ಮಳೆಕೊಯ್ಲಿನಿಂದ ಬಾವಿಯ ಹಳದಿ ನೀರು ಸಮಸ್ಯೆ ನಿವಾರಣೆ!

ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ

Team Udayavani, Aug 4, 2019, 5:30 AM IST

2807KDLM16PH2-NAVADA

ಕುಂದಾಪುರ: ಮಳೆಕೊಯ್ಲು ಮಾಡಿದವರ ಅನುಭವಗಳನ್ನು ಇತರರಿಗೆ ಪ್ರೇರಣೆಯಾಗಲಿ ಉದಯವಾಣಿ ಪ್ರತಿದಿನ ಮಳೆಕೊಯ್ಲು ಕುರಿತು ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಮಳೆಕೊಯ್ಲು ಮಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿಕೊಂಡೆವು ಎಂದು ಹೇಳುವ ಅನೇಕರು ಸಿಕ್ಕಿದ್ದಾರೆ. ಆದರೆ ಮಳೆಕೊಯ್ಲಿನಿಂದ ಬಾವಿಯಲ್ಲಿ ಶುದ್ಧ ನೀರು ದೊರೆಯುತ್ತಿದೆ, ಬಾವಿಯಲ್ಲಿ ಈವರೆಗೆ ಉಂಟಾಗುತ್ತಿದ್ದ ಹಳದಿ ನೀರು, ಕೆಂಪು ನೀರಿನ ಸಮಸ್ಯೆ ನಿವಾರಣೆಯಾಗಿದೆ ಎನ್ನುವವರು ಕೂಡ ಇದ್ದಾರೆ. ಕೋಣಿಯ ಶಶಿಕಾಂತ್‌ ಎಸ್‌.ಕೆ. ಅವರು ಕೆಂಪು ನೀರಿನ ಸಮಸ್ಯೆ ನಿವಾರಣೆಯಾದುದನ್ನು ಹೇಳಿದ್ದರು. ಈ ಬಾರಿ ಹಳದಿ ನೀರಿನ ಸಮಸ್ಯೆ ನಿವಾರಣೆಯಾದ ಉದಾಹರಣೆಯಿದೆ.ಇದರರ್ಥ ಮಳೆಕೊಯ್ಲು ಕೇವಲ ನೀರಿಂಗಿಸಲು ಅಷ್ಟೇ ಅಲ್ಲ, ಬಾವಿಯಲ್ಲಿ ನೀರು , ನೆರೆಹೊರೆಯ ಬಾವಿಯಲ್ಲೂ ಅಂತರ್ಜಲ ಹೆಚ್ಚುತ್ತದೆ. ಬೇಸಗೆಯಲ್ಲಿ ಉಂಟಾ ಗುವ ಹಳದಿ, ಕೆಂಪು ನೀರಿನ ಸಮಸ್ಯೆಯೂ ನಿವಾರಣೆ ಯಾಗುತ್ತದೆ, ಮಾತ್ರವಲ್ಲ ಖಾಯಿಲೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುವ ಧನಾತ್ಮಕ ಅಂಶಗಳಿವೆ.

ಹಳದಿ ನೀರಿನ ಸಮಸ್ಯೆ
ಕುಂದಾಪುರ ಪುರಸಭೆ ವ್ಯಾಪ್ತಿಯ ನಾವಡರ ಕೇರಿಯ ನಾಗೇಶ್‌ ನಾವಡ ಅವರು ಮೂರು ವರ್ಷಗಳ ಹಿಂದೆ ಮಳೆಕೊಯ್ಲು ಅಳವಡಿಸಿದ್ದಾರೆ. ಅವರಿಗೆ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಮಳೆಕೊಯ್ಲು ಮೂಲಕ ಜನಸೇವೆ ಜತೆಗೆ ಜಲಸೇವೆಗೆ ಮುಂದಾದರು. ಎಲ್ಲರೂ ಅಳವಡಿಸುವಂತೆ ಡ್ರಮ್‌ ಪದ್ಧತಿಯಲ್ಲಿಯೇ ಮಳೆಕೊಯ್ಲುವಿಗೆ ಸಿದ್ಧತೆ ನಡೆಸಿದರು. ತಾರಸಿ ಮೇಲೆ ಬಿದ್ದ ಮಳೆನೀರು ಒಂದೇ ಕಡೆ ಪೈಪ್‌ಗೆ ಹೋಗುವಂತೆ ಮಾಡಲು 1,500 ಚ.ಅಡಿಯ ತಾರಸಿಗೆ ನೀಲಿ ಟರ್ಪಾಲು ಹಾಕಿದರು. ಅದರ ಮೂಲಕ ಒಂದೇ ಕಡೆ ಕಲೆತ ನೀರು ಒಂದೇ ಪೈಪ್‌ನಲ್ಲಿ ನೀರು ಶುದ್ಧ ಮಾಡುವ ಡ್ರಮ್‌ಗೆ ಬೀಳುವಂತೆ ಮಾಡಿದರು. ಆ ಡ್ರಮ್ಮಿನಲ್ಲಿ ನೀರು ಶುದ್ಧವಾಗಿ ಬಾವಿಗೆ ಹರಿಯಬಿಟ್ಟರು. ಇಲ್ಲೂ ಇನ್ನೊಂದು ಬುದ್ಧಿ ಮತ್ತೆ ಉಪಯೋಗಿಸಿದರು.

ಬಹುತೇಕ ಜನರು ಬಾವಿಗೆ ಮೇಲಿನಿಂದ ಪೈಪ್‌ ಬಿಟ್ಟು ಡ್ರಮ್‌ನ ನೀರು ಮೇಲಿಂದ ಬೀಳುವಂತೆ ಮಾಡುತ್ತಾರೆ. ಇದರಿಂದ ಬಾವಿಯಲ್ಲಿ ಕೆಸರಿನ ಅಂಶ ಇದ್ದರೆ ನೀರು ಬಿದ್ದು ಬಾವಿ ನೀರು ರಾಡಿಯಾಗುತ್ತದೆ ಎಂದು ಆರೋಪವಿದೆ. ಇದು ಮನೆ ಟ್ಯಾಂಕಿಗೆ ತುಂಬಿಸಿದಾಗ ಕೊಳೆನೀರಿನಂತೆ ನಳ್ಳಿ ಮೂಲಕ ಹರಿದು ಬರುತ್ತದೆ ಎನ್ನುವುದು ಸಾಮಾನ್ಯ ಆರೋಪ. ಇದಕ್ಕಾಗಿ ನಾಗೇಶ ನಾವಡರು ಮಾಡಿನ ನೀರು ನೆಲಕ್ಕೆ ಬೀಳಲು ಉಪಯೋಗಿಸುವ ಪೈಪ್‌ ಮಾದರಿಯ ತೆಳುವಾದ ಪ್ಲಾಸ್ಟಿಕ್‌ನ್ನು ಪೈಪ್‌ಗೆ ಕಟ್ಟಿ ಅದನ್ನು ಬಾವಿಗೆ ಇಳಿಬಿಟ್ಟರು. ಆಗ ನೀರು ಬಾವಿ ನೀರಿಗೆ ಮೆಲ್ಲನೆ ಇಳಿದು ಹರಿಯಿತು. ಇಷ್ಟಾದ ಬಳಿಕ ಈ ನೀರು ಟ್ಯಾಂಕ್‌ ಸೇರುವ ಮುನ್ನ ಇನ್ನೊಂದು ಫಿಲ್ಟರ್‌ ಅಳವಡಿಸಿದರು. ಎರಡು ಹಂತದಲ್ಲಿ ಶುದ್ಧಗೊಂಡ ನೀರು ಟ್ಯಾಂಕಿ ಸೇರಿದ ಕಾರಣ ಶುದ್ಧತೆಯ ಚಿಂತೆಯಿಲ್ಲ. ಇದೆಲ್ಲ ಮಾಡಿದ ಪರಿಣಾಮ ಸನಿಹದ ಮೂರ್ನಾಲ್ಕು ಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ರೋಗಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಮನೆಯಲ್ಲಿ ಅನಾರೋಗ್ಯ ಪೀಡಿತರಾಗುವ ಸಮಸ್ಯೆ ನಿವಾರಣೆಯಾಗಿದೆ ಎನ್ನುತ್ತಾರೆ ನಾಗೇಶ್‌ ನಾವಡ ಅವರು.

ಸಮಸ್ಯೆಯೇ ಇಲ್ಲ
ಬೇಸಗೆಯಲ್ಲಿ ನಮ್ಮನೆ ಬಾವಿಯಲ್ಲಿ ಸುಮಾರು 7 ಅಡಿ ಶುದ್ಧ ನೀರು ಇರುತ್ತದೆ. ಅಕ್ಕಪಕ್ಕದ ಬಾವಿಗಳಿಗೂ ಇಲ್ಲಿ ನೀರಿಂಗಿಸಿ ಪ್ರಯೋಜನವಾಗುತ್ತಿದೆ. ಬಣ್ಣದ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಹಾಗಾಗಿ ಉದಯವಾಣಿ ಕೈಗೊಂಡ ಮಳೆಕೊಯ್ಲು ಅಭಿಯಾನ ಎಲ್ಲರಿಗೂ ಪ್ರೇರಣೆಯಾಗಲಿ.
-ನಾಗೇಶ್‌ ನಾವಡ, ಕುಂದಾಪುರ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 7618774529

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.