ಬೈಲೂರು: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬಂದಿ ಕೊರತೆ

108 ಆ್ಯಂಬುಲೆನ್ಸ್‌ಗೂ ಸ್ಥಳೀಯರ ಬೇಡಿಕೆ

Team Udayavani, Jun 21, 2019, 11:24 AM IST

karkala-tdy-1..

ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ.

ಅಜೆಕಾರು,ಜೂ. 20: ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮುಖ ಸಿಬಂದಿ ಕೊರತೆಯಿದ್ದು ಆಸ್ಪತ್ರೆಯ ವೈದ್ಯರೇ ಎಲ್ಲ ಕೆಲಸವನ್ನು ನಿರ್ವಹಿಸುವ ಸನ್ನಿವೇಶ ಸೃಷ್ಟಿಯಾಗಿದೆ.

6 ವರ್ಷದಿಂದ ಹುದ್ದೆ ಖಾಲಿ:

ಆಸ್ಪತ್ರೆಯಲ್ಲಿ ವೈದ್ಯರೂ ಸೇರಿ ಒಟ್ಟು 14 ಹುದ್ದೆಗಳಿದ್ದು ಡಾಕ್ಟರ್‌ 1, ಸ್ಟಾಫ್ನರ್ಸ್‌ 1, ಫಾರ್ಮಸಿಸ್ಟ್‌ 1, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು 5, ಕ್ಲರ್ಕ್‌ 1, ಲ್ಯಾಬ್‌ ಟೆಕ್ನೀಷಿಯನ್‌ 1, ಕಿರಿಯ ಆರೋಗ್ಯ ಸಹಾಯಕ 1, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ 1, ಗ್ರೂಪ್‌ ಡಿ ನೌಕರರು 2 ಹುದ್ದೆ ಇದೆ. ಇದರಲ್ಲಿ ಪ್ರಮುಖ ಹುದ್ದೆಗಳಾದ ಫಾರ್ಮಸಿಸ್ಟ್‌ ಹಾಗೂ ಕ್ಲರ್ಕ್‌ ಹುದ್ದೆಗಳು ಕಳೆದ 6 ವರ್ಷಗಳಿಂದ ಖಾಲಿ ಇದ್ದು ತೀವ್ರ ಸಮಸ್ಯೆ ಉಂಟಾಗುತ್ತಿದೆ.

ವೈದ್ಯರಿಂದಲೇ ಕೆಲಸ:

ಫಾರ್ಮಸಿಸ್ಟ್‌ ಹುದ್ದೆ ಖಾಲಿ ಇರುವುದರಿಂದ ವೈದ್ಯರೇ ಇದನ್ನು ನಿಭಾಯಿಸಬೇಕಾಗಿದೆ. ರೋಗಿಗಳ ತಪಾಸಣೆಯೊಂದಿಗೆ ಔಷಧವನ್ನೂ ನೀಡಬೇಕಾಗಿದೆ. ಕ್ಲರ್ಕ್‌ ಹುದ್ದೆಯೂ ಖಾಲಿ ಇರುವುದರಿಂದ ನಿತ್ಯದ ವರದಿ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಬೇಕಾಗಿರುವುದರಿಂದಲೂ ವೈದ್ಯರೇ ಇದನ್ನೂ ಮಾಡಬೇಕಿದೆ. ಇನ್ನುಳಿದಂತೆ 5 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಲ್ಲಿ 2 ಹುದ್ದೆ ಖಾಲಿ ಇದೆ. ಗ್ರೂಪ್‌ ಡಿಯ 2 ಹುದ್ದೆಗಳಲ್ಲಿ 1 ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ.

ಮೂಲ ಸೌಕರ್ಯ ಇದೆ:

ಆರೋಗ್ಯ ಕೇಂದ್ರವು ಮೂಲ ಸೌಕರ್ಯ ಒಳಗೊಂಡಿದ್ದು ಉತ್ತಮ ಕಟ್ಟಡ, ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಒಳಗೊಂಡಿದೆ. ಆದರೆ ಸಿಬಂದಿ ಕೊರೆತೆಯಿಂದಾಗಿ ಸಮಸ್ಯೆ ಉಂಟಾಗಿದೆ.

5 ಉಪಕೇಂದ್ರ:

ಬೈಲೂರು ಪಾ. ಆ. ಕೇಂದ್ರ ವ್ಯಾಪ್ತಿಯಲ್ಲಿ 5 ಉಪ ಕೇಂದ್ರಗಳಿದ್ದು ಕೌಡೂರು, ಯರ್ಲಪಾಡಿಯಲ್ಲಿ ಕಟ್ಟಡವನ್ನು ಹೊಂದಿದ್ದರೆ ನೀರೆ, ಬೈಲೂರು, ಕಣಂಜಾರುಗಳಲ್ಲಿ ಕಟ್ಟಡವನ್ನು ಹೊಂದಿಲ್ಲ. 5 ಉಪಕೇಂದ್ರಗಳಿಗೆ ಮೂವರು ಮಾತ್ರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿದ್ದು, 2 ಹುದ್ದೆ ಖಾಲಿಯಿದೆ.

ಬೈಲೂರು ಪ್ರಾ.ಆ. ಕೇಂದ್ರಕ್ಕೆ ಗುಡ್ಡೆಯಂಗಡಿ, ಕಣಂಜಾರು, ಕೌಡೂರು, ನೀರೆ, ಬೈಲೂರು, ಯರ್ಲಪಾಡಿ, ಜಾರ್ಕಳ ಗ್ರಾಮಗಳ ರೋಗಿಗಳು ಹಾಗೂ ಕುಕ್ಕುಂದೂರಿನ ಕೆಲ ಭಾಗಗಳ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.

ಬೈಲೂರು ಪ್ರಾ.ಆ.ಕೇಂದ್ರವು ಸುಮಾರು 8 ಗ್ರಾಮಗಳನ್ನು ಒಳಗೊಂಡಿದ್ದು ತುರ್ತು ಸಂದರ್ಭ 108 ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ಸಂಕಷ್ಟ ಪಡಬೇಕಾಗಿದೆ. ಇಲ್ಲಿನವರು ಕಾರ್ಕಳ ಅಥವಾ ಅಜೆಕಾರಿನ ಆ್ಯಂಬ್ಯುಲೆನ್ಸ್‌ಗೆ ಕಾಯಬೇಕಾಗಿದೆ. ಕಾರ್ಕಳದಿಂದ ಬೈಲೂರಿಗೆ 17 ಕಿ.ಮೀ. ದೂರವಿದ್ದರೆ ಅಜೆಕಾರಿನಿಂದ ಸುಮಾರು 25 ಕಿ.ಮೀ.ಯಷ್ಟು ದೂರವಿದೆ. ಇದರಿಂದ ತುರ್ತು ಸಂದರ್ಭ ವಿಳಂಬವಾಗುತ್ತದೆ.

ಸಿಬಂದಿ ಕೊರತೆ ಇದ್ದರೂ ಸೇವೆ:

ಆರೋಗ್ಯ ಕೇಂದ್ರದಲ್ಲಿ ಇರುವ ಸಿಬಂದಿಯನ್ನೇ ಬಳಸಿಕೊಂಡು ರೋಗಿಗಳಿಗೆ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳು ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಲ್ಬಣಿಸದಂತೆ ಕ್ರಮ ಕೈಗೊಳ್ಳಲಾಗಿದೆ. -ಡಾ| ಮಹಂತ್‌ ಹೆಗ್ಡೆ, ವೈದ್ಯರು, ಪ್ರಾ.ಆ. ಕೇಂದ್ರ ಬೈಲೂರು
ಸ್ಪಂದನೆ ಸಿಕ್ಕಿಲ್ಲ:

ಬೈಲೂರು ಪ್ರಾ.ಆ.ಕೇಂದ್ರವು ಮೂಲ ಸೌಕರ್ಯಗಳನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ನಿತ್ಯ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಸಿಬಂದಿ ಕೊರತೆಯಿಂದ ಸಮಸ್ಯೆಯಾಗಿದೆ. ಹಲವು ಬಾರಿ ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಮನವಿ ಮಾಡಲಾಗಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. –ಮಾಲಿನಿ ಜೆ. ಶೆಟ್ಟಿ, ಅಧ್ಯಕ್ಷರು ತಾ.ಪಂ. ಕಾರ್ಕಳ
ಬೈಲೂರು ಪ್ರಾ.ಆ.ಕೇಂದ್ರವು ಸುಮಾರು 8 ಗ್ರಾಮಗಳನ್ನು ಒಳಗೊಂಡಿದ್ದು ತುರ್ತು ಸಂದರ್ಭ 108 ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ಸಂಕಷ್ಟ ಪಡಬೇಕಾಗಿದೆ. ಇಲ್ಲಿನವರು ಕಾರ್ಕಳ ಅಥವಾ ಅಜೆಕಾರಿನ ಆ್ಯಂಬ್ಯುಲೆನ್ಸ್‌ಗೆ ಕಾಯಬೇಕಾಗಿದೆ. ಕಾರ್ಕಳದಿಂದ ಬೈಲೂರಿಗೆ 17 ಕಿ.ಮೀ. ದೂರವಿದ್ದರೆ ಅಜೆಕಾರಿನಿಂದ ಸುಮಾರು 25 ಕಿ.ಮೀ.ಯಷ್ಟು ದೂರವಿದೆ. ಇದರಿಂದ ತುರ್ತು ಸಂದರ್ಭ ವಿಳಂಬವಾಗುತ್ತದೆ.
•ಜಗದೀಶ್‌ ರಾವ್‌ ಅಂಡಾರು

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.