ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶಿರ್ವ ನಡಿಬೆಟ್ಟು: 70 ವರ್ಷಗಳ ನಂತರ ಬಾಗಿನ ಅರ್ಪಣೆ
Team Udayavani, Sep 20, 2020, 12:51 PM IST
ಶಿರ್ವ: ಐತಿಹಾಸಿಕ ಹಿನ್ನಲೆಯಿರುವ ಪುರಾತನ ಶಿರ್ವ ನಡಿಬೆಟ್ಟು ಮನೆ ಇಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಸುಮಾರು 70 ವರ್ಷಗಳ ನಂತರ ಪಾಪನಾಶಿನಿ ನದಿಗೆ ರವಿವಾರ ಬಾಗಿನ ಅರ್ಪಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಶಿರ್ವ ಸಮೀಪ ಹರಿಯುವ ಪಾಪನಾಶಿನಿ ನದಿಯೂ ತುಂಬಿದೆ.
ಪಾಪನಾಶಿನಿಯ ನೆರೆ ನೀರು ಶಿರ್ವ ನಡಿಬೆಟ್ಟು ಮನೆಯ ಚಾವಡಿಯ ಮೆಟ್ಟಿಲುಗಳನ್ನು ಸ್ಪರ್ಷಿಸದರೆ ಬಾಗಿನ ಅರ್ಪಿಸುವ ಸಂಪ್ರದಾಯವಿದೆ. ಮುಕ್ಕಾಲು ಶತಮಾನದ ಬಳಿಕ ಇದೀಗ ಮತ್ತೆ ನಡಿಬೆಟ್ಟು ಮನೆಯ ಚಾವಡಿಗೆ ನೀರು ನುಗ್ಗಿದೆ, ಹೀಗಾಗಿ ಇಂದು ಪಾಪನಾಶಿನಿಗೆ ಬಾಗಿನ ಅರ್ಪಿಸಲಾಯಿತು.
70 ವರ್ಷಗಳ ಬಳಿಕ:ಇತ್ತೀಚಿನ ವರ್ಷಗಳಲ್ಲಿ ಇಂತಹ ಮಳೆ ಬಂದಿರಲಿಲ್ಲ. ಬಾಗಿನವನ್ನೂ ಅರ್ಪಿಸಿರಲಿಲ್ಲ. ಸುಮಾರು 70 ವರ್ಷಗಳ ಹಿಂದೆ ಈ ರೀತಿ ಚಾವಡಿವರೆಗೆ ನೀರು ನುಗ್ಗಿ ಬಾಗಿನ ಅರ್ಪಿಸಲಾಗಿತ್ತು ಎಂದು ಮನೆಯ ಹಿರಿಯರು ಹೇಳುತ್ತಾರೆ.
ಅಪರೂಪದ ಈ ದೃಶ್ಯ ನೋಡಲು ಶಿರ್ವ ಪರಿಸರದ ಜನರು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು
Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು
Udupi: ‘ಕಲ್ಜಿಗ’ ಸಿನೆಮಾದಲ್ಲಿ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ
Udupi:ಕರಾವಳಿ ನಿರ್ಲಕ್ಷ್ಯ ಮುಂದುವರಿದರೆ ಸಿಎಂ ಮನೆ ಮುಂದೆ ಧರಣಿ: ಜನಪ್ರತಿನಿಧಿಗಳ ಎಚ್ಚರಿಕೆ
Udupi: ಬೆಡ್ ಶೀಟ್ ಮಾರುವ ನೆಪದಲ್ಲಿ ಅಂಬಲಪಾಡಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.