ಉಡುಪಿ: ಕೊನೆಗೂ ಇನ್ನಂಜೆ ರೈಲು ನಿಲ್ದಾಣ ಮೇಲ್ದರ್ಜೆಗೆ


Team Udayavani, Jul 23, 2018, 6:00 AM IST

040718astro08.jpg

ಉಡುಪಿ: ಬಹುನಿರೀಕ್ಷಿತ ಶಂಕರಪುರ ಸನಿಹದ ಇನ್ನಂಜೆ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಭರದಿಂದ ನಡೆದಿದ್ದು ಡಿಸೆಂಬರ್‌ಗೆ ಪೂರ್ಣವಾಗುವ ನಿರೀಕ್ಷೆ ಇದೆ. 

ತ್ವರಿತ ಕಾಮಗಾರಿ 
ನಿಲ್ದಾಣಕ್ಕೆ ಸಂಬಂಧಿಸಿ ಶೇ.60ರಷ್ಟು ಕೆಲಸವಾಗಿದೆ.  ಹಳಿ  ಜೋಡಣೆಗೆ ನೆಲ ಸಮತಟ್ಟುಗೊಳಿಸಲಾಗುತ್ತಿದೆ. ಸದ್ಯ ಮಳೆಯಿಂದ ಈ ಕಾಮಗಾರಿ ನಿಂತಿದೆ. ಉಳಿದಂತೆ ಕಟ್ಟಡ ಕೆಲಸಗಳು ಮುಂದುವರಿದಿವೆ. 
 
ಸೌಲಭ್ಯಗಳು ಏನೆಲ್ಲ? 
600 ಮೀ. ಉದ್ದದ ಫ್ಲಾಟ್‌ಫಾರಂ, 1.2 ಕಿ.ಮೀ. ಉದ್ದದ ಲೂಪ್‌ಲೈನ್‌, ಕಟ್ಟಡದಲ್ಲಿ ವೈಟಿಂಗ್‌ ಹಾಲ್‌, ಶೌಚಾಲಯಗಳು, ಟಿಕೆಟ್‌ ಕೌಂಟರ್‌, ಸ್ಟೇಷನ್‌ ಮಾಸ್ಟರ್‌ ಕಚೇರಿ, ಕುಡಿಯುವ ನೀರಿನ ವ್ಯವಸ್ಥೆ, ಸಿಎಸ್‌ಆರ್‌ ಕೊಠಡಿ ಇರುತ್ತದೆ. ಫ್ಲಾಟ್‌ಫಾರಂಗೆ ಇಳಿಯಲು ವಿಶಾಲವಾದ ಮೆಟ್ಟಿಲುಗಳನ್ನು ಮತ್ತು ರ್‍ಯಾಂಪ್‌ಗ್ಳನ್ನು ಹಾಕಲಾಗುತ್ತದೆ. ಪಕ್ಕದಲ್ಲೇ ಸಿಬಂದಿ ವಸತಿ ಗೃಹ ನಿರ್ಮಾಣ ಹಂತದಲ್ಲಿದೆ. ನಿಲ್ದಾಣ ಪಕ್ಕ ರಸ್ತೆ ನಿರ್ಮಾಣ, ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು 11.33 ಕೋಟಿ ರೂ. ವೆಚ್ಚದಲ್ಲಿ ಪುಣೆಯ ಐಎಸ್‌ಸಿ ಸಂಸ್ಥೆ ಕಾಮಗಾರಿ ನಡೆಸುತ್ತಿದೆ.
 
ಯಾವೆಲ್ಲ ರೈಲುಗಳಿಗೆ ನಿಲುಗಡೆ?
ಪ್ರಸ್ತುತ ಇಲ್ಲಿ ಮಂಗಳೂರು- ಮಡ್ಗಾಂವ್‌ ಪ್ಯಾಸೆಂಜರ್‌ ರೈಲು (ಬೆಳಗ್ಗೆ 7.40), ಮಡ್ಗಾಂವ್‌ – ಮಂಗಳೂರು ಪ್ಯಾಸೆಂಜರ್‌ (ಸಂಜೆ 7.52), ಮಂಗಳೂರು-ಮಡ್ಗಾಂವ್‌ ಡೆಮೂ(ಸಂಜೆ 4.29), ಮಡ್ಗಾಂವ್‌- ಮಂಗಳೂರು ಡೆಮೂ (ಬೆಳಗ್ಗೆ 10.20) ರೈಲುಗಳ ನಿಲುಗಡೆಯಾಗುತ್ತಿದೆ. ರೈಲು ಬರುವ ಕೆಲಹೊತ್ತಿನ ಮೊದಲು ಟಿಕೆಟ್‌ ನೀಡಲಾಗುತ್ತದೆ. ಉಳಿದಂತೆ ಬೇರೆ ಯಾವುದೇ ವ್ಯವಸ್ಥೆಗಳಿಲ್ಲ.
 
ಮೇಲ್ದರ್ಜೆಗೇರಿಕೆಗೆ ಒತ್ತಾಯ 
ಈ ನಿಲ್ದಾಣ ಮೇಲ್ದರ್ಜೆಗೇರಬೇಕೆನ್ನುವ ಒತ್ತಾಯ ಬಹಳ ಹಿಂದಿನದು. 1993ರ ಮಾರ್ಚ್‌ನಿಂದ ಇಲ್ಲಿ ರೈಲು ನಿಲುಗಡೆ ಆರಂಭಗೊಂಡಿತ್ತು. ಆದರೆ ಒಂದೇ ವರ್ಷದಲ್ಲಿ ಅದು ರದ್ದಾಯಿತು. ಮುಖ್ಯ ಲೇನ್‌ಗೆ ಹೊಂದಿಕೊಂಡಿದ್ದ ಪ್ಲಾಟ್‌ಫಾರಂ ಕೂಡ ಕೆಡವಲಾಗಿತ್ತು. ಬಳಿಕ ಹೋರಾಟದ ಫ‌ಲವಾಗಿ ನಿಲುಗಡೆ ಪುನರಾರಂಭವಾಗಿದೆ. ಮೇಲ್ದರ್ಜೆಗೇರಿದ ಬಳಿಕ ರೈಲುಗಳ ಸಂಖ್ಯೆ ಹೆಚ್ಚಾಗಬಹುದೇ ಎಂಬ ಬಗ್ಗೆ ಮಾಹಿತಿ ಅಧಿಕಾರಿಗಳಿಂದ ಸಿಕ್ಕಿಲ್ಲ. ಇಲ್ಲಿನ ಅವ್ಯವಸ್ಥೆ ಬಗ್ಗೆ “ಉದಯವಾಣಿ’ ಹಲವು ಬಾರಿ ರೈಲ್ವೆ ಇಲಾಖೆಯ ಗಮನ ಸೆಳೆದಿತ್ತು.
  
ಇನ್ನು ಕ್ರಾಸಿಂಗ್‌ ಸ್ಟೇಷನ್‌ 
ಇದು ಪ್ರಸ್ತುತ ಹಾಲ್ಟ್ ಸ್ಟೇಷನ್‌ ಮಾತ್ರ ಆಗಿತ್ತು. ಇನ್ನೊಂದು ರೈಲು ಸಂಚರಿಸಲು ಅವಕಾಶ ಇರಲಿಲ್ಲ. ಈಗ ಮೇಲ್ದರ್ಜೆಗೇರಿ ಕ್ರಾಸಿಂಗ್‌ ಸ್ಟೇಷನ್‌ ಆಗುವುದರಿಂದ ಎಲ್ಲ ವ್ಯವಸ್ಥೆಗಳು ಇರುತ್ತವೆ. ರೈಲ್ವೆ ಅಧಿಕಾರಿಗಳು, ಸಿಬಂದಿ 24 ಗಂಟೆಗಳ ಕಾಲ ಕಾರ್ಯನಿರತರಾಗಿರುತ್ತಾರೆ. 

ಯಾವ ಕಾಮಗಾರಿ ಎಷ್ಟು ಪ್ರಗತಿ?
ಪ್ಲ್ರಾಟ್‌ ಫಾರಂ – ಶೇ.30 ರಷ್ಟು ಕಾಮಗಾರಿ

580-600 ಮೀಟರ್‌ ಉದ್ದದ ಪ್ಲ್ರಾಟ್‌ಫಾರಂ ನಿರ್ಮಾಣಗೊಳ್ಳಬೇಕಾಗಿದ್ದು ಮಣ್ಣು ಸಮತಟ್ಟು ಗೊಳಿಸುವ ಕೆಲಸ ಮಾತ್ರ ನಡೆದಿದೆ. ಕಾಂಕ್ರೀಟ್‌ ಹಾಕಿ ಸ್ಲಾéಬ್‌ ನಿರ್ಮಾಣ ವಾಗಬೇಕಿದೆ. ಇದು ಮುಖ್ಯ ಕೆಲಸ ಗಳಲ್ಲೊಂದು. ಮಳೆ ಮುಗಿದ ಅನಂತರ ಕನಿಷ್ಠ 2 ತಿಂಗಳು ಬೇಕಾಗಬಹುದು.

ಲೂಪ್‌ ಲೈನ್‌: ಶೇ.30
1.2 ಕಿ.ಮೀ ಉದ್ದಕ್ಕೆ ಲೂಪ್‌ಲೈನ್‌ ಹಾಕಬೇಕಾಗಿದೆ. ಈಗ ಆಗಿರುವುದು ಶೇ.30ರಷ್ಟು ಕೆಲಸ. ಮಳೆಯಿಂದಾಗಿ ಟ್ರ್ಯಾಕ್‌ನಲ್ಲಿ ನೀರಿನ ಒರತೆ ಹೆಚ್ಚಿದೆ ಇಲ್ಲಿ ಚರಂಡಿ ನಿರ್ಮಾಣವಾಗಿ ಅನಂತರ ಲೂಪ್‌ಲೈನ್‌ ಅಳವಡಿಸಬೇಕಾಗಿದೆ.

ಸ್ಲೀಪರ್ 
ಟ್ರ್ಯಾಕ್‌ಗಳನ್ನು ತಂದಿಡಲಾಗಿದೆಯಾದರೂ ಮಳೆಗಾಲ ಮುಗಿದ ಅನಂತರ ಮತ್ತೆ ಕೆಲಸ ಶುರುವಾಗಬೇಕು.ವೈಟಿಂಗ್‌ ಹಾಲ್‌, ಸಿಎಸ್‌ಆರ್‌ ಕೊಠಡಿ ಪ್ರಯಾಣಿಕರ ವೈಟಿಂಗ್‌ ಹಾಲ್‌ ಮತ್ತು ಸಿಎಸ್‌ಆರ್‌ ಕೊಠಡಿಯನ್ನೊಳಗೊಂಡ ಕಟ್ಟಡದ ನಿರ್ಮಾಣ ಮಾತ್ರ ಆಗುತ್ತಿದೆ. ಕಟ್ಟಡದ ನಿರ್ಮಾಣ ಶೇ.40ರಷ್ಟಾಗಿದೆ. ನಿರ್ಮಾಣ ಕಾಮಗಾರಿ ಮಳೆಗೂ ಮುಂದುವರೆದಿದೆ. ಆದರೆ ಇದು ಪೂರ್ಣಗೊಂಡು ಅನಂತರ ಅಲ್ಲಿ ಅಗತ್ಯ ಸೌಲಭ್ಯ, ಸಲಕರಣೆಗಳ ಅಳವಡಿಕೆಗೆ ತಿಂಗಳುಗಳೇ ಬೇಕು.

ಟಿಕೆಟ್‌ ಕೌಂಟರ್‌
ಟಿಕೆಟ್‌ ಕೌಂಟರ್‌ನ ಕೆಲಸ ಶೇ.30ರಷ್ಟು ಮಾತ್ರ ಆಗಿದೆ. ಇದು ಪೂರ್ಣಗೊಂಡು ಟಿಕೆಟ್‌ ಕೌಂಟರ್‌ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಬೇಕಾದರೆ ಈಗಿನ ವೇಗ ಸಾಲದು.
 
ಸಂಪರ್ಕ ರಸ್ತೆ 
ಸಂಪರ್ಕ ರಸ್ತೆಗೆ ನೆಲ ಸಮತಟ್ಟಾಗಿದೆಯಾದರೂ ಉಳಿದ ಕಾಮಗಾರಿಗಳು ಆರಂಭಗೊಂಡಿಲ್ಲ. ಸಂಪರ್ಕ ರಸ್ತೆಯ ಜತೆಗೆ ಪಾರ್ಕಿಂಗ್‌ ವ್ಯವಸ್ಥೆಯೂ ಯೋಜನೆಯಲ್ಲಿ ಸೇರಿದೆ. ಪಾರ್ಕಿಂಗ್‌ ವ್ಯವಸ್ಥೆಯ ಕೆಲಸ ಆರಂಭ ಆಗಿಲ್ಲ.

ಮೆಟ್ಟಿಲು ಮತ್ತು ರ್‍ಯಾಂಪ್‌: ಶೇ. 0
ಈಗ ಇರುವ ಮೆಟ್ಟಿಲುಗಳನ್ನು ತೆಗೆದು ಅದನ್ನು ದಕ್ಷಿಣ ಭಾಗದಲ್ಲಿ ಪುನಃನಿರ್ಮಿಸಬೇಕು. ಜತೆಗೆ ರ್‍ಯಾಂಪ್‌ ನಿರ್ಮಿಸ ಬೇಕಾಗಿದೆ. ಈ ಕಾಮಗಾರಿ ಆರಂಭವನ್ನೇ ಕಂಡಿಲ್ಲ. ಕಟ್ಟಡದ ಕಾಮಗಾರಿ ಮುಗಿದ ಅನಂತರ ಮೆಟ್ಟಿಲು ಕಾಮಗಾರಿ ನಡೆಸುವ ಸಿದ್ಧತೆಯಲ್ಲಿ ಗುತ್ತಿಗೆದಾರರಿದ್ದಾರೆ. ಇದರ ಪೂರ್ಣ ಕೆಲಸ ಬಾಕಿ ಇದೆ.

ವಸತಿ ಗೃಹ : ಶೇ.50
ಸಿಬಂದಿಗಳ ವಸತಿಗೃಹದ ನಿರ್ಮಾಣ ಕಾಮಗಾರಿ ಶೇ.50ರಷ್ಟು ಪ್ರಗತಿ ಸಾಧಿಸಿದೆ. ಗೋಡೆ, ಛಾವಣಿ ಪೂರ್ಣ ಗೊಂಡಿದೆ. ಉಳಿದ ಕೆಲಸಗಳು, ಅಗತ್ಯ ಸೌಕರ್ಯಗಳ ಅಳವಡಿಕೆಯಾಗಬೇಕಿದೆ.

ನಿರೀಕ್ಷೆ
–  ಒಟ್ಟಾರೆ ಶೇ.60ರಷ್ಟುಕಾಮಗಾರಿ ಪೂರ್ಣ
-  ಮಳೆಯಿಂದಾಗಿ ರೈಲ್ವೆ ಹಳಿ ಅಳವಡಿಕೆಗೆ ಹಿನ್ನಡೆ
-  ಪ್ರಯಾಣಿಕರಿಗೆ ಎಲ್ಲ ಮೂಲ ಸೌಕರ್ಯ ಲಭ್ಯ
-  ಮತ್ತಷ್ಟು ರೈಲುಗಳ ನಿಲುಗಡೆ ನಿರೀಕ್ಷೆ
-  ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಗಳ ಶೀಘ್ರ ಅಭಿವೃದ್ಧಿಗೆ ಒತ್ತಾಯ

 ಮತ್ಸéಗಂಧಾಕ್ಕೆ ನಿಲುಗಡೆ ಬೇಕು
ನಿಲ್ದಾಣ ಮೇಲ್ದರ್ಜೆಗೇರುತ್ತಿರುವುದು ಸಂತಸ ತಂದಿದೆ. ಕಾರವಾರ ಮತ್ತು ಮಂಗಳೂರು ಕಡೆಗೆ ಹೋಗುವವರು ಹೆಚ್ಚಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಮತ್ಸéಗಂಧಾ ರೈಲಿಗೆ ನಿಲುಗಡೆ ನೀಡಬೇಕು ಎನ್ನುವುದು ಬಹುಕಾಲದ ಬೇಡಿಕೆ.   
– ಸಂಜಿತ್‌,ಸ್ಥಳೀಯರು  

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.