Koratagere: ರೋಗಿಗಳ ಜೊತೆ ವೈದ್ಯ ಗಲಾಟೆ; ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ


Team Udayavani, Jun 25, 2024, 8:35 PM IST

11-koratagere

ಕೊರಟಗೆರೆ: ನೀನೇನು ಎಸಿನಾ ಅಥವಾ ಡಿಸಿನಾ.. ನಿನ್ನಿಂದ ನಾನು ಹೆದರೋಕೆ.. ನಿನ್ನ ಹೇಸರೇನು ಹೇಳಿ ನೋಡು.. ನಾನೇನು ಮಾಡ್ತೀನಿ ಅಂತಾ ಗೊತ್ತಾಗುತ್ತೆ.. ನಾನು ಯಾರಿಗೂ ಹೆದರೋದಿಲ್ಲ.. ಹೆದರಿಸೋಕೆ ಬರಬೇಡಿ ನೀವು.. ನಾನು ಪ್ರಕರಣ ದಾಖಲು ಮಾಡ್ತಿದ್ರೇ ನೀವು ಜೈಲಿಗೆ ಹೋಗ್ತಿರಾ ಹುಷಾರ್ ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಆಗಮಿಸಿದ ಚಿಕ್ಕರಂಗಯ್ಯನಿಗೆ ಡಾ.ನವೀನ್ ಹೆದರಿಸಿರುವ ಘಟನೆ ಜೂ.25ರ ಮಂಗಳವಾರ ನಡೆದಿದೆ.

ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂ.25ರ ಮಂಗಳವಾರ ಸುಮಾರು ಬೆಳಿಗ್ಗೆ 11 ಗಂಟೆಯ ಸಮಯ ಈ ಘಟನೆ ನಡೆದಿದೆ. ಡಾ.ನವೀನ್ ಜೂ.24ರ ಸೋಮವಾರ ಬೆ.9ರಿಂದ ಜೂ.25ರ ಮಂಗಳವಾರ ಬೆ.9 ರ ವರೆಗೆ ಕರ್ತವ್ಯನಿರತ ವೈದ್ಯರು. ಆದರೆ ಡಾ.ನವೀನ್‌ಗೆ ಜು. 25ರ ಬೆಳಿಗ್ಗೆ 11 ಗಂಟೆಯ ಮೇಲೂ ಆಸ್ಪತ್ರೆಯಲ್ಲಿ ಏನು ಕೆಲಸ ಇತ್ತು ? ವೈದ್ಯರು ಸಮವಸ್ತ್ರ ಧರಿಸದೇ ರೋಗಿಗಳ ಜೊತೆ ವರ್ತಿಸಿದ ರೀತಿ ಸರಿಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಗೂ ನವೀನ್‌ಗೂ ಸಂಬಂಧ ಏನು.?

ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಗ್ಗೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗಯ್ಯ ಆಸ್ಪತ್ರೆಯ ವೈದ್ಯ ಡಾ.ಪುರುಷೋತ್ತಮ್‌ಗೆ ಪ್ರಶ್ನೆ ಮಾಡ್ತಾರೆ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ವೈದ್ಯ ಡಾ.ನವೀನ್ ಏಕಾಏಕಿ “ಕಿರುಚಬೇಡಿ ಇಲ್ಲಿ ಹೆದರುವವರು ಯಾರು ಇಲ್ಲ… ನಿನ್ನ ಹೆಸರೇನು.. ನಿನಗೆ ಏನ್ ಮಾಡ್ತೀನಿ ನೋಡ್ತಾ ಇರು” ಎನ್ನುತ್ತಾರೆ. ವೈದ್ಯ ಡಾ.ಪುರುಷೋತ್ತಮ ಅವರು ಡಾ.ನವೀನ್‌ಗೆ ಸುಮ್ಮನಿರಲು ಸೂಚಿಸಿದರೂ ಸುಮ್ಮನಾಗದೇ ಜಗಳಕ್ಕೆ ಇಳಿದಿರುವುದು ಎಷ್ಟು ಸರಿ ಎಂಬುವುದಕ್ಕೆ ಆರೋಗ್ಯ ಇಲಾಖೆಯೇ ಸ್ಪಷ್ಟನೇ ನೀಡಬೇಕಾಗಿದೆ.

ಪೊಲೀಸ್ ಠಾಣೆಯಲ್ಲಿ ದೂರು: ಸಾರ್ವಜನಿಕ ಆಸ್ಪತ್ರೆಯ ಡಾ.ನವೀನ್ ಸಮವಸ್ತ್ರ ಇಲ್ಲದೇ ಚಿಕಿತ್ಸೆಗೆ ಹೋದ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈ ಎತ್ತಿ ಹೊಡೆಯಲು ಬಂದು ಜಾತಿಯ ಹೆಸರು ಹೇಳಿ ನಿಂದನೆ ಮಾಡಿದ್ದಾನೆ ಎಂದು ಕೊರಟಗೆರೆ ಪೊಲೀಸ್ ಠಾಣೆಗೆ ದಲಿತ ಮುಖಂಡ ಚಿಕ್ಕರಂಗಯ್ಯ ದೂರು ನೀಡಿದ್ದಾನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪದೇ ಪದೇ ಕರ್ತವ್ಯಲೋಪ ಮಾಡುವ ಡಾ.ನವೀನ್‌ರನ್ನು ತಕ್ಷಣ ಅಮಾನತು ಮಾಡುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಮನವಿ ಮಾಡಿರುವ ಘಟನೆ ನಡೆದಿದೆ.

ಆಸ್ಪತ್ರೆಯ ವೈದ್ಯರಿಗೆ ನೊಟೀಸ್ ಜಾರಿ: ವೈದ್ಯರು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದಿವೆ. ವೈದ್ಯರಿಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದರೂ ಸಮಸ್ಯೆ ಸರಿ ಹೋಗಿಲ್ಲ. ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಆಗಮಿಸದೇ ಇದ್ದರೆ ವೈದ್ಯರೇ ನೇರ ಹೊಣೆ ಆಗಬೇಕಾಗುತ್ತೆ. ಚಿಕ್ಕರಂಗಯ್ಯ ಮೇಲೆ ಡಾ.ನವೀನ್ ನೀಡಿರುವ ದೂರು ಪತ್ರ ಕುರಿತು ವಿಚಾರಣೆ ಪ್ರಯುಕ್ತ ಜೂ.25ರ ಮಧ್ಯಾಹ್ನ 3.30ಕ್ಕೆ ಹಾಜರಾಗುವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ರೌಡಿಗಳಂತೆ ಡಾ.ನವೀನ್ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತು. ಸಮವಸ್ತ್ರವೇ ಇಲ್ಲದ ಕೊರಟಗೆರೆ ಆಸ್ಪತ್ರೆಯ ವೈದ್ಯ ಡಾ.ನವೀನ್, ನನ್ನ ಮೈಮೇಲಿನ ಬಟ್ಟೆ ಎಳೆದು ಜಾತಿನಿಂದನೆ ಮಾಡಿದ್ದಾರೆ. ಡಾ.ನವೀನ್ ಮೇಲೆ ಪ್ರಕರಣ ದಾಖಲಿಸಲು ಠಾಣೆಗೆ ದೂರು ನೀಡಿದ್ದೇನೆ.  -ಚಿಕ್ಕರಂಗಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ತುಮಕೂರು

ಸರಕಾರಿ ಆಸ್ಪತ್ರೆಗೆ ಚಿಕ್ಕರಂಗಯ್ಯ ಚಿಕಿತ್ಸೆಗೆ ಬಂದಾಗ ಡಾ.ನವೀನ್ ನಡುವೆ ವಾಗ್ವಾದ ನಡೆದಿದೆ. ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಸೌಮ್ಯತೆಯಿಂದ ವರ್ತಿಸಲು ಈಗಾಗಲೇ ನವೀನ್‌ಗೆ ಸೂಚಿಸಲಾಗಿದೆ. ದೂರಿನ ಬಗ್ಗೆ ನನಗೇನು ಮಾಹಿತಿ ಇಲ್ಲ. ಆಸ್ಪತ್ರೆಯಲ್ಲಿ ಮತ್ತೆ ಇಂತಹ ಘಟನೆ ಆಗದಂತೆ ಎಲ್ಲರಿಗೂ ಸೂಚಿಸಲಾಗುವುದು. ಆರೋಗ್ಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದೆ. –ಡಾ. ಲಕ್ಷ್ಮೀಕಾಂತ ಟಿ.ಎಸ್., ಮುಖ್ಯ ಆಡಳಿತ ವೈದ್ಯಾಧಿಕಾರಿ, ಕೊರಟಗೆರೆ

ಟಾಪ್ ನ್ಯೂಸ್

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1-24-sunday

Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Modi ಮುಂದೆ ಕರ ಸಮರ! ಪ್ರಧಾನಿ ಭೇಟಿ ಮಾಡಿದ ಸಿಎಂ, ಡಿಸಿಎಂ ನೇತೃತ್ವದ ನಿಯೋಗ

Modi ಮುಂದೆ ಕರ ಸಮರ! ಪ್ರಧಾನಿ ಭೇಟಿ ಮಾಡಿದ ಸಿಎಂ, ಡಿಸಿಎಂ ನೇತೃತ್ವದ ನಿಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

7-kunigal

Kunigal: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌; ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ

ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್‌ ಗುಡುಗು

Kunigal ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್‌ ಗುಡುಗು

10-koratagere

Koratagere: ಹೇಮಾವತಿ ನೀರು ರಾಮನಗರಕ್ಕೆ ಹರಿಸುವ ಕನಸನ್ನು ಶೀಘ್ರವೇ ಕೈಬಿಡಬೇಕು

5-Kunigal

Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1-24-sunday

Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.