“ಕಣ್ಣಿನ ಡಾಕ್ಟರ್‌’ ಡಾ| ಕಿದಿಯೂರು ಗುರುರಾಜ ಭಾಗವತ್‌ ಇನ್ನಿಲ್ಲ


Team Udayavani, Apr 10, 2017, 4:01 PM IST

bhagavat.jpg

ಉಡುಪಿ: “ಕಣ್ಣಿನ ಡಾಕ್ಟರು’ ಎಂದು ಪ್ರಸಿದ್ಧರಾದ ಆಯುರ್ವೇದ ಚಿಕಿತ್ಸಕ, ಸೇವಾದೃಷ್ಟಿಯ ವೈದ್ಯ ಅಂಬಲಪಾಡಿಯ ಡಾ| ಕಿದಿಯೂರು ಗುರುರಾಜ ಭಾಗವತ್‌ (82) ಎ. 8ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ನಾಲ್ವರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. 

ದೇಶ-ವಿದೇಶಗಳ ರೋಗಿಗಳಿಗೆ ಚಿಕಿತ್ಸೆ
ಪರಂಪರಾಗತ ಆಯುರ್ವೇದ ಚಿಕಿತ್ಸಕರ ಕುಟುಂಬದಿಂದ ಬಂದ ಗುರುರಾಜ ಭಾಗವತರು ಶಾಸ್ತ್ರೀಯ ಆಯುರ್ವೇದ ಶಿಕ್ಷಣ ಪಡೆಯದಿದ್ದರೂ ತಮ್ಮ ಪೂರ್ವಿಕರ ಚಿಕಿತ್ಸಾ ಪರಂಪರೆಯ ರೋಗನಿದಾನ ಕ್ರಮವನ್ನು ಸ್ವಪ್ರಯತ್ನದಿಂದ ಕಲಿತರು. ಚಿಕಿತ್ಸಾನುಭವದ ಆಧಾರದಲ್ಲಿ ತೈಲ, ಲೇಹ್ಯ, ಭಸ್ಮ, ಚೂರ್ಣ ತಯಾರಿಕೆಯೊಂದಿಗೆ ಹಲವು ಚಿಕಿತ್ಸಾ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ಅವಿಭಜಿತ ದ.ಕ. ಜಿಲ್ಲೆಯಲ್ಲದೆ ಬೆಂಗಳೂರು, ಬಳ್ಳಾರಿ, ಮೈಸೂರು, ಧಾರವಾಡ, ಕೋಲಾರ ಹೀಗೆ ರಾಜ್ಯದ ನಾನಾ ಭಾಗಗಳಿಂದ, ಮುಂಬಯಿ, ಕೇರಳ, ಚೆನ್ನೈ ಮೊದಲಾದ ಹೊರ ರಾಜ್ಯಗಳಿಂದ, ಅಮೆರಿಕ, ಆಸ್ಟ್ರೇಲಿಯ, ಸಿಂಗಾಪುರ ಮೊದಲಾದ ರಾಷ್ಟ್ರಗಳಿಂದ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ವಿವಿಧ ರಾಷ್ಟ್ರಗಳ ಸಾವಿರಾರು ದಂಪತಿಗಳಿಗೆ ಸಂತಾನಫ‌ಲ ಚಿಕಿತ್ಸೆ ನೀಡಿರುವ ಹೆಗ್ಗಳಿಕೆ ಅವರದು. 

ಸೇವಾದೃಷ್ಟಿಯ ವೈದ್ಯ
ಕಣ್ಣು, ಸಂತಾನ ಮಾತ್ರವಲ್ಲದೆ ಸಂಧಿಶೂಲ, ಟೈಫಾಯ್ಡ, ಕ್ಯಾನ್ಸರ್‌, ಮನೋದೈಹಿಕ ಕಾಯಿಲೆಗಳಿಗೂ ಚಿಕಿತ್ಸೆ ನೀಡುತ್ತಿದ್ದ ಭಾಗವತರು “ಆಪರೇಶನ್‌ ಇಲ್ಲದೆ ಚಿಕಿತ್ಸೆ’ ನೀಡುವ ಸುಲಭ ಲಭ್ಯ ವೈದ್ಯರಾಗಿ, ಸೇವಾದೃಷ್ಟಿಯ ಜನಪರ ವೈದ್ಯರಾಗಿ ಮನೆಮಾತಾಗಿದ್ದರು. 

ಗ್ರಂಥರಚನೆ, ಲೇಖನ
1986ರಿಂದ ಹಲವೆಡೆ ನೇತ್ರ ಚಿಕಿತ್ಸಾ ಶಿಬಿರಗಳನ್ನು, ಸಂತಾನ ಚಿಕಿತ್ಸಾ-ಸಲಹಾ ಶಿಬಿರಗಳನ್ನು ನಡೆಸಿದ್ದ ಭಾಗವತರು ಆಯುರ್ವೇದ ವಿದ್ಯಾರ್ಥಿಗಳಿಗಾಗಿ “ದ್ರವ್ಯಗುಣ ಸಾರಸಂಗ್ರಹ’, ನವವಿವಾಹಿತರಿಗೆ “ಸ್ತ್ರೀ ಪುರುಷ ಸ್ವಾಸ್ಥ್ಯ ಚಿಂತನ’ ಕೃತಿಗಳನ್ನು ಪ್ರಕಟಿಸಿದ್ದರು. ಹಲವು ಪತ್ರಿಕೆಗಳಲ್ಲಿ ನೇತ್ರ ಚಿಕಿತ್ಸೆ, ಸಂತಾನಫ‌ಲ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವ ಲೇಖನಗಳನ್ನು ಬರೆದಿದ್ದರು. 

ವಿವಿಧ ಪುರಸ್ಕಾರಗಳು
ಆಯುರ್ವೇದ ಚಿಕಿತ್ಸಾ ಪರಿಷತ್ತು, ಸಾರಸ್ವತ ಮಹಾವಿದ್ಯಾಲಯ ಮೊದಲಾದ ಸಂಘ-ಸಂಸ್ಥೆಗಳು ಭಾಗವತರಿಗೆ “ಧನ್ವಂತರಿ ಪುರಸ್ಕಾರ’, “ನೇತ್ರ ಚಿಕಿತ್ಸಾ ದುರಂಧರ’, “ಸದ್ವೆ„ದ್ಯ ಭೂಷಣ’, “ನೇತ್ರ ದೀಪಿಕಾ’, “ಆಯುರ್ವೇದ ಭಾಸ್ಕರ’ ಮೊದಲಾದ ಪ್ರಶಸ್ತಿ ನೀಡಿದ್ದವು. ಉದ್ಯಮಿ ಡಾ| ಜಿ. ಶಂಕರ್‌, ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಆಚಾರ್ಯ, ಬಳಕೆದಾರರ ವೇದಿಕೆ ಸಂಚಾಲಕ ಕೆ. ದಾಮೋದರ ಐತಾಳ್‌ ಮೊದಲಾದವರು ಶ್ರದ್ಧಾಂಜಲಿ ಸಲ್ಲಿಸಿದರು. ಸಾಹಿತಿ ಡಾ| ನಾ. ಮೊಗಸಾಲೆ ಸಂತಾಪ ಸೂಚಿಸಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.