ಸಾವಿರ ಮನೆಗಳಿಗೆ ತಲುಪಿದ ಭಜನ ನಿನಾದ


Team Udayavani, Apr 17, 2022, 11:57 AM IST

bhajan

ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಆಯೋಜಿಸಿರುವ ಮನೆಮನೆ ಭಜನೆ- ಗ್ರಾಮ ಭಜನೆ ಕಾರ್ಯಕ್ರಮದಲ್ಲಿ 1,000 ಮನೆಗಳಲ್ಲಿ ಭಜನ ಸೇವೆ ಸಂಪನ್ನಗೊಂಡಿದೆ.

ಎ. 2ರಿಂದ ಆರಂಭಗೊಂಡ ಈ ಮನೆಮನೆ ಭಜನೆ-ಗ್ರಾಮ ಭಜನೆಯು ಎ. 23ರ ವರೆಗೆ ನಡೆಯಲಿದೆ. ನಾರಾಯಣಿ, ಶಾಂಭವಿ, ಭೈರವಿ, ಪಾರ್ವತಿ, ಕಾತ್ಯಾಯಿನಿ ಎಂಬ ಐದು ತಂಡಗಳು ದಿನಕ್ಕೆ ಒಟ್ಟು 75 ಮನೆಗಳನ್ನು ಸಂದರ್ಶಿಸಿ ಭಜನೆಗಳನ್ನು ಹಾಡುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತೀ ತಂಡದಲ್ಲಿ 55ರಿಂದ 80 ವರ್ಷದವರೆಗಿನ ಭಜನ ಕಲಾವಿದರು ಇದ್ದಾರೆ. ಒಟ್ಟು 2,000 ಮನೆಗಳ ಗುರಿ ಇದ್ದು ಶುಕ್ರವಾರದವರೆಗೆ ಅರ್ಧಾಂಶದಷ್ಟು ಅಂದರೆ 1,084 ಮನೆಗಳಲ್ಲಿ ಭಜನ ಸೇವೆ ನಡೆದಿದೆ. ಮನೆಗಳಲ್ಲಿ ಈ ಕಾರ್ಯಕ್ರಮಕ್ಕೆ ತುಂಬು ಉತ್ಸಾಹ ಕಂಡುಬಂದಿದೆ. ಉಡಿ ತುಂಬುವುದು, ಹೂವು ಸಮರ್ಪಣೆ, ಬಟ್ಟೆ ವಿತರಣೆ, ಸಾಂಪ್ರದಾಯಿಕ ತಿನಿಸು ವಿತರಣೆ ನಡೆಯುತ್ತಿದೆ. ಭಕ್ತಿಭಾವದಿಂದ ಭಜನ ತಂಡದವರನ್ನು ಮನೆಯವರು ಸ್ವಾಗತಿಸುತ್ತಿದ್ದಾರೆ. ಒಟ್ಟಾರೆ ಭಜನ ತಂಡ ದವರು ಮನೆಗಳಿಗೆ ಭೇಟಿ ನೀಡಿ ಹಾಡುವುದು ಹಬ್ಬದ ವಾತಾವರಣ ಸೃಷ್ಟಿಸಿದೆ.

ಎ. 23: ಸಮಾರೋಪ

ಗ್ರಾಮ ಭಜನೆ ಕಾರ್ಯಕ್ರಮದ ಸಮಾರೋಪ ಎ. 23ರ ಸಂಜೆ 4.30ಕ್ಕೆ ನಡೆಯಲಿದೆ. ಶ್ರೀಕೃಷ್ಣಮಠದಿಂದ ಕಡಿ ಯಾಳಿ ದೇವಸ್ಥಾನದವರೆಗೆ ಭಜನ ಮೆರವಣಿಗೆ ನಡೆಯಲಿದೆ. ಬಳಿಕ ಕಡಿಯಾಳಿ ದೇವಸ್ಥಾನದ ವಠಾರದಲ್ಲಿ ಸಮಾರೋಪ ಸಮಾರಂಭ ಜರಗಲಿದೆ. ವಿಶೇಷವೆಂದರೆ ಯಾರ ಮನೆಗಳಿಗೆ ಭಜನ ತಂಡಗಳು ಭೇಟಿ ನೀಡಿ ಭಜನ ಸೇವೆ ಸಲ್ಲಿಸಿದೆಯೋ ಆ ಮನೆಯವರು ಸಮಾರೋಪ ಸಮಾರಂಭದ ಭಜನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದು ಇವರು ಭಾಗವಹಿಸಲಿದ್ದಾರೆ.

ಭಜನ ಮಂಗಲದ ಪೋಸ್ಟರ್‌ ಬಿಡುಗಡೆ

ಗ್ರಾಮ ಭಜನ ಮಂಗಲೋತ್ಸವದ ಪೋಸ್ಟರ್‌ನ್ನು ಶನಿವಾರ ಬಿಗ್‌ ಬಾಸ್‌ ಪ್ರಸಿದ್ಧಿಯ ಹೆಸರಾಂತ ಬೈಕ್‌ ರೇಸರ್‌, ಕಡಿಯಾಳಿ ದೇವಸ್ಥಾನದ ಅರ್ಚಕ ಕುಟುಂಬದ ಸದಸ್ಯ ಅರವಿಂದ ಕೆ.ಪಿ. ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ, ಪ್ರ.ಕಾರ್ಯ ದರ್ಶಿ ಕೆ.ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ|ರವಿರಾಜ ಆಚಾರ್ಯ, ಭಜನ ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.