ಕಲ್ಪತರು ನಾಡಿನಲ್ಲಿ ಕಪ್ಪು ಶಿಲೀಂಧ್ರದ ಭೀತಿ!


Team Udayavani, May 22, 2021, 6:36 PM IST

thumakuru news

ತುಮಕೂರು: ಕೊರೊನಾರ್ಭಟದ ನಡುವೆಯೇ ಬ್ಲ್ಯಾಕ್‌ ಫ‌ಂಗಸ್‌ಜಿಲ್ಲೆಯ ಜನರನ್ನು ಕಾಡುತ್ತಿದೆ. ಕೋವಿಡ್‌ ಬಾಧೆಯಿಂದ ತತ್ತರಿಸುತ್ತಿರುವ ಜಿಲ್ಲೆಗೆ ಬ್ಲ್ಯಾಕ್‌ ಫ‌ಂಗಸ್‌ನ ಕರಿನೆರಳು ಆವರಿಸಿದೆ.

ಜಿಲ್ಲೆಯಹತ್ತು ಜನರಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಲಕ್ಷಣಗಳು ಕಂಡುಬಂದಿದ್ದು,ಕೋವಿಡ್‌ನಿಂದ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದ ಇಬ್ಬರು ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನೇ ದಿನೆ ವ್ಯಾಪಿಸುತ್ತಿದೆ.ಇದುವರೆಗೂ ನಗರ ಪ್ರದೇಶದಲ್ಲಿ ರಣಕೇಕೆ ಹಾಕುತ್ತಿದ್ದ ಕೊರೊನಾಈಗ ಹಳ್ಳಿಹಳ್ಳಿಗೆ ಹೆಚ್ಚು ವ್ಯಾಪಿಸುತ್ತಲೇ ಇದೆ. ಹಳ್ಳಿಯಲ್ಲಿ ಕೊರೊನಾಕಟ್ಟಿ ಹಾಕಲು ಪ್ರಯತ್ನ ನಡೆಯುತ್ತಿರುವ ವೇಳೆಯಲ್ಲಿ ಜಿಲ್ಲೆಯಲ್ಲಿಕರಿಹೆಮ್ಮಾರಿಯಕಾಟ ಈಗ ಆರಂಭವಾಗಿದೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕುಗೋಚರಗೊಂಡಿದ್ದ ಶಿರಾ ತಾಲೂಕಿನಲ್ಲಿಯೇ ಬ್ಲ್ಯಾಕ್‌ ಫ‌ಂಗಸ್‌ಕಂಡು ಬಂದಿದೆ. ಇಲ್ಲಿಯ ನಿವಾಸಿಯೊಬ್ಬರು ಮತ್ತು ಕುಣಿಗಲ್‌ತಾಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಕುಣಿಗಲ್‌ ತಾಲೂಕು ಆರೋಗ್ಯ ಅಧಿಕಾರಿ ಆರೋಗ್ಯ ಸಚಿವರ ಸಭೆಯಲ್ಲಿಯೇ ತಾಲೂಕಿನಲ್ಲಿ ಒಬ್ಬರು ಬ್ಲ್ಯಾಕ್‌ ಫ‌ಂಗಸ್‌ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಡಿಎಚ್‌ಒ ಜಿಲ್ಲೆಯಲ್ಲಿ ಯಾರೂಮೃತಪಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ, ಈ ಸೋಂಕಿಗೆ ಬಲಿಯಾಗಿರುವುದಂತು ಖಚಿತವಾಗಿದೆ ಎನ್ನಲಾಗಿದೆ.ಏನಿದು ಬ್ಲ್ಯಾಕ್‌ ಫ‌ಂಗಸ್‌(ಕಪ್ಪುಶಿಲೀಂಧ್ರ): ಕೊರೊನಾ ರೋಗಿಗಳು ಚಿಕಿತ್ಸೆ ಮುಗಿಸಿ ಹೊರಬಂದಾಗ ರೋಗ ನಿರೋಧಕಶಕ್ತಿ ಕಡಿಮೆಯಿರುತ್ತದೆ. ಅದರಲ್ಲೂ ಸ್ಟಿರಾಯ್ಡ ಬಳಸಿದವರಲ್ಲಿ ಮಧುಮೇಹದ ಜೊತೆಗೆದೇಹ ಇನ್ನಷ್ಟು ಬಳಲಿರುತ್ತದೆ.ಇಂಥ ಸಂದರ್ಭದಲ್ಲಿ ದೇಹಸಣ್ಣ ಸಣ್ಣ ಬಾಹ್ಯಾಕ್ರಮಣಕ್ಕೂತಲ್ಲಣಗೊಳ್ಳುತ್ತದೆ.

ಬ್ಲ್ಯಾಕ್‌ಫ‌ಂಗಸ್‌ ಕೂಡ ಇಂತಹದ್ದೇ ಒಂದುಸಮಸ್ಯೆ. ಈ ಕಪ್ಪು ಶಿಲೀಂಧ್ರ ಗಾಳಿ ಮತ್ತುಮಣ್ಣಿನಲ್ಲಿರುತ್ತವೆ. ಗಾಳಿಯಲ್ಲಿರುವ ಕಪ್ಪುಶಿಲೀಂಧ್ರ ಕಣಗಳು ಮೂಗಿಗೆ ಪ್ರವೇಶಿಸುತ್ತವೆ. ರೋಗನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಇದು ದೊಡ್ಡ ಸಮಸ್ಯೆಉಂಟು ಮಾಡು ತ್ತದೆ.

ಸಾಮಾನ್ಯ ಅಲರ್ಜಿಗೂ ತೊಂದರೆಗೆ ಒಳಗಾಗುವವರಲ್ಲಿ ಈ ಸಾಧ್ಯತೆ ಇನ್ನೂ ಹೆಚ್ಚು, ಶ್ವಾಸಕೋಶದ ಮೂಲಕಸಾಗುವ ಶಿಲೀಂಧ್ರ ಕಣ ಸೈನಸ್‌ ಮೂಲಕ ಕಣ್ಣುಗಳನ್ನು ತಲಪುತ್ತದೆ.ಮುಂದೆ ಅದು ಮೆದಳನ್ನೂ ಸೇರುವ ಅಪಾಯವಿದೆ. ಶಿಲೀಂಧ್ರದ ಪರಿಣಾಮ ವಿಪರೀತವಾದರೆ ಮೂಗು ಕತ್ತರಿಸಬೇಕಾದ, ಇಲ್ಲವೆ ಕಣ್ಣನ್ನೇ ತೆಗೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಾಗಿದೆ.

ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಸೂಕ್ತಮುನ್ನೆಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳು ಕಂಡುಬಂದಕೂಡಲೇ ತುರ್ತು ಚಿಕಿತ್ಸೆ ಪಡೆಯಬೇಕಿದೆ.

ಅನಿಯಂತ್ರಿತ ಮಧುಮೇಹಿಗಳಲ್ಲಿ ರೋಗ ಉಲ್ಬಣ: ಕೋವಿಡ್‌ಪಾಸಿಟಿವ್‌ ಆಗಿ ಆಸ್ಪತ್ರೆಯಿಂದ ಡಿಸಾcರ್ಜ್‌ ಆದ ಅನಿಯಂತ್ರಿತಮಧುಮೇಹಿಗಳಲ್ಲಿ ಈ ಬ್ಲ್ಯಾಕ್‌ ಫ‌ಂಗಸ್‌ ರೋಗ ಲಕ್ಷಣಗಳುಕಂಡುಬರುವ ಸಾಧ್ಯತೆಯಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಪ್ರಮುಖವಾಗಿ ಕಣ್ಣು ದಪ್ಪವಾಗುವುದು, ವಿಪರೀತಕಣ್ಣು ನೋವು, ಮೂಗಿನಿಂದ ರಕ್ತಸೋರುವಿಕೆ, ಈ ರೋಗ ಲಕ್ಷಣವಾಗಿದ್ದು, ಕೂಡಲೇ ಸಿಟಿಸ್ಕ್ಯಾನ್ ಮಾಡಿಸಿ ರೋಗ ಪತ್ತೆ ಮಾಡಬೇಕು. ಫ‌ಂಗಸ್‌ ಪತ್ತೆಯಾದ ಕೂಡಲೇ6 ವಾರಗಳ ಕಾಲ ಆಂಪೊಟೆರಿಸಿನ್‌-ಬಿ ಎಂಬ ಇಂಜೆಕ್ಸನ್‌ ಅನ್ನು ನಿಯಮಿತವಾಗಿ ಪಡೆಯಬೇಕು. ತೀರಾಉಲ್ಬಣವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಕೋವಿಡ್‌ ಚಿಕಿತ್ಸೆಬಳಸುವ ಸ್ಟಿರಾಯಿಡ್‌ ಗುಣುಮುಖರಾದ ಬಳಿಕ ರೋಗ ನಿರೋಧಕ ಶಕ್ತಿಕಡಿಮೆಯಿರುವವರಲ್ಲಿ ಬ್ಲಾಕ್‌ಫ‌ಂಗಸ್‌ಗೆ ಕಾರಣವಾಗುತ್ತಿದೆ.

ಹಾಗಾಗಿ ಸೋಂಕಿನಿಂದ ಗುಣಮುಖರಾದವರು ಅಲಕ್ಷ Â ವಹಿಸದೆರೋಗ ನಿರೋಧಕ ಶಕ್ತಿ ಹೆಚ್ಚುವ ಆಹಾರ ಸೇವನೆ ಜೊತೆಗೆ ಮಧುಮೇಹ ಇದ್ದವರು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.