ಕಟಪಾಡಿ: ಗಮನ ಬೇರಡೆ ಸೆಳೆದು ಸೊತ್ತು ಎಗರಿಸಿದ ಚೋರರು


Team Udayavani, Dec 10, 2021, 7:06 AM IST

ಕಟಪಾಡಿ: ಗಮನ ಬೇರಡೆ ಸೆಳೆದು ಸೊತ್ತು ಎಗರಿಸಿದ ಚೋರರು

ಕಾಪು: ಎರಡು ಪ್ರತ್ಯೇಕ ಘಟನೆಗಳಲ್ಲಿ ಗಮನ ಬೇರೆಡೆ ಸೆಳೆದು ಅಪರಿಚಿತರು ಚಿನ್ನಾಭರಣ ಮತ್ತು ಮೊಬೈಲ್‌ಅನ್ನು ಎಗರಿಸಿ ಪರಾರಿಯಾದ ಘಟನೆ ಬುಧವಾರ ಕಟಪಾಡಿಯಲ್ಲಿ ನಡೆದಿದೆ.

ಕಟಪಾಡಿ ಏಣಗುಡ್ಡೆ ಗ್ರಾಮದ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಆಗಮಿಸಿದ ಮೂವರು ನಕಲಿ ಫಕೀರರು ಮಹಿಳೆ ಮೇಲೆ ಧೂಪ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿ ಅವರಿಂದ ಚಿನ್ನಾಭರಣವನ್ನು ಎಗರಿಸಿ ಪರಾರಿಯಾಗಿದ್ದರೆ, ಮತ್ತೂಂದು ಘಟನೆಯಲ್ಲಿ ಫರ್ಟಿಲೈಸರ್‌ ಅಂಗಡಿಗೆ ಭೇಟಿ ನೀಡಿದ ಅಪರಿಚಿತ ನಂಬಿಕನಂತೆ ನಟಿಸಿ, ಅಂಗಡಿ ಮಾಲಕನ ಮೊಬೈಲ್‌ ಎಗರಿಸಿ ಪರಾರಿಯಾಗಿದ್ದು, ಎರಡೂ ಘಟನೆಗಳು ಕಟಪಾಡಿ ಪರಿಸರದ ಜನರನ್ನು ದಿಗ್ಬ್ರಾಂತರನ್ನಾಗಿಸಿದೆ.

ಮೊದಲಿಗೆ ಕಟಪಾಡಿಯ ಮನೆಯೊಂದಕ್ಕೆ ತೆರಳಿದ ಮೂರು ಮಂದಿ ನಕಲಿ ಪಕೀರ ವೇಷಧಾರಿಗಳು ಮನೆಯ ಸುತ್ತಲೂ ಓಡಾಡಿ ಮನೆಮಂದಿಯನ್ನು ಹಾಡಿನ ಮೂಲಕ ಹೊರಗೆ ಬರುವಂತೆ ಮಾಡಿದ್ದು, ಹೊರಗೆ ಬಂದ ಮಹಿಳೆಯ ಮೇಲೆ ಬೂದಿ ಮಿಶ್ರಿತ ಹೊಗೆಯನ್ನು ಪ್ರಯೋಗಿಸಿದ್ದರು. ಈ ಸಂದರ್ಭ ಮಹಿಳೆ ತನ್ನ ಮೈಮೇಲಿನ ಚಿನ್ನಾಭರಣ ಮತ್ತು ಮನೆಯೊಳಗಿನಿಂದ ನಗದನ್ನು ತಂದು ಕೊಟ್ಟು ಪಕೀರರ ಜೋಳಿಗೆಯನ್ನು ತುಂಬಿಸಿದ್ದರು. ಮಹಿಳೆಯಿಂದ ಚಿನ್ನಾಭರಣ ಮತ್ತು ನಗದು ಪಡೆದ ಬಳಿಕ ಪಕೀರರು ಸ್ಥಳದಿಂದ ಕಾಲ್ಕಿತ್ತಿದ್ದು, ಮಹಿಳೆ ಎಚ್ಚರಗೊಂಡಾಗ ತಾನು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ವೇಷಧಾರಿ ನಕಲಿ ಪಕೀರರ ಜೋಳಿಗೆಯನ್ನು ತಾನಾಗಿಯೇ ತುಂಬಿದ ಮಹಿಳೆ ತನ್ನ ಮೂಢತನದ ಬಗ್ಗೆ ತಾನೇ ಹಳಿದುಕೊಳ್ಳುವಂತಾಗಿದೆ. ಮನೆಗೆ ಬಂದ ಪಕೀರರು ಮನೆಯಂಗಳದಲ್ಲಿ ಓಡಾಡಿದ ಮತ್ತು ಪೇಟೆಯಲ್ಲಿ ನಡೆದಾಡಿದ ಫ‌ುಟೇಜ್‌ಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಆ ವೀಡಿಯೋ ಕ್ಲಿಪ್‌ಗಳು ಎಲ್ಲೆಡೆ ವೈರಲ್‌ ಆಗಿದೆ.

ನಂಬಿಕಸ್ಥನಂತೆ ವ್ಯವಹಾರ:

ಮತ್ತೂಂದು ಘಟನೆಯಲ್ಲಿ ಆದಿ ಶಕ್ತಿ ಫರ್ಟಿಲೈಸರ್‌ ಅಂಗಡಿಗೆ ಬಂದ ವ್ಯಕ್ತಿಯೋರ್ವ ಮಾಲಕರ ಜೊತೆಗೆ ನಂಬಿಕಸ್ಥನಂತೆ ನಟಿಸಿ, ಅಂಗಡಿಯಲ್ಲಿ 1,000 ರೂ.ಗೂ ಮಿಕ್ಕಿದ ವ್ಯಾಪಾರ ನಡೆಸಿದ್ದ. ಅನಂತರ ಮಳಿಗೆಯ ಮಾಲಕರ ಜತೆಗೆ ಪರಿಚಿತನಂತೆ ನಟಿಸಿ ನಂಬಿಕೆ ಬರಿಸಿದ್ದು, ತನ್ನ ವಾಟ್ಸ್‌ ಆ್ಯಪ್‌ ನಂಬರ್‌ ಅಪ್‌ಡೇಟ್‌ ಆಗಿದೆ. ಮೆಡಿಕಲ್‌ನಿಂದ ಬೇರೊಂದು ಮದ್ದು ತರಲು ಇದೆ. ನಿಮ್ಮ ವಾಟ್ಸ್‌ ಆ್ಯಪ್‌ ನಂಬರ್‌ಗೆ ಅದರ ಸ್ಲಿಪ್‌ ಕಳುಹಿಸಲು ಕಳುಹಿಸಲು ತಿಳಿಸುತ್ತೇನೆ ಎಂದು ಹೇಳಿದ್ದನು. ಇದನ್ನು ಸತ್ಯವೆಂದೇ ನಂಬಿದ ಅಂಗಡಿಯ ಮಾಲಕ ಉದಯ ಶೆಟ್ಟಿ ತನ್ನ ವಾಟ್ಸ್‌ ಆ್ಯಪ್‌  ನಂಬರ್‌ಅನ್ನು ಆತನಿಗೆ ನೀಡಿದ್ದು, ಆತ ಅದಕ್ಕೆ ಔಷಧದ ಚೀಟಿಯನ್ನೂ ತರಿಸಿಕೊಂಡಿದ್ದ. ಬಳಿಕ ಅಂಗಡಿ ಮಾಲಕರಿಂದ ಮೊಬೈಲ್‌ ಪಡೆದು ಮೆಡಿಕಲ್‌ಗೆ ಹೋದ ವ್ಯಕ್ತಿ ದಿಢೀರ್‌ ಕಣ್ಮರೆಯಾಗಿದ್ದು, ಆಗಷ್ಟೇ ತಾನು ಮೋಸ ಹೋಗಿರುವ ವಿಚಾರ ಅಂಗಡಿಯ ಮಾಲಕರಿಗೆ ತಿಳಿದುಬಂದಿದೆ. ಅವರು ಎಚ್ಚೆತ್ತುಕೊಳ್ಳುವಷ್ಟರಲ್ಲೇ 18 ಸಾವಿರ ರೂ. ಮೌಲ್ಯದ ಮೊಬೈಲ್‌ ಅನ್ನು ಪಡೆದುಕೊಂಡಿದ್ದ ಆತ ಪರಾರಿಯಾಗಿದ್ದ.

ಎರಡೂ ಘಟನೆಗಳು ಒಂದೇ ದಿನ, ಒಂದೇ ಸಮಯದಲ್ಲಿ ಕಟಪಾಡಿಯಲ್ಲಿ ನಡೆದಿದ್ದು ಚಿನ್ನಾಭರಣ, ನಗದು ಮತ್ತು ಮೊಬೈಲ್‌ ದೋಚಿ ಪರಾರಿಯಾದವರಿಗಾಗಿ ಸ್ಥಳೀಯರು ಮತ್ತು ಪೊಲೀಸರು ತೀವ್ರ ಹುಡುಕಾಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸರಿಗೆ ದೂರು ನೀಡಲಾಗಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.