲರ ನಕಲಿ ದಾಖಲೆಯ ಪತ್ರದ ಜತೆಯಲ್ಲಿ ಐದಾರು ಬ್ಯಾಂಕುಗಳ ನಕಲಿ ಮುದ್ರೆ ಮತ್ತು ಸಹಿಯುಳ್ಳ ಹಲವು ಪತ್ರಗಳು ಪೊಲೀಸರಿಗೆ ದೊರಕಿವೆ.

ಮಹಿಳೆಯಿಂದ ಪ್ರಕರಣಕ್ಕೆ ತಿರುವು
ಕೆಂಗೇರಿಯ ವಾಸಿ ಸೈದಾ ತಬಾಸುಮ್ ಎಂಬಾಕೆಯಿಂದ 1ಕೋಟಿ 15ಲಕ್ಷ ನಗದು ಮತ್ತು 184ಗ್ರಾಪಂ ಚಿನ್ನ ಪಡೆದು ಕಳೆದ 4ವರ್ಷದಿಂದ ವಂಚಿಸುತ್ತಿದ್ದ ದೂರಿನ ಅನ್ವಯ ಮೊಹಮ್ಮದ್ ಬುಬೇರ್ ಎಂಬಾತನ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಕೆಂಗೇರಿ ಠಾಣೆಯಲ್ಲಿ 13ಪ್ರಕರಣ, ರಾಜರಾಜೇಶ್ವರಿ ಠಾಣೆ-1 ಮತ್ತು ಶಿರಾ ನಗರ-1 ಪ್ರಕರಣ ಸೇರಿ ಈತನ ಮೇಲೆ 15ಪ್ರಕರಣ ದಾಖಲು ಆಗಿರೋದು ಬೆಳಕಿಗೆ ಬಂದು ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ಕೆಂಗೇರಿಯ ವಾಸಿ ಸೈದಾ ತಬಾಸುಮ್ ಎಂಬಾಕೆಯಿಂದ 1ಕೋಟಿ 15ಲಕ್ಷ ನಗದು ಮತ್ತು 184ಗ್ರಾಪಂ ಚಿನ್ನ ಪಡೆದು ಕಳೆದ 4ವರ್ಷದಿಂದ ವಂಚಿಸುತ್ತಿದ್ದ ದೂರಿನ ಅನ್ವಯ ಮೊಹಮ್ಮದ್ ಬುಬೇರಿ ಎಂಬಾತನ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಕೆಂಗೇರಿ ಠಾಣೆಯಲ್ಲಿ 13ಪ್ರಕರಣ, ರಾಜರಾಜೇಶ್ವರಿ ಠಾಣೆ-1 ಮತ್ತು ಶಿರಾ ನಗರ-1 ಪ್ರಕರಣ ಸೇರಿ ಈತನ ಮೇಲೆ 15ಪ್ರಕರಣ ದಾಖಲು ಆಗಿರೋದು ಬೆಳಕಿಗೆ ಬಂದು ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ಕೆಂಗೇರಿಯ ಸೈದಾ ತಬಾಸುಮ್ ದೂರಿನ ಅನ್ವಯ ಕೊರಟಗೆರೆ ಪಟ್ಟಣದ ಮಹಮ್ಮೊದ್ ಜುಬೇರ್ ಮತ್ತು ರುಹಿ ಜುಬೈರ್ ಎಂಬುವರು ಈಗ ಕೆಂಗೇರಿ ಪೊಲೀಸರ ಅತಿಥಿ ಆಗಿದ್ದಾರೆ. ಬೆಂಗಳೂರು ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಪಿಎಸೈ ಮೋಹನ್‍ಮುರುಳಿ ನೇತೃತ್ವದ ತಂಡ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

ಗೃಹಸಚಿವರ ಫೋಟೋ ದುರ್ಬಳಕೆ
ವಂಚಕ ಜುಬೇರ್ ಕೊರಟಗೆರೆ ಪಟ್ಟಣದ ಮುಸ್ಲಿಮರನ್ನು ಯಾಮಾರಿಸಿ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷನು ಆಗಿದ್ದಾನೆ. ಡಾ.ಜಿ.ಪರಮೇಶ್ವರ್ ಜತೆಗಿರುವ ಹಳೆಯ ಫೋಟೊ ತೋರಿಸಿ ಅಮಾಯಕ ಜನರಿಗೆ ಸರಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಗೃಹಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಇದಲ್ಲದೇ ಕೊರಟಗೆರೆಯಲ್ಲಿ ಇಟ್ಟಿಗೆ ಪ್ಯಾಕ್ಟರಿ ಮತ್ತು ರಿಯನ್ ಎಸ್ಟೇಟ್ ವ್ಯಾಪಾರಕ್ಕೂ ಧುಮುಕಿದ್ದಾನೆ.

ನ್ಯಾಯ ಕೊಡಿಸುವ ವಿಶ್ವಾಸವಿದೆ
ಬ್ಯಾಂಕಿನಲ್ಲಿ ಇರುವ ಸಾಲ ಮನ್ನಾ ಮಾಡಿಸುವ ಆಮಿಷವೊಡ್ಡಿ ನನ್ನಿಂದ ಕೊರಟಗೆರೆಯ ಮೊಹಮ್ಮದ್ ಬುಬೇರ್ 1ಕೋಟಿ 15ಲಕ್ಷ ನಗದು ಹಣ ಮತ್ತು 184ಗ್ರಾಪಂ ಬಂಗಾರ ಪಡೆದು ವಂಚಿಸಿದ್ದಾನೆ. ನನಗೇ ನಕಲಿ ದಾಖಲೆ ನೀಡಿ 4ವರ್ಷದಿಂದ ಸಾಲ ಮನ್ನಾ ಮಾಡಿಸುವುದಾಗಿ ಸುಳ್ಳು ಹೇಳಿದ್ದಾನೆ. ನೀಡಿರುವ ಹಣ ಕೇಳಿದರೇ ಬೆದರಿಕೆ ಹಾಕಿದ್ದು ನಾನು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ಪೊಲೀಸರು ನನಗೇ ನ್ಯಾಯ ಕೊಡಿಸುವ ವಿಶ್ವಾಸವಿದೆ ಎಂದು ದೂರು ನೀಡಿರುವ ಕೆಂಗೇರಿಯ ಸೈದಾ ತಬಾಸುಮ್ ಹೇಳಿದ್ದಾರೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.