ಪರರ ಸೇವೆಯೇ ಪರಮಾತ್ಮನ ಸೇವೆ
Team Udayavani, Jan 28, 2019, 12:50 AM IST
ಕಾರ್ಕಳ: ಸಂತ ಲಾರೆನ್ಸರು ಅಂಗವಿಕಲರು, ಅಶಕ್ತರು, ಬಡವರಿಗೆ ಆಸ್ತಿಯನ್ನು ದಾನ ನೀಡಿ, ಪ್ರೀತಿ ಹಂಚಿದ್ದರು. ಏಸು ಸ್ವಾಮಿಯವರು ಲೋಕದ ಒಳಿತಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿ, ತನಗೆ ಜನತೆ ಮೇಲಿರುವ ಮಮತೆಯನ್ನು ಸಾದರಪಡಿಸಿದರು. ಹೀಗೆಯೇ ನಾವೆಲ್ಲರೂ ಪರರ ಒಳಿತನ್ನು ಬಯಸಬೇಕೆಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಬಿಷಪ್ ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಹೇಳಿದರು.
ಅವರು ರವಿವಾರ ಸಂಜೆ ಅತ್ತೂರು ಚರ್ಚ್ನಲ್ಲಿ ಮಕ್ಕಳಿಗಾಗಿ ನಡೆದ ಬಲಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪರರ ಸೇವೆಯೇ ಪರಮಾತ್ಮನ ಸೇವೆ. ನಮ್ಮ ಸುತ್ತಮುತ್ತಲಿರುವ ಜನರ ಏಳಿಗೆಗಾಗಿ ಯಾವುದೇ ರೀತಿಯ ತ್ಯಾಗ-ಸೇವೆ ನೀಡಲು ಹಿಂಜರಿಯಬಾರದು ಎಂದು ಹೇಳಿದರು.
ಶಿರ್ವ ಆರೋಗ್ಯ ಮಾತಾ ಚರ್ಚ್ ಹಾಗೂ ಶಿರ್ವ ವಲಯ ಪ್ರಧಾನ ಧರ್ಮಗುರು ಫಾ| ಡೇನಿಸ್ ಡೇಸಾ, ಉಡುಪಿ ಧರ್ಮಪ್ರಾಂತ ದಿವ್ಯಜ್ಯೋತಿ ಕೇಂದ್ರದ ನಿರ್ದೇಶಕ ಫಾ| ಸ್ಟೀವನ್ ಡಿ’ಸೋಜಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ಫಾ| ಜೊಸ್ವಿ ಫೆರ್ನಾಂಡಿಸ್ ಸಹಿತ 20 ಧರ್ಮಗುರುಗಳು ಉಪಸ್ಥಿತರಿದ್ದರು.
ಜನಸಾಗರ
ಜಾತ್ರೆಯ ಪ್ರಥಮ ದಿನದಂದೇ ಆಡಳಿತ ಸಮಿತಿಯವರ ನಿರೀಕ್ಷೆಗಿಂತ ಹೆಚ್ಚಿನ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಕರಾವಳಿ ಜಿಲ್ಲೆ ಮಾತ್ರವಲ್ಲದೆ ವಿವಿಧೆಡೆಗಳಿಂದ ಭೇಟಿ ನೀಡಿದ್ದರು. ದೂಪದ ಕಟ್ಟೆ, ಶಿಲುಬೆಗುಡ್ಡೆ, ಸಂತ ಲಾರೆನ್ಸ್ನ ಒಟ್ಟು 12 ಕಡೆ ಪಾರ್ಕಿಂಗ್ಗೆ ಅಣಿಗೊಳಿಸಿದ ಮೈದಾನಗಳಲ್ಲಿ ವಾಹನ ದಟ್ಟಣೆಯಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.