ನೀರಿನ ಬವಣೆ ನಿಯಂತ್ರಣಕ್ಕೆ ಸಿದ್ಧತೆ

ಮೇವು ಬ್ಯಾಂಕ್‌, ಟ್ಯಾಂಕರ್‌ ನೀರು ವಿತರಣೆಗೆ ಜಿಲ್ಲಾಡಳಿತ ತಯಾರಿ • ಬರ ನಿರ್ವಹಣೆ ಅನುದಾನ ಉಪಯೋಗ

Team Udayavani, May 7, 2019, 4:08 PM IST

tumkur-tdy-1..

ತುಮಕೂರು ಜಿಲ್ಲೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದು.

ತುಮಕೂರು: ಕಳೆದ ಮುಂಗಾರು-ಹಿಂಗಾರು ಮಳೆಗಳೆರಡೂ ಕೈಕೊಟ್ಟವು. ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಸಾವಿರದ ಐನೂರು ಅಡಿ ಕೊರೆದರೂ ಒಂದನಿ ನೀರು ಬತ್ತಿಲ್ಲ. ಈವರೆಗೂ ಹೇಗೋ ತೆಂಗು ಅಡಕೆ ಕಾಪಾಡಿಕೊಂಡು ಬಂದ್ವಿ ಮುಂದೆ ನಮ್ಮ ಗತಿಯೇನು? ಬೆಲೆ ಕುಸ್ದೈತೆ, ಬೆಳೆ ಒಣಗ್ತಿೖತೆ. ನಮ್ಮ ಗೋಳು ಸರಕಾರಕ್ಕೆ ಮುಟ್ತಿಲ್ಲ. ನಮ್ಮನ್ನು ಕೇಳ್ಳೋರ್ಯಾರು ಸ್ವಾಮಿ ಎನ್ನುತ್ತಿದ್ದಾರೆ ರೈತರು.

ಕಳೆದ 5-6 ವರ್ಷಗಳಿಂದಲೂ ನಿರಂತರವಾಗಿ ಮಳೆ ಕೈಕೊಟ್ಟು ಬರ ಆವರಿಸಿದೆ. ಹೇಗೋ ಜೀವನ ಸಾಗಿಸಲು ಅನುವಾಗುತ್ತಿದ್ದ ತೋಟಗಾರಿಕಾ ಬೆಳೆಗಳೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕಡೆಗಳಲ್ಲಿ ಅಂತರ್ಜಲ ಕುಸಿದಿದೆ. ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುತ್ತಿದ್ದಾರೆ.

ಈ ನಡುವೆ ಜಿಲ್ಲೆಯಲ್ಲಿ ಇರುವ ಜಾನುವಾರು ಗಳನ್ನು ಸಂರಕ್ಷಿಸುವುದು ಕಷ್ಟವಾಗುತ್ತಿದ್ದು, ಜಾನು ವಾರುಗಳಿಗೆ ಮೇವು, ನೀರಿಲ್ಲದೆ.

ಜಾನುವಾರುಗಳ ಸಂತೆಗಳಲ್ಲಿ ಸಿಕ್ಕ ಹಣಕ್ಕೆ ಮಾರುತ್ತಿದ್ದಾರೆ. ಜಾನು ವಾರುಗಳ ಸಂರಕ್ಷಣೆಗಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 24 ಮೇವು ಬ್ಯಾಂಕ್‌ಗಳನ್ನು ತೆರೆದಿದ್ದು, ಇನ್ನು 12 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಮಾಡುವಲ್ಲಿ ಜಿಲ್ಲಾಡಳಿತ ಯಶ್ವಸಿಯಾಗಿದ್ದು, ಗೋವುಗಳಿಗೆ ನೀರು, ಹುಲ್ಲು ಸೌಲಭ್ಯಗಳನ್ನು ಕೊಡಲು ಸರ್ಕಾರ ಸಿದ್ಧವಾಗಿದೆ. ಪಡೆಯಲು ರೈತರು ಸಿದ್ಧವಾಗಬೇಕಿದೆ.

ಎಲ್ಲೆಲ್ಲಿ ಇವೆ ಮೇವಿನ ಬ್ಯಾಂಕ್‌ಗಳು: ಜಿಲ್ಲೆಯಲ್ಲಿರುವ ಗೋವುಗಳನ್ನು ರಕ್ಷಿಸಲು ಜಿಲ್ಲೆಯ 57 ಹೋಬಳಿಗಳಲ್ಲಿ ಜಿಲ್ಲಾಡಳಿತ 24 ಮೇವಿನ ಬ್ಯಾಂಕ್‌ಗಳನ್ನು ತೆರೆದಿದೆ. ಕೊರಟಗೆರೆ ತಾಲೂಕಿನ ಕಸಬಾ ಬಯಲಾಂಜನೇಯ ದೇವಸ್ಥಾನದ ಬಳಿ, ಹೊಳ್ಳವನಹಳ್ಳಿ ಕ್ಯಾಮೇನಹಳ್ಳಿ ಆಂಜನೇಯ ದೇವಸ್ಥಾನದ ಬಳಿ, ಕೊಳಾಲ ಬಸವಣ್ಣನ ದೇವಸ್ಥಾನದ ಬಳಿ ತೋವಿನಕೆರೆ ಸಂತೆ ಬೀದಿ, ಚಿಕ್ಕನಾಯಕನಹಳ್ಳಿ, ಚಿ.ನಾ.ಹಳ್ಳಿ, ಕಸಬಾ ಎಪಿಎಮ್‌ಸಿ ಯಾರ್ಡ್‌, ಕಂದಿಕೆರೆ ಶಾಂತಪ್ಪನ ಗುಡಿ, ಹುಳಿಯಾರ್‌ ಎಪಿಎಮ್‌ಸಿ ಯಾರ್ಡ್‌, ಅಂದನಕೆರೆ ಸಮುದಾಯ ಭವನ, ಶೆಟ್ಟಿಕೆರೆ ಸಮುದಾಯ ಭವನ, ಮಧುಗಿರಿ, ಕೊಡಿಗೇನಹಳ್ಳಿ ಪೊಲೀಸ್‌ ಮೈದಾನ, ಬಡವನಹಳ್ಳಿ ತೋಟಗಾರಿಕೆ ಫಾರಂ, ವೈ.ಎನ್‌.ಹೊಸಕೋಟೆ, ನಿಡುಗಲ್ಲು ಸಿ.ಕೆ.ಪುರ. ತಿಪಟೂರು- ಕಸಬಾ ಕೊನೆಹಳ್ಳಿ ಎಪಿಎಮ್‌ಸಿ ಯಾಡ್‌, ಹೊವನಹಳ್ಳಿ ಮುನಿಯಪ್ಪನ ಆಲದ ಮರ, ಸಿರಾ ಕಸಬಾ ಎಪಿಎಮ್‌ಸಿ ಯಾರ್ಡ್‌, ಕಳ್ಳಂಬೆಳ್ಳ ಚಿಕ್ಕನಾಹಳ್ಳಿ ರೈತರ ತರಬೇತಿ ಕೇಂದ್ರ, ಗೌಡಗೆರೆ ಪಟ್ಟನಾಯಕನಹಳ್ಳಿ ಮಠ, ಬುಕ್ಕಾಪಟ್ಟಣ್ಣ ಬೆಂಚಿಗೇಟ್, ಹುಲಿಕುಂಟೆ ಗಂಡಿಹಳ್ಳಿ ಮಠ, ತುರುವೇಕೆರೆ ಕುಣಿಕೇನಹಳ್ಳಿ ಫಾರಂ, ದಬ್ಬೇಘಟ್ಟ ಮಾಯಸಂದ್ರ ಹಳೆಯ ಆಸ್ಪತ್ರೆ ಆವರಣ, ದಂಡಿನ ಶಿವರ ಎಪಿಎಮ್‌ಸಿ ಯಾರ್ಡ್‌ಗಳಲ್ಲಿ ಮೇವಿನ ಬ್ಯಾಂಕ್‌ಗಳನ್ನು ತೆರೆಯಲಾಗಿದೆ.

128 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು : ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದಲ್ಲಿಯೇ 128 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡ ಲಾಗುತ್ತಿದೆ. ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ.

ತುಮಕೂರು ತಾಲೂಕಿನ 7 ಗ್ರಾಪಂ ವ್ಯಾಪ್ತಿಯ 7 ಗ್ರಾಮ, ಗುಬ್ಬಿ ತಾಲೂಕಿನ 12 ಗ್ರಾ.ಪಂ. 22 ಗ್ರಾಮ, ಚಿಕ್ಕನಾಯಕನಹಳ್ಳಿಯ 2 ಗ್ರಾ.ಪಂ. ವ್ಯಾಪ್ತಿಯ 2 ಗ್ರಾಮ, ಮಧುಗಿರಿ 9 ಗ್ರಾ.ಪಂ.ನ 12 ಗ್ರಾಮಗಳು, ಕುಣಿಗಲ್ನ 6 ಗ್ರಾ.ಪಂ.ನ 13 ಗ್ರಾಮಗಳು, ಕೊರಟ ಗೆರೆ 9 ಗ್ರಾ.ಪಂ.ನ 15 ಗ್ರಾಮಗಳು, ಪಾವಗಡ 12 ಗ್ರಾ.ಪಂ.23 ಗ್ರಾಮಗಳು, ತುರುವೇಕೆರೆ 5 ಗ್ರಾ.ಪಂ.ನ 11 ಗ್ರಾಮಗಳು, ಶಿರಾ, 9 ಗ್ರಾ.ಪಂ.ನ 11 ಗ್ರಾಮಗಳು ತಿಪಟೂರು 6 ಗ್ರಾ.ಪಂ. 7 ಗ್ರಾಮಗಳು ಸೇರಿದಂತೆ ಜಿಲ್ಲೆಯ 77 ಗ್ರಾಪಂ ವ್ಯಾಪ್ತಿಯ 128 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು, 481 ಟ್ರಿಪ್‌ನಲ್ಲಿ ಕುಡಿಯುವ ನೀರನ್ನು ಟ್ಯಾಂಕ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ.

ಬರ ನಿರ್ವಹಣೆಗೆ 5.33 ಕೋಟಿ ರೂ. ಬಿಡುಗಡೆ: ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಬರ ನಿರ್ವ ಹಣೆಗಾಗಿ ಸರ್ಕಾರದಿಂದ ಪ್ರತಿ ಕ್ಷೇತ್ರಕ್ಕೆ 1ಕೋಟಿ ಅನುದಾನ ನಿಗದಿಯಾಗಿದ್ದು, 5.33 ಕೋಟಿ ರೂ. ಬಿಡುಗಡೆ ಆಗಿದೆ. ಜಿಲ್ಲೆಯ 10 ತಾಲೂಕುಗಳು ಬರ ಪೀಡಿತ ತಾಲೂಕುಗಳಾಗಿದ್ದು, ಈಗಾಗಲೇ 24 ಕಡೆಗಳಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ.

ಜಿಲ್ಲೆಯ ಎಲ್ಲಾ ಕಡೆ ಕುಡಿಯವ ನೀರಿನ ಸಮಸ್ಯೆ ನಿವಾರಣೆ ಮಾಡಲು ಸರಕಾರ ಬಿಡುಗಡೆ ಮಾಡಿರುವ ಹಣದಲ್ಲಿ ಪ್ರತಿ ತಾಲೂಕಿಗೆ 50 ಲಕ್ಷ ರೂ.ದಂತೆ ವಿತರಣೆ ಮಾಡಲಾಗಿದೆ. ಈ ಹಣದಲ್ಲಿ ಕೊಳವೆ ಬಾವಿ ದುರಸ್ತಿ, ಪಂಪು ಮೋಟಾರ್‌, ಪೈಪ್‌ ಲೈನ್‌ ಮಾಡಿಸಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌ ತಿಳಿಸಿದ್ದಾರೆ.

● ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

Pavagada; ವಾಹನ ಸಹಿತ ವ್ಯಕ್ತಿ ಸಜೀವದಹನ

Pavagada; ವಾಹನ ಸಹಿತ ವ್ಯಕ್ತಿ ಸಜೀವದಹನ

Tumakur

Wage Workers: ತುಮಕೂರಿನ ಶುಂಠಿ ಕ್ಯಾಂಪ್‌ನಲ್ಲಿ ಜೀತ ಪದ್ಧತಿ ಜೀವಂತ!

1-kunigal

Kunigal: ಕೌಟುಂಬಿಕ ಕಲಹ; ಗೃಹಣಿ ಆತ್ಮಹತ್ಯೆ

Laxmi-Minister

Reality Check: ʼನಮ್ಮ ಅತ್ತೆ ಹೊಡೆಯುತ್ತಿದ್ದಾರೆ ಸಹಾಯ ಮಾಡುವಿರಾʼ ಎಂದ ಸಚಿವೆ ಲಕ್ಷ್ಮೀ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.