ಬಂಡೆಗಳ ಮೇಲೆ ನಿಂತು  ಸೆಲ್ಫಿ  ಸೇಫ್‌ ಅಲ್ಲ , ಇರಲಿ ಎಚ್ಚರ 


Team Udayavani, Jun 19, 2018, 6:00 AM IST

1306uppe1-1.jpg

ಉಪ್ಪುಂದ: ಈಗ ಏನಿದ್ದರೂ ಸೆಲ್ಫಿ ಕ್ರೇಜ್‌ ಜಾಯಮಾನ. ಸೆಲ್ಫಿ ತೆಗೆಯುವ ಹುಚ್ಚಾಟದಲ್ಲಿ ಪ್ರಾಣವೇ ಹೋಗಿರುವ ಸುದ್ದಿಗಳನ್ನು ಓದಿದ್ದರೂ ಅದನ್ನು ಅಲ್ಲಿಗೆ ಮರೆತು ಮತ್ತೆ ಸೆಲ್ಫಿ ಸಾಹಸಕ್ಕೆ ಮುಂದಾಗುತ್ತೇವೆ. ಮರವಂತೆ-ತ್ರಾಸಿ ಬೀಚ್‌ನಲ್ಲೂ ಇಂತಹ ಅಪಾಯಕಾರಿ ಸೆಲ್ಫಿ ತೆಗೆಯುತ್ತಿರುವುದು ಕಂಡುಬರುತ್ತಿದೆ.  

ರಾ. ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಮರವಂತೆ ಕಡಲಿನಲ್ಲಿ ನಿಂತು ಸೌಂದರ್ಯದಿಂದ ಕಂಗೊಳಿಸುವ ಸಮುದ್ರದ‌ ನರ್ತನವನ್ನು ಆನಂದಿಸಿ ಮುಂದೆ ಸಾಗುವ ಮಜಾನೇ ಬೇರೆ. ಆದರೆ ಮೋಜಿನಾಟದ ಉತ್ಸಾಹದಲ್ಲಿ ನೀರಿಗಿಳಿದರೆ ಅಪಾಯ ಮೈ ಮೇಲೆ ಎಳೆದುಕೊಂಡಂತೆ.

ಪರಶುರಾಮ ಸೃಷ್ಟಿಯ ಕರಾವಳಿಗೆ ವಿಶ್ವವಿಖ್ಯಾತ ಮರವಂತೆ-ತ್ರಾಸಿ ಬೀಚ್‌ ಪ್ರಕೃತಿಯ ವಿಶಿಷ್ಟ ಕೊಡುಗೆ ಎಂದೇ ಬಿಂಬಿತವಾಗಿದೆ. ಶಾಂತವಾಗಿ ಹರಿಯುವ ನದಿ, ಭೋರ್ಗರೆಯುವ ಕಡಲು ನಡುವೆ ರಾ.ಹೆದ್ದಾರಿ. ಈ ರಮಣೀಯ ಸೌಂದರ್ಯ ಪ್ರಯಾಣಿಕರ ಮನಸ್ಸು ಮುದಗೊಳಿಸುವಂತಿದೆ. ದಿನನಿತ್ಯ ನೂರಾರು ಪ್ರವಾಸಿಗರು ಈ ಸೌಂದರ್ಯವನ್ನು ಸವಿದು ಮುನ್ನಡೆಯುತ್ತಿದ್ದರೆ, ವಾರಾಂತ್ಯ ಮತ್ತು ರಜಾದಿನಗಳಲ್ಲಿ ಒಂದಿಷ್ಟು ಸಮಯ ಕಳೆಯಲು ಇಲ್ಲಿ ಪ್ರವಾಸಿಗರ ದಂಡು ತುಂಬಿರುತ್ತದೆ.

ಯಾರಿಗೇ ಆಗಲಿ  ನೀರನ್ನು ನೋಡಿದರೆ ಇಳಿಯಬೇಕು ಎನ್ನಿಸದೇ ಇರದು. ಮಳೆಗಾಲದಲ್ಲಿ ಕಡಲಬ್ಬರ ಹೆಚ್ಚಿರುವುದರಿಂದ ನೀರಿಗಿಳಿದರೆ ಬಲು ಅಪಾಯಕಾರಿ. ಅಲ್ಲದೇ ಬೀಚ್‌ನಲ್ಲಿ ಪೈಲೆಟ್‌ ಯೋಜನೆಯ ಕಾಮಗಾರಿಗಾಗಿ ದಡದ ಉದ್ದಕ್ಕೂ ಕಲ್ಲುಗಳನ್ನು ಹಾಕಲಾಗಿದೆ. ಇದರಿಂದ ಮರಳಿನ ದಡದ ವಿಸ್ತಾರ ಕಡಿಮೆಯಾಗಿದ್ದು, ದೊಡ್ಡ ಗಾತ್ರದ ಅಲೆಗಳು ಒಮ್ಮೆಲೇ ಅಪ್ಪಳಿಸುತ್ತವೆ. ಸಮುದ್ರಕ್ಕಿಳಿದರೆ ನೀರು ಕುಡಿಸದೆ ಇರುವುದಿಲ್ಲ.

ಎಚ್ಚರಿಕೆ ಫಲಕ ಇಲ್ಲ
ಈ ಮೊದಲು ಬೀಚ್‌ನ ಉದ್ಧಕ್ಕೂ ಗೂಡಂಗಡಿಗಳು ಇದ್ದವು ಪ್ರವಾಸಿಗರಿಗೆ ಅಂಗಡಿಯವರು ಸಮುದ್ರದ ಅಪಾಯದ ಕುರಿತು ಎಚ್ಚರಿಕೆ ರವಾನಿಸುತ್ತಿದ್ದರು. ಈಗ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಪ್ರವಾಸಿಗರಿಗೆ ಅಪಾಯದ ಅರಿವು ಇಲ್ಲದ ಕಾರಣ ನೀರಿಗಿಳಿಯುವುದು ಸಹಜ. ಮರವಂತೆ ದೇವಸ್ಥಾನದ ಎದುರಿನ ಬೀಚ್‌ನಲ್ಲಿ ಒಂದು ಎಚ್ಚರಿಕೆಯ ನಾಮಫಲಕ ಇರುವುದು ಬಿಟ್ಟು ಮತ್ತೆ ಬೀಚ್‌ನ ಉದ್ಧಕ್ಕೂ ಎಚ್ಚರಿಸುವ ಸೂಚನಾ  ಫಲಕ ಅಳವಡಿಸಿದ ಕಾರಣ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಪ್ರಾಣಕ್ಕೆ ಕುತ್ತು 
ವರಹ ಮಹಾ ಸ್ವಾಮೀ ದೇವಸ್ಥಾನದ ಬಳಿಯ ಸಮುದ್ರಕ್ಕೆ ಪೈಲೆಟ್‌ ಯೋಜನೆಗೆ ಜೋಡಿಸಿರುವ (ಅಪೂರ್ಣವಾಗಿರುವ) ಶಿಲೆ ಕಲ್ಲುಗಳ ಮೇಲೆ ಪ್ರವಾಸಿಗರು ನಿಂತು ಸೆಲ್ಫಿ ತೆಗೆಯುತ್ತಿರುವುದು ಕಂಡುಬಂದಿದೆ. ಅಲೆಗಳು ಬಂಡೆಕಲ್ಲುಗಳಿಗೆ ಬಂದು  ಹೊಡೆಯುವುದರಿಂದ ನೀರು ಕಾರಂಜಿಯಂತೆ ಚಿಮ್ಮುವ ಕಾರಣ ಇಲ್ಲಿ ಪ್ರವಾಸಿಗರು ಮೈ ಮರೆತು ಸೆಲ್ಫಿಗಾಗಿ ಸಾಹಸ ಮಾಡುತ್ತಾರೆ. ಕಾಲು ಜಾರಿ ಕಲ್ಲುಗಳ ನಡುವೆ ಅಥವಾ ನೀರಿಗೆ ಬಿದ್ದರೆ ಪ್ರಾಣಕ್ಕೆ ಕುತ್ತು ಬರುತ್ತದೆ.

ಸೆಲ್ಫಿ ಕ್ರೇಜ್‌  ಪ್ರಾಣ ಸಂಕಟ
ತ್ರಾಸಿ-ಮರವಂತೆ ಕಡಲ ತೀರವು ನೀರಿಗಿಳಿದು ಆಟವಾಡಲು, ಈಜಲು ಸೇಫ್‌ ಅಲ್ಲ. ನಿಸರ್ಗದ ಸೊಬಗನ್ನು ಸವಿಯಲು,  ಒಂದಿಷ್ಟು ಸಮಯವನ್ನು ಆನಂದಿಸುವ ಸಲುವಾಗಿ ಮಾತ್ರ ಕಳೆಯಬೇಕು ಇಲ್ಲದಿದಲ್ಲಿ ಆಪಾಯವನ್ನು ಆಹ್ವಾನಿಸಿಕೊಂಡಂತೆ.  ಮರವಂತೆ-ತ್ರಾಸಿ ಬೀಚ್‌ನಲ್ಲಿ ಶೀಘ್ರವಾಗಿ ಸೂಚನಾ ಫಲಕ ಅಳವಡಿಸಲು ತಿಳಿಸುತ್ತೇನೆ.
– ಟಿ. ಭೂಬಾಲನ್‌, ಕುಂದಾಪುರ 
ಉಪ ಆಯುಕ್ತ 

ಟಾಪ್ ನ್ಯೂಸ್

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

002

Karkala: ಎದೆ ನೋವಿನಿಂದ ಕೃಷಿಕ ಸಾವು

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈರ್‌ ಬ್ರ್ಯಾಂಡ್‌ʼ ಎಂಟ್ರಿ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.