ಈಶ್ವರನಗರ ಕೆಸರು ರಸ್ತೆ: ನಿತ್ಯ ಅಪಘಾತ
Team Udayavani, Jun 21, 2019, 5:53 AM IST
ಉಡುಪಿ: ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿರುವ(ಸದ್ಯ ಸ್ಥಗಿತಗೊಂಡಿರುವ) ಉಡುಪಿ-ಪರ್ಕಳ ಹೆದ್ದಾರಿಯ ಮಣಿಪಾಲ ಈಶ್ವರನಗರ ಇಳಿಜಾರಿನಲ್ಲಿ ಭಾರೀ ಕೆಸರು ಹರಡಿಕೊಂಡಿರುವ ಪರಿಣಾಮ ಇಲ್ಲಿ ದಿನನಿತ್ಯವೆಂಬಂತೆ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದೆ. ಮಳೆ ನೀರು ಹರಿಯುವ ಚರಂಡಿಯಲ್ಲಿಯೂ ಮಣ್ಣು ತುಂಬಿದೆ. ಇದರಿಂದಾಗಿ ಮಳೆನೀರು ಮತ್ತು ಕೆಸರಿನಿಂದಾಗಿ ರಸ್ತೆ ಭಾರೀ ಅಪಾಯಕಾರಿಯಾಗಿ ಪರಿಣಮಿಸಿದೆ. ಈಶ್ವರನಗರಿಂದ ಪರ್ಕಳ ಕಡೆ ಹೋಗುವಾಗ ಸಿಗುವ ಈ ಇಳಿಜಾರಿನಲ್ಲಿ ವಾಹನಗಳನ್ನು ಎಷ್ಟು ನಿಧಾನಕ್ಕೆ ಓಡಿಸಿದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದು ವಾಹನ ನಿಬಿಢ ರಸ್ತೆ ಮಾತ್ರವಲ್ಲದೆ ಈ ಭಾಗದಲ್ಲಿ ವಾಹನಗಳ ವೇಗವೂ ಹೆಚ್ಚು. ಇದರಿಂದಾಗಿ ಮುಖ್ಯವಾಗಿ ದ್ವಿಚಕ್ರ ವಾಹನ ಚಾಲಕರು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ವಾರದ ಹಿಂದೆ ಶಾಸಕ ಕೆ.ರಘುಪತಿ ಭಟ್ ಅವರು ಈ ರಸ್ತೆಯ ಹಲವೆಡೆ ಪರಿವೀಕ್ಷಣೆ ನಡೆಸಿ ಮಳೆಗಾಲದ ಹಿನ್ನೆಲೆಯಲ್ಲಿ ಸೂಕ್ತ ತುರ್ತು ಕಾಮಗಾರಿ ನಡೆಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಅನಂತರ ಕೆಲವು ಕಡೆ ಮಾತ್ರ ತುರ್ತು ಕಾಮಗಾರಿ ನಡೆಸಿ ಮಳೆ ನೀರು ಹರಿಯಲು ತಾತ್ಕಾಲಿಕ ಚರಂಡಿ ಮಾಡಿಕೊಡಲಾಗಿದೆ. ಇನ್ನು ಕೆಲವೆಡೆ ಕೆಸರುಮಯ ರಸ್ತೆಗೆ ಜಲ್ಲಿಪುಡಿ ಮಿಶ್ರಿತ ತಾತ್ಕಾಲಿಕ ಕಾಂಕ್ರೀಟ್ ಹಾಕಲಾಗಿದೆ. ಆದರೆ ಈಶ್ವರನಗರದಲ್ಲಿ ಕೆಸರು ರಸ್ತೆ ಹಾಗೆಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thumbe: ಅಗೆದಲ್ಲಿ ಕಡೆಗೂ ಡಾಮರು
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್ ಜಡ್ಜ್ ಗೆ ಸುಪ್ರೀಂ ಕೋರ್ಟ್ ತರಾಟೆ
Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್ ತಯಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.