ಕೊರಗ ಕಾಲನಿ ಹೆಸರಲ್ಲಿ 50 ಲಕ್ಷ ರೂ. ನೀರುಪಾಲು

ವಾಸ ಯೋಗ್ಯವಲ್ಲದ ಭೂಮಿ ನೀಡಿದ ಜಿಲ್ಲಾಡಳಿತ ; ಪ್ರತಿಷ್ಠಾನದಿಂದ ಜಿಲ್ಲಾ ನ್ಯಾಯಾಧೀಶರಿಗೆ ದೂರು

Team Udayavani, Dec 2, 2021, 4:27 AM IST

ಕೊರಗ ಕಾಲನಿ ಹೆಸರಲ್ಲಿ 50 ಲಕ್ಷ ರೂ. ನೀರುಪಾಲು

ಉಡುಪಿ: ಕೊರಗ ಕುಟುಂಬಕ್ಕೆ ಕೊಂಡಾಡಿಯಲ್ಲಿ ವಾಸಿಸಲು ಯೋಗ್ಯವಲ್ಲದ ಭೂಮಿ ನೀಡಿ, ಜಾಗದ ಅಭಿವೃದ್ಧಿಗೆ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಡೆಗೋಡೆ ಮೊದಲ ಮಳೆಗೆ ನೀರು ಪಾಲಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ್‌ ಶಾನ್‌ಭಾಗ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ನಿರಂತರ ಅಲೆದಾಟದ ಫ‌ಲವಾಗಿ ಇಲ್ಲಿನ ಕೊರಗ ಕುಟುಂಬಕ್ಕೆ ಸರಕಾರ 2011ರಲ್ಲಿ ನಿವೇಶನ ಹಕ್ಕು ಪತ್ರ ನೀಡಿದ್ದರೂ, ವಾಸ ಜಾಗವನ್ನು ತೋರಿಸಿ ರಲಿಲ್ಲ. ಈಗ ಹಂಚಿಕೆಯಾಗಿವ ಭೂಮಿಯು ವಾಸ ಯೋಗ್ಯವಾಗಿಲ್ಲದೇ ಇರುವುದರಿಂದ ಕೊನೆಯ ಪ್ರಯತ್ನವಾಗಿ ಜಿಲ್ಲಾ ನ್ಯಾಯಾಧೀಶರಿಗೆ ದೂರು ನೀಡಿದ್ದೇವೆ ಎಂದರು.

2010ರಲ್ಲಿ ಆರ್ಥಿಕವಾಗಿ ಹಿಂದುಳಿದ ಗಿರಿಜನ ಕುಟುಂಬಗಳಿಗೆ ನಿವೇಶನಗಳನ್ನು ನೀಡುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿತ್ತು. ಈ ಬಗ್ಗೆ ತಿಳಿದ ಕೊರಗ ಜನಾಂಗದ ವಿಜಯಲಕ್ಷ್ಮೀ, ಸಮೀರಾ, ಅಪ್ಪಿ ಸಹಿತ 29 ಕುಟುಂಬಗಳು ಸಮಗ್ರ ಗಿರಿಜನ ಯೋಜನಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ವರ್ಷವಾದರೂ ನಿವೇಶನ ಸಿಗುವ ಸೂಚನೆ ಮಹಿಳೆಯರಿಗೆ ಸಿಕ್ಕಿಲ್ಲ. ಅರ್ಜಿಗಳು ತಹಶೀಲ್ದಾರ್‌, ಡಿಸಿ ಕಚೇರಿಯಲ್ಲಿದೆ ಎಂದು ಅಲೆದಾಡಿಸುತ್ತಿದ್ದರು. ಈ ನಡುವೆ ಆದಾಯ ಮಿತಿ ಹೆಚ್ಚಿರುವುದರಿಂದ ಅರ್ಜಿಗಳನ್ನು ಪರಿಗಣಿಸುವುದು ಅಸಾಧ್ಯ ಎಂಬ ಪ್ರತಿಕ್ರಿಯೆ ತಹಶೀಲ್ದಾರ್‌ ಕಡೆಯಿಂದ ಕೇಳಿ ಮಹಿಳೆಯರು ದಂಗಾಗಿದ್ದರು. ಆರು ತಿಂಗಳ ಅನಂತರ ಬೊಮ್ಮರ ಬೆಟ್ಟು ಗ್ರಾಮದ ಕೊಂಡಾಡಿ ಎಂಬಲ್ಲಿ ಕಲ್ಲುಗುಡ್ಡಗಳಿರುವ 229ನೇ ಸರ್ವೇ ನಂಬರ್‌ 2.61 ಎಕ್ರೆ ಜಾಗದಲ್ಲಿ 29 ಕುಟುಂಬಗಳಿಗೆ ತಲಾ 8 ಸೆಂಟ್ಸ್‌ ವಿಸ್ತೀರ್ಣದ ಮನೆ ನಿವೇಶನಗಳು ಮಂಜೂರು ಮಾಡಿದರು. ಆದರೆ, ಅದು ಈಗ ವಾಸಯೋಗ್ಯವಾಗಿಲ್ಲ ಎಂದು ಕೊರಗ ಮಹಿಳೆಯರು ಅಳಲು ತೋಡಿಕೊಂಡರು.

ಕಾಲ ನಿಗೆ ಮೂಲಸೌಕರ್ಯಕ್ಕೆ ಒದಗಿಸುವ ಅನುದಾನದಲ್ಲಿ ಭೂಮಿ ಸಮತಟ್ಟು ಮಾಡಿ, ತಡೆಗೋಡೆ ಕಟ್ಟಿ ಸೈಟು ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಈ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕ ಇದು ಸೂಕ್ತವಲ್ಲ, ಬೇರೆ ನಿವೇಶನ ನೀಡಿ ಎಂದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇಲ್ಲಿಯವರೆಗೂ ನಿವೇಶನಕ್ಕಾಗಿ ಹೋರಾಡಿ ಸಾಕಾಗಿದೆ ನಮಗೊಂದು ಸೂಕ್ತ ಸ್ಥಳದಲ್ಲಿ ನಿವೇಶನ ಕೊಡುವ ಕೆಲಸ ಜಿಲ್ಲಾಡಳಿತ ಮಾಡಲಿ ಎಂದು ಸುದ್ದಿಗೋಷ್ಠಿಯಲ್ಲಿದ್ದ ಸುಬೇಧಾ, ಮಹಾಲಕ್ಷ್ಮೀ, ಸಮೀರ ನೋವು ಹಂಚಿಕೊಂಡರು.

ಮಂಜೂರಾದ ಹಣ ಎಲ್ಲಿಗೋಯ್ತು ?
2013 ಮಾರ್ಚ್‌ನಲ್ಲಿ ಮೂಲ ನಿವಾಸಿ ಅಭಿವೃದ್ಧಿ ಯೋಜನೆಯಡಿ ಈ ಭೂಮಿ ಸಮತಟ್ಟು ಮಾಡಲು 1.5 ಲಕ್ಷ ರೂ., ಮಂಜೂರಾಗಿ ಅದರಲ್ಲಿ 97 ಸಾವಿರ ರೂ., ಬಿಡುಗಡೆಯಾಗಿದ್ದು ಆ ಹಣವು ಏನಾಗಿದೆ ಎಂಬುದು ತಿಳಿದು ಬಂದಿಲ್ಲ. 2013-2014ರಲ್ಲಿ ಇದೇ ಕೆಲಸಕ್ಕಾಗಿ 3 ಲಕ್ಷ ರೂ., ಅನುದಾನಕ್ಕೆ ಕಾರ್ಯಪಾಲಕ ಎಂಜಿನಿಯರ್‌ ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಈ ಹಣ ಏನಾಯಿತು ಎಂಬ ಬಗ್ಗೆಯೂ ವಿವರಗಳಿಲ್ಲ. ಈ ಹಿಂದೆ ಕರ್ತವ್ಯ ಲೋಪಮಾಡಿದ್ದ ಗಿರಿಜನ ಯೋಜನಾ ಸಮನ್ವಯಾಧಿಕಾರಿ ವಿರುದ್ಧ ಕೊರಗ‌ರ ಅಹವಾಲು ಸ್ವೀಕರಿಸಿದ ರಾಜ್ಯ ಲೋಕಾಯುಕ್ತ ನೋಟಿಸು ನೀಡಿ ತನಿಖೆ ನಡೆಸಿದ್ದರು. ಕಾಲ ನಿಗೆ ರಸ್ತೆ, ನಳ್ಳಿನೀರು, ವಿದ್ಯುತ್‌ ಸಹಿತ ಇನ್ನಿತರ ಸೌಕರ್ಯಗಳನ್ನು ಒದಗಿಸಲು ಬಿಡುಗಡೆ ಮಾಡಲಾಗಿದ್ದ 50 ಲಕ್ಷ ರೂ., ಹೇಗೆ ವ್ಯಯಿಸಲಾಗಿದೆ ಎಂಬ ವಿಚಾರದಲ್ಲೂ ಸ್ಪಷ್ಟತೆ ಇಲ್ಲ ಎಂದು ಡಾ| ಶಾನ್‌ಭಾಗ್‌ ದೂರಿದರು.

ಮಳೆಗೆ ಕೊಚ್ಚಿಹೋದ ತಡೆಗೋಡೆ
ಪ್ರತಿಭಟನೆ, ಲೋಕಾಯುಕ್ತ ನೋಟೀಸ್‌ಗೆ ಉತ್ತರಿಸಲಾಗದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅವಸರದಲ್ಲಿ ಕೊಂಡಾಡಿ ಜಾಗದಲ್ಲಿ 50 ಲಕ್ಷ ರೂ., ವೆಚ್ಚ ಮಾಡಿ 18 ಅಡಿ ಎತ್ತರದ ತಡೆಗೋಡೆಗಳನ್ನು ಕಟ್ಟಿ, ಗುಡ್ಡ ಕೊರೆದು ಮೂರು ಹಂತಗಳಲ್ಲಿ ಸಮತಟ್ಟು ಮಾಡಿ ನಿವೇಶನಗಳನ್ನು ನೀಡಿದರು. ಇದೀಗ ವರ್ಷದ ಮಳೆಗೆ ಗುಡ್ಡ ಜರೆದಿದ್ದು, ತಡೆಗೋಡೆ ನೆಲಸಮವಾಗಿದೆ. ಅತ್ಯಂತ ಕಳಪೆ ಗುಣಮಟ್ಟದಲ್ಲಿ ತಡೆಗೋಡೆ ಕಾಮಗಾರಿ ನಡೆಸಲಾಗಿದೆ. ಇಷ್ಟೆಲ್ಲಾ ನಡೆದು ನಿವೇಶನಗಳು ಅಸುರಕ್ಷಿತವಾಗಿದ್ದರೂ ಅಲ್ಲಿಯೇ ಮನೆ ಕಟ್ಟಿಕೊಳ್ಳಿ ಎಂದು ನಿರ್ದಯ ಅಧಿಕಾರಿಗಳು ಅಸಹಾಯಕ ಕೊರಗರ‌ನ್ನು ಒತ್ತಾಯಿಸುತ್ತಿದ್ದಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಹೇಳಿದಂತೆ ಕೊರಗರು ಮನೆ ಕಟ್ಟಿಕೊಂಡಿದ್ದಲ್ಲಿ ಈಗಾಗಲೇ ಹಲವಾರು ಹೆಣ ಬೀಳುತ್ತಿದ್ದವು. ಈ ಹಗರಣದ ನ್ಯಾಯಾಂಗ ತನಿಖೆ ಆಗಬೇಕು ಎಂದು ಡಾ| ರವೀಂದ್ರನಾಥ್‌ ಶಾನ್‌ಬಾಗ್‌ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Udupi: ಸನಾತನ ಧರ್ಮದ ಸಂಸ್ಕೃತವು ವಿಶ್ವವನ್ನೇ ಸೆಳೆದಿದೆ: ಬಾಬಾ ರಾಮ್ ದೇವ್

Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್

v

By Polls; ಕಳೆಗಟ್ಟಿದ ಚನ್ನಪಟ್ಟಣ; ಉಪಚುನಾವಣೆ ಅಭ್ಯರ್ಥಿ ಅಂತಿಮಗೊಳಿಸಿದ ಜೆಡಿಎಸ್

Bellary; ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ಸಚಿವ ಸಂತೋಷ ಲಾಡ್

Bellary; ಯಾರೇ ಬಂದರೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ: ಸಚಿವ ಸಂತೋಷ ಲಾಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಸನಾತನ ಧರ್ಮದ ಸಂಸ್ಕೃತವು ವಿಶ್ವವನ್ನೇ ಸೆಳೆದಿದೆ: ಬಾಬಾ ರಾಮ್ ದೇವ್

Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್

Rubber-Estate

Illegal Immigration: ರಬ್ಬರ್‌ ಎಸ್ಟೇಟ್‌ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ?

1

Kasaragod: ಸಚಿತಾ ರೈ ವಿರುದ್ಧ ಮತ್ತೊಂದು ಪ್ರಕರಣ ದಾಖಲು

manipal-marathon

Manipal Marathon: ಮಾಹೆ ವಿ.ವಿ: ಮಣಿಪಾಲ ಮ್ಯಾರಥಾನ್‌ ನೋಂದಣಿ ಆರಂಭ

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Salaar 2: ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ -2ʼ ಶೂಟಿಂಗ್‌ ಆರಂಭ?

Udupi: ಸನಾತನ ಧರ್ಮದ ಸಂಸ್ಕೃತವು ವಿಶ್ವವನ್ನೇ ಸೆಳೆದಿದೆ: ಬಾಬಾ ರಾಮ್ ದೇವ್

Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.