ಜಿಲ್ಲೆಯಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ

ಜಿಮ್‌, ಕ್ರೀಡಾಂಗಣಕ್ಕೆ ಕ್ರೀಡಾಪಟುಗಳ ದೌಡು

Team Udayavani, Dec 29, 2020, 5:21 AM IST

ಜಿಲ್ಲೆಯಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ

ಉಡುಪಿ: ಲಾಕ್‌ಡೌನ್‌ ಮುಕ್ತಾಯ ಬಳಿಕ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಯ ವ್ಯಾಪ್ತಿಯ ಕ್ರೀಡಾಂಗಣ ಹಾಗೂ ಜಿಮ್‌ ಕಾರ್ಯಾರಂಭಿಸಿದ್ದು, ಕ್ರೀಡಾಪಟುಗಳು ತರಬೇತಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.

ಲಾಕ್‌ಡೌನ್‌ ವೇಳೆ ನಷ್ಟ
ಕೊರೊನಾ ಲಾಕ್‌ಡೌನ್‌ ಜಿಲ್ಲೆಯ ಕ್ರೀಡೆ ಮತ್ತು ಯುವ ಜನ ಸಶಕ್ತೀಕರಣ ಇಲಾಖೆಯ ಆದಾಯಕ್ಕೆ ಬಹಳ ದೊಡ್ಡ ಹೊಡೆತ ನೀಡಿದೆ. ಎಪ್ರಿಲ್‌ -ಮೇ ತಿಂಗಳಲ್ಲಿ ಕ್ರೀಡಾಂಗಣ, ಈಜುಕೊಳ, ಬೇಸಗೆ ಶಿಬಿರಗಳಿಂದ ಬರುತ್ತಿದ್ದ ವಾರ್ಷಿಕ ಆದಾಯದ ಬಹುಪಾಲು ಸುಮಾರು 20 ಲ.ರೂ. ನಷ್ಟ ಉಂಟಾಗಿತ್ತು. ಇದೀಗ ಮತ್ತೆ ತೆರೆದುಕೊಂಡಿದ್ದರಿಂದ ಇಲಾಖೆಗೆ ಮಾಸಿಕ ಆದಾಯ ಹರಿದು ಬರುತ್ತಿದೆ.

ಮಾಸಿಕ 2.64 ಲಕ್ಷ ರೂ. ಆದಾಯ
ಲಾಕ್‌ಡೌನ್‌ಗೂ ಮುನ್ನ ಒಳಾಂಗಣ ಕ್ರೀಡಾಂಗಣ ದಲ್ಲಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್‌, ಲಾನ್‌ ಟೆನಿಸ್‌ ಒಳಾಂಗಣ, ಶಟ್ಲ ಬ್ಯಾಡ್ಮಿಂಟನ್‌, ಈಜುಕೊಳದಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದರು. ಇವರಿಂದ ತಿಂಗಳಿಗೆ ಸುಮಾರು 3.5 ಲ.ರೂ. ಆದಾಯ ಇಲಾಖೆ ಬರುತ್ತಿತ್ತು. ಲಾಕ್‌ಡೌನ್‌ ತೆರೆವಾದ ಬಳಿಕ ಇದೀಗ ಜಿಮ್‌ನಲ್ಲಿ 120, ಲಾನ್‌ ಟೆನಿಸ್‌ನಲ್ಲಿ 28, ಶಟ್ಲ ಬ್ಯಾಡ್ಮಿಂಟನ್‌ನಲ್ಲಿ 140 ಜನರು ತರಬೇತಿ ಪಡೆಯುತ್ತಿದ್ದು, ಮಾಸಿಕ 2.64 ಲ.ರೂ. ಆದಾಯ ಬರುತ್ತಿದೆ.

ತೆರೆಯದ ಈಜುಕೊಳ
2 ಕೋ.ರೂ. ವೆಚ್ಚದಲ್ಲಿ ಅಜ್ಜರಕಾಡಿನಲ್ಲಿ 5 ವರ್ಷಗಳ ಹಿಂದೆ ಈಜುಕೊಳ ನಿರ್ಮಿಸಲಾಗಿದೆ. ಕಳೆದ ಮಾರ್ಚ್‌ ಲಾಕ್‌ಡೌನ್‌ ಬಳಿಕ ಇದನ್ನು ಬಂದ್‌ ಮಾಡಲಾಗಿದೆ. ಬೇಸಗೆಯ ಎರಡು ತಿಂಗಳುಗಳಲ್ಲಿ ಈಜುಕೊಳದಿಂದ ಇಲಾಖೆಗೆ 14-15 ಲ.ರೂ. ಆದಾಯ ಬರುತ್ತಿತ್ತು. ಲಾಕ್‌ಡೌನ್‌ನಿಂದಾಗಿ ಈ ಆದಾಯ ಖೋತಾ ಆಗಿದೆ. ಪ್ರಸ್ತುತ ದುರಸ್ತಿ ಹಿನ್ನೆಲೆಯಲ್ಲಿ ಈಜುಕೊಳ ಬಂದ್‌ ಆಗಿದೆ.

ನಿರ್ವಹಣೆಗೆ ಶುಲ್ಕವೇ ಆಧಾರ
ಈಜುಕೊಳ, ಒಳಾಂಗಣ ಹಾಗೂ ಜಿಲ್ಲಾ ಕ್ರೀಡಾಂ ಗಣಗಳಿಂದ ಬರುವ ಆದಾಯಗಳು ಇಲ್ಲಿನ ಗುತ್ತಿಗೆ ಸಿಬಂದಿ ಸಂಬಳ ಹಾಗೂ ಇವುಗಳ ನಿರ್ವಹಣೆಯ ಪ್ರಮುಖ ಮೂಲಗಳಾಗಿವೆ. ಈಜುಕೊಳದಲ್ಲಿ 11 ಮಂದಿ, ಶಟ್ಲ ಬ್ಯಾಡ್ಮಿಂಟನ್‌ನಲ್ಲಿ 7 ಮಂದಿ, ಲಾನ್‌ ಟೆನಿಸ್‌ನಲ್ಲಿ 4 ಮಂದಿ, ಜಿಮ್‌ನಲ್ಲಿ ಒಬ್ಬರು ಹಾಗೂ ಇಲಾಖೆ ಕಚೇರಿ ಮತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಆರು ಮಂದಿ ಗುತ್ತಿಗೆ ಸಿಬಂದಿ ದುಡಿಯುತ್ತಿದ್ದಾರೆ. ಇವರಿಗೆಲ್ಲ ಇದೇ ಆದಾಯದಿಂದಲೇ ಸಂಬಳ ನೀಡಬೇಕಾಗುತ್ತದೆ.

ಕ್ಯಾಂಪ್‌ಗಳಿಂದ ಅನುದಾನ
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ಬೇಸಗೆಯಲ್ಲಿ ಇಲಾಖೆಯಿಂದ ಏರ್ಪಡಿಸಲಾಗುವ ಆ್ಯತ್ಲೆಟಿಕ್ಸ್‌ ಕ್ಯಾಂಪ್‌ನಲ್ಲಿ ಸುಮಾರು 200-300 ಮಂದಿ ಭಾಗವಹಿಸುತ್ತಾರೆ. ಈ ಶಿಬಿರಾರ್ಥಿಗಳಿಂದ 50,000-60,000 ರೂ.ವರೆಗೆ ಹಣ ಸಂಗ್ರಹಿಸಲಾಗುತ್ತದೆ. ಅದೇ ರೀತಿ ಸ್ವಿಮ್ಮಿಂಗ್‌ ಕ್ಯಾಂಪ್‌ಗ್ಳಲ್ಲಿ 200-250 ಮಂದಿ ಹಾಗೂ ಶಟಲ್‌ ಬ್ಯಾಡ್ಮಿಂಟನ್‌ ಶಿಬಿರದಲ್ಲಿ ಸುಮಾರು 80 ಮಂದಿ ಭಾಗವಹಿಸುತ್ತಾರೆ. ಇದರಲ್ಲಿ ಸುಮಾರು 20 ಲ.ರೂ. ವರೆಗೆ ಆದಾಯ ಬರುತ್ತಿತ್ತು. ಇದರಿಂದ ಕ್ರೀಡಾಂಗಣ ಹಾಗೂ ಜಿಮ್‌ ಸಂಬಂಧಿಸಿದ ದುರಸ್ತಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಆದಾಯಕ್ಕೆ ಹೊಡೆತ ಉಂಟಾಗಿದೆ.

ಮಾರ್ಗಸೂಚಿ ಅನ್ವಯ ತರಬೇತಿ
ಲಾಕ್‌ಡೌನ್‌ ತೆರವಾದ ಬಳಿಕ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣಗಳನ್ನು ತೆರೆಯಲಾಗಿದೆ. ಕ್ರೀಡಾಪಟುಗಳು ಬಂದು ತರಬೇತಿ ಪಡೆದು ಕೊಳ್ಳುತ್ತಿದ್ದಾರೆ. ಕೋವಿಡ್‌ ಮಾರ್ಗಸೂಚಿ ಅನ್ವಯ ಕ್ರೀಡಾಪಟುಗಳಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈಜುಕೊಳದಲ್ಲಿ ದುರಸ್ತಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಲ್ಲ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕ, ಯುವಜನ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ

ಟಾಪ್ ನ್ಯೂಸ್

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Arrest

Mandya ಹೆಣ್ಣು ಭ್ರೂಣ ಹತ್ಯೆ ಕೇಸ್‌: ಮತ್ತೆ ಮೂವರ ಬಂಧನ

ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

Fishing ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

1-

Udupi; ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ; ಸವಾರ ಗಂಭೀರ

7-shirva

Monti Fest: ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

1-bhat-bg

Bhatkal;ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಬಾಲಕನ ರಕ್ಷಣೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.