ಅಲೆಮಾರಿಗಳ ತಾಣ ಉಡುಪಿ KSRTC ಬಸ್‌ ನಿಲ್ದಾಣ


Team Udayavani, Jun 18, 2018, 2:55 AM IST

ksrtc-busstand-17-6.jpg

ಉಡುಪಿ: ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ KSRTC ಬಸ್‌ ನಿಲುಗಡೆ ತಾಣ ಇಲ್ಲಿನದು. ದಿನಕ್ಕೆ 250ಕ್ಕೂ ಅಧಿಕ ಬಸ್‌ ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ನಗರದ ಕೇಂದ್ರ ಭಾಗದಲ್ಲೇ ಈ ಬಸ್‌ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪುಂಡರ ತಾಣವಾಗಿದೆ. ಸ್ವಚ್ಛತೆಯೂ ಇಲ್ಲದೆ ಸ್ಥಳ ಸೊರಗಿದೆ.

ಬಸ್‌ ಗಳಿಗೂ, ಪ್ರಯಾಣಿಕರಿಗೂ ಕಷ್ಟ 
ಈ ಬಸ್‌ ನಿಲ್ದಾಣದಲ್ಲಿ ಬಸ್‌ ಗಳಿಗೂ ನಿಲ್ಲುವುದಕ್ಕೆ ಸೂಕ್ತ ಸ್ಥಳವಿಲ್ಲ. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೆ, ಕೊನೆಪಕ್ಷ ನಿಲ್ಲುವುದಕ್ಕೂ ಯೋಗ್ಯವಾಗಿಲ್ಲ. ಆಸನಗಳಿರುವುದೇ 10-12. ಇದು ಯಾವುದಕ್ಕೂ ಸಾಲದು. 

ಕುಡುಕರು, ಪಡ್ಡೆಗಳ ಹಾವಳಿ 

ಈ ಬಸ್‌ ನಿಲ್ದಾಣದಲ್ಲಿ ಪಡ್ಡೆಗಳು, ಕುಡುಕರ ಹಾವಳಿ. ಇವರ ನಡುವೆ ಭಿಕ್ಷಕರು, ತಿರುಗಾಡಿಗಳು. ಪದೇ ಪದೇ ಗಲಾಟೆ. ವಿಪರೀತ ಬೊಬ್ಬೆ, ಗಲಾಟೆ. ಪ್ರಯಾಣಿಕರಿಗೆ ಕಿರಿಯಾಗುವಂತ ಸನ್ನಿವೇಶ. ಇದರೊಂದಿಗೆ ಕೀಟಲೆ, ಕಳ್ಳತನಕ್ಕೆ ಹೊಂಚು ಹಾಕುವುದು ಇತ್ಯಾದಿಗಳೆಲ್ಲ ನಿತ್ಯ ನಡೆಯುತ್ತಿವೆ.

ವ್ಯಾಪಾರವೂ ಇಲ್ಲ, ನೆಮ್ಮದಿಯೂ ಇಲ್ಲ
ಬಸ್‌ ನಿಲ್ದಾಣದೊಳಗೆ ಇರುವ ಅಂಗಡಿಯವರು ಅವರ ಅಂಗಡಿಯೆದುರು (ನಿಲ್ದಾಣದೊಳಗೆ) ಮಲಗಿರುವವರನ್ನು ಎಬ್ಬಿಸಲು ಪದೇ ಪದೇ ನೀರು ಚುಮುಕಿಸುತ್ತಾರೆ. ಆದರೆ ಅದು ಪ್ರಯೋಜನವಾಗುವುದಿಲ್ಲ. ಅನೇಕ ಮಂದಿ ಕುಡುಕರು ಅಂಗಡಿಯವರ ಮೇಲೆ ಹರಿಹಾಯುತ್ತಾರೆ. ‘ಕರೆಂಟ್‌ ಇಲ್ಲದ ಸಮಯವಂತೂ ಭಯಾನಕ. ಈ ಹಿಂದೆ ಪೊನ್ನುರಾಜ್‌ ಜಿಲ್ಲಾಧಿಕಾರಿಯಾಗಿದ್ದಾಗ ಇಲ್ಲಿ ಓರ್ವ ಕಾವಲುಗಾರನನ್ನು ನೇಮಿಸಿದ್ದರು. ಆ ಸಂದರ್ಭದಲ್ಲಿ ಕಳ್ಳರ, ಕುಡುಕರ ಹಾವಳಿ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಈಗ ಯಾರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ’ ಎನ್ನುತ್ತಾರೆ ಇಲ್ಲಿನ ಅಂಗಡಿಯವರು.

ತ್ಯಾಜ್ಯದ ರಾಶಿ

ಎಳೆದು ಬಿಸಾಡಿದ ಬೀಡಿ, ಸಿಗರೇಟಿನ ತುಂಡುಗಳು, ಮದ್ಯದ ಬಾಟಲಿಗಳು, ಹಳೆಯ ಬಟ್ಟೆಗಳು, ಇತರ ತ್ಯಾಜ್ಯಗಳು ಸೇರಿ ಇದೊಂದು ತ್ಯಾಜ್ಯ ಕೊಂಪೆಯಂತಾಗಿದೆ. ಅಕ್ರಮ ದಂಧೆಗಳಿಗೂ ಪ್ರಶಸ್ತ ತಾಣದಂತಿದೆ. ರಾತ್ರಿ ಅಂಗಡಿಗಳು ಬಾಗಿಲು ಹಾಕಿದ ಮೇಲೆ ಪ್ರಯಾಣಿಕರ ಸ್ಥಿತಿ ಕಷ್ಟಕರ.

ರಾತ್ರಿ ನರಕ
ರಾತ್ರಿ ಬಸ್‌ ಗೆ ಕಾಯುವುದು ಇಲ್ಲಿ ಹಿಂಸೆ, ನರಕ ಯಾತನೆ. ನಾನು ಬೆಂಗಳೂರಿಗೆ ಹೋಗುವುದಕ್ಕಾಗಿ ಒಮ್ಮೆ ರಾತ್ರಿ ಗೆಳತಿಯೊಂದಿಗೆ ಬಸ್‌ ಕಾಯುವಾಗ ಅತ್ಯಂತ ಕೆಟ್ಟ ಅನುಭವ ಆಗಿದೆ. ಆ ಭಯ ಈಗಲೂ ಹೋಗಿಲ್ಲ. ಅನಂತರ ನಾನು ರಾತ್ರಿ ಬಸ್‌ಗೆ ಇಲ್ಲಿ ನಿಲ್ಲುವುದೇ ಇಲ್ಲ.
– ಚೈತ್ರಾ, ಪ್ರಯಾಣಿಕರು 

ಸಿಬಂದಿಗೂ ಸುರಕ್ಷೆ ಇಲ್ಲ
ಇಲ್ಲಿ ನಡೆಯುವ ಗಲಾಟೆಗಳು ಪ್ರಯಾಣಿಕರು ಮಾತ್ರವಲ್ಲ, ನಮ್ಮಲ್ಲಿಯೂ ಭಯ ಮೂಡಿಸುತ್ತದೆ. ಪ್ರಶ್ನಿಸಿದರೆ ನಮ್ಮ ಮೇಲೇರಿ ಬರುತ್ತಾರೆ. ಇಲ್ಲಿ ಪೊಲೀಸರನ್ನು ನಿಯೋಜಿಸದಿದ್ದರೆ ಪ್ರಯಾಣಿಕರು, ಸಿಬಂದಿಗೂ ಸುರಕ್ಷೆಯೂ ಇಲ್ಲ.
– ಬಸ್‌ ನಿರ್ವಾಹಕರು, KSRTC

ಸಿ.ಸಿ ಕೆಮರಾ ಅಳವಡಿಸಿ 
ಬಸ್‌ ನಿಲ್ದಾಣ ಪಕ್ಕ ವಾಹನಗಳನ್ನು ಅಡ್ಡಾದಿಡ್ಡಿ ಇಡಲಾಗುತ್ತದೆ. ತರಕಾರಿ ವ್ಯಾಪಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ. ಬಸ್‌ ನಿಲ್ದಾಣದಲ್ಲಿ ಪರ್ಸ್‌ ಎಗರಿಸುವ ಘಟನೆಗಳು ಕೂಡ ನಡೆಯುತ್ತವೆ. ಇಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ದೂರದ ಊರುಗಳಿಗೆ ಹೋಗಲು ಬಸ್‌ ಸಿಗದವರು ಬಸ್‌ ನಿಲ್ದಾಣಗಳಲ್ಲೇ ಉಳಿಯುತ್ತಾರೆ. ಅವರಿಗೆ ಯಾವ ಸುರಕ್ಷತೆಯೂ ಇಲ್ಲವಾಗಿದೆ. ಲೈಟ್‌ ವ್ಯವಸ್ಥೆಯೂ ಸರಿಯಾಗಿಲ್ಲ. 
– ಶಿವಾನಂದ ಮೂಡಬೆಟ್ಟು

— ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.