![Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!](https://www.udayavani.com/wp-content/uploads/2024/12/Live-415x256.jpg)
ಕಟಪಾಡಿ: ಮದುವೆ ಕಾರ್ಯಕ್ರಮಕ್ಕೆ ಪಡೆದುಕೊಂಡ ಕಾರನ್ನು ಮರಳಿಸದೇ ವಂಚನೆ ; ಪ್ರಕರಣ ದಾಖಲು
Team Udayavani, Jul 21, 2022, 6:32 PM IST
![tdy-3](https://www.udayavani.com/wp-content/uploads/2022/07/tdy-3-29-620x372.jpg)
ಸಾಂದರ್ಭಿಕ ಚಿತ್ರ
ಕಾಪು: ಕಟಪಾಡಿ ಮೂಡಬೆಟ್ಟು ನಿವಾಸಿ ಫ್ರಾನ್ಸಿಸ್ ಕಿರಣ್ ಲಸ್ರಾದೊ ಅವರ ಬಳಿಯಿಂದ ಅಮೀರ್ ಸಾಹೇಬ್ ಎಂಬಾತ ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲೆಂದು ಕೊಂಡೊಯ್ದಿದ್ದ ಕಾರನ್ನು ಮರಳಿಸದೇ ವಂಚಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ತಿಂಗಳ ಅವಧಿಗೆ ಆರೋಪಿ ಕಾರನ್ನು ಪಡೆದುಕೊಂಡಿದ್ದು ಆತನ ಈ ಬಗ್ಗೆ ಬಳಿ ವಿಚಾರಿಸಿದಾಗ ಸ್ವಲ್ಪ ಹಣವನ್ನು ನೀಡಿ, ಮುಂಬೈಗೆ ಹೋಗಲು ಕಾರಿನ ಅಗತ್ಯವಿರುವುದಾಗಿ ತಿಳಿಸಿದ್ದನು. ಅದರಂತೆ ಆರೋಪಿಗೆ ಕಾರು ಬಿಟ್ಟು ಕೊಟ್ಟಿದ್ದು ಆರೋಪಿ ಅಮೀರ್ ಸಾಹೇಬ್ ಮುಂಬೈನಿಂದ ಬಂದ ನಂತರ ಫ್ರಾನ್ಸಿಸ್ ಅವರನ್ನು ಸಂಪರ್ಕಿಸದೇ ಹಾಗೂ ಕಾರು ಸಹ ಹಿಂತಿರುಗಿಸದೇ ವಂಚಿಸಿರುವುದಾಗಿ ಆರೋಪಿಸಲಾಗಿದೆ.
ಆರೋಪಿ ಮುಂಬೈಯಿಂದ ಮರಳಿದ ಬಳಿಕ ಬೆಂಗಳೂರಿಗೆ ಹೋಗಿದ್ದು ಅಲ್ಲಿಂದ ಬಂದ ನಂತರವೂ ಕಾರನ್ನು ನೀಡದೇ ಈ ಬಗ್ಗೆ ವಿಚಾರಿಸಿದಾಗ ಬೇರೆ ಬೇರೆ ಕಾರಣ ನೀಡಿ ಕಾರನ್ನು ಮರಳಿಸಿದೇ ಬಳಸಿದ ಹಣವನ್ನೂ ನೀಡದೇ ಸತಾಯಿಸಿದ್ದನು. ಮತ್ತೆ ಒತ್ತಡ ಹಾಕಿದಾಗ ಆರೋಪಿ ಕಾರನ್ನು ತನ್ನ ಗೆಳೆಯ ಡೇವಿಡ್ ಎಂಬಾತನಿಗೆ ನೀಡಿದ್ದು ಆತ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದನು. ಎರಡು ತಿಂಗಳ ನಂತರವೂ ಮರಳಿ ಬಾರದೇ, ಯಾವುದೇ ಪ್ರತಿಕ್ರಿಯೆಯನ್ನೂ ನೀಡದೇ ವಂಚಿಸಿದ್ದಾನೆ. ಈ ಬಗ್ಗೆ ಆರೋಪಿಯ ಮನೆಗೆ ಹೋಗಿ ವಿಚಾರಿಸಿದಾಗ ಆರೋಪಿ ಅಮೀರ್ ಸಾಹೇಬ್ ಮತ್ತು ಆತನ ಪರಿಚಯದ ಮಂಗಳೂರಿನ ಕೋಟೆಕಾರ್ನ ಸಿದ್ದಿಕ್ ಎಂಬವರ ನಡುವೆ ಹಣಕಾಸಿನ ವ್ಯವಹಾರವಿದ್ದು, ಹಣ ಪಾವತಿ ಮಾಡದ ಕಾರಣ ಸಿದ್ದಿಕ್ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ಕಾರು ಸಿದ್ದಿಕ್ ಬಳಿಯಿದ್ದು ಆತನ ಹಣ ಪಾವತಿ ಮಾಡಿದ ನಂತರ ಕಾರು ನೀಡುವುದಾಗಿ ತಿಳಿಸಿದ್ದನು. ಆ
ಆರೋಪಿ ಮತ್ತು ಸಿದ್ದಿಕ್ ನಡುವಿನ ವ್ಯವಹಾರ ಕಾರಣದಿಂದಾಗಿ ಕಾರನ್ನು ಇಟ್ಟುಕೊಂಡಿದ್ದು, ಅಮೀರ್ ಸಾಹೇಬ್ ನಂಬಿಕೆ ದ್ರೋಹ ಮಾಡಿ ಕಾರನ್ನು ಪಡೆದುಕೊಂಡಿದ್ದಾನೆ. ಆರೋಪಿ ಅಮೀರ್ ಸಾಹೇಬ್ ತನ್ನ ಕಾರನ್ನು ಯಾವುದೇ ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುವ ಭಯವಿದೆ ಎಂದು ಫ್ರಾನ್ಸಿಸ್ ಕಿರಣ್ ಲಸ್ರಾದೊ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದಾರೆ.
ನ್ಯಾಯಾಲಯದ ಆದೇಶದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
![Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!](https://www.udayavani.com/wp-content/uploads/2024/12/Live-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್ ಜೋಶಿ](https://www.udayavani.com/wp-content/uploads/2024/12/joshi-1-150x95.jpg)
Udupi: ಯಕ್ಷಗಾನದಲ್ಲಿ ಭಗವದ್ಗೀತೆ ಪ್ರಯೋಗ: ಡಾ| ಪ್ರಭಾಕರ್ ಜೋಶಿ
![E-ka](https://www.udayavani.com/wp-content/uploads/2024/12/E-ka-150x75.jpg)
ಇ-ಖಾತಾ ತಿದ್ದುಪಡಿಯೇ ಭಾರೀ ಸವಾಲು; ತಿದ್ದುಪಡಿ ಅವಕಾಶ ಶೇ.3ರಿಂದ ಶೇ.15ಕ್ಕೆ ಏರಿಕೆಗೆ ಆಗ್ರಹ
![Arrest](https://www.udayavani.com/wp-content/uploads/2024/12/Arrest-24-150x90.jpg)
Karkala: ಹೋಂ ನರ್ಸ್ 9 ಲಕ್ಷ ರೂ. ವಂಚನೆಗೈದ ಪ್ರಕರಣ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಸೆರೆ
![UV-Deepavali](https://www.udayavani.com/wp-content/uploads/2024/12/UV-Deepavali-150x90.jpg)
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
![Ramesh-Kanchan1](https://www.udayavani.com/wp-content/uploads/2024/12/Ramesh-Kanchan1-150x90.jpg)
Highway: ಅಂಬಲಪಾಡಿ ಅಂಡರ್ಪಾಸ್: ಗೊಂದಲ ನಿವಾರಣೆಗೆ ರಮೇಶ್ ಕಾಂಚನ್ ಆಗ್ರಹ
MUST WATCH
ಹೊಸ ಸೇರ್ಪಡೆ
![Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!](https://www.udayavani.com/wp-content/uploads/2024/12/Live-150x92.jpg)
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
![ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ](https://www.udayavani.com/wp-content/uploads/2024/12/9-22-150x90.jpg)
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
![ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/12/elephant-150x96.jpg)
ಕಲ್ಮಕಾರು: ಅಯ್ಯಪ್ಪ ವೃತಧಾರಿ ಮೇಲೆ ಕಾಡಾನೆ ದಾಳಿ… ಆಸ್ಪತ್ರೆಗೆ ದಾಖಲು
![Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್](https://www.udayavani.com/wp-content/uploads/2024/12/santhosh-lad-150x95.jpg)
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
![Bengaluru: ಟೆಕಿ ಅತುಲ್ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ](https://www.udayavani.com/wp-content/uploads/2024/12/8-22-150x90.jpg)
Bengaluru: ಟೆಕಿ ಅತುಲ್ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.