Udupi; ಸ್ಟ್ಯಾಂಪ್‌ ಡ್ಯೂಟಿ ದರ ಹೆಚ್ಚಳಕ್ಕೆ ಸರಕಾರದ ಆದೇಶ


Team Udayavani, Feb 11, 2024, 11:21 PM IST

Udupi; ಸ್ಟ್ಯಾಂಪ್‌ ಡ್ಯೂಟಿ ದರ ಹೆಚ್ಚಳಕ್ಕೆ ಸರಕಾರದ ಆದೇಶ

ಉಡುಪಿ: ಕೆಲವು ತಿಂಗಳ ಹಿಂದೆ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದ ರಾಜ್ಯ ಸರಕಾರ ಇದೀಗ ಸ್ಟ್ಯಾಂಪ್‌ ಡ್ಯೂಟಿ ದರ ಹೆಚ್ಚಿಸಿ ಆದೇಶ ಹೊರಡಿಸಿದ್ದು, ಫೆ. 6ರಿಂದ ಹೊಸ ಸ್ಟಾಂಪ್‌ ಡ್ಯೂಟಿ ದರ ಜಾರಿಗೆ ಬಂದಿದೆ. ಈಗಾಗಲೇ ಹೊಸ ದರದಲ್ಲಿ ಅಗ್ರಿಮೆಂಟ್‌, ಪ್ರಮಾಣ ಪತ್ರಗಳನ್ನು ನೋಂದಣಾಧಿಕಾರಿಗಳ ಕಚೇರಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಪರಿಷ್ಕರಿಸಿದ ದರ ಪಾವತಿಸಬೇಕಾಗಿದೆ.

ಪ್ರಸ್ತುತ ಬಹುತೇಕ ದಾಖಲೆಯನ್ನು ದೃಢೀಕರಿಸಲು ಅಫಿದವಿತ್‌ ನೀಡಬೇ ಕಿದ್ದು, ಸಾರ್ವಜನಿಕರು ಒಂದಲ್ಲ ಒಂದು ಕೆಲಸಕ್ಕೆ ಅಫಿದವಿತ್‌ಗಳನ್ನು ಬಳಸುತ್ತಾರೆ. ಹಿಂದೆಲ್ಲ ಕೇವಲ 5 ರೂ. ಅಫಿದವಿತ್‌ ಬಳಸಿ ಕೈಬರಹದ ಮೂಲಕ ಕೇವಲ 10 ರೂ.ಗಳಲ್ಲಿ ಸಲ್ಲಿಸಬಹುದಾಗಿತ್ತು. ಆನಂತರ, 10, 15 ಹಾಗೂ 20 ರೂ.ಗಳವರೆಗೂ ಬಂದು ನಿಂತಿತ್ತು. ಈಗ ಸರಕಾರ ಅಫಿದವಿತ್‌ ದರ ದುಪ್ಪಟ್ಟು ಹೆಚ್ಚಿಸಿದ್ದು, 20 ರೂ.ಗೆ ಬದಲಾಗಿ 100 ರೂ. ಮೌಲ್ಯದ ಛಾಪಾ ಕಾಗದ ಬಳಸಬೇಕಾಗುತ್ತದೆ. ಪರಿಷ್ಕರಿಸಿ ಹೊರಡಿಸಿರುವ ಹೊಸ ಸ್ಟ್ಯಾಂಪ್‌ ಡ್ಯೂಟಿ ಆದೇಶದಂತೆ ಅಗ್ರಿಮೆಂಟ್‌ 200ರಿಂದ 500 ರೂ., ಇಂಡೆಮಿನಿಟಿ ಬಾಂಡ್‌ 200ರಿಂದ 500 ರೂ., ಬ್ಯಾಂಕ್‌ ಗ್ಯಾರಂಟಿ ಪತ್ರಗಳು 200ರಿಂದ 300 ರೂ., ಹೈಪೋಥೆಟಿಕಲ್‌ ಅಗ್ರಿಮೆಂಟ್‌ಗಳು ಪ್ರತಿ ಹತ್ತು ಲಕ್ಷಕ್ಕೆ 0.1 ಪ್ರಮಾಣದಿಂದ 0.5 ಪ್ರಮಾಣಕ್ಕೆ ಹೆಚ್ಚಳವಾಗಿದೆ. 10 ಲಕ್ಷ ರೂ. ಅನಂತರ ಅಗ್ರಿಮೆಂಟ್‌ಗಳಿಗೂ ಶೇ.0.5 ಪ್ರಮಾಣದ ದರವನ್ನು ಸಾರ್ವಜನಿಕರು ನೀಡಬೇಕಾಗುತ್ತದೆ.

ಜನರಲ್‌ ಪವರ್‌ ಆಫ್ ಅಟಾರ್ನಿ 1,000 ರೂ., ವಿಶೇಷ ಪವರ್‌ ಆಫ್ ಅಟಾರ್ನಿ 100 ರಿಂದ 500 ರೂ., ಲೆಟರ್‌ ಆಫ್ ಗ್ಯಾರಂಟಿ ದರ 200 ರಿಂದ 500 ರೂ., ಟ್ರೈಪಾರ್ಟಿ ಅಗ್ರಿಮೆಂಟ್‌ ದರ 500 ರೂ. ಗಳಿಂದ 1,500 ರೂ.ಗಳಿಗೆ ಹಾಗೂ ಸಾಲ ಪ್ರಮಾಣ ಪತ್ರದ ಧಾರಣೆ ಸಾಲದ ಮೊತ್ತದ ಶೇ.0.1ರಿಂದ ಶೇ.0.5 ಕ್ಕೆ ಹೆಚ್ಚಳವಾಗಿದೆ. ಹಿಂದಿನ ದರ ಪಟ್ಟಿಗೆ ಹೋಲಿಸಿದರೆ ರಿಜಿಸ್ಟರ್ಡ್‌ ಲೀಗಲ್‌ ಮಾಗೇಜ್‌ ದರವನ್ನು ಮಾತ್ರವೇ ಶೇ.0.5 ರಷ್ಟೇ ಉಳಿಸಲಾಗಿದೆ.

ಸರಕಾರವು ಕಾಲಕಾಲಕ್ಕೆ ಆಸ್ತಿ ತೆರಿಗೆ ಮತ್ತು ಸ್ಟ್ಯಾಂಪ್‌ ಡ್ಯೂಟಿ ದರ ಪರಿಷ್ಕರಿಸುತ್ತದೆ. ಹಲವಾರು ವರ್ಷಗಳ ಹಿಂದೆ ಸ್ಟ್ಯಾಂಪ್‌ ಡ್ಯೂಟಿ ದರ ಪರಿಷ್ಕರಿಸಲಾಗಿತ್ತು. ಮತ್ತೆ ಪರಿಷ್ಕರಿಸಲ್ಪಟ್ಟ ದರವು ಸಾರ್ವಜನಿಕರಿಗೆ ತೀವ್ರ ಹೊರೆಯಾಗಿ ಪರಿಣಮಿಸಿಲ್ಲ ಎಂದು ದಸ್ತಾವೇಜು ಬರಹಗಾರರು ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.