![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-415x238.jpg)
Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ
ಕೆರೆಯ ಸಮೀಪ ಕಾರು, ಮೊಬೈಲ್, ಚಪ್ಪಲಿ ಪತ್ತೆ; ಮಾವತ್ತೂರು ಕೆರೆಯಲ್ಲಿ ಪೊಲೀಸರ ಕಾರ್ಯಚರಣೆ
Team Udayavani, Jun 23, 2024, 10:49 AM IST
![3-koratagere](https://www.udayavani.com/wp-content/uploads/2024/06/3-koratagere-620x372.jpg)
ಕೊರಟಗೆರೆ: ಅಮರ ಪ್ರೀತಿಗೆ ಮನೆಯಲ್ಲಿ ಪೋಷಕರು ವಿರೋಧಪಡಿಸಿದ ತಕ್ಷಣವೇ ಜೂ.18ರ ಮಂಗಳವಾರ ಸಂಜೆ ತಮ್ಮ ಮನೆಗಳಿಂದ ಕಾಣೆಯಾಗಿದ್ದ 19 ವರ್ಷದ ಯುವತಿ ಹಾಗೂ 45 ವರ್ಷದ ವ್ಯಕ್ತಿ ಕಾಣಿಯಾಗಿದ್ದರು.
19 ವರ್ಷದ ಅನನ್ಯ ಮಾವತ್ತೂರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, 45 ವರ್ಷದ ರಂಗಶಾಮಯ್ಯನ ಮೃತದೇಹಕ್ಕಾಗಿ ಕೋಳಾಲ ಪೊಲೀಸರ ತಂಡ ಮತ್ತು ಕೊರಟಗೆರೆ ಅಗ್ನಿಶಾಮಕ ಸಿಬ್ಬಂದಿಗಳು ಕಳೆದ 12 ಗಂಟೆಯಿಂದ ಹುಡುಕಾಟ ನಡೆಸುತ್ತಿರುವ ಘಟನೆ ಶನಿವಾರ ನಡೆದಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಮಾವತ್ತೂರು ಗ್ರಾ.ಪಂ. ಕೇಂದ್ರಸ್ಥಾನದಲ್ಲಿನ ಮಾವತ್ತೂರು ಕೆರೆಯ ಸಮೀಪ ಅಪರಿಚಿತ ಕಾರು, ಕಾರಿನಲ್ಲಿದ್ದ ಮೊಬೈಲ್ ಮತ್ತು ದಡದಲ್ಲಿದ್ದ ಇಬ್ಬರ ಚಪ್ಪಲಿಗಳನ್ನು ಆಧಾರಿಸಿ ಕೋಳಾಲ ಪೊಲೀಸರ ತಂಡ ತನಿಖೆ ನಡೆಸಿದಾಗ ಇಬ್ಬರು ತಮ್ಮ ಮನೆಯಿಂದ ಕಾಣೆಯಾಗಿ ವೈವಾಹಿಕ ಜೀವನದಲ್ಲಿ ಜಿಗುಪ್ಸೆಯಾಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.
ಬೈರಗೊಂಡ್ಲು ಗ್ರಾಮದ ಅಳಿಯನಾಗಿರುವ ರಂಗಶಾಮಯ್ಯನಿಗೆ ಮಡದಿ ಗಂಗರತ್ನಮ್ಮ ಮತ್ತು 11 ಮತ್ತು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಇಬ್ಬರು ಗಂಡು ಮಕ್ಕಳಿದ್ದಾರೆ. ಈತ ಕೋಳಾಲದಲ್ಲಿ ಗ್ರಾಮ-1 ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ.
ಜೆರಾಕ್ಸ್ ಗಾಗಿ ತನ್ನ ಅಂಗಡಿಗೆ ಬಂದಿದ್ದ ಅನನ್ಯಳನ್ನು ಪುಸಲಾಯಿಸಿ ತನ್ನ ಬುಟ್ಟಿಗೆ ಬೀಳಿಸಿಕೊಂಡು ಆಕೆಯ ಜೀವನವನ್ನೇ ಹಾಳು ಮಾಡಿದ್ದಾನೆ.
ಕೋಳಾಲದ ಚೆನ್ನಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮೃತ ಅನನ್ಯ(19) ಮೂಲತ ಲಕ್ಕಯ್ಯನಪಾಳ್ಯದ ಮಲ್ಲಿಕಾರ್ಜುನ್ ಎಂಬಾತನ ಒಬ್ಬಳೇ ಮಗಳು.
ಮಗಳಿಗೆ ಉನ್ನತ ವ್ಯಾಸಂಗ ಕೊಡಿಸುವ ಆಸೆಯಿಟ್ಟಿದ್ದ ತಂದೆ-ತಾಯಿ, ಅಣ್ಣನಿಗೆ ಆಕೆ ಮಾವತ್ತೂರು ಕೆರೆಯಲ್ಲಿ ಶವವಾಗಿ ಸಿಕ್ಕಿರುವುದು ಕುಟುಂಬ ದುಖಃದಲ್ಲಿದೆ. ಮಧುಗಿರಿ ಡಿವೈಎಸ್ಪಿ ರಾಮಚಂದ್ರ ನೇತೃತ್ವದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಕೋಳಾಲ ಪಿಎಸೈ ರೇಣುಕಾ, ಪಿಎಸೈ ಯೊಗೀಶ್ ಮತ್ತು ಅಗ್ನಿಶಾಮಕ ಠಾಣೆಯ 20 ಕ್ಕೂ ಅಧಿಕ ಸಿಬ್ಬಂಧಿಗಳ ತಂಡ ಸೇರಿ ಈಜು ಪಟುಗಳಿಂದ ಮಾವತ್ತೂರು ಕೆರೆಯಲ್ಲಿ ಕಳೆದ 12 ಗಂಟೆಯಿಂದ ಬೂಟ್ ಮೂಲಕ ವ್ಯಕ್ತಿಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದೆ.
ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆ ಏರಿಯ ಪಕ್ಕ ಕಾರು ಪತ್ತೆ:
ಮಾವತ್ತೂರು ಕೆರೆಯ ಏರಿಯ ಸಮೀಪವೇ ಕಾರು ನಿಂತಿದೆ. ಕಾರಿನಲ್ಲಿ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ಮತ್ತು ಲಕ್ಕಯ್ಯನಪಾಳ್ಯದ ಅನನ್ಯದ ಮೊಬೈಲ್ ಸಿಕ್ಕಿವೆ. ಕೆರೆಯ ದಡದ ಕಲ್ಲಿನ ಮೇಲೆ ಇಬ್ಬರ ಚಪ್ಪಲಿಗಳು ಪೊಲೀಸರಿಗೆ ಸಿಕ್ಕಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಕುರಿತು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.
ರಂಗಶಾಮಯ್ಯನ ಶವಕ್ಕಾಗಿ ಹುಡುಕಾಟ:
ಮಡದಿ ಮತ್ತು ಮಕ್ಕಳಿದ್ದರೂ ಯುವತಿಯ ಸಹವಾಸ ಮಾಡಿದ ರಂಗಶಾಮಯ್ಯನ ಮೃತದೇಹಕ್ಕಾಗಿ ಅಗ್ನಿಶಾಮಕ ಮತ್ತು ಪೊಲೀಸರಿಂದ ಹುಡುಕಾಟ ನಡೆದಿದೆ. ಸಿಬ್ಬಂದಿಗಳಿಂದ ನಾಳೆಯವರೆಗೆ ಶವಕ್ಕಾಗಿ ಹುಡುಕಾಟ ನಡೆಯಲಿದೆ. ಇಬ್ಬರು ಜೊತೆಯಲ್ಲೇ ಕೆರೆಗೆ ಹಾರಿದ್ದರೆ ಶವ ಸಿಗಬಹುದು ಅಥವಾ ಯುವತಿ ಒಬ್ಬಳೇ ಬಿದ್ದಿದ್ದರೇ ತನಿಖೆಯ ರೂಪವೇ ಬದಲಾಗಿ ಪೊಲೀಸರಿಂದ ಮತ್ತೇ ಬೇರೆಯೇ ಮಾರ್ಗದಲ್ಲಿ ರಂಗಶಾಮಯ್ಯನ ಹುಡುಕಾಟ ಪ್ರಾರಂಭವಾಗಲಿದೆ.
ಟಾಪ್ ನ್ಯೂಸ್
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-415x238.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ](https://www.udayavani.com/wp-content/uploads/2024/06/Arrest-kar-7-150x112.jpg)
Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ
![7-kunigal](https://www.udayavani.com/wp-content/uploads/2024/06/7-kunigal-150x90.jpg)
Kunigal: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ
![ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್ ಗುಡುಗು](https://www.udayavani.com/wp-content/uploads/2024/06/dk-suresh-4-150x99.jpg)
Kunigal ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್ ಗುಡುಗು
![11-koratagere](https://www.udayavani.com/wp-content/uploads/2024/06/11-koratagere-150x90.jpg)
Koratagere: ರೋಗಿಗಳ ಜೊತೆ ವೈದ್ಯ ಗಲಾಟೆ; ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ
![10-koratagere](https://www.udayavani.com/wp-content/uploads/2024/06/10-koratagere-150x90.jpg)
Koratagere: ಹೇಮಾವತಿ ನೀರು ರಾಮನಗರಕ್ಕೆ ಹರಿಸುವ ಕನಸನ್ನು ಶೀಘ್ರವೇ ಕೈಬಿಡಬೇಕು
MUST WATCH
ಹೊಸ ಸೇರ್ಪಡೆ
![Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ](https://www.udayavani.com/wp-content/uploads/2024/06/Young-Farmer-1-150x86.jpg)
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
![1-eqwwewq](https://www.udayavani.com/wp-content/uploads/2024/06/1-eqwwewq-150x101.jpg)
Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್
![Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ](https://www.udayavani.com/wp-content/uploads/2024/06/ag-1-150x93.jpg)
Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ
![1-sadasd](https://www.udayavani.com/wp-content/uploads/2024/06/1-sadasd-3-150x97.jpg)
Harangi ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗ ನೀರು ಪಾಲು
![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-150x79.jpg)
T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.