ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು


Team Udayavani, Apr 22, 2021, 8:01 PM IST

Migrant workers problem

ತುಮಕೂರು: ಕೋವಿಡ್  ಮಹಾಮಾರಿ ಜನರ ಬದುಕನ್ನೇ ಹಾಳು ಮಾಡುತ್ತಿದೆ. ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಕೂಲಿಗಾಗಿ ಬಂದು ತಮ್ಮ ಬದುಕು ಕಟ್ಟಿ ಕೊಂಡವರ ಬದುಕನ್ನು ಹಾಳು ಮಾಡುತ್ತಿದೆ. ಹೇಗೋ ಕೊರೊನಾ ಕಡಿಮೆ ಆಗಿತ್ತು. ನಮ್ಮ ಬದುಕುಕಟ್ಟಿ ಕೊಳ್ಳೋಣ ಎಂದು ನಗರ ಪ್ರದೇಶಗಳಿಗೆ ಬಂದಿದ್ದ ಕೂಲಿ ಕಾರ್ಮಿಕರು ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ನಲುಗಿ ಮತ್ತೆ ತಮ್ಮತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಯಾವುದೇ ಯೋಜನೆಯ ಕಾಮಾರಿಗಳು ನಡೆಯಬೇಕಾದರೂ ಹೊರ ರಾಜ್ಯ, ಹೊರಜಿಲ್ಲೆಗಳಿಂದ ಕೂಲಿ ಅರಸಿ ಬರುವ ಕಾರ್ಮಿಕರು ಪ್ರಮುಖವಾಗಿರುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಪಕ್ಕದ ಆಂದ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ, ಗುಜರಾತ್‌, ರಾಜಸ್ಥಾನ. ಉತ್ತರ ಪ್ರದೇಶಸೇರಿದಂತೆ ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ನಗರದ ಹೊರವಲಯಗಳಲ್ಲಿ ಶೆಡ್‌ ಹಾಕಿಕೊಂಡು ಗುತ್ತಿಗೆದಾರರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅದೇ ರೀತಿ ರಾಜ್ಯದ ಉತ್ತರ ಕರ್ನಾಟಕ,ಗುಲ್ಬರ್ಗಾ, ಬಿಜಾಪುರ, ರಾಯಚೂರು,ದಾವಣ ಗೆರೆ, ಚಿತ್ರದುರ್ಗ, ಬೀದರ್‌ ತುಮಕೂರು ಜಿಲ್ಲೆಯ ಪಾವಗಡ ಸೇರಿದಂತೆವಿವಿಧ ಕಡೆ ಗಳಿಂದ ಬಂದಿರುವ ಕಾರ್ಮಿಕರು ಜಿಲ್ಲೆ ಯಲ್ಲಿ ರಸ್ತೆ ಕಾಮಗಾರಿ, ಪೈಪ್‌ಲೈನ್‌ ಕಾಮಗಾರಿ ಸೇರಿ ಹಲವು ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದರು.ಕೊರೊನಾ ಕಹಿ ಮರೆತ್ತಿಲ್ಲ: ಜಿಲ್ಲೆಯಲ್ಲಿನಜನ ಸಾಮಾನ್ಯರ ಬದುಕನ್ನು ಕಿತ್ತುಕೊಂಡಿರುವ ಕೊರೊನಾ ಮಹಾಮಾರಿ ಕಳೆದ ವರ್ಷಕಾಣಿಸಿಕೊಂಡಿದ್ದ ಮೊದಲ ಅಲೆ ಸಾವಿರಾರುಜನರ ಬದುಕು ಹಾಳು ಮಾಡಿತ್ತು.

ಕೊರೊನಾ ದಿಂದ ಆದ ಲಾಕ್‌ಡೌನ್‌ನಿಂದಸಾವಿರಾರು ಕಾರ್ಮಿ ಕರು ಕೆಲಸ ವಿಲ್ಲದೇತಮ್ಮ ಊರು ಗಳತ್ತ ನಡೆದರು. ನಂತರ ಕೊರೊನಾ ಕಡಿಮೆ ಆಗಿದ್ದ ಹಿನ್ನೆಲೆ ಮತ್ತೆ ಎಂದಿನಂತೆ ತಮ್ಮ ಕೆಲಸ ಕಾರ್ಯಗಳು ಆರಂಭಗೊಂಡಾಗ ಕಾರ್ಮಿಕರು ತಮ್ಮಬದುಕು ಕಟ್ಟಿ ಕೊಳ್ಳಲು ಹಳ್ಳಿಗಳಿಂದ ನಗರಕ್ಕೆಬಂದು ತಮ್ಮ ಕೆಲಸ ಆರಂಭಿಸಿದ್ದರು.

ಆದರೆ,ಈಗ ಮತ್ತೆ ಕೊರೊನಾ ಎರಡನೇ ಅಲೆ ತನ್ನ ರುದ್ರನರ್ತನವನ್ನು ತೋರಲಾರಂಭಿಸಿದ್ದು,ಪ್ರತಿದಿನ ಸಾವಿರಾರು ಜನರಿಗೆ ಸೋಂಕು ಇರುವುದು ಕಂಡುಬರುತ್ತಿದೆ. ಇದರಿಂದಆತಂಕ ಗೊಂಡಿರುವ ಕೂಲಿ ಕಾರ್ಮಿಕರು ಈಗ ಸರ್ಕಾರ ಕೊರೊನಾ ನಿಯಂತ್ರಿಸಲು ರಾತ್ರಿ ಕರ್ಫ್ಯೂ ಮಾಡಿ ವಾರಾಂತ್ಯದ ಬಂದ್‌ಮಾಡು ತ್ತಿದೆ. ಮುಂದೆ ಕೊರೊನಾ ಹೆಚ್ಚಳವಾ ಗುವ ಸಾಧ್ಯತೆಗಳೇ ಹೆಚ್ಚುಇರುವ ಹಿನ್ನೆಲೆ ಮುಂದೆ ಲಾಕ್‌ಡೌನ್‌ಆಗಬಹುದು ಎಂದು ಕೂಲಿ ಕಾರ್ಮಿಕರುತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ರಸ್ತೆ, ಪೈಪ್‌ಲೈನ್‌ ಕಾರ್ಮಿಕರಿಗೆ ಸಂಕಷ್ಟ:ಜಿಲ್ಲೆಯಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ರಸ್ತೆಮತ್ತು ಪೈಲ್‌ಲೈನ್‌ ಕಾಮಗಾರಿ, ಕುಡಿಯುವನೀರಿನ ಯೋಜನೆ, ಎತ್ತಿನಹೊಳೆ ಕಾಮಗಾರಿಹಾಗೂ ರೈಲ್ವೆ ಯೋಜನೆಯ ಕಾಮಗಾರಿನಡೆಯುತ್ತಿವೆ. ಹಲವಾರು ಗುತ್ತಿಗೆದಾರರುಈ ಕಾರ್ಮಿಕರ ಯೋಗಕ್ಷೇಮ ನೋಡಿ ಕೊಂಡು ತಮ್ಮ ಕಾಮಗಾರಿ ಕೆಲಸ ಮಾಡಿಸು ತ್ತಿದ್ದಾರೆ. ಆದರೆ, ಈಗ ಕೊರೊನಾ ತೀವ್ರತೆ ಯಿಂದಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.

ಕೊರೊನಾರ್ಭಟಕ್ಕೆ ನಲುಗಿರುವಕಾರ್ಮಿ ಕ ‌ರ ರಕ್ಷಣೆ ಮಾಡುವ ಜವಾಬ್ದಾರಿಕಾಮ ಗಾರಿಗಳ ಗುತ್ತಿಗೆ ಪಡೆದಗುತ್ತಿಗೆದಾರರ ಮೇಲಿ ದ್ದು, ಕಳೆದ ವರ್ಷಆದ ಕೊರೊನಾ ಸಂದ ರ್ಭದಲ್ಲಿಕಾರ್ಮಿಕರ ಆರೋಗ್ಯ ತಪಾ ಸಣೆ ಮತ್ತು ಅವರಿಗೆ ಆಹಾರ ಒದಗಿಸಲು ಜಿಲ್ಲಾಡಳಿತದ ಜೊತೆಗೆ ಗುತ್ತಿಗೆದಾರರು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದರು.

86,500 ಕಟ್ಟಡ ಕಾರ್ಮಿಕರು: ಜಿಲ್ಲೆಯಲ್ಲಿ86, 500 ಕಟ್ಟಡ ಕಾರ್ಮಿಕರು ಇದ್ದು, 11 ಸಾವಿರ ಗಾರ್ಮೆಂಟ್ಸ್‌ ಕಾರ್ಮಿಕರು, 9,000 ಅಸಂಘಟಿತ ಕಾರ್ಮಿಕರು ಇದ್ದಾರೆ. ಇನ್ನೂ ವಿವಿ ಧಬಗೆಯ ಕಾರ್ಮಿಕರು ಇದ್ದು, ಅವರ ನೋಂದಣಿ ಕಾರ್ಮಿಕ ಇಲಾಖೆ ಯಲ್ಲಿ ಆಗಿ ಲ್ಲ. ಕಳೆದವರ್ಷ ಕೊರೊನಾ ಆರ್ಭಟ ದಿಂ ದ ನಗರಪ್ರದೇಶದಿಂದ 4 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಊರುಗಳತ್ತ ತೆರಳಿದ್ದರು.

ಸ್ವಗ್ರಾಮಗಳಿಗೆಹೋಗಲು ಸಿದ್ಧತೆಕಳೆದ ಲಾಕ್‌ಡೌನ್‌ ವೇಳೆಯಲ್ಲಿ ನಗರಪ್ರದೇಶಗಳನ್ನು ಬಿಟ್ಟು ಹಳ್ಳಿ ಕಡೆ ಮುಖಮಾಡಿದವರು ತಮ್ಮ ಪಾಳು ಬಿದ್ದಿದ್ದಜಮೀನುಗಳನ್ನು ಉಳುಮೆ ಮಾಡಿದಪರಿಣಾಮ ಬಿತ್ತನೆ ಪ್ರಮಾಣವೂ ಹೆಚ್ಚಾಗಿತ್ತು. ಕೊರೊನಾದಿಂದ ಕೆಲಸ ಕಳೆದುಕೊಂಡ ಹಲವರು ಕೃಷಿ ಚಟುವಟಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಕೊರೊನಾ ಮಹಾಮಾರಿ ಆರ್ಭಟಕ್ಕೆಹೆದರಿ ತಮ್ಮ ಹಳ್ಳಿ ಸೇರಿದ್ದ ಮಂದಿ ಕೃಷಿಚಟುವಟಿಕೆ ಜೊತೆಗೆ ಮಹಾತ್ಮಗಾಂಧಿಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100 ದಿನದ ಕೆಲಸ ಪಡೆದು ತಮ್ಮಜಮೀನುಗಳಿಗೆ ಅಗತ್ಯವಾಗಿರುವ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಈಗಮತ್ತೆ ಲಾಕ್‌ಡೌನ್‌ ಆದರೆ ಈಗ ನಗರಪ್ರದೇಶಗಳಲ್ಲಿ ಕೆಲಸ ಮಾಡುವ ಮಂದಿಮತ್ತೆ ತಮ್ಮ ಗ್ರಾಮಗಳಿಗೆ ಹೋಗಲುಸಿದ್ಧತೆ ಮಾಡಿಕೊಂಡಿದ್ದಾರೆ.‌ರ್ಕಾರದ ಈಗಿನ ಮಾರ್ಗಸೂಚಿಯಂತೆಕಾರ್ಮಿಕರ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಇಲ್ಲ. ತಮ್ಮ ಕೆಲಸವನ್ನು ಮಾಡಲು ಸರ್ಕಾರ ಅನುವುಮಾಡಿದೆ. ಈ ಸಂಬಂಧ ಹೊಸ ನಿಯಮ ಏನೂ ಬಂದಿಲ್ಲ.ಕಟ್ಟಡ ಕಾರ್ಮಿಕರು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ.

ಸುಭಾಷ್‌ ಆಲದಕಟ್ಟೆ. ಕಾರ್ಮಿಕ ಅಧಿಕಾರಿ

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Salmana

Baba Siddiqui Case: ಸಲ್ಮಾನ್‌ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್‌ ಬಲೆ!

MVA-Agadi

Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್‌ ನೆರವು ಕೋರಿದ ಕಾಂಗ್ರೆಸ್‌, ಉದ್ಧವ್‌ ಪಕ್ಷ

Isreal-Meet

leaked letter: ಇರಾನ್‌ ಮೇಲೆ ದಾಳಿಗೆ ಇಸ್ರೇಲ್‌ ಸಿದ್ಧವಾಗಿತ್ತು: ವರದಿ

fishermen

Banned ಮೀನುಗಾರಿಕೆ ಈಗಲೂ ಸಕ್ರಿಯ

TRAIN-Acci

Investigation: ಹಳಿಯ ಬೋಲ್ಟ್ ತೆಗೆದಿದ್ದಕ್ಕೆ ಮೈಸೂರು ರೈಲು ಅವಘಡ!

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?

Threats: ವಿಮಾನಗಳಿಗೆ ಹುಸಿ ಬಾಂ*ಬ್‌ ಬೆದರಿಕೆ; ಆರ್ಥಿಕ ಭಯೋತ್ಪಾದನೆ!?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Salmana

Baba Siddiqui Case: ಸಲ್ಮಾನ್‌ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್‌ ಬಲೆ!

MVA-Agadi

Maharashtra: ಸೀಟು ಹಂಚಿಕೆ ಬಿಕ್ಕಟ್ಟು; ಶರದ್‌ ನೆರವು ಕೋರಿದ ಕಾಂಗ್ರೆಸ್‌, ಉದ್ಧವ್‌ ಪಕ್ಷ

Isreal-Meet

leaked letter: ಇರಾನ್‌ ಮೇಲೆ ದಾಳಿಗೆ ಇಸ್ರೇಲ್‌ ಸಿದ್ಧವಾಗಿತ್ತು: ವರದಿ

fishermen

Banned ಮೀನುಗಾರಿಕೆ ಈಗಲೂ ಸಕ್ರಿಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.