ಗಣತಿ ನಡೆಸಿದ ಗೌರವ ಶಿಕ್ಷಕರಿಗೆ ಸಂಭಾವನೆ ಇನ್ನೂ ಬಂದಿಲ್ಲ !


Team Udayavani, Jan 13, 2018, 6:20 AM IST

Rupees–212018.jpg

ಬೆಳ್ಮಣ್‌: 2015ರ  ಏಪ್ರಿಲ್‌-ಮೇನಲ್ಲಿ ಸರಕಾರದ ಒತ್ತಾಯ ಮೇರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಏನೋ ನಡೆಯಿತು. ಆದರೆ ಇದರಲ್ಲಿ ಹೆಚ್ಚುವರಿ ಸಹಾಯಕರಾಗಿ ಕಾರ್ಯನಿರ್ವಹಿಸಿದ ಗೌರವ ಶಿಕ್ಷಕಿಯರಿಗೆ ಸಂಭಾವನೆಯೇ ಬಂದಿಲ್ಲ! ಗಣತಿ ನಡೆದು ಎರಡೂ ವರೆ ವರ್ಷವಾದರೂ ಕಾರ್ಕಳ ತಾಲೂಕಿನ 18 ಮಂದಿಗೆ ನಯಾಪೈಸೆ ಸಂಭಾವನೆ ನೀಡಿಲ್ಲ. ಇದು ಸಂಬಂಧಪಟ್ಟ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.  

ಪತ್ರಕರ್ತ ಶಿಕ್ಷಕನ ಮನವಿ
ಸಂಭಾವನೆಗೆ ಇಲಾಖೆಗಳಿಗೆ ಪತ್ರ, ಮನವಿ ಇತ್ಯಾದಿ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ  ನಿವೃತ್ತ ಶಿಕ್ಷಕ ಬಿ. ಪುಂಡಲೀಕ ಮರಾಠೆ 2016ರ ಡಿ.31ರಂದು ಸಮಾಜ ಕಲ್ಯಾಣ ಸಚಿವ ಸಚಿವ ಎಚ್‌. ಆಂಜನೇಯ ಅವರಿಗೆ ಉಡುಪಿಯಲ್ಲಿ ಮನವಿ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿ, ಸಂಬಂಧಿಸಿದ ಕಚೇರಿ ಮುಖ್ಯಸ್ಥರ ಫೋನ್‌ ನಂಬರ್‌ ನೀಡಿದ್ದರು. ಆದರೂ ಈ ಬಗ್ಗೆ ಕೇಳಿದಾಗೆಲ್ಲ ಜಾರಿಕೊಳ್ಳುವ ಉತ್ತರಗಳೇ ಬರುತ್ತಿವೆ.
  
ಪಾವತಿಸಬೇಕಾದ್ದು ಎಷ್ಟು?
18 ಗಣತಿಗಾರರಿಗೆ ಪಾವತಿಯಾಗಬೇಕಾದ್ದರಲ್ಲಿ ಲಕ್ಷಗಟ್ಟಲೆ ಮೊತ್ತವೇನೂ ಇಲ್ಲ. ತಲಾ 5500 ರೂ.ಗಳತೆ 99 ಸಾವಿರ ರೂ. ಮಾತ್ರ. ಲಕ್ಷ , ಕೋಟಿ ಲೆಕ್ಕದಲ್ಲೇ ಮಾತನಾಡುವ ಸರಕಾರ, ಈ ಮೊತ್ತವನ್ನೂ ನೀಡಲು ತಿಣುಕಾಡುತ್ತಿದೆ.

ವರ್ಷ ಕಳೆದರೂ ಬಾರದ ಸಂಭಾವನೆ
ಕಾರ್ಕಳ ತಹಶೀಲ್ದಾರ್‌ ಆದೇಶ (ನಂ.ಸಿಎನ್‌ಎಸ್‌ಸಿಆರ್‌ 01/2014-15, ದಿನಾಂಕ 10-04-2015)ರ ಪ್ರಕಾರ ಗಣತಿ ಕಾರ್ಯಕ್ಕೆ ಮೀಸಲು ಸಿಬಂದಿಯಾಗಿ ಆಯಾ ಪ್ರದೇಶದ ಶಾಲೆಗಳ ಗೌರವ ಶಿಕ್ಷಕಿಯರನ್ನು ನೇಮಕ ಮಾಡಲಾಗಿತ್ತು. ತರಬೇತಿ ವೇಳೆ ತಹಶೀಲ್ದಾರ್‌ ಮತ್ತು ನೋಡಲ್‌ ಅಧಿಕಾರಿಗಳು ಸಾಮಾನ್ಯ ಗಣತಿದಾರರಿಗೆ ನೀಡುವಷ್ಟೇ ಗೌರವ ಸಂಭಾವನೆ ನೀಡುವುದಾಗಿ ಹೇಳಿದ್ದರು. ಇತರ ಎಲ್ಲರಿಗೂ ಒಂದೆರಡು ತಿಂಗಳಲ್ಲಿ ಗೌರವಧನ ಹಾಗೂ ಹೆಚ್ಚುವರಿ ರಜೆ ಸೌಲಭ್ಯವನ್ನು ಇಲಾಖೆ ನೀಡಿತ್ತು. ಆದರೆ ಅವರೊಂದಿಗೇ ಕೆಲಸ ಮಾಡಿದ 18 ಶಿಕ್ಷಕಿಯರಿಗೆ ವರ್ಷ ಕಳೆದರೂ ಸಂಭಾವನೆ ನೀಡಲಾಗಿಲ್ಲ.  

ಕನಸಿನ ಮಾತು!
ಗಣತಿ ಮಾಡಿದ ಗೌರವ ಶಿಕ್ಷಕಿಯರಿಗೆ ಗೌರವ ಧನ ಲಭಿಸುವ ಲಕ್ಷಣ ಕ್ಷೀಣವಾಗಿದೆ. ಜನಪ್ರತಿನಿಧಿಗಳೂ ಚುನಾವಣೆ ಕಸರತ್ತಿನಲ್ಲೇ ಈಗ ಬ್ಯುಸಿಯಾಗುತ್ತಿರುವುದರಿಂದ ಅವರಿಂದ ನ್ಯಾಯಸಿಗುವುದು ಕನಸಿನ ಮಾತಾಗಿದೆ.

ಪುಂಡಲೀಕ ಮರಾಠೆ, 
ನಿವೃತ್ತ ಶಿಕ್ಷಕ

ಟಾಪ್ ನ್ಯೂಸ್

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ

Prabhakar-Joshi

Bantwala: ಹಿರಿಯ ವಿದ್ವಾಂಸರಾದ ಡಾ.ಪ್ರಭಾಕರ ಜೋಶಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ

Sowthadka

Hunger Strike: ಸರಕಾರದ ಹಿಡಿತದಿಂದ ದೇಗುಲ ಮುಕ್ತಗೊಳಿಸಿ, ಸ್ವಾಯತ್ತ ಮಂಡಳಿ ರಚಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

10

Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

rape

Women; 16 ವರ್ಷಗಳಿಂದ ಮನೆಯಲ್ಲೇ ಮಹಿಳೆ ಬಂಧನ: ರಕ್ಷಣೆ

CHampai Soren

Jharkhand ಮಾಜಿ ಸಿಎಂ ಚಂಪಯಿ ಆಸ್ಪತ್ರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.