ಉಡುಪಿಗೆ ಬಂದು, ಉಡುಪಿಯಿಂದಲೇ ಹೊರಡುವ “ರೈಲು ಭಾಗ್ಯ’

ಕೊಂಕಣ ರೈಲ್ವೇ ಇತಿಹಾಸದಲ್ಲಿ ಮೊದಲ ಬಾರಿಗೆ ಸೇವೆ

Team Udayavani, Feb 29, 2020, 5:23 AM IST

Konkan-Railway

ಉಡುಪಿ: ಕೊಂಕಣ ರೈಲ್ವೇ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ರೈಲು ಸೇವೆ ಉಡುಪಿ ರೈಲ್ವೇ ನಿಲ್ದಾಣಕ್ಕೆ ತಲುಪಿ, ಉಡುಪಿಯಿಂದಲೇ ಹಿಂದಿರುಗಲಿದೆ.

ಹೋಳಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಪಶ್ಚಿಮ ರೈಲ್ವೇ ಬಾಂದ್ರಾದಿಂದ ಮಂಗಳೂರು ಜಂಕ್ಷನ್‌ವರೆಗೆ ವಿಶೇಷ ರೈಲುಗಳನ್ನು ಕೊಂಕಣ ರೈಲ್ವೇ ಸಹಕಾರದಲ್ಲಿ ಓಡಿಸುತ್ತಿತ್ತು. ಚಳಿಗಾಲದಲ್ಲಿಯೂ, ಬೇಸಗೆಯಲ್ಲಿಯೂ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಈ ಬಾರಿ ಪಶ್ಚಿಮ ರೈಲ್ವೇ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರು (ಸಿಪಿಟಿಎಂ) ಕೇಳಿದಾಗ ಮಂಗಳೂರು ಜಂಕ್ಷನ್‌ನಲ್ಲಿ ಸ್ಥಳಾಭಾವ ತೋರಿಬಂತು. ರಾತ್ರಿ 9.40ರೊಳಗೆ ತೋಕೂರು ರೈಲ್ವೇ ನಿಲ್ದಾಣವನ್ನು ಬಿಟ್ಟು ಕೊಡಬೇಕು ಎಂಬ ಸಮಯ ನಿರ್ಬಂಧವನ್ನೂ ಹೇಳಿದರು ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಪಣಂಬೂರು ಮತ್ತು ಜೋಕಟ್ಟೆ ನಡುವೆ ಹಳಿ ದ್ವಿಗುಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬಾಂದ್ರಾದಿಂದ ಹೊರಡುವ ವಿಶೇಷ ರೈಲನ್ನು ಉಡುಪಿ ನಿಲ್ದಾಣದವರೆಗೆ ಓಡಿಸಿ ಅಲ್ಲಿಂದಲೇ ಬಾಂದ್ರಾಕ್ಕೆ ವಾಪಸಾಗುವ ಸೇವೆಯನ್ನು ಪಶ್ಚಿಮ ರೈಲ್ವೇ ನಿರ್ಧರಿಸಿ ಈಗ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಮುಂಬಯಿ ಬಾಂದ್ರಾದಿಂದ ಉಡುಪಿ, ಮಂಗಳೂರಿಗೆ ರೈಲು ಸೇವೆಯನ್ನು ಆರಂಭಿಸಬೇಕೆಂದು ರೈಲ್ವೇ ಯಾತ್ರಿ ಸಂಘದವರು ಆಗಾಗ ಮನವಿ ಮಾಡುತ್ತಲೇ ಇದ್ದರು. ಇದಕ್ಕೆ ಪೂರಕವೆಂಬಂತೆ ಉಡುಪಿಗೆ ಬಂದು ಉಡುಪಿಯಿಂದಲೇ ಹಿಂದಿರುಗುವ ಸೇವೆ ಒದಗಿಬಂದಿದೆ. ಪ್ರಯಾಣಿಕ ರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯಿಂದಲೇ ಖಾಯಂ ಆಗಿ ಓಡಾಡುವ ರೈಲುಗಳು ಆರಂಭವಾಗುವ ಸಾಧ್ಯತೆ ಇದೆ. ಎಪ್ರಿಲ್‌/ ಮೇಯಲ್ಲಿ ಬೇಸಗೆ ವಿಶೇಷ ರೈಲು ಬಾಂದ್ರಾದಿಂದ ಬರಲಿದೆ. ಆದರೆ ಇದು ಮಂಗಳೂರು ಜಂಕ್ಷನ್‌ವರೆಗೆ ಹೋಗಲಿದೆಯೋ? ಉಡುಪಿಗೆ ಬಂದು ವಾಪಸಾಗಲಿದೆಯೋ ಎಂಬುದನ್ನು ಈಗಲೇ ಹೇಳಲಾಗದು.

ಪ್ರಸ್ತುತ ಮಾ. 8 ಮತ್ತು ಮಾ. 10ರ ರಾತ್ರಿ 11.55ಕ್ಕೆ ಬಾಂದ್ರಾದಿಂದ ಹೊರಡುವ ರೈಲು (09009/11) ಮರುದಿನ ಸಂಜೆ 6ಕ್ಕೆ ಉಡುಪಿ ನಿಲ್ದಾಣವನ್ನು ತಲುಪುತ್ತದೆ. ಉಡುಪಿಯಿಂದ ಮಾ. 9 ಮತ್ತು 11ರ ರಾತ್ರಿ 7 ಗಂಟೆಗೆ ಹೊರಡುವ ವಿಶೇಷ ರೈಲು (09012/10) ಮರುದಿನ ಅಪರಾಹ್ನ 3ಕ್ಕೆ / 2.35ಕ್ಕೆ ಬಾಂದ್ರಾ ತಲುಪುತ್ತದೆ.
ಒಂದು ರೈಲಿನಲ್ಲಿ (09011/12) ಎರಡು ಟಯರು ಹವಾನಿಯಂತ್ರಿತ 4 ಕೋಚ್‌, ಮೂರು ಟಯರುಗಳ ಹವಾನಿಯಂತ್ರಿತ 8 ಕೋಚ್‌, ಹವಾನಿಯಂತ್ರಿತ ಚೆಯರ್‌ ಕಾರ್‌ 5 ಕೋಚ್‌, ಜನರೇಟರ್‌ ಕಾರು 2 ಕೋಚುಗಳಿರುತ್ತವೆ. ಇನ್ನೊಂದು ರೈಲಿನಲ್ಲಿ (09009/10) ಎರಡು ಟಯರುಗಳ ಹವಾನಿಯಂತ್ರಿತ 1 ಕೋಚ್‌, ಮೂರು ಟಯರುಗಳ ಹವಾನಿಯಂತ್ರಿತ 5 ಕೋಚ್‌, ಸ್ಲಿàಪರ್‌ 10 ಕೋಚ್‌, ಜನರಲ್‌ 3 ಕೋಚ್‌, ಪಾಂಟ್ರಿ ಕಾರ್‌ 1, ಜನರೇಟರ್‌ ಕಾರು 2 ಕೋಚುಗಳಿರುತ್ತವೆ.

ಕುಂದಾಪುರ, ಬೈಂದೂರು, ಭಟ್ಕಳ, ಮುಡೇìಶ್ವರ, ಕುಮಟಾ, ಕಾರವಾರ, ಮಡಗಾಂವ್‌ ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಕೊಂಕಣ ರೈಲ್ವೇ ಕೊನೆಯಾಗುವ ರೋಹಾದಿಂದ ಪನ್ವೇಲ್‌, ವಸಾಯಿರೋಡ್‌, ಬೊರಿವಿಲಿ ಮೂಲಕ ಬಾಂದ್ರಾವನ್ನು ರೈಲು ತಲುಪಲಿದೆ. ಬಾಂದ್ರಾ ಮುಂಬಯಿನ ಒಂದು ಪ್ರಮುಖ ಪ್ರದೇಶವಾಗಿದೆ. ಇಲ್ಲಿಂದ ಕರಾವಳಿಗೆ ಬರುವ ಪ್ರಯಾಣಿಕರು ಇದ್ದಾರೆ. ಬಾಂದ್ರಾ ನಿಲ್ದಾಣ ಕೊಂಕಣ ರೈಲ್ವೇ ಮಾರ್ಗವಾಗಿ ದಿಲ್ಲಿಗೆ ಸಂಚರಿಸುವ ಮಾರ್ಗದಲ್ಲಿದೆ.

ಟಾಪ್ ನ್ಯೂಸ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-mit

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.