Koratagere: ಪತಿಯನ್ನು ಮುಗಿಸಲು ಮಾಜಿ ಪ್ರಿಯಕರ, ತಮ್ಮನಿಗೆ ಸುಪಾರಿ ಕೊಟ್ಟ ಪತ್ನಿ
Team Udayavani, Jul 30, 2024, 12:56 PM IST
ಕೊರಟಗೆರೆ: ಗಂಡನ ಮುಗಿಸಲು ಮಾಜಿ ಇನ್ಸ್ ಸ್ಟಾಗ್ರಾಂ ಲವರ್ ಮತ್ತು ತಮ್ಮನಿಗೆ ಹೆಂಡತಿಯೇ ಸುಪಾರಿ ನೀಡಿರುವ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಚಿಂಚೂಳಿ ಗ್ರಾಮದ ಪ್ರಕಾಶ (32) ಕೊಲೆಯಾದ ದುರ್ಧೈವಿ.
ಏನಿದು ಘಟನೆ?: ಪ್ರಕಾಶ ಹಾಗೂ ಹರ್ಷಿತಾ ದಾಂಪತ್ಯದಲ್ಲಿ ಮೂರನೇ ವ್ಯಕ್ತಿಯ ಪ್ರವೇಶವಾಗಿತ್ತು. ಪತ್ನಿ ಹರ್ಷಿತಾ ಗುಂಡ ಎನ್ನುವ ವ್ಯಕ್ತಿಯ ಜೊತೆ ಸಂಬಂಧದಲ್ಲಿದ್ದಳು. ಈತ ಬೆಂಗಳೂರು ಮೂಲದವನಾಗಿದ್ದು, ಹರ್ಷಿತಾಳಿಗೆ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಈ ವಿಚಾರ ತಿಳಿದಿದ್ದ ಪ್ರಕಾಶ ಪತ್ನಿಯ ಜೊತೆ ಆಗಾಗ ಜಗಳ ಆಡುತ್ತಿದ್ದ.
ಹೀಗಾಗಿ ಹರ್ಷಿತಾ 3 ತಿಂಗಳ ಹಿಂದೆ ಮಗುವನ್ನಿಡಿದುಕೊಂಡು ಗುಂಡನ ಜೊತೆ ಹೋಗಿದ್ದಳು. ಈ ಬಗ್ಗೆ ಪ್ರಕಾಶ ಪೊಲೀಸರಿಗೆ ದೂರು ನೀಡಿ, ಪತ್ನಿಯನ್ನು ಕರೆಸಿಕೊಂಡು ಆಕೆ ಜೊತೆಗಿದ್ದ.
ಸೋಮವಾರ(ಜು.29ರಂದು) ಸಂಜೆ ಪ್ರಕಾಶ ಪತ್ನಿಯನ್ನು ಕೊರಟಗೆರೆಯಿಂದ ಮಲ್ಲೇಕಾವುಗೆ ಕರೆದುಕೊಂಡು ಬರುತ್ತಿರುವಾಗ, ಹರ್ಷಿತಾಳ ಚಿಕ್ಕಪ್ಪನ ಮಗನಾದ ಸೋಮ ಪ್ರಕಾಶನಿಗೆ ಕರೆ ಮಾಡಿ, ಕುಡಿದು ಟೈಟ್ ಆಗಿದ್ದೀನಿ ಬಂದು ಕರೆದುಕೊಂಡು ಹೋಗು ಎಂದು ಹತ್ತಾರು ಬಾರಿ ಕರೆ ಮಾಡಿದ್ದಾನೆ. ಈ ವೇಳೆ ಮಡದಿಯನ್ನು ಮನೆಗೆ ಬಿಟ್ಟು ತುಂಬಾಡಿ ಬರುವಾಗ ಕೆಪಿಟಿಸಿಎಲ್ ಹತ್ತಿರ 3 ಜನರ ಗ್ಯಾಂಗ್ವೊಂದು ಪ್ರಕಾಶ್ ಅವರ ವಾಹನ ಅಡ್ಡಗಟ್ಟಿ ಹೊಟ್ಟೆಗೆ ಚಾಕು ಹಾಕಿ, ಅಪಘಾತವಾದಂತೆ ಬಿಂಬಿಸಿ ಪರಾರಿ ಆಗಿದೆ.
ಇತ್ತ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರಕಾಶನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಪ್ರಕಾಶ ಮೃತಪಟ್ಟಿದ್ದಾನೆ.
ಈ ಸಂಬಂಧ ಪೊಲೀಸರು ಬೆಂಗಳೂರಿನ ರಂಗಶಾಮಯ್ಯ(43), ಮಲ್ಲೇಕಾವಿನ ಸೋಮ(27) ಮತ್ತು ಹರ್ಷಿತಾ(28) ಳನ್ನು ಬಂಧಿಸಿದ್ದಾರೆ.
ಹರ್ಷಿತಾಳೇ ತನ್ನ ಗಂಡನನ್ನು ಮುಗಿಸಲು ಸುಪಾರಿ ನೀಡಿದ್ದಾಳೆಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ. ಮಾಜಿ ಲವರ್ ಜೊತೆಗೆ ಸೇರಲು ಅಡ್ಡಿಯಾಗಿದ್ದ ಗಂಡ ಪ್ರಕಾಶನನ್ನು ಮುಗಿಸಿಲು ಪತ್ನಿ ಹರ್ಷಿತಾಳೇ ಸುಪಾರಿ ನೀಡಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹರ್ಷಿತಾಳ ಇನ್ಸ್ ಸ್ಟಾಗ್ರಾಂ ಲವರ್ ಬೆಂಗಳೂರಿನ ಗುಂಡನಿಗಾಗಿ ಕೊರಟಗೆರೆ ಪೊಲೀಸರಿಂದ ಹುಡುಕಾಟ ಶುರುವಾಗಿದೆ. ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ಅವರು ತನಿಖೆ ತೀವ್ರಗೊಳಿಸಿದ್ದಾರೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು
Minister V. Somanna ಹಾಲಿನ ದರ ಏರಿಕೆ ಗ್ಯಾರಂಟಿಗೆ ಬಳಸಿದ್ರೆ ವಿರೋಧ
Tumkur ಕೊಟ್ಟಿಗೆಗೆ ನುಗ್ಗಿದ 5 ಚಿರತೆಗಳು: 32 ಕುರಿಗಳ ಸಾವು
BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ
Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.