ಆಟೋ, ದ್ವಿಚಕ್ರ ವಾಹನಗಳಿಗೆ ಕಲಬೆರಕೆ ಇಂಧನ ಬಳಕೆ
Team Udayavani, May 15, 2023, 3:21 PM IST
ತಿಪಟೂರು: ಕೆಲ ಪ್ರಯಾಣಿಕ ಆಟೋ, ಬೈಕ್ ಸೇರಿ ಲಗೇಜು ವಾಹನಗಳ ಮಾಲಿಕರು ಸೀಮೆಎಣ್ಣೆ, ಕಲಬೆರಕೆ ಮಿಶ್ರಿತ ಪೆಟ್ರೋಲ್, ಡೀಸೆಲ್ ಬಳಕೆ ಮಾಡುತ್ತಿರುವ ಕಾರಣ ನಗರ ದಲ್ಲಿ ಹೆಚ್ಚಿನ ವಾಯುಮಾಲಿನ್ಯ ಉಂಟಾಗು ತ್ತಿದೆ. ಜನರ ಆರೋಗ್ಯದ ಮೇಲೂ ವಿಪರೀತ ಪರಿಣಾಮ ಬೀರುತ್ತಿದೆ. ಇವರ ವಿರುದ್ಧ ಪೊಲೀಸರು, ಸಾರಿಗೆ ಇಲಾಖೆಯವರು ಸೂಕ್ತ ಕ್ರಮಕೈಗೊಳ್ಳಬೇಕಿದೆ.
ನಗರದ ಪ್ರಮುಖ ಬಿ.ಎಚ್.ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ದಟ್ಟ ಹೊಗೆ ಬಿಟ್ಟುಕೊಂಡು ಓಡಾಡುತ್ತಿವೆ. ಕೆಲ ವಾಹನ ಗಳವರು ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್, ಡಿಸೇಲ್ಗಳ ಬಳಕೆ ಮಾಡುತ್ತಿದ್ದು, ಹೊಗೆ ರಸ್ತೆ ತುಂಬ ದಟ್ಟವಾಗಿ ಹರಡಿಕೊಳ್ಳುತ್ತಿದೆ. ಈ ವಾಹನಗಳ ಹಿಂದೆ ಬರುವ ವಾಹನ ಚಾಲಕ ರಿಗೆ ಮುಂದಿನ ವಾಹನಗಳು ಕಾಣಿಸದಂತಾಗಿ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ, ಕೆಟ್ಟ ಹೊಗೆಯಿಂದ ಕಣ್ಣು, ಹೃದಯ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಆಟೋಗಳೇ ಹೆಚ್ಚು: ಇದೂ ಸಾಲದೆಂದು ಸೀಮೆಎಣ್ಣೆ ಮಿಶ್ರಿತ ವಾದರೆ ವಾಹನಗಳ ಶಬ್ದ ಹೆಚ್ಚಾಗುವುದರಿಂದ ಜನರಿಗೆ ಓಡಾಡಲು ಕಿರಿಕಿರಿಯಾಗುತ್ತಿದೆ. ಶಬ್ದಮಾಲಿನ್ಯವೂ ಉಂಟಾಗುತ್ತಿದೆ. ಹೆಚ್ಚಾಗಿ ಆಟೋ ರಿಕ್ಷಾದವರೇ ಸೀಮೆಎಣ್ಣೆ ಮಿಶ್ರಣ ಮಾಡಿಕೊಂಡು ವಾಹನಗಳನ್ನು ಓಡಿಸುತ್ತಿ ರುವುದು ಕಂಡುಬರುತ್ತಿದೆ.
ಕರ್ಕಶ ಹಾರನ್ಗಳ ಬಳಕೆ: ಕೆಲ ದ್ವಿಚಕ್ರ ವಾಹನಗಳವರು ಉದ್ದೇಶಪೂರಕವಾಗಿಯೇ ತಮ್ಮ ವಾಹನಗಳ ಹಾರನ್ಗಳನ್ನು ಕರ್ಕಶ ವಾಗಿ ಕೂಗುವಂತೆ ಮಾಡಿಸಿಕೊಂಡಿದ್ದು, ಇದರಿಂದ ಜನರಿಗೆ ಕಿರಿಕಿರಿಯುಂಟಾಗುತ್ತಿದೆ. ಶಬ್ದಮಾಲಿನ್ಯಕ್ಕೂ ದಾರಿ ಮಾಡಿಕೊಟ್ಟಂತಾ ಗುತ್ತಿದೆ. ಹೆಚ್ಚಾಗಿ ಕೆಲ ಪುಂಡ ಹುಡುಗರೇ ಸ್ಟಂಟ್ಗಾಗಿ ಈ ರೀತಿ ಹಾರನ್ಗಳನ್ನು ಹಾಕಿಸಿ ಕೊಂಡು ಹುಡುಗಿಯರು, ಮಹಿಳೆಯರ ಪಕ್ಕಕ್ಕೇ ಬಂದು ಹಾರನ್ ಮಾಡಿ ಬೆಚ್ಚಿಬೀಳಿಸು ವಂತೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಆ್ಯಂಬುಲೆನ್ಸ್ ರೀತಿಯ ಹಾರನ್ ಬಳಸಿ ಕೊಂಡು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ
Kunigal; ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಇಬ್ಬರು ಯುವಕರು ಸ್ಥಳದಲ್ಲೇ ಮೃ*ತ್ಯು
Tumkur:ಕೌಟುಂಬಿಕ ಕಲಹಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಕೆರೆಗೆ ಬಿದ್ದು ಆತ್ಮಹತ್ಯೆ
Koratagere: ನರೇಗಾ ಕಾಮಗಾರಿ ಹಣ ದುರುಪಯೋಗ, ಗ್ರಾ.ಪಂ. ಪಿಡಿಓ ಅಮಾನತು
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.