![samanta](https://www.udayavani.com/wp-content/uploads/2024/07/samanta-415x262.jpg)
Brahmavar ಕುರ್ಪಾಡಿ; ಸುಂಟರ ಗಾಳಿ: 36 ಮನೆಗಳಿಗೆ ಹಾನಿ
Team Udayavani, Jul 4, 2024, 12:22 AM IST
![Brahmavar ಕುರ್ಪಾಡಿ; ಸುಂಟರ ಗಾಳಿ: 36 ಮನೆಗಳಿಗೆ ಹಾನಿ](https://www.udayavani.com/wp-content/uploads/2024/07/karje-8-620x398.jpg)
ಬ್ರಹ್ಮಾವರ: ಕರ್ಜೆ ಗ್ರಾ.ಪಂ. ವ್ಯಾಪ್ತಿಯ ಕುರ್ಪಾಡಿಯಲ್ಲಿ ಮಂಗಳವಾರ ರಾತ್ರಿ ಬೀಸಿದ ಸುಂಟರ ಗಾಳಿಗೆ ಸುಮಾರು 36 ಮನೆಗಳಿಗೆ ಹಾನಿಯಾಗಿದೆ.
ಮಾಡಿನ ಹೆಂಚು, ತಗಡುಗಳು ಹಾರಿ ಹೋಗಿವೆ. ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕೆಲವು ಮನೆಗಳ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಗ್ರಾಮದ ಸೋಮಯ್ಯ, ಜಗದೀಶ್, ಶೇಖರ ಸೇರ್ವಗಾರ್, ಲತಾ, ಸರಸ್ವತಿ, ಉಷಾ, ಜಯಪ್ರಕಾಶ್ ಕೆ., ಸಂತೋಷ್ ಸಾವಂತ್, ಶಾಲಿನಿ, ಸುನೀತಾ, ಸದಾನಂದ ನಾಯಕ್, ಯಶೋದಾ, ರೋಹಿಣಿ, ಜಯರಾಮ, ಶುಭಾ, ದುಗ್ಗಪ್ಪ ಸೇರ್ವೆಗಾರ್, ಸುರೇಶ್ ಸೇರ್ವೆಗಾರ್, ಪಾರ್ವತಿ, ವಿಶ್ವನಾಥ, ಆಶಾ, ಪುನೀತ್, ನಾಗೇಶ್ ನಾಯಕ್, ಸುರೇಶ್ ನಾಯಕ್, ರಾಜೀವಿ, ಕಲ್ಯಾಣಿ, ಉಷಾ, ನಾಗೇಶ್, ರಾಘವೇಂದ್ರ, ಕಮಲಾವತಿ ಭಟ್, ಲಲಿತಾ, ಗುಲಾಬಿ, ಮಾಲತಿ, ಲಕ್ಷ್ಮಣ ಸೇರ್ವೆಗಾರ್, ಗೋಪಾಲ ಸಾವಂತ, ಶ್ರೀಮತಿ, ನಾಗೇಶ್ ಸೇರ್ವೆಗಾರ್ ಮತ್ತಿತರರ ಮನೆ, ಕೊಟ್ಟಿಗೆಗಳಿಗೆ ಹಾನಿಯಾಗಿದೆ.
ಏಕಾಏಕಿ ಬೀಸಿದ ಗಾಳಿಗೆ ಹೆಂಚುಗಳು ಮುರಿದು ಬಿದ್ದ ಪರಿಣಾಮ ಪಾತ್ರೆ ಪಗಡಿ, ಉಪಕರಣಗಳ ಸಹಿತ ವಸ್ತುಗಳು ಜಖಂಗೊಂಡಿವೆ.
ಮಧ್ಯರಾತ್ರಿಯ ಅನಿರೀಕ್ಷಿತ ಘಟನೆಯಿಂದ ಜನರು ಕಂಗಾಲಾದರು. ಒಂದೆಡೆ ಗಾಳಿ, ಇನ್ನೊಂದೆಡೆ ಮಳೆಯಿಂದ ಸಂತ್ರಸ್ತರು ತತ್ತರಿಸಿದರು. ಕಂದಾಯ ಇಲಾಖೆ, ಮೆಸ್ಕಾಂ, ಅಗ್ನಿಶಾಮಕ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಗರಿಷ್ಠ ಪರಿಹಾರಕ್ಕೆ ಸೂಚನೆ: ಮನೆ ಹಾನಿಯಾದ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಶೀಘ್ರ ಕಲ್ಪಿಸುವಂತೆ ಶಾಸಕ ಯಶಪಾಲ್ ಸುವರ್ಣ ಅವರು ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿದ್ದಾರೆ. ಪೂರ್ವ ನಿಗದಿ ಕಾರ್ಯಕ್ರಮದ ಹಿನ್ನಲೆ ಬೆಂಗಳೂರಿನಲ್ಲಿರುವ ಕಾರಣ ಶುಕ್ರವಾರ ಬೆಳಗ್ಗೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಟಾಪ್ ನ್ಯೂಸ್
![samanta](https://www.udayavani.com/wp-content/uploads/2024/07/samanta-415x262.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kota-Shrinivas](https://www.udayavani.com/wp-content/uploads/2024/07/Kota-Shrinivas-150x90.jpg)
Udupi: ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
![Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ](https://www.udayavani.com/wp-content/uploads/2024/07/Udupi-DC-Dr.-vidya-kumari-1-150x106.jpg)
Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ
![Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು](https://www.udayavani.com/wp-content/uploads/2024/07/HEBRi-1-150x93.jpg)
Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು
![Yaakshagana-Artist](https://www.udayavani.com/wp-content/uploads/2024/07/Yaakshagana-Artist-150x90.jpg)
Kumble Shridhar Rao; ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ನಿಧನ
![Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್ ನಿಲ್ಲಿಸಿ ಹೋದ ಚಾಲಕ!](https://www.udayavani.com/wp-content/uploads/2024/07/BUSAAA-150x90.jpg)
Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್ ನಿಲ್ಲಿಸಿ ಹೋದ ಚಾಲಕ!
MUST WATCH
ಹೊಸ ಸೇರ್ಪಡೆ
![samanta](https://www.udayavani.com/wp-content/uploads/2024/07/samanta-150x95.jpg)
Health illiterate; ‘ಆರೋಗ್ಯ ಅನಕ್ಷರಸ್ಥೆ’ ಎಂದ ವೈದ್ಯನಿಗೆ ನಟಿ ಸಮಂತಾ ತಿರುಗೇಟು
![Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ](https://www.udayavani.com/wp-content/uploads/2024/07/Mobile-150x84.jpg)
Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ
![vidyarthi vidyarthiniyare premier show in dubai](https://www.udayavani.com/wp-content/uploads/2024/07/vidya-150x83.jpg)
ದುಬೈನಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಪ್ರೀಮಿಯರ್ ಶೋ
![ಪಂಚಮಸಾಲಿ ಮೀಸಲಾತಿ ಶಿಫಾರಸ್ಸಿಗೆ ಒತ್ತಾಯಿಸಿ ಶಾಸಕರಿಗೆ ಹಕ್ಕೊತ್ತಾಯಪತ್ರ ಸಲ್ಲಿಕೆ](https://www.udayavani.com/wp-content/uploads/2024/07/panchamsali-150x83.jpg)
Hubli; ಪಂಚಮಸಾಲಿ ಮೀಸಲಾತಿ ಶಿಫಾರಸ್ಸಿಗೆ ಒತ್ತಾಯಿಸಿ ಶಾಸಕರಿಗೆ ಹಕ್ಕೊತ್ತಾಯಪತ್ರ ಸಲ್ಲಿಕೆ
![“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು](https://www.udayavani.com/wp-content/uploads/2024/07/Lead-1-150x97.jpg)
“Symphony Of The Sea’: 21ನೇ ಶತಮಾನದ ವಿಸ್ಮಯ, ಅತೀ ದೊಡ್ಡ ಹಡಗು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.