ಮಕ್ಕಳಿಗೆ ರಾಧಾ-ಕೃಷ್ಣ, ಊರ್ಮಿಳೆ-ಲಕ್ಷ್ಮಣರ ಪ್ರೇಮ ತಿಳಿಸಿ: ಅಕ್ಷಯಾ ಗೋಖಲೆ

ಶಿವಪಾಡಿ ದೇಗುಲ ಅತಿರುದ್ರ ಮಹಾಯಾಗ ಧಾರ್ಮಿಕ ಸಭೆಯಲ್ಲಿ ಅಕ್ಷಯಾ ಗೋಖಲೆ

Team Udayavani, Feb 23, 2023, 5:15 AM IST

ಮಕ್ಕಳಿಗೆ ರಾಧಾ-ಕೃಷ್ಣ, ಊರ್ಮಿಳೆ-ಲಕ್ಷ್ಮಣರ ಪ್ರೇಮ ತಿಳಿಸಿ: ಅಕ್ಷಯಾ ಗೋಖಲೆ

ಉಡುಪಿ: ಪ್ರಸ್ತುತ ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ರಾಧಾ-ಕೃಷ್ಣ, ಸೀತಾ-ರಾಮ ಮತ್ತು ಊರ್ಮಿಳೆ-ಲಕ್ಷ್ಮಣರ ಪವಿತ್ರ ಅಮರ ಪ್ರೇಮವನ್ನು ತಿಳಿಸುವುದರ ಜತೆಗೆ ಭಾರತೀಯ ಸಂಸ್ಕೃತಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಬೇಕಿದೆ. ಇದರಿಂದ ಲವ್‌ ಜೆಹಾದ್‌ನಂತಹ ಪಿಡುಗನ್ನು ತಡೆಗಟ್ಟಬಹುದು ಎಂದು ಕಾರ್ಕಳದ ಉಪನ್ಯಾಸಕಿ, ವಾಗ್ಮಿ ಅಕ್ಷಯಾ ಗೋಖಲೆ ತಿಳಿಸಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಬುಧವಾರ ಆರಂಭಗೊಂಡಿರುವ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.

18 ವರ್ಷ ತುಂಬುತ್ತಿದ್ದಂತೆ ಹಿಂದೂ ಯುವತಿ ಲಕ್ಷ್ಮೀ, ರಜಿಯಾ ಆಗಿ ಮತಾಂತರವಾಗುವುದಕ್ಕೆ ಮೂಲ ಕಾರಣ ಪೋಷಕರು. ಶ್ರದ್ಧಾ 32 ತುಂಡುಗಳಾಗಿ ಫ್ರಿಡ್ಜ್ ನಲ್ಲಿ ಸೇರಿದರೂ ನಮ್ಮ ಯುವತಿಯರು ಲವ್‌ ಜೆಹಾದ್‌ ಬಲೆಗೆ ಸಿಲುಕುತ್ತಿದ್ದಾರೆ ಎಂಬುದಕ್ಕೆ ಕಾರಣ ಏನೆಂದು ಚಿಂತಿಸಬೇಕಾಗಿದೆ. ಮಕ್ಕಳಿಗೆ ಭಾರತದ ಸಂಸ್ಕೃತಿಯ ಬಗ್ಗೆ ಸ್ಥೂಲವಾದ ಪರಿಚಯವನ್ನು ಹೆತ್ತವರು ತಿಳಿಹೇಳಬೇಕಾಗಿದೆ. ನಾವು ಸರಿಯಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಹಿಂದೂ ಧರ್ಮದ ಬಗ್ಗೆ ದೃಢವಾದ ಹೆಮ್ಮ ಮತ್ತು ಅಗಾಧವಾದ ಅರಿವನ್ನು ಮಕ್ಕಳಲ್ಲಿ ತುಂಬಬೇಕು. ಭಾರತವನ್ನು ಮಾತೆಯ ರೂಪದಲ್ಲಿ ಪೂಜಿಸುತ್ತೇವೆ. ಪುರುಷ ಮತ್ತು ಪ್ರಕೃತಿ, ಶಿವ ಹಾಗೂ ಶಕ್ತಿ ಒಂದಾದರೆ ಮಾತ್ರ ಸಮಾಜವು ಪರಿಪೂರ್ಣವಾಗಲು ಸಾಧ್ಯ. ಪ್ರಸ್ತುತ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರೇ ಸಂಸ್ಕೃತಿಯಿಂದ ದೂರ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲವೂ “ಶಿವ’

ಉದ್ಘಾಟಿಸಿದ ಶೃಂಗೇರಿ ಪಾಠಶಾಲೆಯ ಪ್ರಚಾರಕ, ಯಾಗದ ಪ್ರಧಾನ ಅರ್ಚಕ ವಿನಾಯಕ ಉಡುಪ ಮಾತನಾಡಿ, ಭಗವಂತನು ಎಲ್ಲ ರೂಪಗಳಲ್ಲಿಯೂ ಇದ್ದಾನೆ ಎಂದು ಶಾಸ್ತ್ರ ತಿಳಿಸುತ್ತದೆ. “ಶಿವ’ ಎನ್ನುವ ಶಬ್ದದ ಅರ್ಥ ಎಲ್ಲವೂ, ಯಾವುದರಲ್ಲಿ ಸೇರಿಕೊಂಡಿದೆಯೋ ಅವನೇ ಶಿವ. ಈ ಪ್ರಪಂಚದಲ್ಲಿ ಭಗವಂತನ ಅಸ್ತಿತ್ವವನ್ನು ಹೊರತುಪಡಿಸಿ ಬೇರಾವುದಕ್ಕೂ ಸ್ವಾತಂತ್ರ್ಯವಿಲ್ಲ. ವೈದಿಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯೇ ದೇಶದ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಿದೆ ಮತ್ತು ವೈಶಿಷ್ಟ್ಯವೂ ಹೌದು ಎಂದು ತಿಳಿಸಿದರು.

ಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್‌ ಜಿಲ್ಲಾ ಸಂಘಚಾಲಕ್‌ ನಾರಾಯಣ ಶೆಣೈ, ಸಹಕಾರಿ ಧುರೀಣರಾದ ಶಂಭು ಶೆಟ್ಟಿ, ಬೋಳ ಸದಾಶಿವ ಶೆಟ್ಟಿ, ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಮಂಜುನಾಥ ಉಪಾಧ್ಯ, ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್‌ ಶಾಸ್ತ್ರೀ, ಪ್ರಮುಖರಾದ ಎಂ. ಮುಕುಂದ ಪ್ರಭು, ಪಾಂಡುರಂಗ ಲಾಗ್ವಾಂಕರ್‌, ಮೊಕ್ತೇಸರರಾದ ದಿನೇಶ್‌ ಪ್ರಭು, ಶುಭಕರ ಸಾಮಂತ್‌, ದೇಗುಲದ ಶಾಶ್ವತ ಟ್ರಸ್ಟಿ ದಿನೇಶ್‌ ಶ್ರೀಧರ ಸಾಮಂತ್‌ ಮೊದಲಾದವರು ಉಪಸ್ಥಿತರಿದ್ದರು.

ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ ನಿರೂಪಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ವಂದಿಸಿದರು.

ಟಾಪ್ ನ್ಯೂಸ್

Siraguppa: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶ

Siraguppa: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶ

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

madhu

CM Change Issue; ಹೈಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ.. ಮಧು ಬಂಗಾರಪ್ಪ ಪ್ರತಿಕ್ರಿಯೆ

tamilnadu

Tamil Nadu: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ… ನಾಲ್ವರು ಮೃತ್ಯು, ನೆರವು ಘೋಷಿಸಿದ ಸಿಎಂ

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

Flash Floods: ಸೇನಾ ತರಬೇತಿ ವೇಳೆ ಹಠಾತ್ ಪ್ರವಾಹ.. ಓರ್ವ ಯೋಧ ಹುತಾತ್ಮ, ನಾಲ್ವರು ನಾಪತ್ತೆ

Flash Floods: ಸೇನಾ ಸಮರಾಭ್ಯಾಸದ ವೇಳೆ ಹಠಾತ್ ಪ್ರವಾಹ… ಐವರು ಯೋಧರು ಹುತಾತ್ಮ

Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ

Desi Swara: ಕೆನಡಾದಲ್ಲಿ ಗಂಗಾ ದಸರಾ- 50ಕ್ಕೂ ಹೆಚ್ಚಿ ಕಲಾವಿದರಿಂದ ಪ್ರದರ್ಶನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Udupi ಕರ್ಕಶ ಹಾರ್ನ್: ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲು

Udupi ಕರ್ಕಶ ಹಾರ್ನ್: ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲು

Fraud Case ಹೆಚ್ಚಿನ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವಂಚನೆ

Fraud Case ಹೆಚ್ಚಿನ ಲಾಭಾಂಶದ ಆಮಿಷ: ಲಕ್ಷಾಂತರ ರೂ. ವಂಚನೆ

2-manipal

Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Siraguppa: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶ

Siraguppa: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶ

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

madhu

CM Change Issue; ಹೈಕಮಾಂಡ್ ನಿಯಮಗಳನ್ನು ಪಾಲಿಸುತ್ತೇವೆ.. ಮಧು ಬಂಗಾರಪ್ಪ ಪ್ರತಿಕ್ರಿಯೆ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Mysore: ವರಕೂಡು ಮೊರಾರ್ಜಿ ಶಾಲೆ ಪಕ್ಕ ಹುಲಿ ಪ್ರತ್ಯಕ್ಷ; ಆತಂಕದಲ್ಲಿ ಗ್ರಾಮಸ್ಥರು!

Mysore: ವರಕೂಡು ಮೊರಾರ್ಜಿ ಶಾಲೆ ಪಕ್ಕ ಹುಲಿ ಪ್ರತ್ಯಕ್ಷ; ಆತಂಕದಲ್ಲಿ ಗ್ರಾಮಸ್ಥರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.