ಕೆಜಿಗೆ 60 ರೂ. ಇದ್ದ ಕೊತ್ತಂಬರಿ ಸೊಪ್ಪಿಗೆ 280 ರೂ.!

ಬಹುತೇಕ ಎಲ್ಲ ತರಕಾರಿಗಳ ದರ ಗಣನೀಯ ಏರಿಕೆ 

Team Udayavani, Jun 24, 2019, 10:52 AM IST

SHOP

ಕುಂದಾಪುರ: ಮೀನು ಮಾತ್ರವಲ್ಲ, ಈಗ ತರಕಾರಿಯೂ ದುಬಾರಿ. ವಾರದ ಹಿಂದೆ ಇನ್ನೂ ಅಧಿಕವಿದ್ದ ತರಕಾರಿ ದರ ಈಗ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಆದರೆ ಕೆಲವು ದಿನಗಳ ಹಿಂದೆ ಒಂದು ಕೆಜಿ ಕೊತ್ತಂಬರಿ ಸೊಪ್ಪಿಗೆ 60 ರೂ. ಇದ್ದದ್ದು ಈಗ 270ರಿಂದ 280 ರೂ.ಕ್ಕೇರಿದೆ. ವಾರದ ಹಿಂದೆ ಇದು 350 ರೂ. ವರೆಗೂ ಇತ್ತು!

ಕೊತ್ತಂಬರಿ ಸೊಪ್ಪು ಸಹಿತ ಬಹುತೇಕ ಎಲ್ಲ ಬಗೆಯ ಸೊಪ್ಪು ತರಕಾರಿಗಳನ್ನು ಬೆಳೆಯುವ ಹುಬ್ಬಳ್ಳಿ – ಧಾರವಾಡ ದಲ್ಲಿ ಈಗ ನೀರಿನ ಅಭಾವ. ಮಳೆ
ಆರಂಭವಾಗಿದ್ದರೂ ಕೃಷಿಗೆ ಇದು ಬಳಕೆಯಾಗಲು ಹಲವು ದಿನವಾಗ
ಬಹುದು. ಹಾಗಾಗಿ ಇನ್ನು ವಾರ ಕಾಲ ಅಥವಾ 10 ದಿನದ ಮಟ್ಟಿಗೆ ಕೊತ್ತಂಬರಿ ಸೊಪ್ಪಿಗೆ ಇದೇ ದರ ಇರಬಹುದು ಎನ್ನುವುದು ಕುಂದಾಪುರದ ತರಕಾರಿ ವ್ಯಾಪಾರಸ್ಥರ ಅಭಿಪ್ರಾಯ.

ಟೊಮೇಟೋ ದರ ಇಳಿಕೆ
15 ದಿನಗಳ ಹಿಂದೆ ಟೊಮೆಟೋ ದರ ಕೆಜಿಗೆ 56-57 ರೂ. ಇದ್ದದ್ದು, ಈಗ 36 ರೂ.ಗೆ ಇಳಿಕೆಯಾಗಿದೆ. 100 ರೂ. ಇದ್ದ ಬೀನ್ಸ್‌ಗೆ ಈಗ 60 ರೂ. ಆಗಿದೆ. ಆದರೆ ರಿಂಗ್‌ ಬೀನ್ಸ್‌ ಮಾತ್ರ 120 ರೂ. ದರದಲ್ಲಿ ಮಾರಾಟವಾಗುತ್ತಿದೆ. ಸುವರ್ಣಗೆಡ್ಡೆಗೆ ಕೆಜಿಗೆ 40 ರೂ. ಇದೆ. 30 ರೂ. ಇದ್ದ ಹೂಕೊಸು 50 ರೂ.ಗೆ ಏರಿದೆ. ಮಳೆಗಾಲ ಆರಂಭವಾಗಿರುವುದರಿಂದ ಲಿಂಬೆ ಜ್ಯೂಸ್‌ಗೆ ಬೇಡಿಕೆ ಕಡಿಮೆ ಇದ್ದು, 1 ಲಿಂಬೆಕಾಯಿ ಬೆಲೆ 7 ರೂ.ನಿಂದ 4 ರೂ.ಗೆ ಇಳಿದಿದೆ.

ಇದ್ದುದರಲ್ಲಿ ಕಡಿಮೆಯಲ್ಲಿ ಸಿಗುವ ತರಕಾರಿಗಳಾದ ಸೌತೆಗೆ ಕೆಜಿಗೆ 20 –
22 ರೂ. ಮತ್ತು ಕುಂಬಳಕಾಯಿ ಕೆಜಿಗೆ 20-25 ರೂ. ದರವಿದೆ. ಕೆಜಿಗೆ 15 ರೂ. ಇದ್ದ ಮುಳ್ಳುಸೌತೆಗೆ  ಈಗ 40 ರೂ. ಈರುಳ್ಳಿಗೆ 25 ರೂ. ಆಗಿದ್ದು, ವಾರದ ಹಿಂದೆ 15-16 ರೂ. ಇತ್ತು. ಆಲೂಗಡ್ಡೆಗೆ 30 ರೂ., ಅಲಸಂಡೆಗೆ 60 ರೂ.
ಈಗ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವುದರಿಂದ ಬೇಡಿಕೆ ಯಷ್ಟು ಮೀನು ಸಿಗುತ್ತಿಲ್ಲ. ಸಿಕ್ಕರೂ ದರ ಹೌಹಾರುವಂತಿದೆ. ಆದ್ದರಿಂದ ತರಕಾರಿ ಕೊಳ್ಳುಗರೇ ಜಾಸ್ತಿ. ಹೀಗಾಗಿ ಈಗ ಶುಭ ಸಮಾರಂಭಗಳು ಕಡಿಮೆ ಯಿದ್ದರೂ ಕೆಲವು ದಿನಗಳಿಂದ ಎಲ್ಲ ತರಕಾರಿಗಳ ದರ ಧಾರಣೆಯಲ್ಲಿ ಗಣನೀಯ ಏರಿಕೆಯಾಗಿದೆ.

ಈ ಮೂರಕ್ಕೆ ಭಾರೀ ಬೇಡಿಕೆ
ಈಗ ಮಾರುಕಟ್ಟೆಯಲ್ಲಿ ಅಗ್ಗಕ್ಕೆ ಮೀನು ಸಿಗದೆ ಇರುವುದರಿಂದ ತರಕಾರಿಗೆ ಬೇಡಿಕೆ ಹೆಚ್ಚು. ಅದರಲ್ಲೂ ಬೆಂಡೆಕಾಯಿ, ನವಿಲು ಕೋಸು ಮತ್ತು ಸೀಮೆ ಬದನೆಗೆ ಭಾರೀ ಬೇಡಿಕೆ. 15 ದಿನಗಳ ಹಿಂದೆ ಇವುಗಳ ದರ 50 ರೂ. ಆಸುಪಾಸಿನಲ್ಲಿತ್ತು. ಈಗ ಬೆಂಡೆ, ಬದನೆ, ನವಿಲು ಕೋಸುವಿನ ಬೆಲೆ 30 ರೂ. ಆಸುಪಾಸಿನಲ್ಲಿದೆ.

ಇನ್ನು ಸ್ವಲ್ಪ ದಿನ ಇದೇ ದರವಿರಬಹುದು. ಕೆಲವು ತರಕಾರಿಗಳಿಗೆ ಇನ್ನಷ್ಟು ಏರಿಕೆಯಾಗಬಹುದು. ಆದರೆ ಸದ್ಯ ಕಡಿಮೆ ಯಾಗುವುದಂತೂ ಕಷ್ಟ. ಎಲ್ಲೆಡೆ ನೀರಿನ ಅಭಾವದಿಂದ ಈ ರೀತಿಯ ಧಾರಣೆಯಿದೆ. ಹಿಂದಿನ ವರ್ಷಗಳಲ್ಲಿ ಇದೇ ಸಮಯ ತರಕಾರಿಗೆ ದರ ಇದಕ್ಕಿಂತಲೂ ಕಡಿಮೆ ಇತ್ತು. ಆದರೂ ಬೇಡಿಕೆ ಕಡಿಮೆಯಾಗಿಲ್ಲ.
– ಗಣೇಶ್‌ ಕುಂದಾಪುರ, ತರಕಾರಿ ವ್ಯಾಪಾರಿ

ಟಾಪ್ ನ್ಯೂಸ್

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

kunita-bhajane

Kaup: ಉಚ್ಚಿಲ ದಸರಾ: ಐತಿಹಾಸಿಕ ದಾಖಲೆ ಬರೆದ ಸಾಮೂಹಿಕ ಕುಣಿತ ಭಜನೆ

Comet

Comet of the Century: ಅಕ್ಟೋಬರ್‌ನಲ್ಲಿ ಧೂಮಕೇತುಗಳ ಮೆರವಣಿಗೆ

Udupi-DC-Meeting

Udupi: ಅಕ್ರಮ ಮೀನುಗಾರಿಕೆ ಬೋಟುಗಳಿಗೆ ಗರಿಷ್ಠ ದಂಡ: ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Kota-poojary

Social Media Fake Account: ಸಂಸದ ಕೋಟ ಶ್ರೀನಿವಾಸ ಪೂಜಾರಿ ಖಾತೆ ನಕಲಿ: ದೂರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-doctor-patient

Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.