![10](https://www.udayavani.com/wp-content/uploads/2024/07/10-2-415x249.jpg)
ಹಂಗಾರಕಟ್ಟೆ ಬಂದರಿನ ಅಭಿವೃದ್ಧಿಗೆ ಸರಕಾರದ ಒತ್ತು
ಮೂರು ಕಿರುಬಂದರುಗಳ ಸಮಸ್ಯೆ ಏಕ ಕಾಲಕ್ಕೆ ಪರಿಹಾರ
Team Udayavani, Mar 9, 2020, 5:55 AM IST
![ಹಂಗಾರಕಟ್ಟೆ ಬಂದರಿನ ಅಭಿವೃದ್ಧಿಗೆ ಸರಕಾರದ ಒತ್ತು](https://www.udayavani.com/wp-content/uploads/2020/03/Hangarkatta-Port-620x356.jpg)
ಕೋಟ: ಶತಮಾನಗಳ ಇತಿಹಾಸದ ಹಂಗಾರಕಟ್ಟೆಯ ಬಂದರು ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಬೇಕು ಎನ್ನವುದು ಹಲವು ದಶಕಗಳ ಬೇಡಿಕೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಈ ಬಜೆಟ್ನಲ್ಲಿ 130 ಕೋಟಿ ರೂ. ಮೀಸಲಿರಿಸಿದ್ದು ಹೊಸ ಭರವಸೆ ಮೂಡಿದೆ.
ಮೂರು ಕಿರು ಬಂದರಿನ ಸಮಸ್ಯೆ
ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಒಳಪಡುವ ಹಂಗಾರಕಟ್ಟೆ, ಕೋಡಿಕನ್ಯಾಣ, ಕೋಡಿಬೆಂಗ್ರೆ ಈ ಮೂರು ಬಂದರುಗಳು ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿವೆ ಹಾಗೂ ಒಂದೇ ಅಳಿವೆ ಇವುಗಳಿಗೆ ಸಂಪರ್ಕ ಬೆಸೆಯುತ್ತದೆ. ಆದರೆ ಅಳಿವೆಗೆ ಬ್ರೇಕ್ ವಾಟರ್ ತಡೆಗೋಡೆ ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆ. ಇದರಿಂದ ಬೋಟ್ ಸಂಚಾರ ಅಸಾಧ್ಯವಾಗಿತ್ತು ಮತ್ತು ಉಬ್ಬರ ಇಳಿತವನ್ನು ಗಮನಿಸಿ ಜಟ್ಟಿಯಿಂದ ಹೊರ ಹೋಗಬೇಕಿತ್ತು. ಹೀಗಾಗಿ ಮೀನುಗಾರಿಕೆ ಅವಧಿ ಆರಂಭಗೊಂಡು ಎರಡು-ಮೂರು ತಿಂಗಳು ಕಳೆದರು ಇಲ್ಲಿನ ಬೋಟ್ಗಳಿಗೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಬ್ರೇಕ್ ವಾಟರ್ ಕಾಮಗಾರಿಗೆ ಮೀಸಲಿರಿಸುವುದರಿಂದ ಮೂರು ಕಿರು ಬಂದರುಗಳ ಸಮಸ್ಯೆ ಏಕ ಕಾಲದಲ್ಲಿ ಪರಿಹಾರವಾಗಲಿದೆ.
ಪಾರಂಪರಿಕ ಬಂದರು
ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಬಾರಕೂರು ಅರಸರು ಹಾಗೂ ಬ್ರಿಟಿಷ್ ಸರಕಾರದ ಕಾಲದಲ್ಲಿ ಹಂಗಾರಕಟ್ಟೆ ಬಂದರು ವಿದೇಶಗಳಿಗೆ ಆಹಾರ ವಸ್ತುಗಳ ಆಮದು, ರಪು¤ ನಡೆಸುವ ಪ್ರಮುಖ ವ್ಯಾಪಾರ ತಾಣವಾಗಿ ಪ್ರಸಿದ್ಧಿ ಪಡೆದಿತ್ತು.
ಸಾರ್ವಕಾಲಿಕ ಬಂದರಾಗುವ ಅವಕಾಶ
ಪ್ರಸ್ತುತ ಕೋಡಿ ಬೆಂಗ್ರೆಯಲ್ಲಿ 100ಕ್ಕೂ ಹೆಚ್ಚು ಬೋಟ್ಗಳು ಹಾಗೂ ಹಂಗಾರಕಟ್ಟೆಯಲ್ಲಿ 150, ಕೋಡಿಕನ್ಯಾಣದಲ್ಲಿ 200ಕ್ಕೂ ಹೆಚ್ಚು ಬೋಟ್ಗಳು ಮೀನುಗಾರಿಕೆ ನಡೆಸುತ್ತಿದೆ ಹಾಗೂ ಈ ಭಾಗದ ಸುಮಾರು 600ಕ್ಕೂ ಹೆಚ್ಚು ಬೋಟ್ಗಳು ಮಲ್ಪೆಯ ಬಂದರನ್ನು ಆಶ್ರಯಿಸಿವೆೆ. ಇಲ್ಲಿ ತಡೆಗೋಡೆ ನಿರ್ಮಾಣವಾದರೆ ಸಾರ್ವಕಾಲಿಕ ಬಂದರಾಗಿ ಮಲ್ಪೆಯ ಒತ್ತಡವೂ ಕಡಿಮೆಯಾಗುತ್ತದೆ.
ಸೀ ವಾಕ್ ಕುರಿತು ಚಿಂತನೆ ಅಗತ್ಯ
ಬ್ರೇಕ್ ವಾಟರ್ ತಡೆಗೋಡೆ ನಿರ್ಮಿಸುವ ಸಂದರ್ಭ ಮಲ್ಪೆಯ ಮಾದರಿ ಭವಿಷ್ಯದಲ್ಲಿ ಸೀ ವಾಕ್ ನಿರ್ಮಾಣ ಕೈಗೊಳ್ಳುವ ಬಗ್ಗೆ ಮುಂದಾಲೋಚನೆ ಅಗತ್ಯವಿದೆ. ಮೂರು ಕಡೆಗಳಲ್ಲಿ ಕಿರು ಬಂದರು, ದ್ವೀಪ, ಸೀತಾನದಿ ಸಮುದ್ರ ಸೇರುವ ಸಂಗಮ ಸ್ಥಳ ಹಾಗೂ ಅಪ್ರತಿಮ ಪ್ರಕೃತಿ ಸೌಂದರ್ಯದ ತಾಣವಾಗಿರುವುದರಿಂದ ಪ್ರವಾಸಿ ತಾಣವಾಗಿ ಬೆಳೆಯಲು ಅವಕಾಶವಿದೆ.
ಅಭಿವೃದ್ಧಿಗೆ ಅವಕಾಶ
ಹಂಗಾರಕಟ್ಟೆಯ ಬ್ರೇಕ್ ವಾಟರ್ ಕಾಮಗಾರಿಗೆ ಸರಕಾರ ಬಜೆಟ್ನಲ್ಲಿ 130ಕೋಟಿ ಮೀಸಲಿರಿಸಿರುವುದು ತುಂಬಾ ಸಂತಸ ತಂದಿದೆ. ಭವಿಷ್ಯದಲ್ಲಿ ಮೂರು ಕಿರುಬಂದರುಗಳು ಸಾರ್ವಕಾಲಿಕ ಬಂದರಾಗಿ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ.
-ರಾಜೇಂದ್ರ ಸುವರ್ಣ, ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿ ಅಧ್ಯಕ್ಷರು
ಟಾಪ್ ನ್ಯೂಸ್
![10](https://www.udayavani.com/wp-content/uploads/2024/07/10-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Agriculture-Tracator](https://www.udayavani.com/wp-content/uploads/2024/07/Agriculture-Tracator-150x90.jpg)
Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ
![4-manipal](https://www.udayavani.com/wp-content/uploads/2024/07/4-manipal-150x90.jpg)
Manipal: ಅನಾಮಧೇಯ ಆ್ಯಪ್ ಡೌನ್ಲೋಡ್ ಮಾಡಿ ವಂಚನೆಗೊಳಗಾದ ಮಹಿಳೆ!
![Court-Symbol](https://www.udayavani.com/wp-content/uploads/2024/07/Court-Symbol-150x90.jpg)
Udupi Pocso Court: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ; ಆರೋಪದಿಂದ ತಂದೆ ದೋಷಮುಕ್ತ
![Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ](https://www.udayavani.com/wp-content/uploads/2024/07/TAIN-150x97.jpg)
Train ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ಮಂಜೂರಾತಿಗೆ ಮನವಿ
![Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು](https://www.udayavani.com/wp-content/uploads/2024/07/kun-150x104.jpg)
Byndoor ತುಂಬಿದ ಹೊಳೆ ಮಧ್ಯೆ ಮಕ್ಕಳನ್ನು ಹೊತ್ತೊಯ್ಯುವ ನಿತ್ಯದ ಕಸರತ್ತು
MUST WATCH
ಹೊಸ ಸೇರ್ಪಡೆ
![10](https://www.udayavani.com/wp-content/uploads/2024/07/10-2-150x90.jpg)
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
![Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ](https://www.udayavani.com/wp-content/uploads/2024/07/Modi-4-150x92.jpg)
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
![1-honnavara](https://www.udayavani.com/wp-content/uploads/2024/07/1-honnavara-150x90.jpg)
Honnavara: ಪಟ್ಟಣ ಪಂಚಾಯತ್ ನಲ್ಲಿ ಲೋಕಾಯುಕ್ತ ದಾಳಿ
![1-vijayendra](https://www.udayavani.com/wp-content/uploads/2024/07/1-vijayendra-150x100.jpg)
CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ
![vijayapura](https://www.udayavani.com/wp-content/uploads/2024/07/vijayapura-2-150x90.jpg)
Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.