ನಾಡಿದ್ದು ಕನಿಷ್ಟ ಕೂಲಿಗಾಗಿ ಪ್ರತಿಭಟನೆ
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಹೇಳಿಕೆ
Team Udayavani, May 12, 2019, 2:04 PM IST
ಸಿಐಟಿಯು ವತಿಯಿಂದ ಶನಿವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು.
ತುಮಕೂರು: ಹೈಕೋರ್ಟ್ ಆದೇಶ ದಂತೆ ಕನಿಷ್ಟ ಕೂಲಿ ಜಾರಿ, ಕಾರ್ಮಿಕ ಅಧಿಕಾರಿ ನೇಮಕ, ಸ್ಮಾರ್ಟ್ಕಾರ್ಡ್ ನೀಡಿಕೆ ಮತ್ತು ಸ್ಕಾರ್ಟ್ ಗಾರ್ಮೆಂಟ್ಸ್ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮೇ 14 ರಂದು ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಗು ವುದು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದರು.
ನಗರದ ಗಾಂಧೀನಗರದ ಜನ ಚಳವಳಿ ಕೇಂದ್ರದಲ್ಲಿ ಶನಿವಾರ ಏರ್ಪ ಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದರು. ಕನಿಷ್ಠ ವೇತನ ಕಾಯ್ದೆಯಡಿ ಸರ್ಕಾರ ನಿಗದಿಗೊಳಿಸಿರುವ 37 ವಿವಿಧ ರಂಗದ ಕಾರ್ಮಿಕರ ಕನಿಷ್ಟ ಕೂಲಿಯನ್ನು ಅಧಿಸೂಚನೆ ದಿನಾಂಕದಿಂದ ಬಾಕಿ ಸಮೇತ ಶೇ. 6 ಬಡ್ಡಿಯೊಂದಿಗೆ ಆರು ವಾರದ ಒಳಗೆ ನೀಡಬೇಕೆಂಬ ರಾಜ್ಯ ಹೈಕೋರ್ಟ್ನ ಆದೇಶವನ್ನು ಜಿಲ್ಲೆಯಲ್ಲಿ ಜಾರಿ ಮಾಡಲು ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹಲವು ತಿಂಗಳಿಂದ ಖಾಲಿ ಇರುವ ಕಾರ್ಮಿಕ ಅಧಿಕಾರಿಗಳ ಹುದ್ದೆ ಭರ್ತಿ ಒಳಗೊಂಡಂತೆ ಕಾರ್ಮಿಕ ನಿರೀಕ್ಷ ಕರು, ಸಿಬ್ಬಂದಿಯನ್ನು ನೇಮಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮನೆಗೆಲಸಗಾರರು, ಹಮಾಲಿ, ಟೈಲರ್, ಚಿಂದಿ ಆಯು ವವರು ಮತ್ತಿತರಿಗೆ ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ನೀಡಲು ಅರ್ಜಿ ಪಡೆದು ಒಂದು ವರ್ಷಗಳ ಮೇಲಾದರೂ ಸ್ಮಾರ್ಟ್ ಕಾರ್ಡ್ ನೀಡಿಲ್ಲ. ಈ ಕೂಡಲೇ ಎಲ್ಲಾ ಅರ್ಜಿದಾರರು ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿರುವ ಬೀಡಿ ಕಾರ್ಮಿಕರಿಗೆ ಸರ್ಕಾರಿ ಅಧಿ ಸೂಚಿತ ಕನಿಷ್ಟ ವೇತನ ಹಾಗೂ 2015 ರಿಂದ 2018ರವರೆಗೆ ಬಾಕಿ ಇರುವ ತುಟ್ಟಿಭತ್ಯೆ ನೀಡುವಂತೆ ಕ್ರಮ ವಹಿಸ ಬೇಕು. ಸಾವಿರಾರು ಮಹಿಳೆಯರ 3 ತಿಂಗಳ ವೇತನ, ಬೋನಸ್, ಪಿಎಫ್, ಮತ್ತಿತರೆ ಕಾನೂನುಬದ್ಧ ಬಾಕಿ ನೀಡದೆ ಏಕಾಏಕಿ ಸ್ಕಾಟ್ ಗಾರ್ಮೆಂಟ್ಸ್ ಮುಚ್ಚಿರುವ ಮಾಲಿಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.