![1hatharas](https://www.udayavani.com/wp-content/uploads/2024/07/1hatharas-415x233.jpg)
ಸರಕಾರಿ ಕಟ್ಟಡ ನಿರ್ಮಾಣಕ್ಕೆ ತಂದಿದ್ದ ಒಂದು ಟನ್ ಕಬ್ಬಿಣ ರಾಡ್ ಗಳ ಕಳವು
Team Udayavani, Nov 9, 2022, 9:55 PM IST
![robbers](https://www.udayavani.com/wp-content/uploads/2022/11/robbers-620x366.jpg)
ಕೊರಟಗೆರೆ: ಸರಕಾರಿ ಸ್ವಾಮ್ಯದ ವ್ಯವಸಾಯ ಸೇವಾ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ತರಲಾಗಿದ್ದ ಒಂದು ಟನ್ ಕಬ್ಬಿಣ ರಾಡ್ ಗಳು ಕಳವು ಮಾಡಿರುವ ಪ್ರಕರಣ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೊಮ್ಮಲ ದೇವಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಬ್ಯಾಂಕಿನ ಹೊಸ ಕಟ್ಟಡದ ಬಳಿ ಕಳ್ಳತನ ಪ್ರಕರಣ ಜರಗಿದ್ದು, ರಾತ್ರಿ ವೇಳೆ ಯಾವುದೋ ವಾಹನ ತಂದು ಕಳ್ಳರು ತುಂಬಿಕೊಂಡು ಪರಾರಿಯಾಗಿರಬಹುದು ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ ಡಿಸಿಸಿ ಬ್ಯಾಂಕ್ ನ ಅಡಿಯಲ್ಲಿ ಬರುವ ವ್ಯವಸಾಯ ಸೇವಾ ಸಹಕಾರ ಸಂಘ 30 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಕಟ್ಟಡದ ಮೇಲ್ಚಾವಣಿಗೆಂದು ತಂದಿದ್ದ ಕಬ್ಬಿಣ ಇದಾಗಿತ್ತು.
ವ್ಯವಸಾಯ ಸೇವಾ ಸಹಕಾರ ಸಂಘ ಕಟ್ಟಡ ಗ್ರಾಮದ ಹೂರಭಾಗದ ಗೌರಿಬಿದನೂರು – ಮಧುಗಿರಿ ರಸ್ತೆಯ ಹೊಂದಿಕೊಂಡಂತೆ ಹೊಸ ಕಟ್ಟಡ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಪಕ್ಕದಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ಸಂಬಂಧಿಸಿದ ವಸ್ತುಗಳನ್ನು ಶೇಖರಿಸಲು ನಿರ್ಮಿಸಲಾಗಿದ್ದು ನೂರಾರು ಮೂಟೆ ಸಿಮೆಂಟ್ ಕೊಠಡಿಯಲ್ಲಿದ್ದು ಸಿಮೆಂಟ್ ಬಿಟ್ಟು ಕಬ್ಬಿಣವನ್ನು ಮಾತ್ರ ಕಳವು ಮಾಡಲಾಗಿದ್ದು, ಇಲ್ಲಿ ಯಾವೊಬ್ಬ ಕಾವಲುದಾರನೂ ಇಲ್ಲದ ಕಾರಣ ಯಾರೋ ಸ್ಥಳೀಯರು ಹೊಂಚು ಹಾಕಿ ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎನ್ನಲಾಗಿದ್ದು, ಪೊಲೀಸರ ತನಿಖೆಯ ನಂತರವಷ್ಟೇ ಪ್ರಕರಣದ ಸತ್ಯಾ ಸತ್ಯತೆಗಳು ಹೊರ ಬೀಳಲಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
![1hatharas](https://www.udayavani.com/wp-content/uploads/2024/07/1hatharas-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-ewewqe](https://www.udayavani.com/wp-content/uploads/2024/07/1-ewewqe-150x85.jpg)
Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು
![Naxal chandru- Naxal Chandru arrested after 19 years; What is the case?](https://www.udayavani.com/wp-content/uploads/2024/07/Naxal-150x86.jpg)
Naxal chandru-19 ವರ್ಷದ ಬಳಿಕ ನಕ್ಸಲ್ ಚಂದ್ರು ಸೆರೆ; ಏನಿದು ಪ್ರಕರಣ?
![Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು](https://www.udayavani.com/wp-content/uploads/2024/07/11-1-150x90.jpg)
Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು
![koratagere](https://www.udayavani.com/wp-content/uploads/2024/07/koratagere-150x90.jpg)
Koratagere: ಎರಡು ವಿದ್ಯುತ್ ಉಪಸ್ಥಾವರ ಘಟಕಗಳ ಉದ್ಘಾಟನೆ
![Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ](https://www.udayavani.com/wp-content/uploads/2024/06/Arrest-kar-7-150x112.jpg)
Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
![1hatharas](https://www.udayavani.com/wp-content/uploads/2024/07/1hatharas-150x84.jpg)
Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್ಗಳನ್ನು ತಂದಿದ್ದರೆ?
![Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ](https://www.udayavani.com/wp-content/uploads/2024/07/4-7-150x90.jpg)
Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ
![Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ](https://www.udayavani.com/wp-content/uploads/2024/07/government-guest-house-150x81.jpg)
Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ
![Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ](https://www.udayavani.com/wp-content/uploads/2024/07/jay-150x83.jpg)
Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ
![Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/GOA-150x88.jpg)
Panaji ಭಾರೀ ಮಳೆ: ಹಲವೆಡೆ ಪ್ರವಾಹ ಸ್ಥಿತಿ; ವಾಹನ ಸವಾರರ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.