![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 5, 2020, 9:51 AM IST
ಮಂಗಳೂರು: ಕೋವಿಡ್ ಸಂದರ್ಭ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಅಗ್ಗದ ದರದಲ್ಲಿ ದೊರೆತ ಹಿನ್ನೆಲೆಯಲ್ಲಿ ಮಂಗಳೂರಿನ ಪೆರ್ಮುದೆ, ಉಡುಪಿಯ ಪಾದೂರು ಹಾಗೂ ವಿಶಾಖಪಟ್ಟಣದ ಭೂಗತ ಕಚ್ಛಾತೈಲ ಸಂಗ್ರಹಾಗಾರಗಳಲ್ಲಿ ತೈಲ ಭರ್ತಿ ಮಾಡಿದ ಪರಿಣಾಮ ಒಟ್ಟು 5,000 ಕೋ. ರೂ. ವಿದೇಶ ವಿನಿಮಯ ಉಳಿತಾಯವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲ ಯವು ಟ್ವೀಟ್ನಲ್ಲಿ ತಿಳಿಸಿದೆ. ಎಪ್ರಿಲ್ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ 2 ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಾಗ ಕೇಂದ್ರ ಅಗ್ಗದ ಬೆಲೆಗೆ ತೈಲ ಖರೀದಿಸಿದೆ. ಮಂಗಳೂರು ಹಾಗೂ ಪಾದೂರು ಸಂಗ್ರಹಾಗಾರದಲ್ಲಿ ಅರ್ಧದಷ್ಟು ಜಾಗವಿದ್ದ ಕಾರಣದಿಂದ ಬಹುತೇಕ ಕಚ್ಛಾ ತೈಲವನ್ನು ಇಲ್ಲಿಯೇ ಸಂಗ್ರಹಿಸಲಾಗಿದೆ.
ಭೂಗತ ಸ್ಥಾವರದ ಸಾಮರ್ಥ್ಯ
ಪೆಟ್ರೋಲಿಯಂ ಸಚಿವಾಲಯ ಅಧೀನದ ಐಎಸ್ಪಿಆರ್ಎಲ್ (ಇಂಡಿಯನ್ ಸ್ಟ್ರೆಟಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್) ವತಿಯಿಂದ ಗವಿ (ಕ್ಯಾವರ್ನ್)ಯಂತಹ ರಚನೆಯಲ್ಲಿ ದೇಶದ ವಿಶಾಖಪಟ್ಟಣ ಸಹಿತ ಮೂರು ಕಡೆಗಳಲ್ಲಿ ತೈಲ ಸಂಗ್ರಹಾಗಾರ ಸ್ಥಾವರ ನಿರ್ಮಾಣವಾಗಿದೆ. ಪಾದೂರು ಸ್ಥಾವರದಲ್ಲಿ 2.5 ಮಿಲಿಯ ಮೆ. ಟನ್ (ಸ್ಥಾವರ ನಿರ್ಮಾಣ ವೆಚ್ಚ 1,693 ಕೋ. ರೂ.), ಮಂಗಳೂರಿನ ಪೆರ್ಮುದೆ ಸ್ಥಾವರದಲ್ಲಿ 1.5 ಮಿಲಿಯ ಮೆ. ಟನ್ (1,227 ಕೋ.ರೂ.), ವಿಶಾಖಪಟ್ಟಣದಲ್ಲಿ 1.3 ಮಿಲಿಯ ಮೆ. ಟನ್ (1,178 ಕೋ. ರೂ.) ಸಹಿತ ಸುಮಾರು 5.3 ಮಿಲಿಯ ಮೆಟ್ರಿಕ್ ಟನ್ ತೈಲ ಸಂಗ್ರಹಿಸಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.