Canteen: ಕಾಂತಮ್ಮ ಕ್ಯಾಂಟೀನ್‌ನಲ್ಲಿ 1 ರೂ.ಗೆ 1 ಗುಂಡಿಡ್ಲಿ!


Team Udayavani, Aug 10, 2023, 10:59 AM IST

Canteen: ಕಾಂತಮ್ಮ ಕ್ಯಾಂಟೀನ್‌ನಲ್ಲಿ 1 ರೂ.ಗೆ 1 ಗುಂಡಿಡ್ಲಿ!

ಹುಳಿಯಾರು: “ಒಂದು ರೂ.ಗೆ ಒಂದು ಗುಂಡಿಡ್ಲಿ’ ಎಂದರೆ ಅಚ್ಚರಿಯಾಗಬಹುದು. ಹುಳಿಯಾರಿನ ಈ ಮಹಿಳೆ ಅತ್ಯಂತ ಕಡಿಮೆ ಬೆಲೆಗೆ ಗುಂಡಿಡ್ಲಿ ಕೊಡುವ ಮೂಲಕ ಬಡವರು, ಕೃಷಿ ಕೂಲಿ ಕಾರ್ಮಿ ಕರ ಹಸಿವು ನೀಗಿಸುತ್ತಿದ್ದಾರೆ. ಇದೊಂದು ರೀತಿ ಬಡವರ ಪಾಲಿನ “ಇಂದಿರಾ ಕ್ಯಾಂಟೀನ್‌’. ಅದರ ಜತೆಗೆ ಸಂಕಷ್ಟದಿಂದ ನೊಂದು ಬೆಂದು ಅರಳಿರುವ ಕಾಂತಮ್ಮ ಎಂಬ ಮಹಿಳೆಯ ಯಶೋಗಾಥೆಯೂ ಹೌದು.

ಹುಳಿಯಾರಿನ ಶ್ರೀ ಬನಶಂಕರಮ್ಮ ದೇವಸ್ಥಾನದ ಬಳಿ ಶಿಥಿಲಾವಸ್ಥೆಯಲ್ಲಿರುವ ತಮ್ಮ ಮನೆಯಲ್ಲೇ ಕಾಂತಮ್ಮ ಇಡ್ಲಿ ಮಾಡಿ, ಮನೆಮನೆಗೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಬರೋಬ್ಬರಿ 20 ವರ್ಷದಿಂದ ಕಡಿಮೆ ಬೆಲೆಗೆ ಇಡ್ಲಿ ಹಾಗೂ ಶೇಂಗಾ, ಕಡ್ಲೆ ಚಟ್ನಿ  ಮಾರುತ್ತಿದ್ದರೂ, ಪ್ರಚಾರ ಬಯಸದೆ  ಕಾಯಕ ನಿಷ್ಠರಾಗಿದ್ದಾರೆ. ನಾಲ್ಕಾಣೆಗೆ ಒಂದರಂತೆ ಇಡ್ಲಿ ವ್ಯಾಪಾರ ಆರಂಭಿಸಿ, ಇತ್ತೀಚಿನವರೆವಿಗೂ 2 ರೂ.ಗೆ 3 ಇಡ್ಲಿ ಕೊಡುತ್ತಿದ್ದ ಕಾಂತಮ್ಮ, ಬೆಲೆ ಏರಿಕೆಯ ಹೊಡೆತ ತಾಳಲಾರದೆ 1 ರೂ.ಗೆ 1 ಇಡ್ಲಿ ಕೊಡುತ್ತಿದ್ದಾರೆ. ಆ ಮೂಲಕ ರೈತರು, ಕೂಲಿಕಾರ್ಮಿಕರು, ಬಡವರ ಹಸಿವು ನೀಗಿಸುತ್ತಿದ್ದಾರೆ.

ಕಾಂತಮ್ಮ ಅರಸೀಕೆರೆ ತಾಲೂಕಿನ ಕುರುವಂಕ ಗ್ರಾಮದವರು. ಹುಳಿಯಾರಿನ ತಮ್ಮಯ್ಯ ಎಂಬುವರನ್ನು 24 ವರ್ಷಗಳ ಹಿಂದೆ ಮದುವೆಯಾಗಿ ಹುಳಿಯಾರಿನಲ್ಲಿ ನೆಲೆಸಿದ್ದಾರೆ. ಗಂಡ ಕುಡಿತಕ್ಕೆ ದಾಸನಾಗಿ ಸಂಸಾರ ನಿರ್ವಹಣೆಗೆ ಅಸಹಕಾರ ತೋರಿದಾಗ, ಈಕೆ ಕಂಡು ಕೊಂಡ ಮಾರ್ಗವೇ ಇಡ್ಲಿ ವ್ಯಾಪಾರ.

ಕರೆ ಮಾಡಿದರೆ ಮನೆ ಬಾಗಿಲಿಗೇ ಇಡ್ಲಿ: 36 ಗುಂಡಿಡ್ಲಿ ಮಾಡುವ ಪಾತ್ರೆ ಖರೀದಿಸಿ ಸೌದೆ ಒಲೆಯಿಂದ ಇಡ್ಲಿ ಮಾಡಿ, ವ್ಯಾಪಾರ ಆರಂಭಿಸಿದರು. ಆರಂಭದಲ್ಲಿ ಬೀದಿ ಬೀದಿಗಳಲ್ಲಿ ತಲೆ ಮೇಲೆ ಇಡ್ಲಿ ಹೊತ್ತು ಕೂಗುತ್ತಾ ವ್ಯಾಪಾರ ಮಾಡಿದರು. ಕಾಂತಮ್ಮನ ಇಡ್ಲಿ ರುಚಿಗೆ ಫಿದಾ ಆಗಿ ಆರ್ಡರ್‌ ಕೊಟ್ಟು ಖರೀದಿಸುವ  ಗ್ರಾಹಕರು ಸೃಷ್ಟಿಯಾದರು.  8660080460, 7899363934 ನಂಬರ್‌ಗೆ ಕರೆ ಮಾಡಿ, ಕನಿಷ್ಟ 30 ಇಡ್ಲಿ ಆರ್ಡರ್‌ ಕೊಟ್ಟರೆ ಸಾಕು ಹತ್ತು  ನಿಮಿಷದಲ್ಲಿ  ಮನೆಗೆ ಬಿಸಿ ಇಡ್ಲಿ ತಲುಪುತ್ತದೆ!

ಮಕ್ಕಳನ್ನು ಸಾಕಿ, ಓದಿಸಿ, ಮದುವೆ: ಕಾಂತಮ್ಮನ ಕಾಯಕ ನಿಷ್ಠೆಗೆ ಇಡ್ಲಿ ವ್ಯಾಪಾರ ಕೈ ಹಿಡಿದಿದೆ. ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾದ ಕಾಂತಮ್ಮ  ಇಡ್ಲಿ ವ್ಯಾಪಾರದಿಂದಲೇ ಗಂಡ ಮಕ್ಕಳನ್ನು ಸಾಕಿದ್ದಾರಲ್ಲದೆ, ಮಕ್ಕಳನ್ನು ಓದಿಸಿ, ಮದುವೆ ಮಾಡಿ, ಬಾಣಂತನ ಸಹ ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ  ಸ್ಟವ್‌ ಆರಿದ್ದು ಬಿಟ್ಟರೆ, ಇಲ್ಲಿಯವರೆಗೂ ಇಡ್ಲಿ ಬೇಯುತ್ತಲೇ ಇದೆ. ಕಡಿಮೆ ಬೆಲೆಗೆ ಗ್ರಾಹಕರ ಹೊಟ್ಟೆ ತುಂಬಿಸುತ್ತಲೇ ಇದೆ.

ಲಾಭದ ನಿರೀಕ್ಷೆ ಇಲ್ಲ :

“ಹಣ ಮಾಡಬೇಕು ಎಂದು ನಾನು ಇಡ್ಲಿ ವ್ಯಾಪಾರ ಆರಂಭಿಸಿಲ್ಲ. ಜೀವನ ನಿರ್ವಹಣೆ ಗಾಗಿ ಇಡ್ಲಿ ಮಾರುತ್ತಿದ್ದೇನೆ.  ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಅತ್ಯಂತ ಕಡಿಮೆ ಬೆಲೆಗೆ ಇಡ್ಲಿ ಕೊಡುತ್ತಿದ್ದೇನೆ. ಇದರಿಂದಲೇ ಮಕ್ಕಳ ಮದುವೆ ಮಾಡಿ, ಬಾಣಂತನ ಸಹ ಮಾಡಿ ದ್ದೇನೆ. ಈಗೇನಿದ್ದರೂ ಸೋರುವ ಮನೆ ಯನ್ನು ರೆಡಿ ಮಾಡಿಕೊಳ್ಳಬೇಕು ಅಷ್ಟೇ. 1 ರೂ.ಗೆ ಇಡ್ಲಿ ಕೊಟ್ಟರೂ ನನಗೆ ನಷ್ಟವಾಗುತ್ತಿಲ್ಲ. ಬದಲಾಗಿ ದಿನಕ್ಕೆ 300-400 ರೂ. ದುಡಿಯುತ್ತಿದ್ದೇನೆ’ ಎನ್ನುತ್ತಾರೆ ಕಾಂತಮ್ಮ.

ಕಾಂತಮ್ಮ ಮಾಡುವ ಇಡ್ಲಿ ರುಚಿಗೆ ಫಿದಾ ಆಗಿದ್ದೇವೆ. 10 ರೂ. ಕೊಟ್ಟು 10 ಇಡ್ಲಿ ತಿಂದರೆ ಹೊಟ್ಟೆ ತುಂಬುತ್ತದೆ. ಬಡವರ ಪಾಲಿಗಂತೂ ಇದು ಇಂದಿರಾ ಕ್ಯಾಂಟಿನ್‌ ಅನ್ನಬಹುದು. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆವಿಗೂ ಬಿಸಿ ಬಿಸಿ ಇಡ್ಲಿ ಕೊಡುತ್ತಾರೆ.-ಎಚ್‌.ಆರ್‌.ಧನುಷ್‌, ಸ್ಥಳೀಯ ನಿವಾಸಿ

– ಎಚ್‌.ಬಿ.ಕಿರಣ್‌ ಕುಮಾರ್‌

 

ಟಾಪ್ ನ್ಯೂಸ್

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Ajekar-mahajar

Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.