Koratagere: ಕಂದಾಯ ಇಲಾಖೆ ಯಡವಟ್ಟಿಗೆ ದಲಿತರ ಪರದಾಟ

ಸಸ್ಯಕ್ಷೇತ್ರ ಉಳಿಸಲು ಅರಣ್ಯ ಇಲಾಖೆ ಕಾದಾಟ.. ಶ್ಮಶಾನದ ಭೂಮಿಗಾಗಿ ದಲಿತರ ಪರದಾಟ..

Team Udayavani, Oct 25, 2023, 9:17 PM IST

1-sadsadsad

ಕೊರಟಗೆರೆ: ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ಯಡವಟ್ಟು. ಸಸ್ಯಕಾಶಿಯ ಜಮೀನು ಉಳಿಸಿಕೊಳ್ಳಲು ಸಾಮಾಜಿಕ ಅರಣ್ಯ ಇಲಾಖೆಯ ಕಸರತ್ತು. ಮಂಜೂರಾದ ಜಮೀನು ಬೀಡದೇ ದಲಿತ ಕುಟುಂಬದ ಪರದಾಟ. ಯುವಕನ ಮೃತದೇಹ ಅಂತ್ಯ ಸಂಸ್ಕಾರಕ್ಕೆ ಸರಕಾರಿ ಅಧಿಕಾರಿಗಳ ಜೊತೆ ಬೈಚಾಪುರ ಗ್ರಾಮಸ್ಥರ ಕಸರತ್ತು. ಪಟ್ಟುಬೀಡದೇ ಸಸ್ಯಕಾಶಿಯಲ್ಲೇ ಯುವಕನ ಅಂತ್ಯಸಂಸ್ಕಾರ ನಡೆಸಿರುವ ಘಟನೆ ಬುಧವಾರ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಮದ ಸಮೀಪದ ಸಸ್ಯಕ್ಷೇತ್ರದಲ್ಲಿ ಘಟನೆ ಜರುಗಿದೆ. ಬೈಚಾಪುರ ಗ್ರಾಮದ ಸರ್ವೇ ನಂ.43 ರಲ್ಲಿ 1 ಎಕರೇ 07 ಗುಂಟೆ ಸರಕಾರಿ ಭೂಮಿಯಿದೆ.1983 ರಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ನೇಡುತೋಪು ಹೆಸರಿನಲ್ಲೇ ಪಹಣಿ ಬರುತ್ತಿದೆ. 2019 ರಲ್ಲಿ ಏಕಾಏಕಿ ಕಂದಾಯ ಮತ್ತು ಸರ್ವೆ ಇಲಾಖೆ ಸ್ಥಳ ಪರಿಶೀಲನೆ ನಡೆಸದೇ 20ಗುಂಟೆ ಭೂಮಿಯನ್ನು ಬೈಚಾಪುರದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಸಾಮಾನ್ಯ ಜನತೆಯ ಶ್ಮಶಾನಕ್ಕೆ ಮೀಸಲಿಟ್ಟು ಮಂಜೂರು ಮಾಡಿದೆ.

ಬೈಚಾಪುರದ ದಲಿತ ಯುವಕ ಸುರೇಶ್(24) ಮಂಗಳವಾರ ತಡರಾತ್ರಿ ಅನಾರೋಗ್ಯದ ಹಿನ್ನಲೇ ಮೃತಪಟ್ಟು ಅಂತ್ಯಸಂಸ್ಕಾರಕ್ಕೆ ಸಸ್ಯಕ್ಷೇತ್ರಕ್ಕೆ ಗುಂಡಿ ತೆಗೆಯಲು ಹೋದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ಘಟನೆಯ ವಾಸ್ತವತೆ ಅರಿತ ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿವರ್ಗ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೂಲಿಸುವ ಪ್ರಯತ್ನಪಟ್ರು ಪಟ್ಟುಬೀಡದೇ ಸಸ್ಯಕ್ಷೇತ್ರದಲ್ಲೇ ಯುವಕನ ಅಂತ್ಯಸಂಸ್ಕಾರ ನಡೆಸಿರುವ ಘಟನೆ ನಡೆದಿದೆ.

ಬೈಚಾಪುರ ಗ್ರಾಮದ ಸ್ಮಶಾನಕ್ಕೆ ಮಂಜೂರಾದ 20ಗುಂಟೆ ಜಾಗವೇ ಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾದರೆ ಅಭಿವೃದ್ದಿ ಆಗಿರುವ ಸಸ್ಯಕ್ಷೇತ್ರದ ಉಳಿಸಿಕೊಳ್ಳಲು ಅರಣ್ಯ ಇಲಾಖೆಯಿಂದ ಪ್ರಯತ್ನ ನಡೆದಿದೆ. ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿವರ್ಗ ಬೈಚಾಪುರ ಗ್ರಾಮದ ಸರ್ವೆ.೫೮ರಲ್ಲಿ ಸರಕಾರಿ ಗೋಮಾಳ ಗುರುತಿಸಿ ಸ್ಮಶಾನದ ಜಾಗವನ್ನು ಸ್ಥಳಾಂತರ ಮಾಡಿಕೊಡ್ತಿವಿ ಅಂತಾರೇ. ಒಟ್ಟಾರೇ ಕಂದಾಯ ಇಲಾಖೆ ಯಡವಟ್ಟಿನಿಂದ ಸ್ಮಶಾನದ ಜಾಗಕ್ಕೆ ಸಮಸ್ಯೆ ಎದುರಾಗಿದೆ.

ಬೈಚಾಪುರ ಸಮೀಪದ ಸಸ್ಯಕ್ಷೇತ್ರಕ್ಕೆ ಆಪತ್ತು..
ಸಾಮಾಜಿಕ ವಲಯ ಅರಣ್ಯ ಇಲಾಖೆಯು 1983 ರಲ್ಲಿ ಪ್ರಾರಂಭವಾದ ವೇಳೆಯೇ ಬೈಚಾಪುರದಲ್ಲಿ ಸಸ್ಯಕ್ಷೇತ್ರ ಪ್ರಾರಂಭ. 40 ವರ್ಷದಿಂದ ಸಸ್ಯಕ್ಷೇತ್ರಕ್ಕೆ ಅವಶ್ಯಕತೆ ಇರುವ ೪ಕೊಳವೆಬಾವಿ, ಓವರ್‌ಹೇಟ್ ಟ್ಯಾಂಕು, ಭದ್ರತಾ ಕೊಠಡಿ, ನೀರಿನ ತೊಟ್ಟಿ, ಪೈಪ್‌ಲೈನ್, ಶೌಚಾಲಯ, ತಂತಿಬೇಲಿ ಅವವಡಿಕೆ ಮಾಡಲಾಗಿದೆ. ಪ್ರತಿವರ್ಷ ಸಸ್ಯಕ್ಷೇತ್ರದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ೧ಲಕ್ಷಕ್ಕೂ ಅಧಿಕ ಸಸಿಗಳ ಪೋಷಣೆ ಮಾಡಿ ರೈತರಿಗೆ ವಿತರಣೆ ಮಾಡ್ತಾರೇ. ೪೦ವರ್ಷದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಹೆಸರಿನಲ್ಲಿ ಇರುವ ಸಸ್ಯಕ್ಷೇತ್ರದ ಭೂಮಿಯು ಕಂದಾಯ ಇಲಾಖೆಯ ಯಡವಟ್ಟಿನಿಂದ ಆಪತ್ತು ಎದುರಾಗಿದೆ.

ದಲಿತರಿಗೆ ನದಿ-ಕೆರೆಕಟ್ಟೆಗಳೇ ಶ್ಮಶಾನ
ಬೈಚಾಪುರ ಗ್ರಾಮದಲ್ಲಿ 125 ಕ್ಕೂ ಅಧಿಕ ದಲಿತ ಕುಟುಂಬಗಳಿವೆ. 50 ವರ್ಷದಿಂದ ಬೈಚಾಪುರದ ದಲಿತರಿಗೆ ಶ್ಮಶಾನವೇ ಮರೀಚಿಕೆ ಆಗಿದೆ. ಜಯಮಂಗಲಿ ನದಿಯ ದಡ ಮತ್ತು ಕೆರೆಕಟ್ಟೆಗಳಲ್ಲಿ ಮೃತವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸುತ್ತಾರೆ. ಮಳೆಯಾದರೆ ನದಿಯು ರಭಸವಾಗಿ ಹರಿದು ಸಮಾಧಿಗಳೇ ಕೊಚ್ಚಿಹೋಗುತ್ತಿವೆ. ಬೈಚಾಪುರ ಗ್ರಾಮದ ಅಕ್ಕಪಕ್ಕದಲ್ಲಿ ಸರಕಾರಿ ಜಮೀನೇ ಇಲ್ಲದಾಗಿದೆ. 3 ಕೀಮೀ ದೂರಕ್ಕೆ ಮೃತದೇಹ ಸಾಗಿಸಲು ನಮ್ಮಿಂದ ಆಗೋದಿಲ್ಲ. ಸರಕಾರ ನಮಗೇ ಮಂಜೂರು ಮಾಡಿರುವ ಜಾಗವೇ ನಮಗೇ ಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಬೈಚಾಪುರದ ದಲಿತರಿಗೆ50 ವರ್ಷದಿಂದ ಸ್ಮಶಾನವೇ ಇಲ್ಲದೇ ನದಿ-ಕೆರೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ.30 ವರ್ಷದ ಹೋರಾಟ ಫಲವಾಗಿ ನಮ್ಮ ಗ್ರಾಮಕ್ಕೆ ಶ್ಮಶಾನದ ಜಾಗ ಮಂಜೂರು ಆಗಿದೆ. ಸರಕಾರ ನಮಗೇ ಮಂಜೂರು ಮಾಡಿದ 20 ಗುಂಟೆ ಜಮೀನೇ ಸಾಕು. ಸಾಮಾಜಿಕ ವಲಯ ಅರಣ್ಯ ಇಲಾಖೆಯು ಬೈಚಾಪುರದ ಸಸ್ಯಕ್ಷೇತ್ರವನ್ನ ಬೇರೆಕಡೆ ಸ್ಥಳಾಂತರ ಮಾಡಲಿ.
ವೆಂಕಟಾರೆಡ್ಡಿ, ಗ್ರಾಪಂ ಸದಸ್ಯ. ಬೈಚಾಪುರ

ಬೈಚಾಪುರದ ಸಸ್ಯಕ್ಷೇತ್ರಕ್ಕೆ ೪೦ವರ್ಷದ ಇತಿಹಾಸ ಇದೆ. ಲಕ್ಷಾಂತರ ರೂ ವೆಚ್ಚದಲ್ಲಿ ಮೂಲಸೌಲಭ್ಯ ಅಭಿವೃದ್ದಿ ಪಡಿಸಲಾಗಿದೆ. ಸಸ್ಯಕ್ಷೇತ್ರದಲ್ಲಿ ಪ್ರತಿವರ್ಷ ೧ಲಕ್ಷ ಸಸಿ ಪೋಷಣೆ ಮಾಡಿ ರೈತರಿಗೆ ಮಾಡಲಾಗುತ್ತೇ. ಸಸ್ಯಕ್ಷೇತ್ರದ ಭೂಮಿ ಉಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಸಸ್ಯಕ್ಷೇತ್ರದ ಉಳಿಸಲು ಅನುಕೂಲ ಕಲ್ಪಿಸಬೇಕಿದೆ.
ಶಿಲ್ಪಾ.ಎನ್.ಇ. ಸಾಮಾಜಿಕ ವಲಯ ಅರಣ್ಯಾಧಿಕಾರಿ. ಕೊರಟಗೆರೆ

ಬೈಚಾಪುರ ಸರ್ವೆ ನಂ. 43ರಲ್ಲಿ ಸ್ಮಶಾನಕ್ಕೆ20 ಗುಂಟೆ ಜಮೀನು ನೀಡಲಾಗಿದೆ. ಸಸ್ಯಕ್ಷೇತ್ರದ ನಿರ್ವಹಣೆಯ ಜಮೀನು ಮಂಜೂರು ಮಾಡಿರುವ ಪರಿಣಾಮ ಸಮಸ್ಯೆ ಅಗಿದೆ. ಮಂಜೂರು ಮಾಡುವ ವೇಳೆ ಕೆಲವು ನ್ಯೂನತೆ ಆಗಿರುವುದು ಸತ್ಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸ್ಮಶಾನಕ್ಕೆ ಪ್ರತ್ಯೇಕ ಜಮೀನು ಗುರುತಿಸಿ ಸಸ್ಯಕ್ಷೇತ್ರದ ಜಮೀನು ಉಳಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇವೆ.
ರಂಜಿತ್.ಕೆ.ಆರ್. ಪ್ರಭಾರ ತಹಶೀಲ್ದಾರ್

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.