ಬೆಟ್ಟ ಇಳಿಯಲು ಆಗದೆ ತಂದೆ-ಮಗ ಪೊಲೀಸರ ಮೊರೆ


Team Udayavani, Jul 18, 2022, 3:36 PM IST

ಬೆಟ್ಟ ಇಳಿಯಲು ಆಗದೆ ತಂದೆ-ಮಗ ಪೊಲೀಸರ ಮೊರೆ

ಮಧುಗಿರಿ: ವಿಶ್ವದ 2ನೇ ಏಕಶಿಲಾ ಬೆಟ್ಟವಾದ ಮಧುಗಿರಿ ಬೆಟ್ಟವನ್ನು ಹತ್ತಿದ ತಂದೆ-ಮಗ ಮಳೆಬಂದಿದ್ದರಿಂದ ಹೆದರಿ ಪೊಲೀಸರ ಮೊರೆ ಹೋದ ಘಟನೆ ನಡೆದಿದೆ.

ಪಟ್ಟಣದಲ್ಲಿರುವ ಏಕಶಿಲಾ ಬೆಟ್ಟವನ್ನು ಏರಲುಪ್ರತಿ ಭಾನುವಾರ, ರಾಜ್ಯದ ಮೂಲೆ ಮೂಲೆಯಿಂದಚಾರಣಿಗರು ಬರುತ್ತಾರೆ. ಭಾನುವಾರ ಸಹಬೆಂಗಳೂರು ಮೂಲದ ವ್ಯಕ್ತಿಗಳು ಹೆಚ್ಚಿನಸಂಖ್ಯೆಯಲ್ಲಿ ಬೆಟ್ಟ ಹತ್ತಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಮಳೆಯ ವಾತಾವರಣ ಉಂಟಾಗಿದ್ದು,ಎಲ್ಲರೂ ಬೆಟ್ಟದಿಂದ ವಾಪಸ್‌ ಆಗಿದ್ದರು.

ಆದರೆ ಬೆಂಗಳೂರು ಮೂಲದ ತಂದೆ ಅರ್ಜುನ್‌ ರೆಡ್ಡಿ,ಮಗ ತರುಣ್‌ ಅವರು ಸಂಜೆವರೆಗೂ ಅಲ್ಲೇಇದ್ದರು. ಮದ್ಯಾಹ್ನ 3 ರ ನಂತರ ಸುರಿದ ಮಳೆಗೆ ಇಳಿಜಾರಿನಲ್ಲಿ ಬೆಟ್ಟ ಇಳಿಯಲು ಆಗದೆಆತಂಕಗೊಂಡಿದ್ದು, ಅಲ್ಲಿಂದಲೇ ಪೊಲೀಸರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ.

ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿ: ತಕ್ಷಣ ಕಾರ್ಯ ಪ್ರವೃತ್ತರಾದ ಮಧುಗಿರಿ ಪಿಎಸ್‌ಐ ರಮೇಶ್‌ ಹಾಗೂ ಸಿಬ್ಬಂದಿಗಳಾದ ವೆಂಕಟೇಶ್‌, ರಾಜಕುಮಾರ್‌, ವಿಜಯಕುಮಾರ್‌, ಹರ್ಷ,ರಂಗೇಗೌಡ, ಕೊಟ್ರೇಶ್‌ ಇತರರು ಸ್ಥಳಕ್ಕೆ ಆಗಮಿಸಿ ಬಿರುಸಿನ ಕಾರ್ಯಾಚರಣೆ ನಡೆಸಿದ್ದು, ಸಂಜೆ 7 ರ ಹೊತ್ತಿಗೆ ತಂದೆ ಹಾಗೂ ಮಗನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು.

ಸೂಕ್ತ ಜಾಗೃತಿ ಮೂಡಿಸಬೇಕಿದೆ: ಹಿಂದೆ ಹಲವಾರು ಘಟನೆಗಳಲ್ಲಿ ಬೆಟ್ಟ ಹತ್ತಿದ ಟೆಕ್ಕಿಗಳು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು. ಇಲ್ಲಿ ಪುರಾತತ್ವ ಇಲಾಖೆಯಿದ್ದು, ರಕ್ಷಣೆ ಹಾಗೂ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುತ್ತಿಲ್ಲ.ವಿಪರೀತ ಮಳೆ-ಗಾಳಿಯ ಸಮಯದಲ್ಲಿ ಚಾರಣಕ್ಕೆಅವಕಾಶ ನೀಡದೆ ಸೂಕ್ತ ಜಾಗೃತಿ ಮೂಡಿಸಬೇಕಿದೆ.ಆದರೆ ಬಾಗಿಲಲ್ಲಿನ ಕಾವಲುಗಾರ ಬಿಟ್ಟರೆ ಯಾರೂ ಅಗತ್ಯ ಮಾರ್ಗದರ್ಶನ ನೀಡುತ್ತಿಲ್ಲ.

ಪೊಲೀಸರು, ನಾಗರಿಕರಿಗೆ ಕೃತಜ್ಞತೆ :

ಕೆಳಗಿಳಿದ ಮೇಲೆ ಮಾತನಾಡಿದ ಅರ್ಜುನ್‌ ರೆಡ್ಡಿ, ಬೆಟ್ಟದ ಮೇಲೆ ಮಳೆ ಹಾಗೂ ವಿಪರೀತಗಾಳಿಯಿದ್ದ ಕಾರಣ ಆತಂಕವಾಗಿತ್ತು. ಮಳೆಕೂಡ ಹೆಚ್ಚಾದ ಕಾರಣ ಕೆಳಗೆ ಇಳಿಯಲುಸಾಧ್ಯವಾಗ ಲಿಲ್ಲ. ನಮ್ಮ ಕರೆಗೆ ಸ್ಪಂದಿಸಿದಪೊಲೀಸರು ತಕ್ಷಣ ನೆರವಿಗೆ ಧಾವಿಸಿದ್ದು,ಯಾವುದೇ ಸಮಸ್ಯೆಯಾಗ ದಂತೆ ಕರೆತಂದರು.ಅದಕ್ಕಾಗಿ ಮಧುಗಿರಿ ಪೊಲೀ ಸರಿಗೂ ಹಾಗೂರಕ್ಷಣೆ ಮಾಡುವಲ್ಲಿ ಸಹಕರಿಸಿ ಧೈರ್ಯತುಂಬಿದ ಮಧುಗಿರಿ ನಾಗರಿಕರಿಗೂ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.

ಬೆಟ್ಟವು ಏಕಶಿಲೆಯಾಗಿದ್ದು, ಮಳೆ ಸಮಯದಲ್ಲಿ ಅಪಾಯಕಾರಿ. ಇಂತಹ ಸಮಯದಲ್ಲಿ ಚಾರಣ ಮಾಡದಿರುವುದು ಒಳ್ಳೆಯದು. ದಯಮಾಡಿ ಎಲ್ಲರೂ ಈ ಬಗ್ಗೆ ಜಾಗ್ರತೆ ವಹಿಸುವುದು ಅವಶ್ಯಕ. -ರಮೇಶ್‌, ಪಿಎಸ್‌ಐ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.