Ayodhya Ram Mandir; ಸ್ವರ್ಣ ಅಟ್ಟೆ ಪ್ರಭಾವಳಿ, ರಜತ ಪಲ್ಲಕ್ಕಿ ಸಮರ್ಪಣೆ
ಅಯೋಧ್ಯೆ ಶ್ರೀರಾಮನಿಗೆ ಶ್ರೀ ಕಾಶೀ ಮಠದ ಕಾಣಿಕೆ
Team Udayavani, Feb 10, 2024, 11:45 PM IST
ಉಡುಪಿ: ಅಯೋಧ್ಯೆ ಶ್ರೀರಾಮನಿಗೆ ಶ್ರೀ ಸಂಸ್ಥಾನ ಕಾಶೀಮಠದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು
ಮತ್ತು ಭಕ್ತರಿಂದ ಅರ್ಪಿಸಲಾದ ಸುಮಾ ರು 70 ಲ.ರೂ. ಮೌಲ್ಯದ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮೂಲಕ ಶನಿವಾರ ಸಮರ್ಪಿಸಲಾಯಿತು.
ಪೇಜಾವರ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಕಾಶೀ ಮಠಾಧೀಶರು ತಮ್ಮ ಶಿಷ್ಯರೊಂದಿಗೆ ಸೇರಿ ಬೆಳ್ಳಿ ಪಲ್ಲಕಿ ಮತ್ತು ಸ್ವರ್ಣ ಪ್ರಭಾವಳಿಯನ್ನು ಶ್ರೀರಾಮನಿಗೆ ಸಮರ್ಪಣೆ ಮಾಡಿರುವುದು ಸ್ವರ್ಣಾ
ಕ್ಷರದಲ್ಲಿ ಬರೆದಿಡುವಂತಹ ಕಾರ್ಯ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನುಡಿದಿರು ವಂತೆ, ನಾವು ಭಕ್ತಿಯಿಂದ ದೇವರಿಗೆ ಏನನ್ನು ಸಮರ್ಪಣೆ ಮಾಡಿದರೂ ಸ್ವೀಕರಿಸುತ್ತಾನೆ. ಭಗವಂತನಿಗೆ ಕೊಡುವುದಕ್ಕೆ ಕಾಸು, ಸಂಪತ್ತು ಇಲ್ಲವೆಂದು ಯಾರೂ ಕೊರಗಬೇಕಿಲ್ಲ. ಅವನಿಗೆ ಒಂದು ದಳ ತುಳಸೀ, ಬಿಂದು ಗಂಗೋದಕ ಸಾಕಾಗುತ್ತದೆ ಎಂದರು.
ಉಡುಪಿಯ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ.ಲಿ. ಕಾರ್ಯಾಗಾರದಲ್ಲಿ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ರಚಿಸಲಾಗಿತ್ತು. ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ, ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ರಾಘವೇಂದ್ರ ಕುಡ್ವ, ಸಂಸ್ಥಾನ ಲೆಕ್ಕಪರಿಶೋಧಕ ಸುರೇಂದ್ರ ನಾಯಕ್, ಜಿಎಸ್ಬಿ ಸೇವಾ ಮಂಡಲ ಮುಂಬಯಿ ಅಧ್ಯಕ್ಷ ಆರ್.ಜಿ. ಭಟ್, ಮಾಜಿ ಶಾಸಕ ಕೆ. ರಘುಪತಿ ಭಟ್, ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಹಾಗೂ ಗಣ್ಯರು ಉಪಸ್ಥಿತರಿದ್ದರು.
ರಜತ ಪಲ್ಲಕ್ಕಿ ಸಮರ್ಪಣೆ
ಶ್ರೀ ಕಾಶೀ ಮಠದ ಕೊಡುಗೆಯಾಗಿ ಬಾಲರಾಮನಿಗೆ ಉಡುಪಿಯ ಸ್ವರ್ಣ ಜುವೆಲರ್ನಲ್ಲಿ ನಿರ್ಮಿಸಲಾದ ರಜತ ಪಲ್ಲಕ್ಕಿಯನ್ನು ಇತ್ತೀಚೆಗೆ ಅರ್ಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಎಸ್ಬಿಐ ಗೃಹ ಮತ್ತು ಕಾರು ಸಾಲ ಹಬ್ಬದ ಉದ್ಘಾಟನೆ
Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ
Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ
Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು
Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.