28 ಗ್ರಾಮಗಳು ನೂತನ ತಾಲೂಕಾದ ಬೈಂದೂರಿನ ತೆಕ್ಕೆಗೆ


Team Udayavani, Jan 13, 2018, 6:15 AM IST

byndoor-city.jpg

ಕೊಲ್ಲೂರು: ಬೈಂದೂರು ತಾಲೂಕು ರಚನೆಯ ಕುರಿತಂತೆ ಕರ್ನಾಟಕ ರಾಜ್ಯಪತ್ರದಲ್ಲಿ 28 ಗ್ರಾಮಗಳನ್ನು ಗುರುತಿಸಲಾಗಿದೆ. ವಂಡ್ಸೆ ಹೋಬಳಿಯ ಸೇನಾಪುರ ಹಾಗೂ ಕಮಲಶಿಲೆ ಗ್ರಾಮಗಳನ್ನು ಹೊರತುಪಡಿಸಿ ಮಿಕ್ಕುಳಿದವು ಕುಂದಾಪುರ ತಾಲೂಕಿನ ತೆಕ್ಕೆಗೆ ಸೇರಿವೆ.

ಗ್ರಾಮಗಳ ವಿಂಗಡನೆಯ ಲೆಕ್ಕಾಚಾರ
ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ, ಕಾಪು ಹಾಗೂ ಹೆಬ್ರಿ ತಾಲೂಕುಗಳ ಘೋಷಣೆಯಾಗಿದ್ದು 2018ರ ಜನವರಿಯಿಂದ ಅವುಗಳು ಕಾರ್ಯಾರಂಭಗೊಂಡಿವೆ. ಹೊಸ ತಾಲೂಕುಗಳ ರಚನೆಯಾದೊಡನೆ ಇಲಾಖೆ ಗಳು ಏಕಾಏಕಿ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯವಾಗಿದ್ದು ಸಂಪೂರ್ಣ ತಯಾರಿಗೆ ಇನ್ನಷ್ಟು ಕಾಲಾವಕಾಶ ಅನಿವಾರ್ಯ. 

ಬೈಂದೂರು ತಾಲೂಕಿನಲ್ಲಿ ಶಿರೂರು, ಪಡುವರಿ, ತಗ್ಗರ್ಸೆ, ಬೈಂದೂರು, ಯಡ್ತೆರೆ, ಉಪ್ಪುಂದ, ಬಿಜೂರು, ನಂದನವನ, ಕೆರ್ಗಾಲು, ಕಿರಿಮಂಜೇಶ್ವರ, 11ನೇ ಉಳ್ಳೂರು, ಖಂಬದಕೋಣೆ, ಹೆರಂಜಾಲು, ನಾವುಂದ, ಬಡಾಕೆರೆ, ಮರವಂತೆ, ಹಡವು, ನಾಡಾ, ಹೇರೂರು, ಕಾಲೊ¤àಡು, ಗೋಳಿಹೊಳೆ, ಯಳಜಿತ್‌, ಕೊಲ್ಲೂರು, ಜಡ್ಕಲ್‌, ಮುದೂರು, ಹಳ್ಳಿಹೊಳೆ, ಸೇನಾಪುರ, ಕಮಲಶಿಲೆ ಗ್ರಾಮಗಳಿವೆ.

ಕುಂದಾಪುರ ತಾಲೂಕಿಗೆ ಕೆರಾಡಿ, ಹೊಸೂರು, ಇಡೂರು-ಕುಂಜ್ಞಾಡಿ, ಬೆಳ್ಳಾಲ, ಚಿತ್ತೂರು, ಆಲೂರು, ನೂಜಾಡಿ, ವಂಡ್ಸೆ, ಕುಂದಬಾರಂದಾಡಿ, ಹಕೂìರು, ಹಕ್ಲಾಡಿ, ತ್ರಾಸಿ, ಹೊಸಾಡು, ಗುಜ್ಜಾಡಿ, ಗಂಗೊಳ್ಳಿ, ಉಪ್ಪಿನಕುದ್ರು, ಹೆಮ್ಮಾಡಿ, ಕಟ್‌ಬೆಲೂ¤ರು, ದೇವಲ್ಕುಂದ, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ಕರ್ಕುಂಜೆ, ಗುಲ್ವಾಡಿ, ತಲ್ಲೂರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕುಳಂಜೆ, ಅಂಪಾರು, ಕೊಡ್ಲಾಡಿ, ಆಜ್ರಿ, ಸಿದ್ದಾಪುರ, 74 ಉಳ್ಳೂರು, ಹೊಸಂಗಡಿ, ಯಡಮೊಗೆ ಗ್ರಾಮಗಳಿವೆ.

ಕೆಲವೆಡೆ ಅಸಮಾಧಾನ ಹಾಗೂ ಅಪಸ್ವರ 
ಹೊಸ ತಾಲೂಕಿಗೆ ಸೇರ್ಪಡೆಗೊಳ್ಳುವ ಗ್ರಾಮಗಳ ಬಗ್ಗೆ ಅಲ್ಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು ದೂರ ವ್ಯಾಪ್ತಿಯ ನೆಲೆಯಲ್ಲಿ ಸಮೀಪದ ತಾಲೂಕುಗಳಲ್ಲಿ ಗ್ರಾಮಗಳನ್ನು ಸೇರ್ಪಡೆಗೊಳಿಸಬೇಕೆಂಬ ಬೇಡಿಕೆ ಹಾಗೂ ಒತ್ತಡ ಜನಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದೆ.

ವಂಡ್ಸೆ ಗ್ರಾಮದಲ್ಲಿ ಹರ್ಷಾಚರಣೆ  
ವಂಡ್ಸೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಿರುವ ಬಗ್ಗೆ ಆ ಭಾಗದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.  2017ರ ಡಿಸೆಂಬರ್‌ನಲ್ಲಿ ಸರಕಾರದ ಅಧಿಸೂಚನೆ ಹೊರಬಂದಿದ್ದು ಅದಕ್ಕೆ ಆಕ್ಷೇಪಣೆ ಸಲ್ಲಿಸಲು 1 ತಿಂಗಳ ಅವಕಾಶವನ್ನು ಕಲ್ಪಿಸಲಾಗಿದ್ದು ಸರಕಾರದ ಬೆಂಗಳೂರಿನ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. 

ವಂಡ್ಸೆ  ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲೇ ಉಳಿಸಿರುವುದು ಇಲ್ಲಿನ ನಿವಾಸಿಗಳಿಗೆ ಸುತ್ತಿ ಬಳಸಿ ಬೈಂದೂರುಗೆ ತೆರಳಬೇಕಾದ ವಿದ್ಯಮಾನದಿಂದ ಮುಕ್ತಿ ದೊರೆತಂತಾಗಿದೆ.  
– ಉದಯ ಕುಮಾರ್‌ ಶೆಟ್ಟಿ, ವಂಡ್ಸೆ  ಗ್ರಾ.ಪಂ. ಅಧ್ಯಕ್ಷ

ಸೇನಾಪುರ ಹಾಗೂ ಕಮಲಶಿಲೆಯನ್ನು ಕುಂದಾಪುರ ತಾಲೂಕಿನಲ್ಲಿ ಉಳಿಸಬೇಕು. ಇಲ್ಲಿನ ನಿವಾಸಿಗಳಿಗೆ ಬೈಂದೂರು ತಾಲೂಕಿಗೆ ಸೇರ್ಪಡೆಗೊಳಿಸಿರುವುದು ನಿರಾಶೆಯನ್ನುಂಟು ಮಾಡಿದ್ದು  ಸುತ್ತಿ ಬಳಸಿ ಸರಕಾರಿ ಇಲಾಖೆಯ ಕಾರ್ಯಕ್ಕಾಗಿ ಬೈಂದೂರಿಗೆ ಸಾಗುವುದು ಕಷ್ಟಸಾಧ್ಯ. ಹಾಗೂ ಸಮಯ ವ್ಯರ್ಥ. ಬದಲಾಗಿ ಈ ಎರಡು ಗ್ರಾಮಗಳನ್ನು ಕುಂದಾಪುರ ತಾಲೂಕಿನಲ್ಲಿ  ಉಳಿಸುವುದು ಸೂಕ್ತ. 
– ರವೀಂದ್ರ ನಾವಡ ಸೇನಾಪುರ

– ಡಾ|  ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

POlice

Kundapura: ಅಕ್ರಮ ಮದ್ಯ ಸಾಗಾಟ; ವಶ

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.