ಯೋಧರಿಗೆ ಗೌರವ ಸಲ್ಲಿಕೆ ಎಲ್ಲರ ಕರ್ತವ್ಯ

ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಭಾಜನರಾದ ಯೋಧ ಎಂ.ಜಯರಾಮ್‌ ನಾಯಕ್‌ಗೆ ಸನ್ಮಾನ

Team Udayavani, Oct 22, 2021, 4:06 PM IST

Warrior M Jayaram Nayak honored with Presidential Medal of Honor

ತಿಪಟೂರು: ದೇಶದಲ್ಲಿ ಶಾಂತಿ ನೆಲೆಸಿರುವುದರ ಜೊತೆಗೆ ನಾವೆಲ್ಲರೂ ನೆಮ್ಮದಿ ಮತ್ತು ಶಾಂತಿಯುತ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಚಳಿ, ಬಿಸಿಲು, ಮಳೆ ಯಲ್ಲಿ ಜೀವದ ಹಂಗು ತೊರೆದು ಹೋರಾಡುವ ಯೋಧರು.

ಅವರ ಮಹಾನ್‌ ಕೆಲಸಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ವಾಗಿದೆ ಎಂದು ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಸಿ.ಬಿ. ಶಶಿಧರ್‌ ತಿಳಿಸಿದರು. ನಗರದ ಜನಸ್ಪಂದನ ಕಚೇರಿಯಲ್ಲಿ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಪಾತ್ರರಾಗಿರುವ ತಾಲೂಕಿನ ಕೊಬ್ಬರಿ ದೊಡ್ಡಯ್ಯನಪಾಳ್ಯದ ಯೋಧ ಹವಾ ಲ್ದಾರ್‌ ಜಯರಾಮ್‌ ನಾಯಕ್‌ ಅವರಿಗೆ ಸನ್ಮಾನಿಸಿ ಮಾತನಾಡಿ, ಯೋಧ ಜಯರಾಮ್‌ ನಾಯಕ್‌ 2020ರ ಜ.20ರಂದು ಕುಲ್ಗಂಮ್‌ ಜಿಲ್ಲೆಯ ಲಕ್ಕಡಿಪುರ್‌ ಗ್ರಾಮದಲ್ಲಿ 18ನೇ ಬೆಟಾಲಿಯನ್‌ನ 2ನೇ ಕಮಾಂಡಿಗ್‌ ಆಫೀಸರ್‌ ಮಾಯಾಂಕ್‌ ತಿವಾರಿಯ ಸಹಚರನಾಗಿ ಉಗ್ರರ ಮೇಲೆ ಗುಂಡಿನ ಮಳೆಗರೆದು ಉಗ್ರರನ್ನು ಸೆದೆಬಡೆದು ಅವರು ತೋರಿಸಿದ ಸಾಹಸಕ್ಕೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದು.

ಜ.26ರಂದು ನಡೆಯುವ ಗಣ ರಾಜ್ಯೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದಲ್ಲದೆ, 2-3 ಬಾರಿ ಅವರು ಉಗ್ರರ ಸದೆಬಡಿ ಯುವ ಕೆಲಸದಲ್ಲಿ ಕೈಜೋಡಿಸಿದ್ದು ಸಾಹಸ ಮೆರೆದಿ ರು ವುದಕ್ಕೆ ಸೈನ್ಯದ ಅಧಿಕಾರಿಗಳು ಪ್ರಶಂಸಿದ್ದಾರೆ. ಅವರಲ್ಲಿರುವ ದೇಶದ ಬಗೆಗಿನ ತುಡಿತ ಯುವಕರಿಗೆ ಆದರ್ಶವಾಗಿದೆ ಎಂದರು.

ಇದನ್ನೂ ಓದಿ:- ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

 ಸೈನಿಕರ ಸಾವಿನ ಬಗ್ಗೆ ತಿಳಿಯಲ್ಲ: ಸನ್ಮಾನ ಸ್ವೀಕರಿಸಿದ ಯೋಧ ಹವಾಲ್ದಾರ್‌ ಜಯರಾಮ್‌ನಾಯಕ್‌ ಮಾತನಾಡಿ, ಬೆಟಾಲಿಯನ್‌ನಲ್ಲಿ ಉಗ್ರರ ಜೊತೆ ಹೋರಾಡುವಾಗ ನಮ್ಮ 10 ಸಹಚರರನ್ನು ಕಳೆದುಕೊಂಡೆವು. ಬೆಳಗ್ಗೆ ತಿಂಡಿ ತಿಂದು ಜೊತೆ ಜೊತೆಯಲ್ಲಿಯೇ ಹೋದ ನಾವುಗಳು ನಮ್ಮ ಸಹಚರರನ್ನು ಉಗ್ರರು ಬಲಿತೆಗೆದುಕೊಂಡರು. ಸೈನಿಕರಿಗೆ ಸಾವು ಹೇಗೆ, ಎಲ್ಲಿ ಸಂಭವಿಸುತ್ತದೆ ಎಂದು ಇಲ್ಲಿ ಯಾರಿಗೂ ತಿಳಿದಿರುವುದಿಲ್ಲ ಎಂದು ತಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು.

ತಂದೆಯ ಕೆಲಸ ನನಗೆ ಹೆಮ್ಮೆ: ಜಯರಾಮ್‌ ನಾಯಕ್‌ ಪುತ್ರಿ ಧನುಷ್‌ ಮಾತನಾಡಿ, ನನ್ನ ತಂದೆಯ ಕೆಲಸ ನನಗೆ ಹೆಮ್ಮೆ ತಂದಿದೆ. ಅವರು ಪದಕ ಪಡೆದಿರುವ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ಅವರು ಇಲ್ಲಿಗೆ ಬಂದಾಗ ಖುಷಿ ಇರುತ್ತದೆ. ಮತ್ತೆ ಕರ್ತವ್ಯಕ್ಕೆ ಹೋದಾಗ ನೋವು, ಸಂತೋಷ ಎರಡೂ ಆಗುತ್ತಿದ್ದು, ದೇವರು ಯಾವಾಗಲೂ ಅವರ ಜೀವ ರಕ್ಷಿಸಲಿ ಎಂದರು.

 ಕಾಲೇಜಿಗೆ ಹೆಮ್ಮೆಯ ಸಂಗತಿ: ನಿವೃತ್ತ ಶಿಕ್ಷಕ ಷಣ್ಮು ಖಪ್ಪ ಮಾತನಾಡಿ, ಯೋಧ ಜಯರಾಮ್‌ನಾಯಕ್‌ ನಮ್ಮ ಶಿಷ್ಯನಾಗಿರುವುದು ನಾನು ಕೆಲಸ ಮಾಡಿದ ನಗರದ ಬಾಲಕರ ಪದವಿಪೂರ್ವ ಕಾಲೇಜಿಗೆ ಹಾಗೂ ನನಗೆ ಹೆಮ್ಮೆಯ ಸಂಗತಿ. ಯೋಧರಿಲ್ಲದೆ ನಾವಿಲ್ಲ, ಅವರ ಸೇವೆ ನಮಗೆ ನೇರವಾಗಿ ಕಾಣುವುದಿಲ್ಲ.

ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆಯೇ ಎಂದು ಯೋಧರ ಸೇವೆಯ ಬಗ್ಗೆ ಸ್ಮರಿಸಿದರು.ಹವಾಲ್ದಾರ್‌ ಜಯ ರಾಮ್‌ನಾಯಕ್‌ ಸಹಪಾಠಿಗಳಾದ ರೇಣುಕಯ್ಯ ಮತ್ತಿತರರು ಮಾತನಾಡಿದರು. ಯೋಧ ಜಯ ರಾಮ್‌ ನಾಯಕ್‌ ತಂದೆ ಮೂರ್ತಿನಾಯಕ್‌, ಸಹೋದರ ಸದಾಶಿವಯ್ಯ, ಸಹೋದರಿ ರುಕ್ಮಿಣಿ, ನಿವೃತ್ತ ಸೈನಿಕ ಪರಮಶಿವಯ್ಯ, ಮುಖಂಡರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಗಂಗಾನಾಯ್ಕ, ಬಾಬು ನಾಯಕ್‌, ಯುವ ಕಾಂಗ್ರೆಸ್‌ ಮುಖಂಡ ಶರತ್‌ ಕಲ್ಲೇಗೌಡನ ಪಾಳ್ಯ, ಗೌತಮ್‌, ಹರೀಶ್‌, ಖಲೀಲ್‌ ಇದ್ದರು.

ಟಾಪ್ ನ್ಯೂಸ್

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

naksal (2)

31 Naxal ಎನ್‌ಕೌಂಟರ್‌ಗೆ 1,500 ಮಂದಿ 25 ಕಿ.ಮೀ. ಟ್ರೆಕ್‌!

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

AANE 2

Elephant; ರಾಜ್ಯದಲ್ಲಿ 9 ತಿಂಗಳಲ್ಲಿ 59 ಆನೆ ಸಾ*ವು

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

HDK (4)

Fear..!; ಲಕ್ಷ ಸಿದ್ದು ಬಂದರೂ ಹೆದರೆನು: ಕುಮಾರಸ್ವಾಮಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Renukaswamy ಪ್ರಕರಣ; ಜಾಮೀನು ಪಡೆದ ಮೂವರು ಜೈಲಿನಿಂದ ಬಿಡುಗಡೆ

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

Koratagere: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣ: ಮೂವರ ಬಂಧನ

Python Rescue: ಬೃಹತ್ ಗಾತ್ರದ ಹೆಬ್ಬಾವು ಸೆರೆ

Python Rescue: ಬೃಹತ್ ಗಾತ್ರದ ಹೆಬ್ಬಾವು ಸೆರೆ

Kunigal

Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ

V.-Somanna

Railway Development: ರಾಜ್ಯದಲ್ಲಿ ರೈಲ್ವೇ ಕ್ರಾಂತಿಗೆ ಬದ್ಧ: ಕೇಂದ್ರ ಸಚಿವ ಸೋಮಣ್ಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Mangaluru: ಧರ್ಮ ದ್ವೇಷದ ಭಾಷಣ; ಶಿಕ್ಷಕನ ವಿರುದ್ದ ಪ್ರಕರಣ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

naksal (2)

31 Naxal ಎನ್‌ಕೌಂಟರ್‌ಗೆ 1,500 ಮಂದಿ 25 ಕಿ.ಮೀ. ಟ್ರೆಕ್‌!

bjp jds

BJP, JDS ಮೈತ್ರಿ ಕಾಂಗ್ರೆಸ್‌ ಲೋಕಸಭಾ ಸೋಲಿಗೆ ಕಾರಣ!

1-kamakhya

Assam; ಅತೀ ಪುರಾತನ ಶಕ್ತಿ ಕೇಂದ್ರ ಮಾ ಕಾಮಾಖ್ಯಾ ದೇವಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.