ನೀರಿಲ್ಲದೇ ಬರಿದಾಗುತ್ತಿದೆ ತೀತಾ ಜಲಾಶಯ

ಭರ್ತಿಯಾಗಲು ಎತ್ತಿನಹೊಳೆ ನೀರು ಹರಿಸಿದರಷ್ಟೇ ಸಾಧ್ಯ • ನಾಲೆ ಅಭಿವೃದ್ಧಿಗೆ ಆಗ್ರಹ

Team Udayavani, Jul 28, 2019, 3:29 PM IST

tk-tdy-2

ಗೊರವನಹಳ್ಳಿ ಶ್ರೀ ಮಹಾ ಲಕ್ಮ್ಷಿ ದೇವಾಲಯ ಸಮೀಪದ ತೀತಾ ಜಲಾಶಯ.

ಕೊರಟಗೆರೆ: ಕಲ್ಪತರು ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣವಾದ ದೇವರಾಯನದುರ್ಗ ಬೆಟ್ಟದಲ್ಲಿ ಹುಟ್ಟುವ ಜಯಮಂಗಳಿ ನದಿ ನೀರಿನ ಆಸರೆ ಪಡೆದಿರುವ ತೀತಾ ಜಲಾಶಯ ಸಾವಿರಾರು ರೈತ ಕುಟುಂಬದ ಜೀವನಾಡಿ.

ಕೊರಟಗೆರೆ ತಾಲೂಕಿನ ಮೊದಲ ಜಲಾಶಯಕ್ಕೆ ತನ್ನದೇ ಆದ ಇತಿಹಾಸ ಇದೆ. ಜಯಮಂಗಳಿ ನದಿಯ ನೀರು ಶೇಖರಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1946ರಲ್ಲಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ಕಳೆದ 15 ವರ್ಷದಿಂದ ಜಲಾಶಯ ಬರಿದಾಗಿದ್ದು, ಎತ್ತಿನಹೊಳೆ ನೀರು ಹರಿಸಿದರೆ ಜಲಾಶಯ ಭರ್ತಿಯಾಗಿ ರೈತರ ಬಾಳು ಹಸನಾಗುತ್ತದೆ.

ಎತ್ತಿನಹೊಳೆ ನೀರು ಹರಿಸಿ: ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ರಾಜ್ಯದ ಇತಿಹಾಸ ಪ್ರಸಿದ್ಧ ಗೊರವನ ಹಳ್ಳಿ ಶ್ರೀ ಮಹಾಲಕ್ಷಿ ್ಮೕ ದೇವಾಲಯದ ಸಮೀಪ ವಿರುವ ತೀತಾ ಜಲಾಶಯ ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿದೆ. ಮಹಾಲಕ್ಷಿ ್ಮೕ ದರ್ಶನಕ್ಕೆ ಬರುವ ಸಾವಿರಾರು ಭಕ್ತರು ತಪ್ಪದೆ ಜಲಾಶಯಕ್ಕೆ ಭೇಟಿ ನೀಡಿ ಸುಂದರ ಪರಿಸರ ವೀಕ್ಷಣೆ ಮಾಡು ವುದು ಸಾಮಾನ್ಯವಾಗಿದೆ. ಆದರೆ ಮಳೆ ಕೊರತೆ ಯಿಂದ ಜಯಮಂಗಳಿ ನದಿ ನೀರು ಬಾರದೆ ಬರಿದಾಗುತ್ತಿದ್ದು, ತೀತಾ ಜಲಾಶಯಕ್ಕೆ ತಾಲೂಕಿ ನಲ್ಲಿ ಆರಂಭವಾಗಿರುವ ಶಾಶ್ವತ ನೀರಾವರಿ ಯೋಜನೆಯಾದ ಎತ್ತಿನಹೊಳೆ ಪಕ್ಕದ ಬೈರ ಗೊಂಡ್ಲು ಬಳಿ ಬಫ‌ರ್‌ ಡ್ಯಾಂ ಹರಿಯುವ ಸಂದರ್ಭ ತೀತಾ ಜಲಾಶಯಕ್ಕೂ ನೀರು ಹರಿ ಸುವುದರಿಂದ ರೈತರ ಬಾಳು ಹಸನಾಗುತ್ತದೆ.

2500 ಎಕರೆ ವ್ಯಾಪ್ತಿ: ತೀತಾ ಜಲಾಶಯದ ಅಚ್ಚುಕಟ್ಟು ಪ್ರದೇಶ ಒಟ್ಟು 2500 ಎಕರೆ ವ್ಯಾಪ್ತಿ ಹೊಂದಿದೆ. ಜಲಾನಯನದ ವಿಸ್ತೀರ್ಣ 175.35 ಚ.ಕೀ.ಮೀ ಆಗಿದೆ. ಹಣೆ(ಏರಿ)ಯ ಉದ್ದ 1,017 ಮೀ ಮತ್ತು 16.6ಮೀ ಎತ್ತರವಿದೆ. ನೀರಾವರಿ ತೋಬಿನ ಮಟ್ಟ 764.130ಮೀ, ಜಲಾಶಯದಲ್ಲಿ ಇರಬೇಕಾದ ಕನಿಷ್ಠ ನೀರಿನ ಮಟ್ಟ 765 ಮೀ, ಪೂರ್ಣ ಜಲಾನಯನದ ನೀರಿನ ಮಟ್ಟ 772 ಮೀ, ಜಲಾನಯನದ ಗರಿಷ್ಠ ಮಟ್ಟ 174.50ಮೀ ಆಗಿದೆ. ಒಟ್ಟು ನೀರಿನ ಸಾಮಾರ್ಥ 686 ದಶಲಕ್ಷ ಘನ ಮೀಗಳಾಗಿದೆ.

ಜಲಾಶಯದ ಎರಡು ಕಡೆ ನಾಲೆಗಳಿವೆ. ಎಡದಂಡೆ ನಾಲೆಯು 22 ಕಿ.ಮೀ ವ್ಯಾಪ್ತಿ ಹೊಂದಿದ್ದು, ಮತ್ತು ಬಲದಂಡೆ ನಾಲೆಯು 7.5 ಕಿ.ಮೀ ವ್ಯಾಪ್ತಿ ಹೊಂದಿದೆ. 202 ಹೆಕ್ಟೇರ್‌ ಪ್ರದೇಶಕ್ಕೆ ನೀರಿನ ಪೂರೈಕೆ ಆಗಲಿದೆ. ಜಯಮಂಗಳಿ ನದಿ ತುಂಬಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದರೆ ಚಿಕ್ಕಾವಳಿ ಕೆರೆ ತುಂಬಲಿದೆ. ಚಿಕ್ಕವಳಿ ಕೆರೆಯ ನೀರು ಜಯಮಂಗಳಿ ನದಿಯ ಮಾರ್ಗವಾಗಿ ಆಂಧ್ರದ ಪರಗಿ ಕೆರೆಗೆ ಹೋಗಲಿದೆ.

ತೀತಾ ಜಲಾಶಯದ ನೀರಿನ ಮಟ್ಟ ಒಟ್ಟು 174 ಎಂಸಿಎಫ್ಟಿ ಆಗಿದೆ. 2018-19ನೇ ಸಾಲಿನ ಜು.12ರಂದು ತೀತಾ ಜಲಾಶಯದ ನೀರಿನ ಮಟ್ಟ 96.70 ಎಂಸಿಎಫ್ಸಟಿ ಆಗಿದೆ. ಪ್ರಸ್ತುತ 2019-20ನೇ ಸಾಲಿನ ಜು.12ರ ಮಾಹಿತಿಯಂತೆ ಜಲಾಶಯದ ನೀರಿನ ಮಟ್ಟ ಒಟ್ಟು 20.48 ಆಗಿದೆ. ಮಳೆಗಾಲ ಈಗ ಪ್ರಾರಂಭವಾಗಿದೆ. ಜಯಮಂಗಳಿ ನದಿಯ ನೀರು ಬಂದು ಜಲಾ ಶಯ ಮತ್ತೆ ಭರ್ತಿಯಾಗಿ ರೈತರಿಗೆ ಅನುಕೂಲ ಆಗಲಿದೆ.ಗೊರವನಹಳ್ಳಿ, ತೀತಾ, ಮಾದವಾರ, ತಿಮ್ಮನ ಹಳ್ಳಿ, ತುಂಬುಗಾನಹಳ್ಳಿ, ಚಿಕ್ಕಾವಳ್ಳಿ, ರಾಜಯ್ಯನ ಪಾಳ್ಯ, ಹೊನ್ನಾರನಹಳ್ಳಿ, ಕ್ಯಾಮೇನ ಹಳ್ಳಿ, ಬೀದಲೋಟಿ, ಹೊಳವನಹಳ್ಳಿ, ಕತ್ತಿನಾಗೇನ ಹಳ್ಳಿ, ಕೋಡ್ಲಹಳ್ಳಿ, ವೆಂಕಟಾಪುರ ಸೇರಿದಂತೆ ಹೊಳವನ ಹಳ್ಳಿ ಹೋಬಳಿಯ ಸಾವಿರಾರು ರೈತ ಕುಟುಂಬ ಗಳಿಗೆ ನೀರಾವರಿ ಆಸರೆಯಾಗಿದೆ. ಜಲಾಶಯ ತುಂಬಿ ಕೋಡಿ ಬಿದ್ದರೆ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರು ನೆಮ್ಮದಿಯ ಜೀವನ ಸಾಗಿಸುತ್ತಾರೆ.

● ಎನ್‌.ಪದ್ಮನಾಭ್‌

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Kunigal: ಹಿಂದು ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ : ಈದ್ ಮೀಲಾದ್ ಮೆರವಣಿಗೆ

Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ

Turuvekere: ಗಣೇಶ ವಿಸರ್ಜನೆ ವೇಳೆ ಮುಳುಗಿ ತಂದೆ, ಮಗ ಸೇರಿ ಮೂವರ ಸಾವು

Turuvekere: ಗಣೇಶ ವಿಸರ್ಜನೆ ವೇಳೆ ಮುಳುಗಿ ತಂದೆ, ಮಗ ಸೇರಿ ಮೂವರ ಸಾವು

8-koratagere

ಬಲಿಗಾಗಿ ಕಾದುಕುಳಿತ ಅರಳಿ ಮರ; ಯಾವುದೇ ಅಹಿತಕರ ಘಟನೆಯಾಗುವ ಮುನ್ನ ಅರಳಿ ಮರ ತೆರವುಗೊಳಿಸಿ

KN-Rajanna

Price Hike: ಹಾಲಿನ ದರ ಹೆಚ್ಚಿಸಿದರೆ ರೈತರಿಗೆ ನೇರ ಲಾಭ : ಸಹಕಾರ ಸಚಿವ ಕೆ.ಎನ್‌.ರಾಜಣ್ಣ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.