![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 17, 2022, 9:58 PM IST
ಸಾಂದರ್ಭಿಕ ಚಿತ್ರ
ಕಾಪು: ಗ್ಯಾರೇಜ್ಗೆ ಬಂದ ಅಪರಿಚಿತರು ಬೈಕ್ ರಿಪೇರಿ ಮಾಡಿಸಿಕೊಂಡು ರಿಪೇರಿಯ ಹಣದ ಬದಲು ಗ್ಯಾರೇಜ್ ಮಾಲಕನಿಗೆ ಇಂಜಿನ್ ಕೇಸ್ನಿಂದ ಹೊಡೆದು ಪರಾರಿಯಾದ ಘಟನೆ ಮಾ. 16ರಂದು ಕಟಪಾಡಿಯಲ್ಲಿ ನಡೆದಿದೆ.
ಕಟಪಾಡಿ ಏಣಗುಡ್ಡೆಯಲ್ಲಿ ಶ್ರೀ ದೇವಿ ಆಟೋ ವರ್ಕ್ಸ್ ಎಂಬ ಹೆಸರಿನ ಗ್ಯಾರೇಜ್ ನಡೆಸುತ್ತಿರುವ ಪಾಂಗಾಳ ಆರ್ಯಾಡಿ ನಿವಾಸಿ ಕೇಶವ ಹಲ್ಲೆಗೊಳಗಾದ ಗ್ಯಾರೇಜ್ ಮಾಲಕ.
ಮಾ.16ರಂದು ಸಂಜೆ ಕೇಶವ ಅವರ ಗ್ಯಾರೇಜ್ಗೆ ನಂಬರ್ ಪ್ಲೇಟ್ ಇಲ್ಲದ ಟಿವಿಎಸ್ ಅಪಾಚಿ ಬೈಕ್ನೊಂದಿಗೆ ಬಂದ ಅಪರಿತರಿಬ್ಬರು ಬೈಕ್ ರಿಪೇರಿ ಮಾಡಿಕೊಡುವಂತೆ ಕೇಳಿ ಕೊಂಡಿದ್ದರು. ಬೈಕ್ ರಿಪೇರಿಯಾದ ಬಳಿಕ ಗ್ಯಾರೇಜ್ ಮಾಲಕ 400 ರೂಪಾಯಿ ರಿಪೇರಿಯ ಹಣವನ್ನು ಕೇಳಿದ್ದರು. ಆದರೆ ಆರೋಪಿಗಳು 250 ರೂಪಾಯಿ ಕೊಡುತ್ತೇವೆ, ಉಳಿದಿದ್ದನ್ನು ನಾಳೆ ಕೊಡುತ್ತೇವೆ ಎಂದು ಹೇಳಿದ್ದರು. ಗ್ಯಾರೇಜ್ ಮಾಲಕ ಕೇಶವ ಅವರು ಅದಕ್ಕೆ ಒಪ್ಪದಿದ್ದಾಗ ಕೈಯ್ಯಲ್ಲಿ, ಹೊಡೆದು ಇಂಜಿನ್ ಕೇಸ್ನಿಂದ ಹೊಡೆದು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಕೇಶವ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.