Fraud: ಉದ್ಯೋಗ ಕೊಡಿಸುವುದಾಗಿ 70 ಲಕ್ಷ ರೂ. ವಂಚನೆ
Team Udayavani, Mar 7, 2024, 7:30 PM IST
ಗಂಗೊಳ್ಳಿ: ಕೋಟೇಶ್ವರ ಗ್ರಾಮದ ದೀಪಕ್ ಅವರಿಗೆ ದಯಾನಂದ ಎಂಬಾತ ನ್ಯಾಯಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 70 ಲಕ್ಷ ರೂ. ವಂಚಿಸಿದ ಕುರಿತು ದೂರು ದಾಖಲಾಗಿದೆ.
ಉಡುಪಿ ನ್ಯಾಯಾಲಯಗಳಲ್ಲಿ “ಡಿ’ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕರೆದಿದ್ದು, ಉದ್ಯೋಗ ಕೊಡಿಸುವುದಾಗಿ ನಂಬಿಸಿ 6.5 ಲಕ್ಷ ರೂ. ನಗದಾಗಿ ಪಡೆದಿದ್ದು, ಮತ್ತೆ 3 ಲಕ್ಷ ರೂ.ಗಳನ್ನು ದಯಾನಂದ ನೀಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಇದೇ ಮಾದರಿಯಲ್ಲಿ ಸುಶೀಲಾ 5.5 ಲಕ್ಷ ರೂ., ರತ್ನಾಕರ 14 ಲಕ್ಷ ರೂ., ದಿನೇಶ 16 ಲಕ್ಷ ರೂ., ಪದ್ಮನಾಭ 7.25 ಲಕ್ಷ ರೂ., ವಿಘ್ನೇಶ 2 ಲಕ್ಷ ರೂ., ಸುದೀಪ 7 ಲಕ್ಷ ರೂ., ಮಂಜುನಾಥ 3 ಲಕ್ಷ ರೂ., ಅಭಿಷೇಕ 2 ಲಕ್ಷ ರೂ., ಸೌರಭ್ ಹಾಗೂ ಸ್ವಸ್ತಿಕ್ ತಲಾ 2 ಲಕ್ಷ ರೂ. ಹಣ ಕೊಟ್ಟಿದ್ದರು.
ಹಣ ಪಡೆದ ಬಳಿಕ ಆರೋಪಿ ಕೆಲಸಕ್ಕೆ ನೇಮಕಾತಿ ನೋಟಿಫಿಕೇಶನ್ ಹಾಗೂ ಲಿಸ್ಟ್ ಆಫ್ ಕ್ಯಾಂಡಿಡೇಟ್ ಸೆಲೆಕ್ಟೆಡ್ ಎಂಬ ಜೆರಾಕ್ಸ್ ಪ್ರತಿಗಳನ್ನು ನೀಡಿದ್ದ. ಆನ್ಲೈನ್ನಲ್ಲಿ ಬಂದ ನೇಮಕಾತಿಯ ನಿಜವಾದ ಪಟ್ಟಿ ನೋಡಿದಾಗ ಹೆಸರು ಇರಲಿಲ್ಲ. ವಿಚಾರಿಸಿದಾಗ ಹೈಕೋರ್ಟ್ನಿಂದ ಬೇರೆಯೇ ಲಿಸ್ಟ್ ಬರುವುದಾಗಿ ನಂಬಿಸಿ, ಅಪಾಯಿಂಟ್ಮೆಂಟ್ ಕ್ಯಾಂಡಿಡೇಟ್ ಪ್ಲೇಸ್ಮೆಂಟ್ ಲಿಸ್ಟ್ ಎಂಬ ಜೆರಾಕ್ಸ್ ಪ್ರತಿ ನೀಡಿದ್ದ. ನೇರವಾಗಿ ಹೈಕೋರ್ಟ್ನಿಂದ ಪಡೆದಿದ್ದು ಎಂದು ನಂಬಿಸಿ, ನಿರ್ದಿಷ್ಟ ದಿನಾಂಕದಂದು ಉಡುಪಿ ಕೋರ್ಟ್ಗೆ ಹೋಗಿ ದಾಖಲೆಗಳನ್ನು ಹಾಜರುಪಡಿಸಬೇಕಾಗಿ ತಿಳಿಸಿದ್ದ. ಆರೋಪಿ ವಂಚಿಸುತ್ತಿದ್ದಾನೆ ಎಂಬ ಸಂಶಯದಿಂದ ಹಣ ಮರಳಿ ಕೇಳಿದಾಗ ಆರೋಪಿ ತನ್ನ ಮಡದಿ ಭವಾನಿ ಅವರ ಹೆಸರಿನ ತ್ರಾಸಿ ಗ್ರಾಮದ ಜಾಗದ ಜಿಪಿಎ ಪತ್ರವನ್ನು ದೀಪಕ್ ಹಾಗೂ ರತ್ನಾಕರ ಅವರಿಗೆ ಜಿಪಿಎ ಮಾಡಿ ನೀಡಿದ್ದ. ದೀಪಕ್ಗೆ 6.5 ಲಕ್ಷ ರೂ. ಚೆಕ್ ನೀಡಿದ್ದ. ಜಿಪಿಎ ಮಾಡಿಕೊಟ್ಟ ಜಾಗವನ್ನು ವರ್ಗಾಯಿಸದೆ ಉದ್ಯೋಗ ಕೊಡಿಸವ ನೆಪದಲ್ಲಿ ಒಟ್ಟು 70.25 ಲಕ್ಷ ರೂ. ಹಣ ವಂಚನೆ ಮಾಡಿರುವುದಾಗಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ
Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ
Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !
Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ
Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.