![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 19, 2023, 7:42 AM IST
ಮಂಗಳೂರು/ಉಡುಪಿ: ಎರಡು ತಿಂಗಳುಗಳ ಮೀನುಗಾರಿಕಾ ನಿಷೇಧ ಬಳಿಕ ಚೆನ್ನೈಯಲ್ಲಿ ಮೀನುಗಾರಿಕೆ ಆರಂಭಗೊಂಡಿದೆ. ಆಳ ಸಮುದ್ರಕ್ಕೆ ತೆರಳಿದ್ದ ದೋಣಿಗಳು ಮೀನಿನ ಉತ್ತಮ ಫಸಲಿನೊಂದಿಗೆ ರವಿವಾರ ಚೆನ್ನೈಯ ಬಂದರುಗಳಿಗೆ ತಲುಪಿವೆ. ಚೆನ್ನೈಯ ಕಾಸಿಮೇಡು ಬಂದರಿನಲ್ಲಿ ರವಿವಾರ ಜಾತ್ರೆಯ ರೀತಿ ಮೀನು ಪ್ರೀಯರು ಸೇರಿದ್ದರು.
ಬಿಪರ್ಜಾಯ್ ಚಂಡಮಾರುತ ದಿಂದ ಅರಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ನಾಡ ದೋಣಿ ಮೀನುಗಾರರು ಕೂಡ ಸಮುದ್ರಕ್ಕೆ ಇಳಿಯಲು ಅಸಾಧ್ಯವಾಗಿ ಪ್ರಸ್ತುತ ಕರ್ನಾಟಕದಲ್ಲಿ ತಾಜಾ ಮೀನಿನ ಕೊರತೆ ಉಂಟಾಗಿತ್ತು.
ಕರ್ನಾಟಕದಲ್ಲಿ ಜೂನ್ ಒಂದರಿಂದ ಮೀನುಗಾರಿಕೆ ನಿಷೇಧವಿದ್ದರೆ, ಚೆನ್ನೈಯಲ್ಲಿ ಎಪ್ರಿಲ್ 15ರಿಂದ ಮೀನುಗಾರಿಕೆಗೆ ನಿಷೇಧ ಇದ್ದು, ಜೂ. 15ರಂದು ಪುನರಾರಂಭವಾಗಿದೆ.ಚೆನ್ನೈಯಲ್ಲಿ ಮೊದಲ ಸುತ್ತಿನಲ್ಲಿ ವಿವಿಧ ಜಾತಿಯ ಸಾಕಷ್ಟು ಮೀನು ಬಲೆಗೆ ಬಿದ್ದಿವೆ.
ಒಂದೆರಡು ದಿನಗಳಲ್ಲಿ ಚೆನ್ನೈ ಮೀನು ಇಲ್ಲಿನ ಮಾರುಕಟ್ಟೆಗೆ ಬರಲಿದೆ ಎಂದು ಇಲ್ಲಿನ ವ್ಯಾಪಾರಿ ಗಳು ತಿಳಿಸಿದ್ದಾರೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.