ಚಿಟ್ಪಾಡಿ ಪರಿಸರದಲ್ಲಿ ವಾರ ಕಳೆದರೂ ನೀರು ಬಂದಿಲ್ಲ

ಎಲೆಕ್ಷನ್‌ ಮುಗಿದ ರಾತ್ರಿಯೇ ನೀರು ಪೂರೈಕೆ ಬಂದ್‌ ; ಪೋನ್‌ ಕರೆಗೆ ಸಿಗದ ಅಧಿಕಾರಿಗಳು; ಹೈರಾಣಾದ ಜನ

Team Udayavani, May 1, 2019, 6:00 AM IST

2804UDSB2

ಚಿಟ್ಪಾಡಿ ವಾರ್ಡ್‌ನಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ.

ಉಡುಪಿ: “ಬಜೆಯಲ್ಲಿ ನೀರು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೊನ್ನೆ ಎಲೆಕ್ಷನ್‌ ದಿನದ ರಾತ್ರಿವರೆಗೆ ನೀರು ಸರಿಯಾಗಿತ್ತು. ಅನಂತರ ನೀರು ಬರುತ್ತಿಲ್ಲ. ನೀರು ಬಾರದೆ ವಾರ ಮೇಲಾಯಿತು’.

ಇದು ಚಿಟ್ಪಾಡಿ ವಾರ್ಡ್‌ನ ಹಲವೆಡೆ ಕೇಳಿಬಂದ “ನೀರು ದೂರು’. ಇದೇ ವಾರ್ಡ್‌ನ ಭಾಗ್ಯಮಂದಿರ ಪರಿಸರದ ಕೆಲವೆಡೆ ಮೂರು ದಿನಕ್ಕೊಮ್ಮೆ ನೀರು ಬರುತ್ತಿದೆ. ಆದರೆ ಒತ್ತಡವಿಲ್ಲದೆ ಎತ್ತರದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. “ಎಲೆಕ್ಷನ್‌ ನಡೆದ ದಿನದ ಅನಂತರ ಸರಿಯಾಗಿ ನೀರು ಬರುತ್ತಿಲ್ಲ. ಇಲ್ಲಿ ತಗ್ಗು ಪ್ರದೇಶದವರು ನೆಲದಡಿ ಮಾಡಿರುವ ಸಂಪ್‌(ಟ್ಯಾಂಕ್‌) ತುಂಬಿ ಅನಂತರ ಮೇಲೆ ಬರಬೇಕು.

ಹಾಗಾಗಿ ನಮಗೆ ತೊಂದರೆಯಾಗುತ್ತಿದೆ. ಇದು ಕಲ್ಲು ಇರುವ ಪ್ರದೇಶ. ಇಲ್ಲಿ ಒಂದು ಬಾವಿ ಇದೆ. ಅದರಲ್ಲಿಯೂ ಕಲ್ಲು ಬಂತು. ಹಾಗಾಗಿ ಅದು ಪಾಳುಬಿದ್ದಿದೆ’ ಎಂದರು ಸ್ಥಳೀಯ ನಿವಾಸಿ ಗಣೇಶ್‌.

ಇದೇ ಪರಿಸರದಲ್ಲಿರುವ ಗಿರಿಜಾ ಅವರು ಕೂಡ ಕಳೆದ ಕೆಲವು ದಿನಗಳಿಂದ ನೀರು ಸರಿಯಾಗಿ ಬರುತ್ತಿಲ್ಲ ಎಂದು ಅಹವಾಲು ತೋಡಿಕೊಂಡರು. “ಇದುವರೆಗೆ ನಮ್ಮ ಕಡೆಗೆ ಟ್ಯಾಂಕರ್‌ ನೀರು ಬಂದಿಲ್ಲ. ಮುಂದೇನು ಗೊತ್ತಿಲ್ಲ’ ಎಂದು ಈ ಪರಿಸರದ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ವಿಶೇಷ ವೆಂದರೆ ಎರಡು ಪ್ರಮುಖ ರಾಜಕೀಯ ಪಕ್ಷಗಳಿಗೆ ಸೇರಿದ ಅಕ್ಕಪಕ್ಕದ ವಾರ್ಡ್‌ಗಳ ಸದಸ್ಯರದ್ದು ಕೂಡ ಏಕಭಿಪ್ರಾಯ-“ಎಲೆಕ್ಷನ್‌ ಮುಗಿದ ಅನಂತರ ನೀರು ಸರಿಯಾಗಿ ಬರುತ್ತಿಲ್ಲ’ !

ಟ್ಯಾಂಕರ್‌ಗಳಿವೆ ನೀರಿಲ್ಲ
ನಗರಕ್ಕೆ ನೀರು ಪೂರೈಸಲು ಟ್ಯಾಂಕರ್‌ ಒದಗಿಸಲು ಹಲವರು ಮುಂದೆ ಬರುತ್ತಿದ್ದಾರೆ. ಆದರೆ ನಗರದ ಆಸುಪಾಸು ಎಲ್ಲಿಯೂ ನೀರಿಲ್ಲ. ನಾವು ಇಂದ್ರಾಳಿಯ ಒಂದು ಬಾವಿಯಿಂದ ತರುತ್ತಿದ್ದೇವೆ. ಆದರೆ ಅಲ್ಲಿ ಬೇರೆ ಟ್ಯಾಂಕರ್‌ನವರು ಕೂಡ ಬರುತ್ತಾರೆ. ಕನಿಷ್ಠ ಎರಡು ತಾಸು ಕಾದು ನೀರು ತುಂಬಿಸಿಕೊಂಡು ಬರುತ್ತೇವೆ. ಅದು ಕೂಡ ಎಷ್ಟು ಸಮಯ ಸಿಗುತ್ತದೆಯೋ ಗೊತ್ತಿಲ್ಲ ಎನ್ನುತ್ತಾರೆ ಟ್ಯಾಂಕರ್‌ ಚಾಲಕ ಶಿವರುದ್ರಪ್ಪ.

ಯಥೇತ್ಛ ನೀರಿದ್ದರೂ ನಿರ್ಲಕ್ಷ್ಯಕ್ಕೊಳಗಾದ ಬಾವಿ
ಚಿಟ್ಪಾಡಿ ವಾರ್ಡ್‌ನ ಪದ್ಮನಾಭ ನಗರದ ಗದ್ದೆ ಸಾಲಿನಲ್ಲಿ ನಗರಸಭೆಗೆ ಸಂಬಂಧಿಸಿದ ಒಂದು ಬೃಹತ್‌ ಬಾವಿ ಇದೆ. ಕಳೆದ ಹತ್ತಾರು ವರ್ಷಗಳಿಂದ ಇದರಿಂದ ಶುದ್ಧ ನೀರು ಯಥೇತ್ಛವಾಗಿ ದೊರೆಯುತ್ತಿತ್ತು. ಸುಮಾರು 20 ಅಡಿ ಸುತ್ತಳತೆಯ ಈ ಬಾವಿಯಲ್ಲಿ ಈಗಲೂ ಯಥೇತ್ಛವೆನಿಸುವಷ್ಟು ನೀರಿದೆ. ಆದರೆ ಎರಡು ವರ್ಷಗಳಿಂದ ಇಲ್ಲಿ ಬಾವಿ ಇದೆಯೆಂಬುದೇ ಗೊತ್ತಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಹುಲ್ಲು, ಕುರುಚಲು ಗಿಡಗಳು ಇದರ ಸುತ್ತ ಬೆಳೆದಿವೆ. ಇದನ್ನು ತೆರವುಗೊಳಿಸಿದರೆ ಈ ಬಾವಿಯಿಂದ ಬೇಕಾದಷ್ಟು ನೀರು ಪಡೆಯಬಹುದಾಗಿದೆ. ಆದರೆ ನಗರಸಭೆ, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ.

ಈ ಭಾಗಕ್ಕೆ ನೀರು ಪೂರೈಕೆ ಸರಿಯಾಗಿ ಆಗಿಯೇ ಇಲ್ಲ. ವಾರ ಕಳೆದರೂ ನಗರಸಭೆಯ ಯಾರೂ ಪೂರೈಕೆಗೆ ಸ್ಪಂದಿಸುತ್ತಿಲ್ಲ. ಇದರಿಂದ ದಿನವಿಡೀ ನೀರು ಸಂಗ್ರಹಣೆ ಬಗ್ಗೆಯೇ ಜನ ಚಿಂತಿಸುವಂತಾಗಿದೆ.

ವಾರ್ಡಿನವರ ಬೇಡಿಕೆ
– ಇರುವ ಬಾವಿಗಳನ್ನು ದುರಸ್ತಿಗೊಳಿಸಬೇಕು.
– ಟ್ಯಾಂಕರ್‌ ನೀರು ಒದಗಿಸಬೇಕು.
– ಪ್ರಶರ್‌ನಲ್ಲಿ ಒಂದೊಂದೇ ಏರಿಯಾಕ್ಕೆ ನೀರು ಕೊಡುತ್ತಾ ಬರಬೇಕು.
– ನೀರಿಗಾಗಿ ಕರೆ ಮಾಡುವಾಗ ಅಧಿಕಾರಿಗಳು ಕರೆ ಸ್ವೀಕರಿಸಿ ಸ್ಪಂದಿಸಬೇಕು.
– ಬಾವಿಗಳು ಹಾಳಾಗದಂತೆ ನೋಡಿಕೊಳ್ಳಬೇಕು.

ನಗರಸಭೆಯಿಂದ ಸ್ಪಂದನೆ ಇಲ್ಲ
ಕೊಡಪಾನ ಹಿಡಿದುಕೊಂಡು ನಿಮ್ಮ ಮನೆಗೆ ಬರುತ್ತೇವೆ ಎಂದು ಜನರು ಎಚ್ಚರಿಕೆ ನೀಡುತ್ತಿದ್ದಾರೆ. ಅವರಿಗೆ ನೀರು ಕೊಡುವುದು ನಮ್ಮ ಜವಾಬ್ದಾರಿ. ನಾನು ದಿನ ಬೆಳಗ್ಗೆ ಎದ್ದು ನಗರಸಭೆಯ ಅಧಿಕಾರಿಗಳಿಗೆ ಫೋನ್‌ ಮಾಡುತ್ತಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇರುವ ಒಂದು ದೊಡ್ಡ ಬಾವಿಯನ್ನು ಕೂಡ ದುರಸ್ತಿ ಮಾಡಿಲ್ಲ. ಕೆಲವೆಡೆ ಬಾವಿಗಳಿದ್ದರೂ ನೀರಿಲ್ಲ. ರವಿವಾರ ಒಂದೇ ದಿನ 12,000 ಲೀಟರ್‌ನ 4 ಟ್ಯಾಂಕರ್‌ಗಳಲ್ಲಿ ವಿಜಯವೀರ ಸಂಘದವರ ಸಹಕಾರದೊಂದಿಗೆ ವಿತರಿಸಿದ್ದೇನೆ. ವಾರ್ಡ್‌ನ ಹೆಚ್ಚಿನ ಕಡೆಗಳಲ್ಲಿ ನೀರು ಬಾರದೆ 6 ದಿನಗಳಾದವು. ಇಂದಿರಾನಗರಕ್ಕೆ ನೀರು ಪೂರೈಕೆಯಾಗುವಲ್ಲಿ ಗೇಟ್‌ವಾಲ್‌ ಹಾಕದೇ ಸಮಸ್ಯೆ ಹೆಚ್ಚಾಗಿದೆ.
 -ಶ್ರೀಕೃಷ್ಣ ರಾವ್‌ ಕೊಡಂಚ,
ಸದಸ್ಯರು, ಚಿಟ್ಪಾಡಿ ವಾರ್ಡ್‌

ಸಮಸ್ಯೆ ಗಮನಕ್ಕೆ ಬಂದಿದೆ
ಒಂದು ವಾರದಿಂದ ನೀರು ಇರಲಿಲ್ಲ. ರವಿವಾರ ಟ್ಯಾಂಕರ್‌ನಲ್ಲಿ ಬಂತು. ನಮ್ಮ ಮನೆ ಪಕ್ಕದಲ್ಲಿರುವ ವಿಜಯವೀರ ಸಂಘದವರಿಗೆ ನೀರಿನ ಸಮಸ್ಯೆ ತಿಳಿಸಿದೆ. ಅವರು ನಗರಸಭೆ ಸದಸ್ಯರಿಗೆ ತಿಳಿಸಿದರು. ಈಗ ನೀರು ಕೊಡುತ್ತಿದ್ದಾರೆ. ಇನ್ನು ಇದು ಖಾಲಿಯಾದರೆ ಯಾವಾಗ ಸಿಗುತ್ತದೆ ಎಂದು ಗೊತ್ತಿಲ್ಲ. ನಮ್ಮದು ಸ್ವಲ್ಪ ಎತ್ತರದ ಪ್ರದೇಶವಾಗಿದೆ. ನೀರಿನ ಸಮಸ್ಯೆ ಹೆಚ್ಚು.
-ಮುಮ್ತಾಜ್‌,
ಶ್ರೀನಿವಾಸ ನಗರ ನಿವಾಸಿ

ಉದಯವಾಣಿ ಆಗ್ರಹ
ಚಿಟ್ಪಾಡಿ ವಾರ್ಡ್‌ನಲ್ಲಿ ರುವ ಒಂದು ದೊಡ್ಡ ಸರಕಾರಿ ಬಾವಿಯನ್ನು ಬಳಸಿಕೊಳ್ಳಬೇಕು. ಎತ್ತರದ ಪ್ರದೇಶಗಳಿಗೆ ಟ್ಯಾಂಕರ್‌ ನೀರು ಒದಗಿಸಬೇಕು. 3 ದಿನಕ್ಕೊಮ್ಮೆಯಾದರೂ ಎಲ್ಲೆಡೆ ನೀರು ಪೂರೈಕೆ ಮಾಡಬೇಕು. ಗೇಟ್‌ವಾಲ್‌ ಮತ್ತಿತರರು ಪೈಪ್‌ ಲೈನ್‌ ಸಮಸ್ಯೆ ಪರಿಹರಿಸಬೇಕು.

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

Hubli; ಶಾಸಕ ಮುನಿರತ್ನ ಒಬ್ಬ ನಾಲಾಯಕ್, ಅಯೋಗ್ಯ: ಶಾಸಕ ಪ್ರಸಾದ ಅಬ್ಬಯ್ಯ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.