Varanga ಬಸದಿಯ ಕೆರೆಯಲ್ಲಿ ಈಜಲು ಯತ್ನ ; ಇಕ್ಕಟ್ಟಿಗೆ ಸಿಲುಕಿದ ಯುವಕರಿಬ್ಬರ ರಕ್ಷಣೆ


Team Udayavani, Jun 10, 2024, 9:55 PM IST

Varanga ಬಸದಿಯ ಕೆರೆಯಲ್ಲಿ ಈಜಲು ಯತ್ನ ; ಇಕ್ಕಟ್ಟಿಗೆ ಸಿಲುಕಿದ ಯುವಕರಿಬ್ಬರ ರಕ್ಷಣೆ

ಕಾರ್ಕಳ: ಪ್ರವಾಸಕ್ಕೆಂದು ಬಂದವರು ವರಂಗ ಕೆರೆಯಲ್ಲಿ ಪ್ರವೇಶ ನಿಷೇಧಿತ ಅವಧಿಯಲ್ಲಿ ಕೆರೆಗಿಳಿದು ಈಜಿ ದಡ ಸೇರಲು ಪ್ರಯತ್ನಿಸಿ ಇಕ್ಕಟ್ಟಿಗೆ ಸಿಲುಕಿದ ಮತ್ತು ಪ್ರವಾಸಕ್ಕೆ ಬಂದ ಇತರರು ರಕ್ಷಿಸಿದ ಘಟನೆ ಎರಡು ದಿನಗಳ ಹಿಂದೆ ಜೂ. 8 ರಂದು ನಡೆದಿದೆ.

ಘಟನೆ ಸಂಬಂಧ ರಕ್ಷಣೆಗಾಗಿ ಪರದಾಡಿದ ಯುವಕರ ವೀಡಿಯೊ ತಡವಾಗಿ ವೈರಲ್‌ ಆಗಿದೆ. ಹೆಬ್ರಿಯ ತಾಲೂಕಿನ ವರಂಗ ಜೈನ ಮಠದ ಕೆರೆಯಲ್ಲಿ ಪ್ರವಾಸ ನಿಮಿತ್ತ ಬಂದ ಇಬ್ಬರು ಹೊರಜಿಲ್ಲೆಗಳ ಯುವಕರು ಕೆರೆಯಲ್ಲಿ ಒಂದು ದಡದಿಂದ ಕೆರೆ ಮಧ್ಯೆ ಇರುವ ಜೈನ ಮಠಕ್ಕೆ ಈಜಿ ಸಾಗಲು ಪ್ರಯತ್ನಿಸಿದ್ದಾರೆ .ಪ್ರವೇಶ ನಿರ್ಭಂಧದ ಹೊತ್ತಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದಾರೆ.

ನೀರಿನ ಮದ್ಯದಲ್ಲಿ ಯುವಕರು ಈಜಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿಕೊಂಡು ರಕ್ಷಣೆಗೆ ಪರದಾಡಿದ್ದಾರೆ. ಘಟನಾ ಸ್ಥಳದಲ್ಲಿ ಪ್ರವಾಸಕ್ಕೆ ಅಗಮಿಸಿದ್ದ ಇತರೆ ಪ್ರವಾಸಿಗರು ಲೈಫ್‌ ಜಾಕೆಟ್‌ ಬಿಸಾಡಿ ಯುವಕರನ್ನು ರಕ್ಷಿಸಿದ್ದಾರೆ.ಯುವಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರವೇಶ ನಿರ್ಬಂಧ ಸಮಯವಾದ್ದರಿಂದ ದೋಣಿ ನಡೆಸುವ ಅಂಬಿಗ ಹಾಗೂ ಪೂಜಾರಿ( ಅರ್ಚಕ) ಘಟನೆ ವೇಳೆ ಸ್ಥಳದಲ್ಲಿರಲಿಲ್ಲ. ಅಲ್ಲಿದ್ದವರು ಅಪಾಯಕ್ಕೆ ಸಿಲುಕಿದ ಯುವಕರ ಬಗ್ಗೆ ಮಾಹಿತಿ ಕೇಳಿದಾಗ ಬೆಂಗಳೂರಿನವರು ಎಂದಷ್ಟೆ ಹೇಳಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಹೊರಡುವ ಮುಂಚಿತ ಅಲ್ಲಿದ್ದವರು ದುಸ್ಸಾಹಸಕ್ಕೆ ಇಳಿದ ಯುವಕರನ್ನು ತರಾಟೆಗೆತ್ತಿಕೊಂಡಿದ್ದಾರೆ. ಬಳಿಕ ಯುವಕರು ಅಲ್ಲಿಂದ ತೆರಳಿದ್ದು. ಯುವಕರ ಬಗ್ಗೆ ಯಾರಿಗೂ ಮಾಹಿತಿ ತಿಳಿದಿಲ್ಲ

ಕೆರೆ, ಮಠದ ಆವರಣ ಸೇರಿದಂತೆ ಎಲ್ಲಾ ಕಡೆಗಳಲ್ಲಿಯು ಸೂಚನಾ ಫಲಕಗಳನ್ನು ಹಾಕಲಾಗಿದೆ . ಮಠದ ಆಡಳಿತ ಮಂಡಳಿಯು ಮೂಲಸೌಕರ್ಯವನ್ನು ಸೇರಿದಂತೆ ಕೆರೆಬಸದಿಗೆ ಆಗಮಿಸುವ ಭಕ್ತರು ದೋಣಿಯಲ್ಲಿ ಸಾಗಲು ಜೀವ ರಕ್ಷಕ ಜಾಕೆಟ್‌ ಗಳನ್ನು ನೀಡಿದೆ.ಆದರೆ ಪ್ರವೇಶ ನಿರ್ಬಂಧದ ಸಮಯದಲ್ಲಿ ಪ್ರವಾಸಿಗರು ಬಂದು ಕೆರೆಯ ನೀರಿಗೆ ಇಳಿಯುವ ಪ್ರಯತ್ನ ನಡೆಸುತಿದ್ದು ಇದು ಅಪಾಯಕಾರಿಯಾಗಿದೆ. ಇಲ್ಲಿ ಅಗತ್ಯವಾಗಿ ಭದ್ರತಾ ಸಿಬಂದಿ ನಿಯೋಜಿಸಬೇಕಿದೆ ಎಂದು ಸ್ಥಳಿಯರು ಹೇಳುತ್ತಾರೆ.

ಆಳವಾಗಿದೆ ಬಸದಿ ಕೆರೆ
ವರಂಗ ಕೆರೆ ತೀರಾ ಆಳವಿದ್ದು ಕೆಸರು ತುಂಬಿಕೊಂಡಿದೆ. ಮಳೆಗಾಲದ ಅವಧಿಯಲ್ಲಿ ಕೆರೆ ನೀರಿನಿಂದ ತುಂಬಿ ಸಮೃದ್ದವಾಗಿ ಗೋಚರಿಸುತ್ತದೆ. ಇಲ್ಲಿ ನೀರಿಗೆ ಇಳಿಯುವುದು ತೀರಾ ಅಪಾಯಕಾರಿಯಾಗಿದ್ದು ಹೊರಗಿನಿಂದ ಬರುವ ಪ್ರವಾಸಿಗರು ಕೆರೆ ಪರಿಸರದಲ್ಲಿ ದುಸ್ಸಾಹಸಕ್ಕೆ ಇಳಿದು ಅಪಾಯಕ್ಕೆ ಒಳಗಾಗುವ ಸಂಭವವೇ ಹೆಚ್ಚಿದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವುದು ಇಲ್ಲಿ ಅಗತ್ಯವಾಗಿದೆ.

ಟಾಪ್ ನ್ಯೂಸ್

1-sasdsad

Jharkhand; ಸಂಚು ರೂಪಿಸಿರುವುದು ಇಡೀ ದೇಶಕ್ಕೆ ಸಂದೇಶ: ಹೇಮಂತ್ ಸೊರೇನ್

egg-lollipop

Egg Loli pop Recipes; ಅಬ್ಬಾ! ಏನ್ ರುಚಿ ಈ ಎಗ್‌ ಲಾಲಿಪಾಪ್‌

NEET : ಲೋಕಸಭೆಯಲ್ಲಿ ನೀಟ್‌ ಅಕ್ರಮ ಚರ್ಚೆಗೆ ಪಟ್ಟು, ಕೋಲಾಹಲ; ಕಲಾಪ ಮುಂದೂಡಿಕೆ

NEET : ಲೋಕಸಭೆಯಲ್ಲಿ ನೀಟ್‌ ಅಕ್ರಮ ಚರ್ಚೆಗೆ ಪಟ್ಟು, ಕೋಲಾಹಲ; ಕಲಾಪ ಮುಂದೂಡಿಕೆ

ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಿಗಿಸಿದ ಭಾರತೀಯ ಜೋಡಿ

INDWvsSAW; ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಾಗಿಸಿದ ಭಾರತೀಯ ಜೋಡಿ

Malur ಆಸ್ಪತ್ರೆಗೆ ಶಾಸಕ ಆರಗ ಜ್ಞಾನೇಂದ್ರ ದಿಡೀರ್ ಭೇಟಿ… ವ್ಯವಸ್ಥೆಗಳ ಬಗ್ಗೆ ಪರಿಶೀಲನೆ

Malur ಆಸ್ಪತ್ರೆಗೆ ಶಾಸಕ ಆರಗ ಜ್ಞಾನೇಂದ್ರ ದಿಡೀರ್ ಭೇಟಿ… ವ್ಯವಸ್ಥೆಗಳ ಬಗ್ಗೆ ಪರಿಶೀಲನೆ

Heavy Rain: ಆರಿದ್ರಾ ಮಳೆ ಅವಾಂತರ: ಗುಡ್ಡೆಕೊಪ್ಪದಲ್ಲಿ ಕುಸಿದು ಬಿದ್ದ ಮನೆ

Heavy Rain: ಆರಿದ್ರಾ ಮಳೆ ಅವಾಂತರ: ಗುಡ್ಡೆಕೊಪ್ಪದಲ್ಲಿ ಕುಸಿದು ಬಿದ್ದ ಮನೆ

Yadagiri CEO withdrew the order issued in the matter of blocking the promotion of teachers

Yadagiri: ಶಿಕ್ಷಕರ ಬಡ್ತಿ ತಡೆ ವಿಚಾರದಲ್ಲಿ ಹೊರಡಿಸಿದ್ದ ಆದೇಶ ಹಿಂಪಡೆದ ಸಿಇಓ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-manipal

Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ

5

Parkala: ಚಾಲಕನಿಗೆ ಮೂರ್ಛೆ; ಹಿಮ್ಮುಖವಾಗಿ ಚಲಿಸಿದ ಬಸ್

Udupi: ವಿಮಾ ಕಂಪೆನಿ ವಿರುದ್ಧ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ತೀರ್ಪು 

Nejar Case: Accused Praveen Chowgule’s bail application dismissed by High Court

Nejar Case: ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್

ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿದ ಶಿರ್ವದ ಅಪ್ಪ -ಮಗ

Khardung La; 17,982 ಅಡಿ ಎತ್ತರದಲ್ಲಿ ಕನ್ನಡ ಬಾವುಟ ಹಾರಿಸಿದ ಶಿರ್ವದ ಅಪ್ಪ -ಮಗ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

ಉಡುಪಿ: ಎಚ್ಚರ-ಸಂತೆಕಟ್ಟೆಯಲ್ಲಿವೆ ಯಮರೂಪಿ ಗುಂಡಿಗಳು

ಉಡುಪಿ: ಎಚ್ಚರ-ಸಂತೆಕಟ್ಟೆಯಲ್ಲಿವೆ ಯಮರೂಪಿ ಗುಂಡಿಗಳು

1-sasdsad

Jharkhand; ಸಂಚು ರೂಪಿಸಿರುವುದು ಇಡೀ ದೇಶಕ್ಕೆ ಸಂದೇಶ: ಹೇಮಂತ್ ಸೊರೇನ್

Sandalwood; ಟೀನೇಜ್ ಲವ್ ಸ್ಟೋರಿಗೆ ‘ಕಾಗದ’ ಸಾಕ್ಷಿ

Sandalwood; ಟೀನೇಜ್ ಲವ್ ಸ್ಟೋರಿಗೆ ‘ಕಾಗದ’ ಸಾಕ್ಷಿ

egg-lollipop

Egg Loli pop Recipes; ಅಬ್ಬಾ! ಏನ್ ರುಚಿ ಈ ಎಗ್‌ ಲಾಲಿಪಾಪ್‌

NEET : ಲೋಕಸಭೆಯಲ್ಲಿ ನೀಟ್‌ ಅಕ್ರಮ ಚರ್ಚೆಗೆ ಪಟ್ಟು, ಕೋಲಾಹಲ; ಕಲಾಪ ಮುಂದೂಡಿಕೆ

NEET : ಲೋಕಸಭೆಯಲ್ಲಿ ನೀಟ್‌ ಅಕ್ರಮ ಚರ್ಚೆಗೆ ಪಟ್ಟು, ಕೋಲಾಹಲ; ಕಲಾಪ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.