![prahlad-joshi](https://www.udayavani.com/wp-content/uploads/2024/07/prahlad-joshi-415x239.jpg)
ದನದ ಮಾಂಸ ಅಕ್ರಮ ಸಾಗಾಟ: ಕಾಪು ಪೊಲೀಸರಿಂದ ಇಬ್ಬರ ಬಂಧನ
Team Udayavani, Jul 12, 2022, 1:47 AM IST
![ದನದ ಮಾಂಸ ಅಕ್ರಮ ಸಾಗಾಟ: ಕಾಪು ಪೊಲೀಸರಿಂದ ಇಬ್ಬರ ಬಂಧನ](https://www.udayavani.com/wp-content/uploads/2022/07/Kapu-1-620x349.jpg)
ಕಾಪು: ಮಲ್ಲಾರು ಗ್ರಾಮದ ಫಕೀರನಕಟ್ಟೆಯಿಂದ ಮೂಳೂರು ಕಡೆಗೆ ಹೊಂಡಾ ಆಕ್ಟಿವಾ ಸ್ಕೂಟರ್ನಲ್ಲಿ ಮಾರಾಟಕ್ಕಾಗಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿದ್ದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಸ್ಕೂಟರ್ ಸವಾರ ಹುಸೇನಬ್ಬ ಮತ್ತು ಸಹ ಸವಾರ ಶಂಶುದ್ಧೀನ್ ಬಂಧಿತ ಆರೋಪಿಗಳು.
ಕಾಪು ಎಸೈ ಶ್ರೀಶೈಲ ಮುರಗೋಡ ನೇತೃತ್ವದ ಪೊಲೀಸರ ತಂಡವು ಮಲ್ಲಾರು ಕೋಟೆ ರಸ್ತೆಯ ರೈಲ್ವೇ ಸೇತುವೆ ಬಳಿ ವಾಹನಗಳನ್ನು ಪರಿಶೀಲಿಸುತ್ತಿರುವಾಗ ಫಕೀರನಕಟ್ಟೆ ಕಡೆಯಿಂದ ಬಂದ ಸ್ಕೂಟರ್ನ ಮುಂಭಾಗದಲ್ಲಿ ಹಳದಿ ಮತ್ತು ಹಸುರು ಬಣ್ಣದ ಪಾಲಿಥಿನ್ ಚೀಲದಲ್ಲಿ 15 ಕೆ.ಜಿ.ಯಷ್ಟು ದನದ ಮಾಂಸವನ್ನು ಮಾರಾಟಕ್ಕಾಗಿ ಕೊಂಡೊಯ್ಯುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಆರೋಪಿಗಳು ಯಾವುದೇ ಪರವಾನಿಗೆಯಿಲ್ಲದೇ ಬೀದಿ ಬದಿಯಲ್ಲಿದ್ದ ದನವನ್ನು ಕಳವು ಮಾಡಿ, ಹಾಡಿಯಲ್ಲಿ ಮಾಂಸ ಮಾಡಿ ಮನೆ ಮನೆಗೆ ಮಾರಾಟ ಮಾಡುವುದಾಗಿ ಬಾಯ್ಬಿಟ್ಟಿದ್ದರು.
ಆರೋಪಿಗಳು ನೀಡಿರುವ ಮಾಹಿತಿಯಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
![prahlad-joshi](https://www.udayavani.com/wp-content/uploads/2024/07/prahlad-joshi-415x239.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kota-Shrinivas](https://www.udayavani.com/wp-content/uploads/2024/07/Kota-Shrinivas-150x90.jpg)
Udupi: ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
![Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ](https://www.udayavani.com/wp-content/uploads/2024/07/Udupi-DC-Dr.-vidya-kumari-1-150x106.jpg)
Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ
![Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು](https://www.udayavani.com/wp-content/uploads/2024/07/HEBRi-1-150x93.jpg)
Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು
![Yaakshagana-Artist](https://www.udayavani.com/wp-content/uploads/2024/07/Yaakshagana-Artist-150x90.jpg)
Kumble Shridhar Rao; ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ನಿಧನ
![Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್ ನಿಲ್ಲಿಸಿ ಹೋದ ಚಾಲಕ!](https://www.udayavani.com/wp-content/uploads/2024/07/BUSAAA-150x90.jpg)
Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್ ನಿಲ್ಲಿಸಿ ಹೋದ ಚಾಲಕ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.