ಒಳಚರಂಡಿ ಕಾಮಗಾರಿಗಳಿಂದ ರಸ್ತೆ ಹಾಳು


Team Udayavani, Jun 23, 2018, 6:00 AM IST

2206kdlm11ph1.jpg

ಕುಂದಾಪುರ: ವಾರ್ಡ್‌ಗಳ ಪೈಕಿ ಅತಿ ಹೆಚ್ಚು, ಅತಿ ದೊಡ್ಡ ತೋಡುಗಳಿರುವ ವಾರ್ಡು ಬಹುಶಃ ಚಿಕ್ಕನ್‌ಸಾಲ್‌ ಎಡಬದಿ ವಾರ್ಡ್‌ ಇರಬಹುದು ಎನಿಸುತ್ತಿದೆ. ಈ ವಾರ್ಡಿಗೆ ಭೇಟಿ ಕೊಟ್ಟಾಗ ಕಾಣಿಸುತ್ತಿದ್ದುದು ಹರಿಯುತ್ತಿದ್ದ ತೋಡುಗಳೇ. ಸದಸ್ಯರ ಮಾತು, ಈ ಭಾಗದ ಜನರ ಮಾತು ಕೂಡಾ ಇದಕ್ಕೆ ಪೂರಕವಾಗಿತ್ತು. ಸುಮಾರು 800 ಮತದಾರರು, 240ರಷ್ಟು  ಮನೆಗಳಿರುವ ವಾರ್ಡು ಇದು.

ಮಳೆಗಾಲದ ಸಿದ್ಧತೆ ಆಗಿದೆ
ಮಳೆಗಾಲಕ್ಕೆ  ಮುನ್ನ ಚರಂಡಿಗಳ ದುರಸ್ತಿಯಾಗಿದೆ. ಹೂಳೆತ್ತಲಾಗಿದೆ. ಆದರೆ ಅನೇಕ ಕಡೆ ಚರಂಡಿಯೇ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿರುವುದು ದೊಡ್ಡ ತೋಡಿಗೆ ಸ್ಲಾಬ್‌ ಹಾಕಿ ರಸ್ತೆಯನ್ನಾಗಿ ಮಾಡಿಕೊಡಿ ಎನ್ನುವುದು. ಆದರೆ ಅದಕ್ಕೆ ಅನುದಾನದ ಕೊರತೆ ಇರುವ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಗದ್ದೆಬೈಲಿನ ಬದಿ ತೋಡುಗಳ ಕಾಮಗಾರಿಗೆ ಅಂದಿನಿಂದ ಇಂದಿನವರೆಗೂ ಜನರ ಬೇಡಿಕೆ ಇರುವುದು ಪೂರೈಕೆಯಾಗಲೇ ಇಲ್ಲ.

ಒಳಚರಂಡಿ ಅವಸ್ಥೆ
ಕಾಂಕ್ರಿಟ್‌ ರಸ್ತೆ ಆದ ಬಳಿಕ ಒಳಚರಂಡಿ ಕಾಮಗಾರಿ ಮಾಡಿದ ಕಾರಣ ರಸ್ತೆಯ ಅಂದವೆಲ್ಲ ಹಾಳಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಂತೆ ಕಾಣುವ ತೇಪೆ ಕಾರ್ಯಗಳು ವಾಹನಗಳ ಸುಗಮ ಓಡಾಟಕ್ಕೆ ತಡೆಯೊಡ್ಡಿವೆ. ಕೆಲವೆಡೆ ಕಂದಕದಂತೆ ರಸ್ತೆ ಬಾಯಿಬಿಟ್ಟು ನಿಂತಿದೆ.

ಪರ್ಯಾಯ ರಸ್ತೆ
ಚಿಕ್ಕಮ್ಮನ ಸಾಲ್‌ ರಸ್ತೆಗೆ ಪರ್ಯಾಯ ವಾಗಿ ರಸ್ತೆ ಮಾಡಬೇಕೆಂದು ಬಂದ ಬೇಡಿಕೆಯನ್ವಯ ಇಲ್ಲಿ ಬಾದ್‌ಶಾ ರಸ್ತೆಮೂಲಕ ಸೇತುವೆ ನಿರ್ಮಾಣ ಮಾಡಿ ಗದ್ದೆಯಲ್ಲಿ ರಸ್ತೆ ಮಾಡಲಾಗಿದೆ. ಆದರೆ ಅದಕ್ಕೆ ಕಾಂಕ್ರೀಟ್‌ ಹಾಕುವ ಕಾರ್ಯವಾಗಲೀ, ಇಂಟರ್‌ಲಾಕ್‌ ಅಳವಡಿಸುವ ಕಾರ್ಯ ಆಗಲಿಲ್ಲ. ಕಾರಣ ಮತ್ತದೇ ಅನುದಾನದ ಕೊರತೆ. 

ಇಂಟರ್‌ಲಾಕ್‌ ಕಾಮಗಾರಿ
ಜೈನ್‌ಹೋಟೆಲ್‌ ಕೆಳಗಡೆಯಿಂದ ರಾಮಕೃಷ್ಣ ಅವರ ಮನೆವರೆಗೆ ಚರಂಡಿ ರಚಿಸಿ ಇಂಟರ್‌ಲಾಕ್‌ ಹಾಕಲಾಗಿದೆ. ಹೆಲೆನ್‌ ಡಿಸೋಜಾ ಅವರ ಮನೆಯಿಂದ ರಾಮಕೃಷ್ಣ ಅವರ ಮನೆವರೆಗೆ ಇಂಟರ್‌ಲಾಕ್‌ ಅಳವಡಿಸಲಾಗಿದ್ದು ನಾರಾಯಣ ನಾಯ್ಕ ಅವರ ಮನೆಯಿಂದ  ನಾಗಬನ ರಸ್ತೆಗೆ ಡಾಮರು ಹಾಕಲಾಗಿದೆ. ನಾರಾಯಣ ನಾಯ್ಕ ಅವರ ಮನೆಯ ನಂತರ ಚರಂಡಿಗೆ ಸ್ಲಾಬ್‌ ಹಾಕಬೇಕೆಂಬ ಬೇಡಿಕೆ ಇದೆ. ಹಳೆಕೋಟೆ ಅಂಗನವಾಡಿ ಯನ್ನು ದುರಸ್ತಿ ಮಾಡಲಾಗಿದೆ. ಗದ್ದೆಬೈಲಿ ನಲ್ಲಿ ಇಂಟರ್‌ಲಾಕ್‌ ಹಾಕಿ ರಸ್ತೆ ಮಾಡಲು ಸಿದ್ಧತೆ ನಡೆದಿದೆ. ಕಾಮಗಾರಿ ನಡೆದಿಲ್ಲ. 

ಬಾಕಿ ಇಲ್ಲ
ಮೊಗೇರಭವನ, ಮೈಲಾರೇಶ್ವರ ದೇವಸ್ಥಾನ, ರಾಯಲ್‌ ಸಭಾಭವನ ಬಳಿ ಚರಂಡಿ ಕಾಮಗಾರಿ ಮಾಡಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಗ್ಯಾರೇಜ್‌ ನಂತರ ಸ್ವಲ್ಪ ಸಮಸ್ಯೆ ಇದೆ.                              
– ರಾಧಾಕೃಷ್ಣ, ಸ್ಥಳೀಯರು

2 ಕೋ. ರೂ. ಅನುದಾನ ಬೇಕು
ನಮ್ಮ ವಾರ್ಡಿನಲ್ಲಿರುವ ತೋಡುಗಳಿಗೆ ಮುಚ್ಚಿಗೆ ಹಾಕಿ ರಸ್ತೆಯಾಗಿಸಬೇಕಿದೆ. ಗದ್ದೆಬೈಲಿನಲ್ಲಿ ರಸ್ತೆಗೆ ಇಂಟರ್‌ಲಾಕ್‌ ಹಾಕಬೇಕಿದೆ. ಬೇಡಿಕೆ ಇರುವ ಎಲ್ಲ ಕಾಮಗಾರಿ ಮಾಡಬೇಕಾದರೆ ಇನ್ನೂ 2 ಕೋ.ರೂ. ಅನುದಾನ ಬೇಕು. ಈ ಬಾರಿ 50ರಿಂದ 60 ಲಕ್ಷ ರೂ.ಗಳ ಕಾಮಗಾರಿ ಮಾಡಲಾಗಿದೆ. 
– ಶಕುಂತಲಾ ಗುಲ್ವಾಡಿ, ಸದಸ್ಯರು, ಪುರಸಭೆ 

ದೀಪದ ಬೆಳಕಿಲ್ಲ
ಬೀದಿ ದೀಪ ಸರಿ ಇರುವುದಿಲ್ಲ. ಚರಂಡಿಯನ್ನು ಮಳೆಗಾಲಕ್ಕೆ ಮೊದಲೇ ದುರಸ್ತಿ ಮಾಡಲಾಗಿದೆ. ಹಾಗಾಗಿ ನೀರು ಹರಿಯುವ ಸಮಸ್ಯೆ ಇಲ್ಲ.
– ಕೃಷ್ಣಮೂರ್ತಿ, ಸ್ಥಳೀಯರು

ಅನುದಾನ ಕೊರತೆ
ಹಳೆಯ ಆಡಳಿತ ಮಾಡಿದ ಕಾಮಗಾರಿಗಳಿವೆ. ಈ ಆಡಳಿತದ ಅವಧಿಯಲ್ಲಿ ಅಂತಹ ನಿರೀಕ್ಷಿತ ಕಾಮಗಾರಿ ನಡೆಯುವಷ್ಟು ಅನುದಾನ ಬಂದಂತಿಲ್ಲ. ಮೂಲಸೌಕರ್ಯ ಪರವಾಗಿಲ್ಲ. ಬಂದ ಅನುದಾನದ ಬಳಕೆಯಾಗಿದೆ. ಹೊಸ ಅನುದಾನ ಬಂದಿಲ್ಲ.
– ಅರುಣ್‌ ಕುಮಾರ್‌ ಬಾಣ, ಸ್ಥಳೀಯರು 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.