Banned ಮೀನುಗಾರಿಕೆ ಈಗಲೂ ಸಕ್ರಿಯ

ಬುಲ್‌ಟ್ರಾಲ್‌, ಕೃತಕ ಲೈಟ್‌ ಬಳಸಿ ಮೀನು ಹಿಡಿಯುವುದನ್ನು ತಡೆಯುವುದೇ ಸವಾಲು

Team Udayavani, Oct 21, 2024, 7:30 AM IST

fishermen

ಉಡುಪಿ: ಕರ್ನಾಟಕ ಕರಾವಳಿಯ ಸಮುದ್ರದ 12 ನಾಟಿಕಲ್‌ ಮೈಲಿನೊಳಗೆ ಬುಲ್‌ಟ್ರಾಲ್‌ ಹಾಗೂ ರಾತ್ರಿ ವೇಳೆ ಕೃತಕ ಲೈಟ್‌ ಅಳವಡಿಸಿಕೊಂಡು ಮೀನು ಹಿಡಿಯುವುದನ್ನು ನಿಷೇಧಿಸಿದ್ದರೂ ಇದು ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಇದನ್ನು ತಡೆಯುವುದೇ ಮೀನುಗಾರಿಕೆ ಇಲಾಖೆಗೆ ಸವಾಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಈಗಾಗಲೇ ಬುಲ್‌ಟ್ರಾಲ್‌ ಮೂಲಕ ಮೀನು ಹಿಡಿಯುವುದನ್ನು ಸಂಪೂರ್ಣ ವಾಗಿ ನಿಷೇಧಿಸಿದೆ. ಆದರೆ ಬುಲ್‌ಟ್ರಾಲ್‌ ಮೂಲಕ ನಿರಂತರವಾಗಿ ಮೀನು ಹಿಡಿಯುವುದು ನಡೆಯುತ್ತಲೇ ಇದೆ. ಈ ಬಗ್ಗೆ ಜಿಲ್ಲಾಡಳಿತದಿಂದ ಮೀನುಗಾರಿಕೆ ಇಲಾಖೆಗೆ ಎಚ್ಚರಿಕೆ ನೀಡಿದರೂ ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಬುಲ್‌ಟ್ರಾಲ್‌ ಮೀನುಗಾರಿಕೆಯಿಂದಾಗಿ ನಾಡದೋಣಿ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ.

ನಿಷೇಧಕ್ಕೆ ಕಾರಣ
ಬುಲ್‌ಟ್ರಾಲ್‌ ಮೀನುಗಾರಿಕೆಯು ನೀರಿನ ಅಡಿಭಾಗದಲ್ಲಿ ಬುಲ್‌ಟ್ರಾಲ್‌ ಕಟ್ಟಿ ಎಳೆಯುವುದರಿಂದ ಮೀನಿನ ಮರಿಗಳು ಹೆಚ್ಚೆಚ್ಚು ಇದರೊಳಗೆ ಸಿಲುಕಿ ಬೆಳೆಯುವ ಮೊದಲೇ ಸಾಯುತ್ತವೆ. ಮುಂಗಾರಿನ ಅವಧಿಯಲ್ಲಿ ಬಹುತೇಕ ಮೀನುಗಳು ಕಡಲ ತೀರದಲ್ಲಿ ಸಂತಾನೋತ್ಪತ್ತಿಗೆ ಬರು ವುದರಿಂದ ಆ ಅವಧಿಯಲ್ಲಿ ಬುಲ್‌ಟ್ರಾಲ್‌ ಮಾಡಿದರೆ ಮೀನಿನ ಸಂತಾನೋತ್ಪತ್ತಿಗೆ ಸಮಸ್ಯೆ ಯಾಗು ತ್ತದೆ. ಹೀಗಾಗಿ ಬುಲ್‌ಟ್ರಾಲ್‌ ಮೀನು ಗಾರಿಕೆಯನ್ನು ಸರಕಾರ ನಿಷೇಧಿಸಿದೆ ಮತ್ತು ನ್ಯಾಯಾಲಯ ಕೂಡ ಸರಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

ನಾಡದೋಣಿ ಮೀನುಗಾರರಿಗೆ ಸಮಸ್ಯೆ ಯಾಕೆ?
ಜಿಲ್ಲೆಯಲ್ಲಿ ಸುಮಾರು 5 ಸಾವಿರ ನಾಡದೋಣಿಗಳಿದ್ದು, ಇವು ಸಮುದ್ರದ ತೀರಭಾಗದಲ್ಲಿ ಹೆಚ್ಚೆಚ್ಚು ಮೀನುಗಾರಿಕೆ ನಡೆಯುತ್ತವೆ. ಬಂಗುಡೆ, ಬೂತಾಯಿಯನ್ನೇ ಪ್ರಧಾನವಾಗಿ ಹಿಡಿಯಲಾಗುತ್ತದೆ. ಬೇರೆ ಕೆಲವು ಮೀನುಗಳು ಬರುತ್ತವೆ. ಬುಲ್‌ಟ್ರಾಲ್‌ ತೀರದ ಭಾಗದಲ್ಲಿ ಎಳೆಯುವುದರಿಂದ ನಾಡದೋಣಿ ಮೀನುಗಾರಿಕೆಗೆ ಮೀನಿನ ಕೊರತೆ ಎದುರಾಗುತ್ತದೆ.

ಮೀನಿನ ಬಲೆ ಹೇಗಿರಬೇಕು
ನಿರ್ದಿಷ್ಟ ಪ್ರಮಾಣದಷ್ಟು ಬೆಳೆಯು ವವರೆಗೂ ಮೀನಿನ ಮರಿಗಳನ್ನು ಹಿಡಿಯಲೇ ಬಾರದು ಎಂಬ ನಿಯಮವಿದೆ. ಅದಕ್ಕಾಗಿಯೇ 30-35 ಎಂಎಂಗಿಂತ ಕಡಿಮೆ ಬಲೆಯನ್ನು ಬಳಸುವಂತಿಲ್ಲ. ನಾಡದೋಣಿ, ಪರ್ಸಿನ್‌ ಸಹಿತ ಎಲ್ಲ ಮೀನುಗಾರರು ಈ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿರುವ ಬಲೆಗಳನ್ನೇ ಬಳಸುತ್ತಾರೆ. ಆದರೆ ಬುಲ್‌ಟ್ರಾಲ್‌ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿರುವುದರಿಂದ ಬುಲ್‌ಟ್ರಾಲ್‌ ನಿಷೇಧಿಸಲಾಗಿದೆ. 30-35 ಎಂಎಂಗಿಂತ ಕಡಿಮೆ ಬಲೆಯನ್ನು ಬಳಸಿದಲ್ಲಿ ದೂರು ಆಧರಿಸಿ ಇಲಾಖೆಯಿಂದಲೂ ಕ್ರಮ ವಹಿಸಲಾಗುತ್ತದೆ.

ಕೃತಕ ಲೈಟ್‌ ಬಳಕೆ
ಬೆಳದಿಂಗಳು ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿವೇಳೆ ಬೋಟು ಗಳಲ್ಲಿ ಕೃತಕ ಲೈಟ್‌ ಬಳಸಿ ಮೀನು ಹಿಡಿಯ ಲಾಗುತ್ತದೆ. ಇದೊಂದು ರೀತಿಯಲ್ಲಿ ಪ್ರಕೃತಿಗೆ ವಿರುದ್ಧವಾದ ನೀತಿ. ಕೃತಕ ಲೈಟ್‌ಗೆ ಮೀನುಗಳು ಸಹಜವಾಗಿ ಒಟ್ಟಾಗಿ ಒಂದೆಡೆ ಸೇರುತ್ತವೆ. ಆಗ ಬಲೆ ಹಾಕಿ ಮೀನು ಹಿಡಿಯುವುದು. ಈ ಬಗ್ಗೆಯೂ ಮೀನುಗಾರರಿಂದಲೇ ದೂರು ಬಂದ ಹಿನ್ನೆಲೆಯಲ್ಲಿ ನಿಷೇಧ ಮಾಡಲಾಗಿದೆ. ಆದರೂ ಕೃತಕ ಲೈಟ್‌ ಬಳಕೆ ಮಾತ್ರ ನಡೆಯುತ್ತಲೇ ಇದೆ. ಇದನ್ನು ತಡೆಯಲು ಪರಿಣಾಮಕಾರಿ ಕ್ರಮ ಅಗತ್ಯ.

ಏಕರೂಪ ನೀತಿ ಬೇಕು
ಮೀನುಗಾರಿಕೆಗೆ ಸಂಬಂಧಿಸಿ ಕೇರಳ, ಗೋವಾ, ಮಹಾರಾಷ್ಟ್ರ ಸಹಿತವಾಗಿ ಎಲ್ಲ ರಾಜ್ಯಗಳಿಂದ ಮಾಹಿತಿ ಪಡೆದು ಕರ್ನಾಟಕ ಸರಕಾರ ಒಂದು ಏಕರೂಪ ನೀತಿ ಜಾರಿಗೆ ಕೇಂದ್ರಕ್ಕೆ ಒತ್ತಡ ಹೇರಬೇಕು ಹಾಗೂ ರಾಜ್ಯದಲ್ಲಿ ಈ ಸಂಬಂಧ ನಿಮಯ ಜಾರಿಯಾಗಬೇಕು. ಯಾವುದೇ ಒಂದು ಬಂದರಿನಲ್ಲಿ ಕಟ್ಟುನಿಟ್ಟಿನ ಕ್ರಮವಾದ ತತ್‌ಕ್ಷಣ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಇಡೀ ವ್ಯವಸ್ಥೆಯೇ ಏಕರೂಪವಾಗಿ ನಿಮಯ ಅನುಷ್ಠಾನ ಮಾಡಿದಲ್ಲಿ ಮಾತ್ರ ಕೆಲವು ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ಮೀನುಗಾರಿಕ ಮುಖಂಡರ ವಾದವಾಗಿದೆ.

ಕಠಿನ ಕ್ರಮ
ಬುಲ್‌ಟ್ರಾಲ್‌ ಹಾಗೂ ಕೃತಕ ಲೈಟ್‌ ಬಳಸಿ ಮೀನು ಹಿಡಿಯವುದನ್ನು ನಿಷೇಧಿಸಲಾಗಿದ್ದು, ಈ ರೀತಿಯ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ನಿಯಮಾನುಸಾರ ಕಠಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಂದಲೂ ಸೂಚನೆ ಬಂದಿದೆ.
-ವಿವೇಕ್‌, ಜಂಟಿ ನಿರ್ದೇಶಕ ಮೀನುಗಾರಿಕೆ ಇಲಾಖೆ

ಟಾಪ್ ನ್ಯೂಸ್

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

012

Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

Paduvari-Someshwara-beach

Tourism: ರಾಜ್ಯದ 7 ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುನ್ನುಡಿ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Heavy Rain: ಅನ್ನದಾತರಿಗೆ ಚಿತ್ರಾ ಮಳೆ ತಂದ ಚಿಂತೆ! ಹಿಂಗಾರು ಬಿತ್ತನೆಗೂ ಅಡ್ಡಿ

Salmana

Baba Siddiqui Case: ಸಲ್ಮಾನ್‌ ಹತ್ಯೆಗೆ ಸಂಚು ಆರೋಪಿಗೆ ಪೊಲೀಸರಿಂದ ಹನಿಟ್ರ್ಯಾಪ್‌ ಬಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Udupi: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ; ಮಲ್ಪೆ ಠಾಣೆಯಲ್ಲಿ ದೂರು ದಾಖಲು

court

Udupi; ಶ್ರೀಕೃಷ್ಣ ಮಠಕ್ಕೆ ಬಂದು ಮೋಸ ಮಾಡಿದ ವ್ಯಕ್ತಿಗೆ ಜಾಮೀನು

1-a-MLC

MLC Election; ಇಂದು ವಿಧಾನಪರಿಷತ್‌ ಉಪ ಚುನಾವಣೆ

suicide (2)

Kundapur; ವಿಪರೀತ ತಲೆನೋವು: ಮಹಿಳೆ ಸಾ*ವು

1-ajekaaa

Ajekar: ಸೇತುವೆಗೆ ಕಾರು ಢಿಕ್ಕಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

012

Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

Paduvari-Someshwara-beach

Tourism: ರಾಜ್ಯದ 7 ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುನ್ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.