![police crime](https://www.udayavani.com/wp-content/uploads/2024/07/police-crime-2-415x256.jpg)
ಹಾಲಾಡಿ ಪೇಟೆಗೆ ಹೊಸ ವಿನ್ಯಾಸದ ಸರ್ಕಲ್
ಗ್ರಾಮ ಪಂಚಾಯತ್ ನಿರ್ಣಯಕ್ಕೆ ಕೊನೆಗೂ ಮನ್ನಣೆ ; ಸರ್ಕಲ್ ಬೇಡಿಕೆಗೆ ಅಸ್ತು
Team Udayavani, Jun 20, 2019, 5:17 AM IST
![1706KDPP1](https://www.udayavani.com/wp-content/uploads/2019/06/1706KDPP1-620x310.jpg)
ಕುಂದಾಪುರ:ಹಾಲಾಡಿ ಪೇಟೆಗೆ ಸರ್ಕಲ್ ಬೇಕೇ ಬೇಕು ಎನ್ನುವ ಗ್ರಾಮಸ್ಥರ ಬೇಡಿಕೆ ಹಾಗೂ ಇದರಂತೆ ಗ್ರಾಮಸಭೆಯಲ್ಲಿ ಪಂಚಾಯತ್ ಕಳುಹಿಸಿದ ನಿರ್ಣಯಕ್ಕೆ ಲೋಕೋಪಯೋಗಿ ಇಲಾಖೆಯು ಅಸ್ತು ಎಂದಿದ್ದು, ಸರ್ಕಲ್ ರಚನೆ ಕುರಿತಂತೆ ಹಳೆಯ ನಕ್ಷೆಯನ್ನು ಪರಿಷ್ಕರಿಸಿ, ಹೊಸದಾಗಿ ನಕ್ಷೆ ತಯಾರಿಸಿ, ಒಪ್ಪಿಗೆಗಾಗಿ ಪಂಚಾಯತ್ಗೆ ಕಳುಹಿಸಿದೆ.
ಕಳೆದ ಡಿ. 14ರಂದು ಹಾಲಾಡಿ ಗ್ರಾ.ಪಂ. ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಅಧ್ಯಕ್ಷತೆಯಲ್ಲಿ ಹಾಲಾಡಿ ಪೇಟೆಗೆ ಸರ್ಕಲ್ ಬೇಕು ಎನ್ನುವ ಕುರಿತು ವಿಶೇಷ ಗ್ರಾಮಸಭೆ ನಡೆದಿತ್ತು. ಸಭೆಯಲ್ಲಿ ಸರ್ಕಲ್ ಬೇಡಿಕೆಗೆ ಗ್ರಾಮಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿ, ಈ ಸಂಬಂಧ ನಿರ್ಣಯ ಮಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಈ ನಿರ್ಣಯವನ್ನು ಮುಂದಿಟ್ಟು ಕೊಂಡು, ಮೊದಲು ನಕ್ಷೆ ಸಿದ್ಧಪಡಿಸಿದ್ದ ಬೆಂಗಳೂರಿನ “ಪ್ರಾಮಿ ಕಚೇರಿಗೆ ಮರು ವಿನ್ಯಾಸಕ್ಕೆ ಕಳುಹಿಸಲಾಗಿತ್ತು. ಅದೀಗ ಬಂದಿದೆ.
ಬ್ಲಾಕ್ ಸ್ಪಾಟ್ ಎನ್ನುವ ಹೆಸರಲ್ಲಿ ಹಾಲಾಡಿ ಪೇಟೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮುತುವರ್ಜಿಯಲ್ಲಿ 3.10 ಕೋ. ರೂ. ಮಂಜೂರಾಗಿತ್ತು. ಅದರಂತೆ ಈಗ ವಿರಾಜಪೇಟೆ – ಬೈಂದೂರು ರಾಜ್ಯ ಹೆದ್ದಾರಿ, ಹಾಲಾಡಿ – ಅಮಾಸೆಬೈಲು, ಕೋಟೇಶ್ವರ – ಹಾಲಾಡಿ ಕಡೆಗಳಿಗೆ ತೆರಳುವ ರಸ್ತೆ ಅಗಲೀಕರಣವಾಗಿದೆ. ಆದರೆ ಕೆಲವೆಡೆ ಜಾಗದ ತಕರಾರು ಇರುವುದರಿಂದ ಸರ್ಕಲ್ ನಿರ್ಮಾಣ ಬೇಡಿಕೆ ನನೆ ಗುದಿಗೆ ಬಿದ್ದಿತ್ತು. ಇದನ್ನರಿತ ಗ್ರಾಮಸ್ಥರು ಇದಕ್ಕಾಗಿ ಹೋರಾಟ ಸಮಿತಿ ರಚಿಸಿ ಈಡೇರಿಕೆಗೆ ಪ್ರಯತ್ನಿಸಿದ್ದರು.
ಮುಂದೇನು?
ಸರ್ಕಲ್ ನಿರ್ಮಾಣಕ್ಕೆ ಹೊಸ ನಕ್ಷೆ ರಚಿಸಲಾಗಿದೆ. ಆದರೆ ಅದಕ್ಕಾಗಿ 2-3 ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕಾಗಿದೆ. 2 ಕಡೆ ಪಟ್ಟಾ ಜಾಗವಿದ್ದು, ಅದಕ್ಕೆ ಎಸಿಯವರ ಮೂಲಕ ಒಪ್ಪಿಗೆ ಬೇಕಾಗಿದೆ. ಕೆಲವೆಡೆಗಳಲ್ಲಿ ಅಂಗಡಿ ಕಟ್ಟಿಕೊಂಡಿದ್ದು, ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ತೆರವು ಮಾಡುವ ಕೆಲಸ ಪಂಚಾಯತ್ನಿಂದ ಆಗಬೇಕಾಗಿದೆ. ಇದೆಲ್ಲ ಆದ ಬಳಿಕ ಹೆಚ್ಚುವರಿ ಅನುದಾನಕ್ಕೆ ಬೆಂಗಳೂರಿನ ಪ್ರಾಮಿÕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನಂತರ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಸರ್ಕಲ್ಗೆ ಎಲ್ಲ ಸಹಕಾರ
ಹಾಲಾಡಿ ಪೇಟೆಯಲ್ಲಿ ಸರ್ಕಲ್ ಆಗಬೇಕಾದರೆ ಗ್ರಾ.ಪಂ.ನಿಂದ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇವೆ. ಅದಕ್ಕೆ ಪಂಚಾಯತ್ ವತಿಯಿಂದ ಏನೆಲ್ಲ ಆಗಬೇಕೋ ಅದನ್ನೆಲ್ಲ ಆದಷ್ಟು ಶೀಘ್ರದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ನಕ್ಷೆ ನಮಗೆ ಅಧಿಕೃತವಾಗಿ ಇನ್ನೂ ಸಿಕ್ಕಿಲ್ಲ. ಆದರೆ ಜನರ ಕೈಗೆ ಸಿಕ್ಕಿದೆ. ಈ ಬಗ್ಗೆ ಮತ್ತೂಮ್ಮೆ ಪರಿಶೀಲಿಸಿ, ಆ ಬಳಿಕ ಜನರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
-ಸರ್ವೋತ್ತಮ ಹೆಗ್ಡೆ, ಅಧ್ಯಕ್ಷರು, ಹಾಲಾಡಿ ಗ್ರಾ.ಪಂ.
ಪಂಚಾಯತ್ಗೆ ಕಳುಹಿಸಲಾಗಿದೆ
ಈಗ ಹಳೆ ನಕ್ಷೆಯನ್ನು ಪರಿಷ್ಕೃರಣೆ ಮಾಡಿ ಪ್ರಾಮಿÕಯವರು ಹೊಸ ನಕ್ಷೆ ಕಳುಹಿಸಿದ್ದಾರೆ. ಇದನ್ನೀಗ ಪಂಚಾಯತ್ಗೆ ಕಳುಹಿಸಿದ್ದೇವೆ. ಅವರ ಒಪ್ಪಿಗೆ ಸಿಕ್ಕಿ, ಅಲ್ಲಿ ಜಾಗ ಒತ್ತುವರಿ ಇನ್ನಿತರ ಕೆಲ ಅಡೆತಡೆಗಳೆಲ್ಲ ಪರಿಹಾರವಾದರೆ ಮತ್ತೆ ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು.
– ದುರ್ಗಾದಾಸ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-dssd](https://www.udayavani.com/wp-content/uploads/2024/07/1-dssd-150x101.jpg)
Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ
![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-150x93.jpg)
Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು
![8-udupi](https://www.udayavani.com/wp-content/uploads/2024/07/8-udupi-150x90.jpg)
Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್
![5-byndoor](https://www.udayavani.com/wp-content/uploads/2024/07/5-byndoor-150x90.jpg)
Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ
![Manipal ಆನ್ಲೈನ್ ವಂಚಕರ ಬಲೆಗೆ ಬಿದ್ದ ಪಿಎಚ್.ಡಿ. ವಿದ್ಯಾರ್ಥಿನಿ!](https://www.udayavani.com/wp-content/uploads/2024/07/ONLINE-150x84.jpg)
Manipal ಆನ್ಲೈನ್ ವಂಚಕರ ಬಲೆಗೆ ಬಿದ್ದ ಪಿಎಚ್.ಡಿ. ವಿದ್ಯಾರ್ಥಿನಿ!
MUST WATCH
ಹೊಸ ಸೇರ್ಪಡೆ
![police crime](https://www.udayavani.com/wp-content/uploads/2024/07/police-crime-2-150x92.jpg)
Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ
![1-dssd](https://www.udayavani.com/wp-content/uploads/2024/07/1-dssd-150x101.jpg)
Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ
![1-wewqewqe](https://www.udayavani.com/wp-content/uploads/2024/07/1-wewqewqe-150x101.jpg)
Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ
![1-sa-dsadsa](https://www.udayavani.com/wp-content/uploads/2024/07/1-sa-dsadsa-150x84.jpg)
Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ
![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-150x93.jpg)
Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.