
ಪೆಟ್ರೋಲ್ ಬಂಕ್ಗಾಗಿ ತೆರವುಗೊಂಡ ಮರಗಳ ಸ್ಥಳಾಂತರ; ಪೋಷಣೆ
Team Udayavani, Nov 21, 2019, 5:46 AM IST

ಕಾಪು : ಕೊಪ್ಪಲಂಗಡಿ ಬಳಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಪೆಟ್ರೋಲ್ ಬಂಕ್ಗೆ ದಾರಿ ಮಾಡಿಕೊಳ್ಳುವ ಉದ್ದೇಶದಿಂದ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದು 18 ಮರಗಳನ್ನು ತೆರವುಗೊಳಿಸಲಾಗಿದ್ದು, ಇದರಲ್ಲಿ 11 ಮರಗಳನ್ನು ಸ್ಥಳಾಂತರ ಮಾಡಿ ನೆಟ್ಟು ಪೋಷಿಸುವ ಪ್ರಯತ್ನವೂ ನಡೆಯುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಪು – ಮೂಳೂರು ನಡುವಿನ ಕೊಪ್ಪಲಂಗಡಿಯಲ್ಲಿ ಭಾರತ್ ಪೆಟ್ರೋಲಿಯಂನ ಹೊಸ ಪೆಟ್ರೋಲ್ ಬಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಹೆದ್ದಾರಿಯಿಂದ ಪೆಟ್ರೋಲ್ ಬಂಕ್ಗೆ ಬರಲು ಎರಡೂ ಬದಿಯಲ್ಲಿ ಹೊಸ ಸರ್ವೀಸ್ ರಸ್ತೆ ನಿರ್ಮಿಸಲಾಗುತ್ತಿದ್ದು, ಅದಕ್ಕಾಗಿ ಹೆದ್ದಾರಿ ಬದಿಯ 18 ಗಿಡಗಳನ್ನು ತೆರವುಗೊಳಿಸಲಾಗಿತ್ತು.
18 ರಲ್ಲಿ 11 ಗಿಡಗಳ ಸ್ಥಳಾಂತರ
ತೆರವುಗೊಳಿಸಲಾದ 18 ಮರಗಳ ಪೈಕಿ ಇದರಲ್ಲಿ 11 ಗಿಡಗಳನ್ನು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಉಪ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಅರಣ್ಯ ರಕ್ಷಕ ಮಂಜುನಾಥ್ ನಾಯ್ಕ ಅವರ ಮಾರ್ಗದರ್ಶನದಂತೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಿಸಿದ ಗಿಡಗಳನ್ನು ಬಿ.ಪಿ.ಸಿಎಲ್ನ ಮೂಲಕವಾಗಿ ಅರಣ್ಯ ಇಲಾಖೆಯ ಮುತುವರ್ಜಿಯಡಿ ಪೋಷಿಸಲಾಗುತ್ತಿದೆ.
18 ಗಿಡಕ್ಕೆ 2.78 ಲಕ್ಷ ರೂ.
ಪೆಟ್ರೋಲ್ ಪಂಪ್ ನಿರ್ಮಾಣ ಪೂರ್ವದಲ್ಲಿ ತೆರವುಗೊಳಿಸಿರುವ 18 ಗಿಡಗಳಿಗೆ ಇಲಾಖೆ ಸೂಚಿಸಿದಂತೆ ಜಿಎಸ್ಟಿ ಮೊತ್ತವೂ ಸೇರಿ 2.78 ಲಕ್ಷ ರೂ. ಹಣವನ್ನು ಇಲಾಖೆಯ ಖಾತೆಗೆ ಜಮಾವಣೆ ಮಾಡಲಾಗಿದೆ. ಉಳಿದಂತೆ ನೆಟ್ಟ ಗಿಡಗಳು ಜೀವಗೊಳ್ಳುವವರೆಗೂ ಪ್ರತೀ ದಿನ ನೀರುಣಿಸುವ ಮತ್ತು ಅದರ ಆರೈಕೆ ಮಾಡುವ ಜನವಾಬ್ದಾರಿಯನ್ನೂ ಪೆಟ್ರೋಲ್ ಕಂಪೆನಿಯ ಸುಪರ್ದಿಗೆ ನೀಡಲಾಗಿದೆ.
ಇಲಾಖೆಯ ನಿರ್ದೇಶನದಂತೆ ಗಿಡಗಳ ಪೋಷಣೆಗೆ ಕ್ರಮ
ಕೊಪ್ಪಲಂಗಡಿಯಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕಾಗಿ ತೆರವುಗೊಳಿಸಿರುವ ಮರಗಳ ಪೈಕಿ 11 ಮರಗಳಿಗೆ ಕಳೆದ 15 ದಿನಗಳಿಂದ ನಿರಂತರವಾಗಿ ಟ್ಯಾಂಕರ್ ಮೂಲಕವಾಗಿ ನೀರು ತಂದು ಪೂರೈಸಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ, ಬಿಪಿಸಿಎಲ್ ಕಂಪೆನಿಯೇ ಈ ಗಿಡಗಳನ್ನು ಪೋಷಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಪ್ರತೀ ದಿನ ಅರಣ್ಯ ರಕ್ಷಕರು ಆಗಮಿಸಿ, ವಿವಿಧ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಕೆಲವು ಗಿಡಗಳು ಈಗಾಗಲೇ ಚಿಗುರೊಡೆದಿದ್ದು, ಉಳಿದ ಗಿಡಗಳೂ ಚಿಗುರೊಡೆಯುವ ನಿರೀಕ್ಷೆಯಿದೆ.
-ರೋಷನ್ ಕುಮಾರ್,
ಪೆಟ್ರೋಲ್ ಬಂಕ್ ನಿರ್ಮಾಣ ಕಾಮಗಾರಿ ಮೇಲುಸ್ತುವಾರಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.